ಭಜನೆಗಳು

ದೊರೆಯಿತು ಎನಗೆ

ದೊರೆಯಿತು ಎನಗೆ ಗುರುಚರಣಾಶ್ರಯ|| ಪ್ರಿಯವೊಂದಿಲ್ಲವು ಚರಣವನುಳಿದು| ಮಾಯೆಯೆ ಅಲ್ಲವೆ ಕನಸಿನ ಜಗವದು|| ಭವಸಾಗರವದು ಬರಿದಾಗಿಹುದು| ಅವನೊಡನಿರಲು ಭಯನೀಗಿಹುದು|| ನಟವರ ನಾಗರ ಮೀರೆಯ ಗಿರಿಧರ| ನೋಟವ ತಿರುಗಿಸಿ ಮಾಡಿದ ಅಂತರ||                                      —ಸ್ವಾಮಿ ಹರ್ಷಾನಂದ

ದೊರೆಯಿತು ಎನಗೆ Read More »

ದೊರಕಿತು ಧರಣಿಗೆ

ದೊರಕಿತು ಧರಣಿಗೆ ಸಿರಿವರ ಇಂದು ಕರುಣೆಯ ಮೂರುತಿ ಶಾರದೆ ಬಂದು| ಪರಮ ಗುರುವಿನ ಶಕ್ತಿಯ ಸಿಂಧು ಪೊರೆವಳು ಸರ್ವರ ಹೃದಯದಿ ನಿಂದು|| ಕಲಿಯುಗದಾರ್ತರ ನೋಡುತ ನೊಂದು ಒಲುಮೆಯ ಸುರನದಿ ತನ್ನಲಿ ಮಿಂದು| ಕಲುಷವ ಕಳೆಯುತ ಬೆಳಗಲಿ ಎಂದು ಸುಲಭದ ಸಾಧನೆ ಸಾರವ ತಂದು|| ನಿರ್ಮಲ ಮೂರುತಿ ನಿಷ್ಕಲ ಇಂದು ಕರುಣಿಸು ಒಂದೇ ಪ್ರೇಮದ ಬಿಂದು| ಪರಹಿತ ಜೀವಿತೆ ಸರ್ವರ ಬಂಧು ಮೊರೆಯುವೆ ನಿನ್ನಲಿ ಕೃಪೆ ತೋರೆಂದು||                                                —-ಸ್ವಾಮಿ ಶಾಸ್ತ್ರಾನಂದ

ದೊರಕಿತು ಧರಣಿಗೆ Read More »

ದೇವಿ ಮೀನಾಕ್ಷಿ ಮುದಂ

(ಅಂಬ) ದೇವಿ ಮೀನಾಕ್ಷಿ ಮುದಂ ದೇಹಿ ಮೇ ಸತತಂ|| ಪಾವನಮಧುರಾನಿಲಯೇ ಪಾಂಡ್ಯರಾಜತನಯೇ ಭಾವರಾಗತಾಳಾಧಿಕ- ಪರಿತೋಷಿತ ಹೃದಯೇ|| (ಅಂಬ)ಭಾವುಕಫಲಪ್ರದಾಯಿನಿ ಭಕ್ತಮೋದಸಂದಾಯಿನಿ ಸೇವಕಪಾಪವಿಮೋಚನಿ ಶ್ರೀಕದಂಬವನವಾಸಿನಿ|| ಹಿಮಕರನಿಭವದನೇ ವಿಮಲಕುಂದರದನೇ ಕಮನೀಯಮಣಿಸದನೇ ರಕ್ಷಿತಮದನೇ|| ಸುಮಶರಜನಕಸಹೋದರಿ ಸುಂದರೇಶಹೃದಯೇಶ್ವರಿ ಸಮರವಿಜಿತನಿಖಿಲಾಸುರಿ ಸಾಧುವಶಂಕರಿ ಶಂಕರಿ|| ಕಮಲಜಾದಿಸುರಪಾಲಿನಿ ಘನತರಶುಭಗುಣಶಾಲಿನಿ ಸಮದಾನೇಕಪಗಾಮಿನಿ ಸಂಗೇತರಸಾಹ್ಲಾದಿನಿ||                     —-ತಚ್ಚೂರು ಶಿಂಗರಾಚಾರ್ಯ

