ಭಜನೆಗಳು

ಜಯ ಶಂಕರ ಪಾರ್ವತೀಪತೇ

ಜಯ ಶಂಕರ ಪಾರ್ವತೀಪತೇ ಮೃಡ ಶಂಭೋ ಶಶಿಖಂಡಮಂಡನ| ಮದನಾಂತಕ ಭಕ್ತವತ್ಸಲ ಪ್ರಿಯ ಕೈಲಾಸ ದಯಾಸುಧಾಂಬುಧೇ|| ಸದುಪಾಯ ಕಥಾಸ್ವಪಂಡಿತೋ ಹೃದಯೇ ದುಃಖಶರೇಣ ಖಂಡಿತಃ| ಶಶಿಖಂಡ ಶಿಖಂಡ ಮಂಡನಂ ಶರಣಂ ಯಾಮಿ ಶರಣ್ಯಮೀಶ್ವರಮ್|| ತ್ವದ್ದೃಶಂ ವಿದಧಾಮಿ ಕಿಂಕರೋ ಕ್ವನು ತಿಷ್ಠಾಮಿ ಕಥಂ ಭಯಾಕುಲಃ| ಕ್ವನು ತಿಷ್ಠಸಿ ರಕ್ಷ ರಕ್ಷ ಮಾಂ ಅಯಿ ಶಂಭೋ ಶರಣಾಗತೋಸ್ಮಿ ತೇ|| ಶಿವ ಸರ್ವಗ ಶರ್ವ ಶರ್ಮದ ಪ್ರಣತೋ ದೇವ ದಯಾಂ ಕುರುಷ್ವ ಮೇ| ನಮ ಈಶ್ವರ ನಾಥ ದಿಕ್ಪತೇ ಪುನರೇವೇಶ ನಮೋ ನಮೋಸ್ತು ತೇ|| […]

ಜಯ ಶಂಕರ ಪಾರ್ವತೀಪತೇ Read More »

ಜಯ ವೀರೇಶ್ವರ

ಜಯ ವೀರೇಶ್ವರ ವಿವೇಕ ಭಾಸ್ಕರ ಜಯ ಜಯ ಶ್ರೀ ವಿವೇಕಾನಂದ| ಇಂದುನಿಭಾನನ ಸುಂದರಲೋಚನ ವಿಶ್ವಮಾನವ ಚಿರವಂದ್ಯ|| ಪ್ರೇಮ ಟಲಟಲ ಕಾಂತಿ ಸುವಿಮಲ ಅಧಿಗತ ವೇದವೇದಾಂತ| ತ್ಯಾಗ ತಿತಿಕ್ಷಾ ತಪಸ್ಯಾ ಉಜ್ವಲ ಚಿತ್ತ ನಿರಮಲ ಶಾಂತ|| ಕರ್ಮ ಭಕ್ತಿ ಜ್ಞಾನ ತ್ರಿಶೂಲ ಧಾರಣ ಛೇದನ ಜೇವ ಮೋಹಬಂಧ| ಬ್ರಹ್ಮಪರಾಯಣ ನಮೋ ನಾರಾಯಣ ದೇಹಿ ದೇಹಿ ಚರಣಾರವಿಂದ||                             —-ಸ್ವಾಮಿ ಚಂಡಿಕಾನಂದ

ಜಯ ವೀರೇಶ್ವರ Read More »

