ಬಾರಯ್ಯ ರಂಗ ಬಾರಯ್ಯ ಕೃಷ್ಣ
ಬಾರಯ್ಯ ಸ್ವಾಮಿ ಬಾರಯ್ಯ||
ವಾರಣಭಯವ ನಿವಾರಣ ಮಾಡಿದ
ಕಾರುಣ್ಯನಿಧಿ ಎನ್ನ ಹೃದಯಮಂದಿರಕೆ||
ಇಂದೆನ್ನ ಪೂರ್ವಪಾಪಂಗಳ ಕಳೆದು
ಮುಂದೆನ್ನ ಜನ್ಮ ಸಫಲವ ಗೈದು|
ತಂದೆ ಶ್ರೀ ಪುರಂದರವಿಟ್ಠಲಾ ನೀನೊಲಿದು
ಎಂದೆಂದಿಗಾನಂದ ಸುಖವನು ಸುರಿದು||
—-ಪುರಂದರದಾಸ
ಬಾರಯ್ಯ ರಂಗ ಬಾರಯ್ಯ ಕೃಷ್ಣ
ಬಾರಯ್ಯ ಸ್ವಾಮಿ ಬಾರಯ್ಯ||
ವಾರಣಭಯವ ನಿವಾರಣ ಮಾಡಿದ
ಕಾರುಣ್ಯನಿಧಿ ಎನ್ನ ಹೃದಯಮಂದಿರಕೆ||
ಇಂದೆನ್ನ ಪೂರ್ವಪಾಪಂಗಳ ಕಳೆದು
ಮುಂದೆನ್ನ ಜನ್ಮ ಸಫಲವ ಗೈದು|
ತಂದೆ ಶ್ರೀ ಪುರಂದರವಿಟ್ಠಲಾ ನೀನೊಲಿದು
ಎಂದೆಂದಿಗಾನಂದ ಸುಖವನು ಸುರಿದು||
—-ಪುರಂದರದಾಸ