Krishna

ಪಾಹಿ ಮದನಗೋಪಾಲ

ಪಾಹಿ ಮದನಗೋಪಾಲ| ಮುಕುಂದ ಪಾಲಿತ ಮುಚುಕುಂದ|| ನಂದನಂದನ ನಂದಿತ ಮುನಿಜನ| ಮಂದಹಾಸವದನ— ಹರೇ ಕೃಷ್ಣ|| ದಂಡಿತರಿಪುಜನ ಅಂಡಜವಾಹನ| ಪುಂಡರೀಕನಯನ—ಹರೇ ಕೃಷ್ಣ|| ಪತಿತಪಾವನ ನತಜನಾವನ| ಸತತಾನಂದಘನ—ಹರೇ ಕೃಷ್ಣ|| ಇಂದಿರಾರಮಣ ಮಂದರಭರಣ| ವಂದಿತದೇವಗಣ—ಹರೇ ಕೃಷ್ಣ|| ರತಿಪತಿಜನಕ ಶ್ರಿತಸಂರಕ್ಷಕ| ನುತಯದುಕುಲತಿಲಕ—ಹರೇ ಕೃಷ್ಣ|| ವಿಧಿನುತಶೀಲ ವಿಜಯಗೋಪಾಲ| ವೇದನಿಕರಪಾಲ—ಹರೇ ಕೃಷ್ಣ||                                        —-ವಿಜಯದಾಸ

ಪಾಹಿ ಮದನಗೋಪಾಲ Read More »

ನೀ ಮಾಯೆಯೊಳಗೋ

ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ನೀ ದೇಹದೊಳಗೋ ನಿನ್ನೊಳು ದೇಹವೋ|| ಬಯಲು ಆಲಯದೊಳಗೋ ಆಲಯವು ಬಯಲೊಳಗೋ ಬಯಲು ಆಲಯವೆರಡೂ ನಯನದೊಳಗೋ| ನಯನ ಬುದ್ಧಿಯ ಒಳಗೋ ಬುದ್ಧಿ ನಯನದ ಒಳಗೋ ನಯನ ಬುದ್ಧಿಗಳೆರಡೂ ನಿನ್ನೊಳಗೋ ಹರಿಯೇ|| ಸವಿಯು ಸಕ್ಕರೆಯೊಳಗೋ ಸಕ್ಕರೆಯು ಸವಿಯೊಳಗೋ ಸವಿಯು ಸಕ್ಕರೆಯೆರಡೂ ಜಿಹ್ವೆಯೊಳಗೋ| ಜಿಹ್ವೆ ಮನಸಿನ ಒಳಗೋ ಮನಸು ಜಿಹ್ವೆಯ ಒಳಗೋ ಜಿಹ್ವೆ ಮನಸುಗಳೆರಡೂ ನಿನ್ನೊಳಗೋ ಹರಿಯೆ|| ಕುಸುಮದೊಳು ಗಂಧವೋ ಗಂಧದೊಳು ಕುಸುಮವೋ ಕುಸುಮಗಂಧಗಳೆರಡೂ ಘ್ರಾಣದೊಳಗೋ| ಅಸಮಭವ ಕಾಗಿನೆಲೆಯಾದಿಕೇಶವರಾಯ ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೋ||                                                     —-ಕನಕದಾಸ

ನೀ ಮಾಯೆಯೊಳಗೋ Read More »