ದೇವಿ ಮೀನಾಕ್ಷಿ ಮುದಂ Read More »

ದೇವ ಬಂದಾ ನಮ್ಮ

ದೇವ ಬಂದಾ ನಮ್ಮ ಸ್ವಾಮಿ ಬಂದಾನೋ ದೇವರ ದೇವ ಶಿರೋಮಣಿ ಬಂದನೋ|| ಉರಗಶಯನ ಬಂದ ಗರುಡಗಮನ ಬಂದ ನರಗೊಲಿದವ ಬಂದ ನಾರಾಯಣ ಬಂದ|| ಮಂದರೊದ್ಧರ ಬಂದ ಮಾಮನೋಹರ ಬಂದ ಬೃಂದಾವನಪತಿ ಗೋವಿಂದ ಬಂದನೋ| ನಕ್ರಹರನು ಬಂದ ಚಕ್ರಧರನು ಬಂದ ಅಕ್ರೂರಗೊಲಿದ ತ್ರಿವಿಕ್ರಮ ಬಂದನೋ|| ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದ ಅಕ್ಷಯಫಲದ ಶ್ರೀಲಕ್ಷ್ಮೀರಮಣ ಬಂದ| ನಿಗಮಗೋಚರ ಬಂದ ನಿತ್ಯತೃಪ್ತನು ಬಂದ ನಗೆಮುಖ ಪುರಂದರವಿಟ್ಠಲ ಬಂದನೋ||                                            —-ಪುರಂದರದಾಸ

ದೇವ ಬಂದಾ ನಮ್ಮ Read More »

ದೇವನೆ ಎನ್ನನು ಮರೆಯುವುದುಚಿತವೆ

ದೇವನೆ ಎನ್ನನು ಮರೆಯುವುದುಚಿತವೆ ಸೇವೆಯ ಮಾಡುವ ಬಾಳನು ಸವೆಸಿಹೆ|| ಪೂರ್ವದ ಜನ್ಮದ ಸುಕೃತ್ಯದಿಂದಲೆ ಗುರುವಿನನುಗ್ರಹ ಪಡೆದೆನು ಆಗಲೆ|| ಕೊರಗುತ ಹೃದಯದಿ ಪರಿಪರಿಯಂದಲಿ ಶಿರವನು ಬಾಗಿಸಿ ಬೇಡುತಲಿರುವೆ|| ಮನದಲಿ ಮುಸುಕಿದ ತಮವನು ದೂಡೋ ಮನುಕುಲಪಾವನ ದರುಶನ ನೀಡೋ||                                        —ಸ್ವಾಮಿ ಹರ್ಷಾನಂದ

ದೇವನೆ ಎನ್ನನು ಮರೆಯುವುದುಚಿತವೆ Read More »

ದೇವದೇವನ ನಿಜವನರಿಯಲು

ದೇವದೇವನ ನಿಜವನರಿಯಲು ಮನವು ತೊಳಲುತ ಬಳಲಿದೆ| ಬೀಗಮುದ್ರೆಯನಿಟ್ಟ ಕೋಣೆಯೊ- ಳಲೆವ ಮರುಳನ ತೆರನಿದೆ|| ದಿವ್ಯ ಪ್ರೇಮಕೆ ದೊರೆವನವನು ಶ್ರದ್ಧೆಗಲ್ಲದೆ ಒಲಿಯನು| ವೇದಶಾಸ್ತ್ರ ಪುರಾಣದರ್ಶನ- ದಾಚೆಗೇ ನಿಂತಿರುವನು|| ಭಕ್ತಿಗೊಲಿಯುವ ಹೃದಯದಮೃತಾ- ನಂದರೂಪನು ಎಂಬರು| ಇದನರಿತೆ ಆ ಯೋಗಿವರ್ಯರು ಯುಗಯುಗವು ತಪಗೈದರು|| ಭಕ್ತಿಯೆಚ್ಚರಗೊಳಲು ಎದೆಯಲಿ ಅವನೆ ನಿನ್ನನು ಸೆಳೆವನು| ಈ ರಹಸ್ಯವ ಜಗದ ಸಂತೆಯ ಜನ ಸಮೂಹಕೆ ತಿಳಿಸೆನು|| ಶ್ರೀ ಪ್ರಸಾದನು ನುಡಿವನೀತೆರ “ಮಾತೃಭಾವದಿ ನೆನೆವೆನು| ನನ್ನ ಸೂಚನೆಯರಿತು ನೀವೇ ತಿಳಿಯಿರಾತನ ನಿಜವನು”||                               —-ವಚನವೇದ

