ಕ್ಷೀಣಪ್ರಾಣ ಹೀನತ್ರಾಣ
ದೀನ ಭಾರತೀಯ ಜನಕೆ|
ಪ್ರಾಣ ಮಾನ ದಾನಗೈದ
ಮಾನವೇಂದ್ರ ಸ್ವಾಮಿಯೇ||
ಸ್ವರಿಸಿ ನಿಮ್ಮ ಹಿರಿಯ ಪದವ
ಧರಿಸಿ ಹೆಮ್ಮೆ ಧೈರ್ಯ ಬಲವ|
ಸಿರಿಯ ಆತ್ಮ ನೀವು ಎನುತ
ಮೊರೆದ ಅಭಯವಾಣಿಯೇ||
ತ್ಯಾಗ ಸೇವೆ ನಿಮ್ಮ ನಾಡ
ಭಾಗ್ಯವೆಂದು ನಂಬಿ ನಡೆಯೆ|
ಭೋಗ ಯೋಗ ಸಿದ್ಧವೆಂದ
ಯೋಗಿವರನೆ ವಂದಿಪೆ||
—-ಸ್ವಾಮಿ ಶಾಸ್ತ್ರಾನಂದ