ಜಯ ವಿವೇಕಾನಂದ

ಜಯ ವಿವೇಕಾನಂದ ಗುರುವರ ಭುವನಮಂಗಲಕಾರಿ| ಚಿರಸಮಾಧಿಯ ಗಿರಿಶಿಖರದಿಂ ನರರ ಸೇವೆಗೆ ಇಳಿದ ನರವರ|| ಸುಪ್ತದೈವರೆ ಏಳಿರೇಳಿ ಲುಪ್ತಪದವಿಯ ಮರಳಿ ತಾಳಿ| ಸಪ್ತ ಭುವಿಗಳ ಆಳಿರೆನುತ ದೀಪ್ತವಾಣಿಯ ಜಗದಿ ಮೊಳಗಿಹೆ|| ವಿಶ್ವವ್ಯಾಪಕ ಪ್ರೇಮಮೂರ್ತಿಯೇ ವಿಶ್ವದ್ಯೋತಕ ಪರಮಜ್ಞಾನಿಯೇ| ವಿಶ್ವಮುಕ್ತಿ ಸಮರ್ಪಿತಾತ್ಮನೆ ವಿಶ್ವವಂದ್ಯನೆ ಜಯತು ಜಯತು||                                —ಸ್ವಾಮಿ ಶಾಸ್ತ್ರಾನಂದ

ಜಯ ವಿವೇಕಾನಂದ Read More »

ಜಯ ಪರಮೇಶ್ವರ

ಜಯ ಪರಮೇಶ್ವರ ಪರಮ ಭಿಖಾರೀ ಕಲ್ಪಮೇರು ಗುರು ಯೋಗ ಆಚಾರೀ|| ತರುತಲ ಆಲಯ ವಸನ ದಿಶಾಚಯ ಭೀತ ನಿರಾಶ್ರಯ ಭವಭಯಹಾರೀ|| ಹರ ಕರುಣಾಕರ ವರದಾಭಯಕರ ಮದನಮಾನಹರ ಶಿವ ಶುಭಕಾರೀ||                                     —-ಗಿರೀಶಚಂದ್ರ ಘೋಷ್

ಜಯ ಪರಮೇಶ್ವರ Read More »

ಜಯ ಜಾನಕೀಕಾಂತ

ಜಯ ಜಾನಕೀಕಾಂತ ಜಯ ಸಾಧುಜನವಿನುತ| ಜಯತು ಮಹಿಮಾವಂತ ಜಯ ಭಾಗ್ಯವಂತ|| ದಶರಥಾತ್ಮಜ ವೀರ ದಶಕಂಠಸಂಹಾರ ಪಶುಪತೀಶ್ವರಮಿತ್ರ ಪಾವನಚರಿತ್ರ| ಕುಸುಮಬಾಣಸ್ವರೂಪ ಕುಶಲಕೀರ್ತಿಕಲಾಪ ಅಸಮಸಾಹಸಶಿಕ್ಷ ಅಂಬುಜದಳಾಕ್ಷ|| ಸಾಮಗಾನವಿಲೋಲ ಸಾಧುಜನಪರಿಪಾಲ ಕಾಮಿತಾರ್ಥವಿದಾತ ಕೀರ್ತಿಸಂಜಾತ| ಸೋಮಸೂರ್ಯಪ್ರಕಾಶ ಸಕಲ ಲೋಕಾಧಿಶ ಶ್ರೀಮಹಾರಘುವೀರ ಸಿಂಧುಗಂಭೀರ|| ಸಕಲಶಾಸ್ತ್ರವಿಚಾರ ಶರಣಜನಮಂದಾರ ವಿಕಸಿತಾಂಬುಜವದನ ವಿಶ್ವಮಯಸದನ| ಸುಕೃತಮೋಕ್ಷಾಧೀಶ ಸಾಕೇತಪುರವಾಸ ಭಕ್ತವತ್ಸಲರಾಮ ಪುರಂದರವಿಟ್ಠಲ||                                            —ಪುರಂದರದಾಸ

ಜಯ ಜಾನಕೀಕಾಂತ Read More »