ನೀನ್ಯಾಕೋ ನಿನ್ನ

ನೀನ್ಯಾಕೋ ನಿನ್ನ ಹಂಗ್ಯಾಕೋ ರಂಗ ನಿನ್ನ ನಾಮದ ಬಲವೊಂದಿದ್ದರೆ ಸಾಕೋ|| ಆ ಮರ ಈ ಮರ ಧ್ಯಾನಿಸುತಿರುವಾಗ ರಾಮ ರಾಮ ಎಂಬೋ ನಾಮವೆ ಕಾಯ್ತೋ|| ಯಮನ ದೂತರು ಬಂದು ಅಜಮಿಳನೆಳೆವಾಗ ನಾರಾಯಣ ಎಂಬೋ ನಾಮವೆ ಕಾಯ್ತೋ|| ಕರಿ ಮಕರಗೆ ಸಿಲುಕಿ ಮೊರೆಯಿಡುತಿರುವಾಗ ಆದಿಮೂಲ ಎಂಬೋ ನಾಮವೆ ಕಾಯ್ತೋ|| ಪ್ರಹ್ಲಾದನ ಪಿತ ಬಾಧಿಸುತಿರುವಾಗ ನಾರಸಿಂಹ ಎಂಬೋ ನಾಮವೆ ಕಾಯ್ತೋ|| ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ ಕೃಷ್ಣ ಕೃಷ್ಣ ಎಂಬೋ ನಾಮವೆ ಕಾಯ್ತೋ|| ನಿನ್ನ ನಾಮಕೆ ಸರಿ ಕಾಣೆನೋ ಜಗದಲಿ

ನೀನ್ಯಾಕೋ ನಿನ್ನ Read More »

ನಿನ್ನನೆ ಪಾಡುವೆ

ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ ನಿನ್ನನೆ ಬೇಡಿ ಬೇಸರಿಸುವೆ|| ನಿನ್ನ ಕಾಲ ಪಿಡಿವೆ ನಿನ್ನ ಹಾರೈಸುವೆ ನಿನ್ನ ತೊಂಡರಿಗೆ ಕೈಯ ಕೊಡುವೆ|| ನಿನ್ನಂತೆ ಸಾಕಬಲ್ಲ ದೇವರಿನ್ನುಂಟೆ ಘನ್ನ ಪುರಂದರವಿಟ್ಠಲ ದೇವರದೇವ||

ನಿನ್ನನೆ ಪಾಡುವೆ Read More »

ನಾನಿನ್ನೊಳನ್ಯ ಬೇಡುವುದಿಲ್ಲ

ನಾನಿನ್ನೊಳನ್ಯ ಬೇಡುವುದಿಲ್ಲ| ಹೃದಯಕಮಲದೊಳು ನಿಂದಿರು ಹರಿಯೆ|| ಶಿರ ನಿನ್ನ ಚರಣಕೆ ಎರಗಲಿ| ಎನ್ನ ಚಕ್ಷು ಸದಾ ನಿನ್ನ ನೋಡಲಿ ಹರಿಯೆ| ಕರ್ಣ ಗೀತಂಗಳ ಕೇಳಲಿ| ನಿನ್ನ ನಿರ್ಮಾಲ್ಯವ ನಾಸಘ್ರಾಣಿಸಲಿ|| ನಾಲಿಗೆ ನಿನ್ನನು ಕೊಂಡಾಡಲಿ| ಕರಗಳೆರಡು ನಿನ್ನನರ್ಚಿಸಲಿ| ಚರಣ ತೀರ್ಥಯಾತ್ರೆ ಮಾಡಲಿ| ಎನ್ನ ಮನ ಅನುದಿನ ನಿನ್ನ ಸ್ಮರಿಸಲಿ ಹರಿಯೆ|| ಬುದ್ಧಿಯು ನಿನ್ನೊಳು ಬೆರೆಯಲಿ ಹರಿಯೆ| ಚಿತ್ತ ನಿನ್ನೊಳು ಸ್ಥಿರವಾಗಲಿ| ಭಕ್ತಜನರಸಂಗವಾಗಲಿ|ಪುರಂದರ- ವಿಟ್ಠಲನೆ ಇಷ್ಟೇ ದಯಮಾಡೊ                                  —ಪುರಂದರದಾಸ

ನಾನಿನ್ನೊಳನ್ಯ ಬೇಡುವುದಿಲ್ಲ Read More »

