ಶಿವ ನಿನ್ನ ಪಾದವ ನಂಬಿದೆ

ಶಿವ ನಿನ್ನ ಪಾದವ ನಂಬಿದೆ| ಎನ್ನ ಕಾಯುವ ಭಾರವು ನಿನ್ನದು ಎಂದೆ|| ನಾನೆಂಬ ಮಮಕಾರದಿಂದೆ| ನಾನಾ ಜನ್ಮವ ತಿರುಗಿ ನಾ ಬಂದೆ| ಗತಿ ಯಾವುದೆನಗಿನ್ನು ತೋರದು ಮುಂದೆ ದೀನರಕ್ಷಕನಯ್ಯೋ ಬಾರಯ್ಯ ತಂದೆ|| ಭಕುತರ ಬಂಟ ನೀನಂತೆ| ಮುನ್ನ ಬಾಣನ ಬಾಗಿಲ ಕಾಯ್ದವನಂತೆ| ಫಾಲಲೋಚನ ನಿನ್ನ ಭಜಿಸಿದ ಉಪಮನ್ಯು ಕ್ಷೀರವಾರಿಧಿಯಿತ್ತು ಸಲಹಿದೆ ತಂದೆ||

ಶಿವ ನಿನ್ನ ಪಾದವ ನಂಬಿದೆ Read More »

ಶಿವನ ಭಜಿಸಿರೋ

ಶಿವನ ಭಜಿಸಿರೋ (ಪರ) ಶಿವನ… (ಉಮಾ) ಧವನ ಭಜಿಸಿರೋ|| ಶಿವನ ಭವನ ಉಮಾಧವನ ಧವಳಾಂಗನ ದಯಾಘನನ| ಭವದೂರನ ಭಕ್ತಪ್ರಿಯನ ಕವಿಗೇಯನ ಕಾಮಹರನ|| ಶಿವನ… ವ್ಯೋಮಕೇಶ ಕಾಮೇಶ್ವರ ಭೂಮಭದ್ರಗಿರಿನಿವಾಸ| ರಾಮನಾಮ ನೇಮದಿಂದ ಭಾಮೆಗೊರೆದ ವಾಮದೇವನ|| ಕಾಲರೂಪ ನೀಲಕಂಠ ಮೂಲನಾರಾಯಣನ ಭಕುತ| ವ್ಯಾಲಭೂಷ ಆಶುತೋಷ ಫಾಲನೇತ್ರನ ಭಕುತಿಯಿಂದ|| —-ಅಚ್ಯುತದಾಸರು

ಶಿವನ ಭಜಿಸಿರೋ Read More »

ಶಿವದರುಶನ ನಮಗಾಯ್ತು

ಶಿವದರುಶನ ನಮಗಾಯ್ತು ಕೇಳೆ ಶಿವರಾತ್ರಿಯ ಜಾಗರಣೆ|| ಪಾತಾಳಗಂಗೆಯ ಸ್ನಾನವ ಮಾಡಲು ಪಾತಕವೆಲ್ಲ ಪರಿಹಾರವು| ಜ್ಯೋತಿರ್ಲಿಂಗನ ಧ್ಯಾನವ ಮಾಡಲು ದ್ಯೂತಗಳಿಲ್ಲ ಅನುದಿನವು|| ಬೇಡಿದ ವರಗಳ ಕೊಡುವನು ತಾಯಿ ಬ್ರಹ್ಮನ ರಾಣಿಯ ನೋಡುವನು| ಆಡುತ ಪಾಡುತ ಏರುತ ಬಸವನ ಆನಂದದಿಂದಲಿ ನಲಿದಾಡುವನು|| ಶಿಖರವ ಕಂಡೆನು ಪುರಂದರ ವಿಟ್ಠಲನ ಹರಿನಾರಾಯಣ ಧ್ಯಾನದಲಿ|| —-ಪುರಂದರದಾಸ

ಶಿವದರುಶನ ನಮಗಾಯ್ತು Read More »