ಜಯ ಜಯ ಶ್ರೀರಾಮ

ಜಯ ಜಯ ಶ್ರೀರಾಮ ರಘುವರ, ಶುಭಕರ ಶ್ರೀರಾಮ|| ತ್ರಿಭುವನ-ಜನ-ನಯನಾಭಿರಾಮ|| ತಾರಕನಾಮ ದಶರಥರಾಮ ದನುಜವಿರಾಮ ಪಟ್ಟಾಭಿರಾಮ|| ರಾಮ ರಘುಕುಲ-ಜಲನಿಧಿ-ಸೋಮ ಭೂಮಿಸುತಾಕಾಮ| ಕಾಮಿತದಾಯಕ ಕರುಣಾಧಾಮ ಕೋಮಲ-ನೀಲಸರೋಜ-ಶ್ಯಾಮ||

ಜಯ ಜಯ ಶ್ರೀರಾಮ Read More »

ಜಯ ಜಗದಂಬ ಮಾ

ಜಯ ಜಗದಂಬ ಮಾ ಜನನೀ ಶ್ಯಾಮಾ ಜವದಿ ಬಂದು ಪಾಲಿಸೆನ್ನ ಪಾರ್ವತಿ ಉಮಾ|| ಮಮ ಹೃದಯಕಮಲದಿ ವಾಸಿಸು ಮುದದಿ ಸದಾ ನಿನ್ನ ಪರಮಧ್ಯಾನ ಗೈವೆ ಹೃದಯದಿ| ನಿನ್ನ ಕಂದ ನಾನು ಕರೆಯುತಿಹೆ ಲಾಲಿಸೆನ್ನ ಹೇ ರಮಾ| ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ|| ಪರಾಶಕ್ತಿರೂಪಿಣೀ ವಿಮುಕ್ತಿದಾಯಿನೀ ಪರಾಭಕ್ತಿಗಮ್ಯೆ ನೀನು ಭವತಾರಿಣೀ| ನಿನ್ನ ನಂಬಿ ಕರೆವೆ ನಮನಗೈವೆ ನಲಿದು ಬಾರೆ ಹೇ ರಮಾ| ಜವದಿ ಬಂದು ಪಾಲಿಸೆನ್ನ ಪಾರ್ವತೀ ಉಮಾ||

ಜಯ ಜಗದಂಬ ಮಾ Read More »

ಜಗವ ಸುತ್ತಿರುವುದು ನಿನ್ನ ಮಾಯೆ

ಜಗವ ಸುತ್ತಿರುವುದು ನಿನ್ನ ಮಾಯೆ ನಿನ್ನ ಸುತ್ತಿರುವುದೆನ್ನ ಮನ ನೋಡಾ|| ಕರಿಯು ಕನ್ನಡಿಯೊಳಗಡಗಿದಂತಯಿಯ ನೀನೆನ್ನೊಳಡಗಿಹೆ ಕೂಡಲಸಂಗಯ್ಯ||                                                      —ಬಸವಣ್ಣ

ಜಗವ ಸುತ್ತಿರುವುದು ನಿನ್ನ ಮಾಯೆ Read More »

ಚಿಂತಾ ನಾಸ್ತಿ ಕಿಲ

ಚಿಂತಾ ನಾಸ್ತಿ ಕಿಲ ತೇಷಾಂ|| ಶಮದಮಕರುಣಾಸಂಪೂರ್ಣಾನಾಂ ಸಾಧುಸಮಾಗಮಸಂಕೀರ್ಣಾನಾಂ|| ಕಾಲತ್ರಯಜಿತಕಂದರ್ಪಾಣಾಂ ಖಂಡಿತಸರ್ವೇಂದ್ರಿಯದರ್ಪಾಣಾಂ|| ಪರಮಹಂಸಗುರುಪದಚಿತ್ತಾನಾಂ ಬ್ರಹ್ಮಾನಂದಾಮೃತಮತ್ತಾನಾಂ||                                           –ಸದಾಶಿವ ಬ್ರಹ್ಮೇಂದ್ರ

ಚಿಂತಾ ನಾಸ್ತಿ ಕಿಲ Read More »