ನಾ ನಿನ್ನ ಧ್ಯಾನದೊಳಿರಲು

ನಾ ನಿನ್ನ ಧ್ಯಾನದೊಳಿರಲು| ಮಿಕ್ಕ ಹೀನ ಮಾನವರೇನು ಮಾಡಬಲ್ಲರೋ ರಂಗ|| ಮತ್ಸರಿಸುವರೆಲ್ಲ ಕೂಡಿ ಮಾಡುವುದೇನು ಅಚ್ಯುತ ನಿನದೊಂದು ದಯೆಯಿರಲು| ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ ಕಿಚ್ಚಿಗೆ ಇರುವೆ ಮುತ್ತುವುದೆ ಪೇಳೆಲೊ ರಂಗ|| ಕನ್ನಡಿಯೊಳಗಿನ ಗಂಟು ಕಂಡು ಕಳ್ಳ ಕನ್ನವಿಕ್ಕಲವನ ವಶವಹುದೆ| ನಿನ್ನ ನಂಬಲು ಮುದ್ದು ಪುರಂದರವಿಟ್ಠಲ ಚಿನ್ನಕ್ಕೇ ಪುಟವನಿಟ್ಟಂತೆ ಅಹುದು ರಂಗ||                                                  —-ಪುರಂದರದಾಸ

ನಾ ನಿನ್ನ ಧ್ಯಾನದೊಳಿರಲು Read More »

ನನ್ನಪರಾಧವು ಏನೆಲೆ ದೇವ

ನನ್ನಪರಾಧವು ಏನೆಲೆ ದೇವ ಎನ್ನನ್ನು ಕಾಯದೆ ಈಯುವೆ ನೋವ ಭಾರವೆ ನಾನು ಗೋವರ್ಧನಗಿರಿ- ಧಾರಿಯು ಅಲ್ಲವೆ ನೀ ಹೇ ಶ್ರೀಹರಿ|| ಕೀರುತಿ ನಿನ್ನದು ಗಜೇಂದ್ರಮೋಕ್ಷದ ಮಾರುತಿಯಾಶ್ರಯ ನಿನ್ನಯ ಪಾದ ಪರಮಪುರುಷ ನೀ ಕೊಡು ತವ ಮೋದ ಪರುಸಮಣಿಯೊಲು ಸರ್ವಾಭೇದ|| ದೀನಬಂಧು ನೀ ದೇವದೇವ ನೀ ಮಾನಘನನು ನೀ ಧರ್ಮಾತ್ಮನು ನೀ ಜ್ಞಾನಧನರು ಗುಣಗಾನವ ಗೈಯಲು ಎನ್ನನ್ನು ರಕ್ಷಿಸಲೇಕೀ ದಿಗಿಲು||                               —ಸ್ವಾಮಿ ಹರ್ಷಾನಂದ

ನನ್ನಪರಾಧವು ಏನೆಲೆ ದೇವ Read More »

ನಗೆಯು ಬರುತಿದೆ

ನಗೆಯು ಬರುತಿದೆ ಎನಗೆ ನಗೆಯು ಬರುತಿದೆ || ಜಗದೊಳಿರುವ ಜಾಣರೆಲ್ಲ ಹಗರಣವ ಮಾಡುವುದು ಕಂಡು|| ಹೀನಗುಣವ ಮನದೊಳಿಟ್ಟು ತಾನು ವಿಷಯಪುಂಜನಾಗಿ ಮೌನಿ ಪುರಂದರವಿಟ್ಠಲನ್ನ ಧ್ಯಾನ ಮಾಡುವವನ ಕಂಡು||                                        —-ಪುರಂದರದಾಸ

ನಗೆಯು ಬರುತಿದೆ Read More »