ದೇವದೇವನ ನಿಜವನರಿಯಲು Read More »

ದೇವಕಿನಂದನ ಹರಿ

ದೇವಕಿನಂದನ ಹರಿ ವಾಸುದೇವ|| ಕಂಸಮರ್ದನ ಹರಿ ಕೌಸ್ತುಭಾಭರಣ ಹಂಸವಾಹನಮುಖವಂದಿತಚರಣ|| ಶಂಖಚಕ್ರಧರ ಶ್ರೀಗೋವಿಂದ ಪಂಕಜಲೋಚನ ಪೂರ್ಣಾನಂದ| ಮಕರಕುಂಡಲಧರ ಶತರವಿಭಾಸ ರುಕ್ಮಿಣಿವಲ್ಲಭ ಸಕಲಲೋಕೇಶ| ನಿಗಮೋದ್ಧಾರ ನವನೀತಚೋರ ಖಗಪತಿವಾಹನ ಜಗದಾಧಾರ| ವರವೇಲಾಪುರ ಚನ್ನಪ್ರಸನ್ನ ಪುರಂದರವಿಟ್ಠಲ ಸದ್ಗುಣಪೂರ್ಣ||                                  —ಪುರಂದರದಾಸ

ದೇವಕಿನಂದನ ಹರಿ Read More »

ದುರ್ಗಾಪದಕಮಲವನ್ನು

ದುರ್ಗಾಪದಕಮಲವನ್ನು ಸ್ಮರಿಸಿ ಹಗಲು ಇರುಳು ನೀವು|| ಮನದಿ ಧರಿಸಿ ನಾಮಾಮೃತ ಜನನ ಮರಣ ದಾಟಿರಿ|| ಚರಣಕಮಲಧ್ಯಾನದಿಂದ ಪರಮಶಾಂತಿ ಪಡೆಯಿರೆಲ್ಲ ಜ್ಞಾನ ಭಕ್ತಿ ಯೋಗ ಭೋಗ ತನಗೆ ತಾನೆ ಬಪ್ಪುದು||                    —-ಸ್ವಾಮಿ ಹರ್ಷಾನಂದ

ದುರ್ಗಾಪದಕಮಲವನ್ನು Read More »

ದಾಸನ ಮಾಡಿಕೊ ಎನ್ನ

ದಾಸನ ಮಾಡಿಕೊ ಎನ್ನ—ಸ್ವಾಮಿ ಸಾಸಿರನಾಮದ ವೆಂಕಟರಮಣ|| ದುರುಬುದ್ಧಿಗಳನೆಲ್ಲ ಬಿಡಿಸೋ—ನಿನ್ನ ಕರುಣಕವಚವೆನ್ನ ಹರಣಕೆ ತೊಡಿಸೋ| ಚರಣಸೇವೆ ಎನಗೆ ಕೊಡಿಸೋ—ನಿನ್ನ ಕರಪುಷ್ಪವನೆನ್ನ ಶಿರದಲಿ ಮುಡಿಸೋ|| ದೃಢಭಕ್ತಿ ನಿನ್ನಲ್ಲಿ ಬೇಡಿ —ನಾ – ನಡಿಗೆರಗುವೆನಯ್ಯ ಅನುದಿನ ಪಾಡಿ| ಕಡೆಗಣ್ಣಲೇಕೆನ್ನ ನೋಡಿ —ಬಿಡುವೆ ಕೊಡು ನಿನ್ನ ಧ್ಯಾನವ ಮನ ಶುಚಿಮಾಡಿ|| ಮರೆಹೊಕ್ಕವರ ಕಾವ ಬಿರುದು—ಎನ್ನ ಮರೆಯದೆ ರಕ್ಷಣೆ ಮಾಡಯ್ಯ ಪೊರೆದು|| ದುರಿತಗಳೆಲ್ಲವ ತರಿದು— ಸಿರಿ ಪುರಂದರವಿಟ್ಠಲ ಎನ್ನನು ಪೊರೆದು||                                          —ಪುರಂದರದಾಸ