ಚಂದ್ರಚೂಡ ಶಿವಶಂಕರ

ಚಂದ್ರಚೂಡ ಶಿವಶಂಕರ ಪಾರ್ವತಿ| ರಮಣ ನಿನಗೆ ನಮೋ ನಮೋ ನಮೋ|| ಸುಂದರ ಮೃಗಧರ ಪಿನಾಕ ಧನುಕರ| ಗಂಗಾಶಿರ ಗಜಚರ್ಮಾಂಬರಧರ|| ಕೊರಳಲಿ ಭಸ್ಮ ರುದ್ರಾಕ್ಷಿ ಮಾಲೆ| ಧರಿಸಿದ ಪರಮ ವೈಷ್ಣವ ನೀನೇ|| ಗರುಡಗಮನ ಶ್ರೀ ಪುರಂದರ ವಿಟ್ಠಲನ| ಪ್ರಾಣಪ್ರಿಯನೇ ನಮೋ ನಮೋ||                                             —ಪುರಂದರದಾಸ

ಚಂದ್ರಚೂಡ ಶಿವಶಂಕರ Read More »

ಚಕೋರಂಗೆ ಚಂದ್ರಮನ

ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ ಅಂಬುಜಕೆ ಭಾನುವಿನ ಉದಯದ ಚಿಂತೆ|| ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ ಎಮಗೆ ನಮ್ಮ ಕೂಡಲಸಂಗಮದೇವರ ಚಿಂತೆ||                                                                       —ಬಸವಣ್ಣ

ಚಕೋರಂಗೆ ಚಂದ್ರಮನ Read More »

ಗೋವಿಂದ ಮಾಧವ

ಗೋವಿಂದ ಮಾಧವ ಗೋಪಾಲ ಕೇಶವ| ನರಸಿಂಹಾಚ್ಯುತ ನಾರಾಯಣ|| ದಶರಥನಂದನ ಸೀತಾಮನೋಹರ| ದಾನವಮರ್ದನ ದಯಾನಿಧೇ|| ರಾಮ ರಾಘವ ರಾಜೀವಲೋಚನ| ಕಾಮಿತ ಫಲದ ಕರಿವರದ || ಕೃಷ್ಣ ಕೇಶವ ಅಂಬುಜಲೋಚನ| ಕಾಮಿತ ಫಲದ ಕರಿವರದ|| ರಾಮ ರಾಮ ಗೋವಿಂದ ರಾಮ| ಕಲ್ಯಾಣ ರಾಮ ಪಾಹಿ|| (ಶ್ರೀ)ರಾಮ ರಾಮ ಪಟ್ಟಾಭಿರಾಮ| ಕೋದಂಡರಾಮ ಪಾಹಿ || ರಾಮ ರಾಮ ನಯನಾಭಿರಾಮ| ಲೋಕಾಭಿರಾಮ ಪಾಹಿ|| ಜಲಧಿಶಯನ ರವಿಚಂದ್ರವಿಲೋಚನ| ಜಲಜಭವಸ್ತುತ ಶ್ರೀರಾಮ|| ಕೌಸಲ್ಯಾತ್ಮಜ ಕಾಮಿತ ಫಲದ| ಮಾರುತಿಸೇವಿತ ಪಾಹಿ|| ರಾಮ ರಾಮ ಪಾಹಿ ಹರೇ| ರಾಮ

ಗೋವಿಂದ ಮಾಧವ Read More »

ಗೋವಿಂದ ಜೈ ಜೈ

ಗೋವಿಂದ ಜೈ ಜೈ ಗೋಪಾಲ ಜೈ ಜೈ ರಾಧಾ ಮಾಧವ ಹರಿ ಗೋವಿಂದ ಜೈ ಜೈ|| ಮುಕುಂದ ಜೈ ಜೈ ಮುರಾರಿ ಜೈ ಜೈ ಮಧುಸೂದನ ಮುರಲೀ ಮೋಹನ ಜೈ ಜೈ|| ಕೇಶವ ಜೈ ಜೈ ಯಾದವ ಜೈ ಜೈ ನಾರಾಯಣ ಹರಿ ಶ್ರೀಕೃಷ್ಣ ಜೈ ಜೈ||