ದೊರೆಯಿತು ಎನಗೆ

ದೊರೆಯಿತು ಎನಗೆ ಗುರುಚರಣಾಶ್ರಯ|| ಪ್ರಿಯವೊಂದಿಲ್ಲವು ಚರಣವನುಳಿದು| ಮಾಯೆಯೆ ಅಲ್ಲವೆ ಕನಸಿನ ಜಗವದು|| ಭವಸಾಗರವದು ಬರಿದಾಗಿಹುದು| ಅವನೊಡನಿರಲು ಭಯನೀಗಿಹುದು|| ನಟವರ ನಾಗರ ಮೀರೆಯ ಗಿರಿಧರ| ನೋಟವ ತಿರುಗಿಸಿ ಮಾಡಿದ ಅಂತರ||                                      —ಸ್ವಾಮಿ ಹರ್ಷಾನಂದ

ದೊರೆಯಿತು ಎನಗೆ Read More »

ದೇವ ಬಂದಾ ನಮ್ಮ

ದೇವ ಬಂದಾ ನಮ್ಮ ಸ್ವಾಮಿ ಬಂದಾನೋ ದೇವರ ದೇವ ಶಿರೋಮಣಿ ಬಂದನೋ|| ಉರಗಶಯನ ಬಂದ ಗರುಡಗಮನ ಬಂದ ನರಗೊಲಿದವ ಬಂದ ನಾರಾಯಣ ಬಂದ|| ಮಂದರೊದ್ಧರ ಬಂದ ಮಾಮನೋಹರ ಬಂದ ಬೃಂದಾವನಪತಿ ಗೋವಿಂದ ಬಂದನೋ| ನಕ್ರಹರನು ಬಂದ ಚಕ್ರಧರನು ಬಂದ ಅಕ್ರೂರಗೊಲಿದ ತ್ರಿವಿಕ್ರಮ ಬಂದನೋ|| ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದ ಅಕ್ಷಯಫಲದ ಶ್ರೀಲಕ್ಷ್ಮೀರಮಣ ಬಂದ| ನಿಗಮಗೋಚರ ಬಂದ ನಿತ್ಯತೃಪ್ತನು ಬಂದ ನಗೆಮುಖ ಪುರಂದರವಿಟ್ಠಲ ಬಂದನೋ||                                            —-ಪುರಂದರದಾಸ

ದೇವ ಬಂದಾ ನಮ್ಮ Read More »

ದೇವಕಿನಂದನ ಹರಿ

ದೇವಕಿನಂದನ ಹರಿ ವಾಸುದೇವ|| ಕಂಸಮರ್ದನ ಹರಿ ಕೌಸ್ತುಭಾಭರಣ ಹಂಸವಾಹನಮುಖವಂದಿತಚರಣ|| ಶಂಖಚಕ್ರಧರ ಶ್ರೀಗೋವಿಂದ ಪಂಕಜಲೋಚನ ಪೂರ್ಣಾನಂದ| ಮಕರಕುಂಡಲಧರ ಶತರವಿಭಾಸ ರುಕ್ಮಿಣಿವಲ್ಲಭ ಸಕಲಲೋಕೇಶ| ನಿಗಮೋದ್ಧಾರ ನವನೀತಚೋರ ಖಗಪತಿವಾಹನ ಜಗದಾಧಾರ| ವರವೇಲಾಪುರ ಚನ್ನಪ್ರಸನ್ನ ಪುರಂದರವಿಟ್ಠಲ ಸದ್ಗುಣಪೂರ್ಣ||                                  —ಪುರಂದರದಾಸ

ದೇವಕಿನಂದನ ಹರಿ Read More »