ದಾಸನ ಮಾಡಿಕೊ ಎನ್ನ Read More »

ದರುಶನ ನೀಡೆನಗೆ ತಾಯಿ

ದರುಶನ ನೀಡೆನಗೆ ತಾಯಿ| ಶಾರದೇಶ್ವರಿ ವರದೇ ಶುಭದೇ|| ದೀನೋದ್ಧರಣಕೆ ನಿನ್ನವತರಣ| ನನಗೇ ಏಕೀ ದೂರೀಕರಣ|| ದಿನಗಳು ಉರುಳಲು ಆಯುರ್ನಾಶ| ನನ್ನಿಯ ತ್ಯಜಿಸಲು ತಾಪದ ಪಾಶ|| ಜ್ಞಾನದಿಂ ಭಕ್ತಿಯಿಂ ಮೋಕ್ಷವು ಬಪ್ಪುದೆ| ನಿನ್ನಯ ಪಾದದಿ ಶರಣವೆ ಸಾಲದೆ|| ಎಂದಾಗುವುದು ಜನನಿ ಕೃಪೆಯು| ಅಂದೇ ನನಗೆ ವಿಮೋಚನೆಯು||                             —ಸ್ವಾಮಿ ಹರ್ಷಾನಂದ

ದರುಶನ ನೀಡೆನಗೆ ತಾಯಿ Read More »

ದಯಮಾಡೋ ರಂಗಾ

ದಯಮಾಡೋ ರಂಗಾ ದಯಮಾಡೋ ಕೃಷ್ಣ ದಯಮಾಡೋ ನಿನ್ನ ದಾಸ ನಾನೆಂದು|| ಹಲವು ಕಾಲದಿ ನಿನ್ನ ಹಂಬಲು ಎನಗೆ| ಒಲಿದು ಪಾಲಿಸಬೇಕೊ ವಾರಿಜನಾಭ|| ಇಹಪರಗತಿ ನೀನೆ ಇಂದಿರಾರಮಣ ಸಹಾಯ ನಿನ್ನದೇ ಸದಾ ತೋರು ಕರುಣಾ|| ಕರಿರಾಜವರದನೆ ಕಂದರ್ಪನಯನ| ಹರಿ ಸಾರ್ವಭೌಮ ಶ್ರೀ ಪುರಂದರವಿಟ್ಠಲ||                                                    –ಪುರಂದರದಾಸ

ದಯಮಾಡೋ ರಂಗಾ Read More »

ದಯಮಾಡಿಸು

ದಯಮಾಡಿಸು ದಯಮಾಡಿಸು ಹೃದಯಕಮಲಪೀಠದಿ| ಬಂದು ಮೊಗವ ತೋರು ತಾಯೆ ಹೃದಯ ಪ್ರಾಣ ಪುತ್ಥಲೀ|| ಹುಟ್ಟಿದಂದಿನಿಂದ ನಾನು ಎನಿತೊ ನೋವ ನುಂಗಿದೆ| ನೀನು ಬಲ್ಲೆ ನಿನ್ನ ಬರವಿ- ಗಾಗಿ ನಾನು ಕಾದಿಹೆ| ಹೃದಯಕಮಲವರಳಿಸಿ ನೀ ದಯಮಾಡಿಸು ಬೇಗನೆ||                         —-ವಚನವೇದ

ದಯಮಾಡಿಸು Read More »