ಗೋವಿಂದ ಜೈ ಜೈ Read More »

ಗೋವಿಂದ ಗೋವಿಂದ

ಗೋವಿಂದ ಗೋವಿಂದ ಅತಿ ಆನಂದ ಸಕಲ ಸಾಧನ ನಿನ್ನಾನಂದ|| ಅಣು ರೇಣು ತೃಣ ಕಾಷ್ಠ ಪರಿಪೂರ್ಣ ಗೋವಿಂದ| ನಿರ್ಮಲಾತ್ಮಕನಾಗಿ ಇರುವುದೇ ಆನಂದ|| ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ| ಈ ಪರಿ ಮಹಿಮೆಯ ತಿಳಿಯೋದೆ ಆನಂದ|| ಮಂಗಲ ಮಹಿಮ ಶ್ರೀ ಪುರಂದರವಿಟ್ಠಲ| ಹಿಂಗದೆ ದಾಸರ ಸಲಹೋದೆ ಆನಂದ||                                              —ಪುರಂದರದಾಸ

ಗೋವಿಂದ ಗೋವಿಂದ Read More »

ಗೋವರ್ಧನ ಗಿರಿಧರ ಗೋವಿಂದ

ಗೋವರ್ಧನ ಗಿರಿಧರ ಗೋವಿಂದ ಗೋಕುಲಪಾಲಕ ಪರಮಾನಂದ| ಶ್ರೀವತ್ಸಾಂಕಿತ ಶ್ರೀಕೌಸ್ತುಭಧರ ಭಾವಕ ಭಯಹರ ಪಾಹಿ ಮುಕುಂದ|| ಆನಂದಾಮೃತವಾರಿಧಿ ಖೇಲ ಅಲಘು ಪರಾಕ್ರಮ ಅನುಪಮಶೀಲ| ಶ್ರೀನಂದಾತ್ಮಜ ಶ್ರಿತಜನಪಾಲ ಶ್ರೀಕರಕಿಸಲಯ ಲಾಲನಲೋಲ|| ಪಾಟಿತ ಸುರರಿಪು ಪಾದಪವೃಂದ ಪಾವನಚರಿತಪರಾಮೃತಕಂದ| ನಾಟ್ಯರಸೋತ್ಕಟ ನಾನಾಭರಣ ನಾರಾಯಣತೀರ್ಥ ವಂದಿತಚರಣ||                                         –ನಾರಾಯಣತೀರ್ಥ

ಗೋವರ್ಧನ ಗಿರಿಧರ ಗೋವಿಂದ Read More »

ಗುರುವೆ ತಾಯಿ ಗುರುವೆ ತಂದೆ

ಗುರುವೆ ತಾಯಿ ಗುರುವೆ ತಂದೆ ಗುರುವೆ ದೈವ ದಾತಾರ| ಗುರುವೆ ಬಂಧು ದಯಾಸಿಂಧು ಗುರುವೆ ಕೃಪೆಯ ಸಾಕಾರ|| ಗುರುವೆ ಬ್ರಹ್ಮ ಗುರುವೆ ವಿಷ್ಣು ಗುರುವೆ ವರ ಮಹೇಶ್ವರ| ಗುರುಪರತರ ಪರಬ್ರಹ್ಮ ಗುರುವೆ ಸಕಲ ಆಧಾರ|| ತಮವ ಕಳೆದು ಬೆಳಕ ತಂದ ದೀನಬಂಧು ಗುರುವರ| ಕರ್ಮ ಬಂಧ ತರಿದ ಧೀರ ನಿನಗಿದೋ ನಮಸ್ಕಾರ||