ದಾಸನ ಮಾಡಿಕೊ ಎನ್ನ

ದಾಸನ ಮಾಡಿಕೊ ಎನ್ನ—ಸ್ವಾಮಿ ಸಾಸಿರನಾಮದ ವೆಂಕಟರಮಣ|| ದುರುಬುದ್ಧಿಗಳನೆಲ್ಲ ಬಿಡಿಸೋ—ನಿನ್ನ ಕರುಣಕವಚವೆನ್ನ ಹರಣಕೆ ತೊಡಿಸೋ| ಚರಣಸೇವೆ ಎನಗೆ ಕೊಡಿಸೋ—ನಿನ್ನ ಕರಪುಷ್ಪವನೆನ್ನ ಶಿರದಲಿ ಮುಡಿಸೋ|| ದೃಢಭಕ್ತಿ ನಿನ್ನಲ್ಲಿ ಬೇಡಿ —ನಾ – ನಡಿಗೆರಗುವೆನಯ್ಯ ಅನುದಿನ ಪಾಡಿ| ಕಡೆಗಣ್ಣಲೇಕೆನ್ನ ನೋಡಿ —ಬಿಡುವೆ ಕೊಡು ನಿನ್ನ ಧ್ಯಾನವ ಮನ ಶುಚಿಮಾಡಿ|| ಮರೆಹೊಕ್ಕವರ ಕಾವ ಬಿರುದು—ಎನ್ನ ಮರೆಯದೆ ರಕ್ಷಣೆ ಮಾಡಯ್ಯ ಪೊರೆದು|| ದುರಿತಗಳೆಲ್ಲವ ತರಿದು— ಸಿರಿ ಪುರಂದರವಿಟ್ಠಲ ಎನ್ನನು ಪೊರೆದು||                                          —ಪುರಂದರದಾಸ

ದಾಸನ ಮಾಡಿಕೊ ಎನ್ನ Read More »

ದಯಮಾಡೋ ರಂಗಾ

ದಯಮಾಡೋ ರಂಗಾ ದಯಮಾಡೋ ಕೃಷ್ಣ ದಯಮಾಡೋ ನಿನ್ನ ದಾಸ ನಾನೆಂದು|| ಹಲವು ಕಾಲದಿ ನಿನ್ನ ಹಂಬಲು ಎನಗೆ| ಒಲಿದು ಪಾಲಿಸಬೇಕೊ ವಾರಿಜನಾಭ|| ಇಹಪರಗತಿ ನೀನೆ ಇಂದಿರಾರಮಣ ಸಹಾಯ ನಿನ್ನದೇ ಸದಾ ತೋರು ಕರುಣಾ|| ಕರಿರಾಜವರದನೆ ಕಂದರ್ಪನಯನ| ಹರಿ ಸಾರ್ವಭೌಮ ಶ್ರೀ ಪುರಂದರವಿಟ್ಠಲ||                                                    –ಪುರಂದರದಾಸ

ದಯಮಾಡೋ ರಂಗಾ Read More »

ತಲ್ಲಣಿಸದಿರು ಕಂಡ್ಯ

ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ|| ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ| ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು ಘಟ್ಯಾಗಿ ಸಲಹುವನು ಇದಕೆ ಸಂಶಯಬೇಡ|| ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ ಅಡಿಗಡಿಗೆ ಆಹಾರವಿತ್ತವರು ಯಾರೋ| ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ|| ಕಲ್ಲೊಳಗೆ ಹುಟ್ಟಿರುವ ಕ್ರಿಮಿಕೀಟಗಳಿಗೆಲ್ಲ ಅಲ್ಲಲ್ಲಿ ಆಹಾರವಿತ್ತವರು ಯಾರೋ| ಫುಲ್ಲಲೋಚನ ಕಾಗಿನೆಲೆಯಾದಿಕೇಶವನು ಎಲ್ಲರನು ಸಲಹುವನು ಇದಕೆ ಸಂಶಯಬೇಡ||                                                                  —ಕನಕದಾಸ

ತಲ್ಲಣಿಸದಿರು ಕಂಡ್ಯ Read More »