ತಾಯಿ ನೀನೆನ್ನ ಶಿಕ್ಷಿಸಲು

ತಾಯಿ ನೀನೆನ್ನ ಶಿಕ್ಷಿಸಲು ರಕ್ಷಿಪರಾರು ತ್ರಿಭುವನದೊಳು ಹೇ|| ನಿನ್ನನೆ ನಂಬಿಯೆ ಅನ್ಯರ ತ್ಯಜಿಸಿದೆ ನೀಯೆನ್ನ ತ್ಯಜಿಸಲು ಗತಿ ಯಾರಿನ್ನು|| ಮಾನುಷ ಜನ್ಮವ ಮುಕ್ತಿಯ ಆಸೆಯ ಶ್ರೀಗುರುಪಾದವ ಕರುಣಿಸಿದೆ ತಾಯಿ| ಎನ್ನಯ ದೋಣಿಯ ನಿನ್ನಯ ದಡದಲಿ ಮುಳುಗಿಸಿದರೇ ನೀನೇ ಕಾಯುವರಾರು ಕಾಯುವರಾರು ಜಗಜ್ಜನನಿ||                            —ಸ್ವಾಮಿ ಹರ್ಷಾನಂದ

ತಾಯಿ ನೀನೆನ್ನ ಶಿಕ್ಷಿಸಲು Read More »

ತಾಯಿ ದುರ್ಗೆಯ ನಿಜವನರಿಯುವ

ತಾಯಿ ದುರ್ಗೆಯ ನಿಜವನರಿಯುವ ದೀರರಾರೋ ಜಗದೊಳು| ಆರು ದರುಶನ ವೇದಶಾಸ್ತ್ರ ಪುರಾಣವರಿಯದು ಅವಳನು|| ಯೋಗಿಹೃದಯದ ದಿವ್ಯನಿತ್ಯಾ- ನಂದರೂಪಿಣಿ ಆಕೆಯು| ತನ್ನ ಆನಂದದಲಿ ತಾನೇ ಜೀವರೆದೆಯೊಳಗಿರುವಳು|| ಸಕಲಬ್ರಹ್ಮಾಂಡವನು ಬಸಿರಲಿ ಧರಿಸಿ ನಿತ್ಯವು ಪೊರೆವಳು| ಮೂಲಾಧಾರ ಸಹಸ್ರಾರದಿ ಮುನಿಗಳವಳನು ನೆನೆವರು|| ಶಿವನ ಹೊರತಿನ್ನಾರು ಅರಿಯರು ಅವಳ ದಿವ್ಯಸ್ವರೂಪವ| ಪದ್ಮವನದಲಿ ಹಂಸರೂಪನ ಜೊತೆಗೆ ನಲಿಯುವ ಮಾಟವ|| ಕಡಲನೀಜುವೆನೆಂಬ ಮರುಳನ ಕಲ್ಪನೆಗೆ ನಗುವಂದದಿ| ಇಂಥ ತಾಯಿಯ ತಿಳಿದೆನೆಂದರೆ ಶ್ರೀಪ್ರಸಾದನು ನಗುವನು|| ಕುಬ್ಜನಾದವ ಮುಗಿಲಚಂದ್ರನ ಹಿಡಿವ ಯತ್ನದ ತೆರದಲಿ| ಬುದ್ಧಿಯರಿತರು ಹೃದಯವರಿಯದು ತಾಯಿ ದುರ್ಗೆಯ

ತಾಯಿ ದುರ್ಗೆಯ ನಿಜವನರಿಯುವ Read More »

ತಂದೆ ನೀನು ತಾಯಿ ನೀನು

ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು ನೀನಲ್ಲದೆ ಮತ್ತಾರಯ್ಯಾ|| ಕೂಡಲಸಂಗಮದೇವಾ ಹಾಲಲದ್ದು ನೀರಲದ್ದು||                            —-ಬಸವಣ್ಣ

ತಂದೆ ನೀನು ತಾಯಿ ನೀನು Read More »

ತವ ಕೃಪೆ ಬೆಳಗಲಿ

ತವ ಕೃಪೆ ಬೆಳಗಲಿ  ಭವಭ್ರಮೆ ಕಳೆಯಲಿ ಶಿವೆ ಶ್ರೀಶಾರದೆ ತವಕದಿ ಮೊರೆಯುವೆ|| ಇಂದು ಸುವಿಮಲೆ ವಂದಿತ ಪದತಲೆ | ಕುಂದದ ಪ್ರೇಮದ ಮಂದಾಕಿನಿಯೆ|| ತ್ಯಾಗವಿಭೂಷಿತೆ ತ್ಯಾಗಿಕುಲಾಂಬಿಕೆ| ಯೋಗೀಂದ್ರಾರ್ಚಿತೆ ಯೋಗಪ್ರದಾತೆ|| ನಿನ್ನಡಿದಾವರೆ ಎನ್ನಯ ಆಸರೆ| ಮನ್ನಿಸು ದಾಸನ ಬಿನ್ನಹ ಮಾತೆ|| —-ಸ್ವಾಮಿ ಶಾಸ್ತ್ರಾನಂದ