ಶರೀರವೆಂತೆಂಬುವ ಹೊಲವ

ಶರೀರವೆಂತೆಂಬುವ ಹೊಲವ ಹಸನು ಮಾಡಿ ಪರತತ್ತ್ವ ಬೆಳೆಯನೆ ಬೆಳೆದುಣ್ಣಿರೋ|| ಶಮೆದಮೆಯೆಂದೆಂಬ ಎರಡೆತ್ತುಗಳ ಹೂಡಿ ವಿಮಲಮಾನಸವ ನೇಗಿಲವನೆ ಮಾಡಿ ಮಮಕಾರವೆಂದೆಂಬ ಕರಿಕೆಯ ಕಳೆದಿಟ್ಟು ಸಮತೆಯೆಂದೆಂಬುವ ಗೊಬ್ಬರ ಚೆಲ್ಲಿ|| ಗುರುವರನುಪದೇಶವೆಂಬ ಬೀಜದ ಬಿತ್ತಿ ಮೆರೆವ ಸಂಸ್ಕಾರವೃಷ್ಟಿಯ ಬಲದಿ ಅರಿವೆಂಬ ಪೈರನೆ ಬೆಳೆಸುತೆ ಮುಸುಗಿರ್ದ ದುರಿತದುರ್ಗುಣವೆಂಬ ಕಳೆಯನು ಕಿತ್ತು|| ಚಿರಮುಕ್ತಿಯೆಂದೆಂಬ ಧಾನ್ಯವ ಬೆಳೆದುಂಡು ಪರಮಾನಂದದೊಳು ದಣ್ಣನೆ ದಣಿದು ಗುರುಸಿದ್ಧನಡಿಗಳಿಗೆರಗುತ್ತ ಭವವೆಂಬ ಬರವನು ತಮ್ಮ ಸೀಮೆಗೆ ಕಳುಹಿ|| —-ಸರ್ಪಭೂಷಣ ಶಿವಯೋಗಿ

ಶರೀರವೆಂತೆಂಬುವ ಹೊಲವ Read More »

ಶರಣು ಶರಣು ಸಂಬುದ್ಧ ಗುರು

ಶರಣು ಶರಣು ಸಂಬುದ್ಧ ಗುರು ಜ್ಞಾನ- ದಯಾಸಮುದ್ರನೆ ಬುದ್ಧ ಗುರು| ಲೋಕನಾಥಸಂಬುದ್ಧ ಗುರು ಆರ್ತ್ತ- ತ್ರಾಣಪರಾಯಣ ಬುದ್ಧ ಗುರು ಶರಣು ಶರಣು ಸಂಬುದ್ಧ ಗುರು|| ದೇಶ ಕೋಶಮನೆ ತಂದೆ ಮಡದಿ ಮಗು ಸಕಲ ಸುಖದ ಸವಿ ಪರಿವಾರ ಕಹಿಯೊ ಎಂಬವೊಲು ಕೊಡವಿಕೊಂಡು ನಡು- ರಾತ್ರಿಯೊಳಡವಿಗೆ ನಡೆದೆ ಗುರು|| ಆರುವರುಷದಲೆದಾಟವು ಘೋರ ಕಡೆಗು ಗೆದ್ದೆ ನೀ ಜಿತಮಾರ ಬೋಧಿವೃಕ್ಷದಡಿ ಪ್ರಜ್ಞಾಯುಧದಲಿ ಮಾರಸೇನೆಯನು ಮುರಿದೆ ಗುರು|| ಗೆದ್ದು ಬಂದು ನೀ ವಾರಾಣಸಿಯಲಿ ಅಮೃತ ದುಂದುಭಿಯ ಬಾರಿಸಿದೆ ಧರ್ಮಚಕ್ರವನು ಸ್ಥಾಪಿಸತೊಡಗಿದೆ ಜಗಗಳ

ಶರಣು ಶರಣು ಸಂಬುದ್ಧ ಗುರು Read More »