ಗುರುವೆ ತಾಯಿ ಗುರುವೆ ತಂದೆ Read More »

ಗಾಯತಿ ವನಮಾಲೀ

ಗಾಯತಿ ವನಮಾಲೀ ಮಧುರಂ|| ಪುಷ್ಪಸುಗಂಧಿ ಸುಮಲಯ ಸಮೀರೇ| ಮುನಿಜನದರ್ಶಿತ ಯುಮುನಾತೀರೇ|| ಕೂಜಿತಶುಕಪಿಕ ಮುಖ ಖಗಕುಂಜೇ| ಕುಟಿಲಾಳಕ ಬಹು ನೀರದ ಪುಂಜೇ|| ತುಲಸೀದಾಮ ವಿಭೂಷಣ ಹಾರೀ| ಜಲಜಭವಸ್ತುತಸದ್ಗುಣ ಶೌರೀ|| ಪರಮಹಂಸಹೃದಯೋತ್ಸವಕಾರೀ| ಪರಿಪೂರಿತ ಮುರಳೀರವಕಾರೀ||                                  —–ಸದಾಶಿವ ಬ್ರಹ್ಮೇಂದ್ರ

ಗಾಯತಿ ವನಮಾಲೀ Read More »

ಗಜವದನ ಬೇಡುವೆ

ಗಜವದನ ಬೇಡುವೆ ಗೌರೀತನಯ| ತ್ರಿಜಗವಂದಿತನೆ ಸುಜನರ ಪೊರೆವನೆ|| ಪಾಶಾಂಕುಶ ಮುಸಲಾದ್ಯಾಯುಧಧರ| ಮೂಷಕವಾಹನ ಮುನಿಜನ ಪ್ರೇಮ| ಮೋದದಿಂದಲಿ ನಿನ್ನ ಪಾದವ ನಂಬಿದೆ| ಸಾಧುವಂದಿತನೆ ಅನಾದರ ಮಾಡದೆ|| ಸರಸಿಜನಾಭ ಶ್ರೀ ಪುರಂದರವಿಟ್ಠಲನ| ನಿರುತ ನೆನೆಯುವಂತೆ ವರ ದಯಮಾಡೋ||                                                           —ಪುರಂದರದಾಸ

ಗಜವದನ ಬೇಡುವೆ Read More »

ಖೇಲತಿ ಮಮ ಹೃದಯೇ

ಖೇಲತಿ ಮಮ ಹೃದಯೇ ರಾಮಃ|| ಮೋಹಮಹಾರ್ಣವತಾರಕಕಾರೀ ರಾಗದ್ವೇಷಮುಖಾಸುರಮಾರೀ|| ಶಾಂತಿವಿದೇಹಸುತಾಸಹಚಾರೀ ದಹರಾಯೋಧ್ಯಾನಗರವಿಬಾರೀ|| ಪರಮಹಂಸಸಾಮ್ರಾಜ್ಯೋದ್ಧಾರೀ ಸತ್ಯಜ್ಞಾನಾನಂದಶರೀರೀ||                           —ಸದಾಶಿವ ಬ್ರಹ್ಮೇಂದ್ರ

ಖೇಲತಿ ಮಮ ಹೃದಯೇ Read More »