ತವ ಕೃಪೆ ಬೆಳಗಲಿ Read More »

ತಲ್ಲಣಿಸದಿರು ಕಂಡ್ಯ

ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ|| ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ| ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು ಘಟ್ಯಾಗಿ ಸಲಹುವನು ಇದಕೆ ಸಂಶಯಬೇಡ|| ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ ಅಡಿಗಡಿಗೆ ಆಹಾರವಿತ್ತವರು ಯಾರೋ| ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ|| ಕಲ್ಲೊಳಗೆ ಹುಟ್ಟಿರುವ ಕ್ರಿಮಿಕೀಟಗಳಿಗೆಲ್ಲ ಅಲ್ಲಲ್ಲಿ ಆಹಾರವಿತ್ತವರು ಯಾರೋ| ಫುಲ್ಲಲೋಚನ ಕಾಗಿನೆಲೆಯಾದಿಕೇಶವನು ಎಲ್ಲರನು ಸಲಹುವನು ಇದಕೆ ಸಂಶಯಬೇಡ||                                                                  —ಕನಕದಾಸ

ತಲ್ಲಣಿಸದಿರು ಕಂಡ್ಯ Read More »

ತನುವ ನೀರೊಳಗದ್ದಿ

ತನುವ ನೀರೊಳಗದ್ದಿ ಫಲವೇನು ಮನದಲಿ ದೃಢಭಕ್ತಿಯಿಲ್ಲದ ಮನುಜನು|| ದಾನ ಧರ್ಮಂಗಳ ಮಾಡುವುದೆ ಸ್ನಾನ ಜ್ಞಾನ ತತ್ತ್ವಂಗಳ ತಿಳಿವುದೆ ಸ್ನಾನ ಹೀನ ಪಾಪಂಗಳ ಬಿಡುವುದೆ ಸ್ನಾನ ಧ್ಯಾನದಿ ಮಾಧವನ ನೋಡುವುದೆ ಸ್ನಾನ|| ಗುರುಗಳ ಪಾದದರ್ಶನವೆ ಸ್ನಾನ ಹಿರಿಯರ ದರ್ಶನ ಮಾಡುವುದೆ ಸ್ನಾನ ಕರೆದು ಅನ್ನವನಿಕ್ಕುವುದೊಂದು ಸ್ನಾನ ನರಹರಿ ಚರಣವ ನಂಬುವುದೆ ಸ್ನಾನ|| ದುಷ್ಚರ ಸಂಗವ ಬಿಡುವುದೆ ಸ್ನಾನ ಶಿಷ್ಚರ ಸಹವಾಸ ಮಾಡುವುದೆ ಸ್ನಾನ ಸೃಷ್ಚಿಯೊಳಗೆ ಸಿರಿ ಪುರಂದರ ವಿಟ್ಠಲನ ಮುಟ್ಟಿ ಭಜಿಸಿದರೆ ವಿರಜಾ ಸ್ನಾನ||                                            —ಪುರಂದರದಾಸ

ತನುವ ನೀರೊಳಗದ್ದಿ Read More »

ತತ್ಕೈಶೋರಂ

ತತ್ಕೈಶೋರಂ ತಚ್ಚ ವಕ್ತ್ರಾರವಿಂದಂ ತತ್ಕಾರುಣ್ಯಂ ತೇ ಚ ಲೀಲಾಕಟಾಕ್ಷಾಃ ತತ್ಸೌಂದರ್ಯಂ ಸಾ ಚ ಮಂದಸ್ಮಿತಶ್ರೀಃ ಸತ್ಯಂ ಸತ್ಯಂ ದುರ್ಲಭಂ ದೈವತೇಷು|| ಕರಾರವಿಂದೇನ ಪದಾರವಿಂದಂ ಮುಖಾರವಿಂದೇ ವಿನಿವೇಶಯಂತಂ ವಟಸ್ಯ ಪತ್ರಸ್ಯ ಪುಟೇ ಶಯಾನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ||                                               —ಶ್ರೀಕೃಷ್ಣಕರ್ಣಾಮೃತ