ಶರಣಾಗು ಶರಣಾಗು

ಶರಣಾಗು ಶರಣಾಗು ಶರಣಾಗು ಮನವೇ ಶ್ರೀಗುರುಚರಣ ಸರೋಜಕೆ ಮಣಿದು|| ರಾಮಕೃಷ್ಣ ಗುರುಕೃಪೆ ನಿನಗಾದರೆ ಹರಿವುದು ಭವಭಯ ಚಿಂತಾರುಜಿನ| ಶ್ರೀಗುರುನಾಮದ ನೌಕೆಯು ದೊರೆತರೆ ಭವಸಾಗರ ಯಾನವೆ ಮೋದಕರ|| ಎಲ್ಲ ಧರ್ಮಗಳ ತಿರುಳನು ಸಾರುವ ನೊಂದ ಜೀವರಿಗೆ ಭರವಸೆಯೀಯುವ| ರಾಮಕೃಷ್ಣ ಸಂದೇಶ ಗೀತೆಯ ಸಾಗರದಲೆಗಳು ಹಾಡುತಿವೆ|| ಭವ್ಯ ಹಿಮಾಲಯ ಪರ್ವತರಾಜಿಯು ಮುಳುಗಿರೆ ಧ್ಯಾನ ಸಮಾಧಿಯಲಿ| ರಾಮಕೃಷ್ಣ ಜಯ ರಾಮಕೃಷ್ಣ ಜಯ ಎಂಬೀ ನಿನದವು ಕೇಳುತಿದೆ|| —-ಪ್ರಭುಪ್ರಸಾದ

ಶರಣಾಗು ಶರಣಾಗು Read More »

ಶಕ್ತಿಸಮುದ್ರಸಮುತ್ಥತರಂಗಂ

ಶಕ್ತಿಸಮುದ್ರಸಮುತ್ಥತರಂಗಂ ದರ್ಶಿತಪ್ರೇಮವಿಜೃಂಭಿತರಂಗಂ ಸಂಶಯರಾಕ್ಷಸನಾಶಮಹಾಸ್ತ್ರಂ ಯಾಮಿ ಗುರು ಶರಣಂ ಭವವೈದ್ಯಂ|| ಅದ್ವಯತತ್ತ್ವಸಮಾಹಿತಚಿತ್ತಂ ಪ್ರೋಜ್ಜ್ವಲಭಕ್ತಿಪಟಾವೃತವೃತ್ತಂ| ಕರ್ಮಕಲೇವರಮದ್ಭುತಚೇಷ್ಟಂ ಯಾಮಿ ಗುರುಂ ಶರಣಂ ಭವವೈದ್ಯಂ|| —-ಸ್ವಾಮಿ ವಿವೇಕಾನಂದ

ಶಕ್ತಿಸಮುದ್ರಸಮುತ್ಥತರಂಗಂ Read More »

ಶಕ್ತನಾದರೆ

ಶಕ್ತನಾದರೆ ನೆಂಟರೆಲ್ಲ ಹಿತರು| ಅ- ಶಕ್ತನಾದರೆ ಅವರೆ ವೈರಿಗಳು ಲೋಕದಲಿ|| ಕಮಲ ಅರ್ಕನಲಿರುವ ಕಡು ನೆಂಟತನದಿಂದ ವಿಮಲ ಜಲದೊಳಗೆ ಅದು ಆಡುತಿಹುದು| ಕ್ರಮಗೆಟ್ಟು ನೀರಿಂದ ತಡಿಗೆ ಬೀಳಲು ರವಿಯ ಅಮಿತ ಕಿರಣಗಳಿಂದ ಕಂದಿಹೋಗುವುದು|| ವನಸುತ್ತಿ ಸುಡುವಾಗ ವಾಯು ಬೀಸಲು ಉರಿಯು ಘನ ಪ್ರಜ್ವಲಿಸುತಿಹುದು ಗಗನಕಡರಿ| ಮನೆಯೊಳಿಹ ದೀಪಕ್ಕೆ ಮಾರುತನು ಸೋಂಕಿದರು ಘನಶಕ್ತಿಯುಡುಗಿ ತಾ ನಂದಿಹೋಗುವುದು|| ಕರಿಯ ಕಾಯಿದ ಹರಿಯ ಕರುಣತಪ್ಪಿದ ಮೇಲೆ ಮರೆಯ ಹೊಕ್ಕರು ಕಾವ ಮಹಿತರಾರಯ್ಯ| ವರದ ಶ್ರೀ ಪುರಂದರವಿಟ್ಠಲನು ಒಲಿದಿರಲು ಸರುವ ಜನರೆಲ್ಲ ಮೂಜಗದಿ

ಶಕ್ತನಾದರೆ Read More »