ಖೇಲತಿ ಬ್ರಹ್ಮಾಂಡೇ

ಖೇಲತಿ ಬ್ರಹ್ಮಾಂಡೇ ಭಗವಾನ್|| ಹಂಸಸೋಹಂ ಹಂಸಸೋಹಂ ಹಂಸಸೋಹಂ ಸೋಹಮಿತಿ|| ಪರಮಾತ್ಮಾಹಂ ಪರಿಪೂರ್ಣೋಹಂ ಬ್ರಹ್ಮೈವಾಹಮಹಂ ಬ್ರಹ್ಮೇತಿ|| ತ್ವಕ್ – ಚಕ್ಷುಃ- ಶ್ರುತಿ- ಜಿಹ್ವಾಘ್ರಾಣೇ ಪಂಚವಿಧಪ್ರಾಣೋಪಸ್ಥಾನೇ|| ಶಬ್ದಸ್ಪರ್ಶರಸಾದಿಕಮಾತ್ರೇ ಸಾತ್ತ್ವಿಕರಾಜಸತಾಮಸಮಿತ್ರೇ|| ಬುದ್ಧಿಮನಶ್ಚಿತ್ತಾಹಂಕಾರೇ ಭೂಜಲತೇಜೋಗಗನಸಮೀರೇ|| ಪರಮಹಂಸರೂಪೇಣ ವಿಹರ್ತಾ ಬ್ರಹ್ಮಾವಿಷ್ಣುರುದ್ರಾದಿಕ – ಕರ್ತಾ||                                      –ಸದಾಶಿವ ಬ್ರಹ್ಮೇಂದ್ರ

ಖೇಲತಿ ಬ್ರಹ್ಮಾಂಡೇ Read More »

ಕ್ಷೀಣಪ್ರಾಣ ಹೀನತ್ರಾಣ

ಕ್ಷೀಣಪ್ರಾಣ ಹೀನತ್ರಾಣ ದೀನ ಭಾರತೀಯ ಜನಕೆ| ಪ್ರಾಣ ಮಾನ ದಾನಗೈದ ಮಾನವೇಂದ್ರ ಸ್ವಾಮಿಯೇ|| ಸ್ವರಿಸಿ ನಿಮ್ಮ ಹಿರಿಯ ಪದವ ಧರಿಸಿ ಹೆಮ್ಮೆ ಧೈರ್ಯ ಬಲವ| ಸಿರಿಯ ಆತ್ಮ ನೀವು ಎನುತ ಮೊರೆದ ಅಭಯವಾಣಿಯೇ|| ತ್ಯಾಗ ಸೇವೆ ನಿಮ್ಮ ನಾಡ ಭಾಗ್ಯವೆಂದು ನಂಬಿ ನಡೆಯೆ| ಭೋಗ ಯೋಗ ಸಿದ್ಧವೆಂದ ಯೋಗಿವರನೆ ವಂದಿಪೆ||                           —-ಸ್ವಾಮಿ ಶಾಸ್ತ್ರಾನಂದ

ಕ್ಷೀಣಪ್ರಾಣ ಹೀನತ್ರಾಣ Read More »

ಕ್ಷಾಂತಿ ಸಹನೆಯ

ಕ್ಷಾಂತಿ ಸಹನೆಯ ಶಾಂತ ಶೀತಲ ಕಾಂತಿಯಿಂದಲಿ ಬೆಳಗುವಾ ಶಶಿ| ಅಂತರಂಗದ ಭಕುತಿ ಭೂಷಣ ಸಂತರಾಜ್ಯದ ಚಕ್ರವರ್ತಿ|| ಗುರುವೆ ನಿನ್ನಯ ಪರಮ ದೈವವು ಗುರುವಿನಾಣತಿ ಹಿರಿಯ ವೇದವು| ಗುರುವಿಗಾಳ್ತನ ಚರಮ ಸಾಧನ ಗುರುವಿಗೋಸುಗ ಧರಿತಪ್ರಾಣವು|| ಕಾಮಕಾಂಚನ-ತ್ಯಾಗಿ ತಾಪಸಿ ಪ್ರೇಮಪೂರಿತ ಕರ್ಮಯೋಗಿ| ರಾಮಕೃಷ್ಣರ ದಿವ್ಯದಾಸ ರಾಮಕೃಷ್ಣಾನಂದ ನಮಿಪೆವು||                                    –ಸ್ವಾಮಿ ಶಾಸ್ತ್ರಾನಂದ

ಕ್ಷಾಂತಿ ಸಹನೆಯ Read More »