ತತ್ಕೈಶೋರಂ Read More »

ಜೈ ಜೈ ರಾಮಕೃಷ್ಣ ಹರಿ

ಜೈ ಜೈ ರಾಮಕೃಷ್ಣ ಹರಿ|| ದಶರಥನಂದನ ರಾಮ ನಮೋ| ವಸುದೇವನಂದನ ಕೃಷ್ಣ ನಮೋ|| ಕೌಸಲ್ಯಾತನಯ ರಾಮ ನಮೋ ದೇವಕಿನಂದನ ಕೃಷ್ಣ ನಮೋ|| ಸೀತಾರಮಣ ಶ್ರೀರಾಮ ನಮೋ| ರಾಧಾರಮಣ ಶ್ರೀರಾಮ ನಮೋ|| ರಾವಣಮರ್ದನ ರಾಮ ನಮೋ| ಕಂಸವಿಮರ್ದನ ಕೃಷ್ಣ ನಮೋ||

ಜೈ ಜೈ ರಾಮಕೃಷ್ಣ ಹರಿ Read More »

ಜೇನಿನ ಗೂಡೊಳು

ಜೇನಿನ ಗೂಡೊಳು ಹುದುಗಿಹ ಮಧುವೋಲ್ ದೇವನ ಹೃದಯದಿ ಹುದುಗಿಹ ಕರುಣೆಯು| ದೀನರ ಆರ್ತರ ಕೂಗಿನ ಹೊಡೆತಕೆ ಶಾರದೆ-ರೂಪದಿ ಸೂಸಿತು ಹರಿಯಿತು|| ಮಾನಸ-ಸರಸಿಜ-ಮಂದಾಕಿನಿ-ಜಲ ಭಾರತ-ಭೂಮಿಯ ಪಾವನಗೈದರೆ| ಶಾರದರೂಪೀ ಕರುಣಾಗಂಗೆಯು ವಿಶ್ವಕೆ ತಂಪಿನ ಸುಧೆಯನು ನೀಡಿತು|| ತನ್ನನು ಕಡಿವಗು ತಣ್ಣನೆ ನೆರಳನು ನೀಡುವ ವೃಕ್ಷದ ತೆರದಲಿ ಶಾರದೆ| ತನ್ನನು ಹಿಂಸಿಸಿ ಬಾಳಲು ಬಯಸಿದ ಮೂರ್ಖರ ಮನ್ನಿಸಿ ಹರಸಿದಳಲ್ಲವೆ|| ಸರ್ವವಿದ್ಯೆಗಳ ಮೂರುತಿ ನೀನು ಭೋಗದ ಮೋಕ್ಷದ ದಾತೆಯು ನೀನೇ| ಎನ್ನಯ ಹೃದಯದಿ ನಿನ್ನಯ ಭಕ್ತಿಯ ತುಂಬಿಸು ಕೂಡಲೆ ಕೃಪೆಯನು ತೋರುತ|| ನಾನೂ

ಜೇನಿನ ಗೂಡೊಳು Read More »

ಜಾಲಿಯ ಮರದಂತೆ

ಜಾಲಿಯ ಮರದಂತೆ ಧರೆಯೊಳು| ದುರ್ಜನರು ಜಾಲಿಯ ಮರದಂತೆ|| ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ|| ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ ಹಸಿದು ಬಂದವರಿಗೆ ಹಣ್ಣು ಇಲ್ಲ| ಕುಸುಮ ವಾಸನೆ ಇಲ್ಲ ಕೂಡಲು ಸ್ಥಳವಿಲ್ಲ ರಸದಲ್ಲಿ ಸ್ವಾದವು ವಿಷದಂತೆ ಇರುತಿಹ|| ತನ್ನಿಂದ ಉಪಕಾರ ತೊಟಕಾದರೂ ಇಲ್ಲ ಬಿನ್ನಾಣ ಮಾತಿಗೆ ಕೊನೆಯಿಲ್ಲವು | ಅನ್ನಕ್ಕೆ ಸೇರಿದ ಹೀನ ಮಾನವರಂತೆ ಇನ್ನಿವರ ಕಾರ್ಯವು ಪುರಂದರವಿಟ್ಠಲ||                                              —ಪುರಂದರದಾಸ

ಜಾಲಿಯ ಮರದಂತೆ Read More »

ಜಯತು ಜಯತು ರಾಮಕೃಷ್ಣ

ಜಯತು ಜಯತು ರಾಮಕೃಷ್ಣ ಜಯತು ಭುವನಮಂಗಲ ಜಯತು ತಾಯಿ ಮಹಾಮಾಯಿ ಶಾರದೇ ಸುನಿರ್ಮಲ| ಜಯತು ಶ್ರೀವಿವೇಕಾನಂದ ತಮವ ಕಳೆವ ಭಾಸ್ಕರ ಶ್ರೀಗುರುವಿನ ಆತ್ಮಪುತ್ರ ಬ್ರಹ್ಮಾನಂದ ಸಾಗರ|| ಜಯತು ಜಯತು ಪ್ರೇಮಾನಂದ- ಪ್ರೇಮಾಮೃತ ಸಿಂಚನ ತ್ಯಾಗವ್ರತನೆ ಶಿವಾನಂದ ಗುರುಶಕ್ತಿಯ ದರ್ಶನ| ಕಾಮನೆಗಳ ಗೆದ್ದ ಯೋಗಿ ಜಯತು ಯೋಗಾನಂದನೆ ಧೀರ-ವೀರ ನಿರಂಜನನೆ ನಿನ್ನ ಪದಕೆ ವಂದನೆ|| ಗುರುಸೇವೆಯ ಮೂರ್ತರೂಪ ರಾಮಕೃಷ್ಣಾನಂದನೆ ಅಕ್ಷರದಲಿ ನೆಲೆನಿಂದಿಹ ಅದ್ಭುತ ಆನಂದನೆ| ತಾಪಸಿ ನೀ ಅಭೇದಾನಂದ ಜ್ಞಾನಮೂರ್ತಿ ಜಯ ಜಯ ದೇಹಭಾವವಳಿದ ಯತಿ ತುರೀಯಾನಂದ ನಿರ್ಭಯ||

ಜಯತು ಜಯತು ರಾಮಕೃಷ್ಣ Read More »

ಜಯತು ಗುರು ವಿವೇಕಾನಂದ

ಜಯತು ಗುರು ವಿವೇಕಾನಂದ ಜಯತು ಸ್ವಾಮೀಜೀ|| ರಾಮಕೃಷ್ಣಹೃದಯಕಿರಣ ನಿನ್ನ ಪದಕೆ ಕೋಟಿ ನಮನ|| ರಾಮಕೃಷ್ಣಹೃದಯಕಿರಣ ನಿನ್ನ ಪದಕೆ ಕೋಟಿ ನಮನ|| ಬಂಧ ಮುಕ್ತಿ ಪಡೆದ ಬಾಳು ಉಲ್ಲಾಸದಿ ನಲಿದಿದೆ ದೀನದಲಿತರೆದೆಯ ನೆಲದಿ ಹೊಸ ಭರವಸೆ ಚಿಮ್ಮಿದೆ|| ಮೂಕ ಮೂಢ ಜನರ ಮುಖದಿ ನುಡಿಯ ಬೆಳಕು ಅರಳಿದೆ ಮೃತಸಮಷ್ಟಿ ಲೋಕಹೃದಯ ಜೀವದುಂಬಿ ಮಿಡಿದಿದೆ|| ತಮ ಸಮುದ್ರ ಮಥಿಸಿತಂದ ಮಹಾಮಂತ್ರ ನೀಡಿದೆ ಅಭೀ ಎಂಬ ಆಭಯ ನುಡಿಯ ಆತ್ಮನಿಧಿಯ ಮಾಡಿದೆ|| ಮಹಾಮಾಯೆಯೆಸೆದ ಜಾಲ ಆಯಿತೀಗ ನಿಷ್ಫಲ ಎಲ್ಲ ಬಗೆಯ ದ್ವಂದ್ವಭಾವ-

ಜಯತು ಗುರು ವಿವೇಕಾನಂದ Read More »