ತನುವ ನೀರೊಳಗದ್ದಿ

ತನುವ ನೀರೊಳಗದ್ದಿ ಫಲವೇನು ಮನದಲಿ ದೃಢಭಕ್ತಿಯಿಲ್ಲದ ಮನುಜನು|| ದಾನ ಧರ್ಮಂಗಳ ಮಾಡುವುದೆ ಸ್ನಾನ ಜ್ಞಾನ ತತ್ತ್ವಂಗಳ ತಿಳಿವುದೆ ಸ್ನಾನ ಹೀನ ಪಾಪಂಗಳ ಬಿಡುವುದೆ ಸ್ನಾನ ಧ್ಯಾನದಿ ಮಾಧವನ ನೋಡುವುದೆ ಸ್ನಾನ|| ಗುರುಗಳ ಪಾದದರ್ಶನವೆ ಸ್ನಾನ ಹಿರಿಯರ ದರ್ಶನ ಮಾಡುವುದೆ ಸ್ನಾನ ಕರೆದು ಅನ್ನವನಿಕ್ಕುವುದೊಂದು ಸ್ನಾನ ನರಹರಿ ಚರಣವ ನಂಬುವುದೆ ಸ್ನಾನ|| ದುಷ್ಚರ ಸಂಗವ ಬಿಡುವುದೆ ಸ್ನಾನ ಶಿಷ್ಚರ ಸಹವಾಸ ಮಾಡುವುದೆ ಸ್ನಾನ ಸೃಷ್ಚಿಯೊಳಗೆ ಸಿರಿ ಪುರಂದರ ವಿಟ್ಠಲನ ಮುಟ್ಟಿ ಭಜಿಸಿದರೆ ವಿರಜಾ ಸ್ನಾನ||                                            —ಪುರಂದರದಾಸ

ತನುವ ನೀರೊಳಗದ್ದಿ Read More »

ತತ್ಕೈಶೋರಂ

ತತ್ಕೈಶೋರಂ ತಚ್ಚ ವಕ್ತ್ರಾರವಿಂದಂ ತತ್ಕಾರುಣ್ಯಂ ತೇ ಚ ಲೀಲಾಕಟಾಕ್ಷಾಃ ತತ್ಸೌಂದರ್ಯಂ ಸಾ ಚ ಮಂದಸ್ಮಿತಶ್ರೀಃ ಸತ್ಯಂ ಸತ್ಯಂ ದುರ್ಲಭಂ ದೈವತೇಷು|| ಕರಾರವಿಂದೇನ ಪದಾರವಿಂದಂ ಮುಖಾರವಿಂದೇ ವಿನಿವೇಶಯಂತಂ ವಟಸ್ಯ ಪತ್ರಸ್ಯ ಪುಟೇ ಶಯಾನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ||                                               —ಶ್ರೀಕೃಷ್ಣಕರ್ಣಾಮೃತ

ತತ್ಕೈಶೋರಂ Read More »

ಜೈ ಜೈ ರಾಮಕೃಷ್ಣ ಹರಿ

ಜೈ ಜೈ ರಾಮಕೃಷ್ಣ ಹರಿ|| ದಶರಥನಂದನ ರಾಮ ನಮೋ| ವಸುದೇವನಂದನ ಕೃಷ್ಣ ನಮೋ|| ಕೌಸಲ್ಯಾತನಯ ರಾಮ ನಮೋ ದೇವಕಿನಂದನ ಕೃಷ್ಣ ನಮೋ|| ಸೀತಾರಮಣ ಶ್ರೀರಾಮ ನಮೋ| ರಾಧಾರಮಣ ಶ್ರೀರಾಮ ನಮೋ|| ರಾವಣಮರ್ದನ ರಾಮ ನಮೋ| ಕಂಸವಿಮರ್ದನ ಕೃಷ್ಣ ನಮೋ||

ಜೈ ಜೈ ರಾಮಕೃಷ್ಣ ಹರಿ Read More »

ಜಾಲಿಯ ಮರದಂತೆ

ಜಾಲಿಯ ಮರದಂತೆ ಧರೆಯೊಳು| ದುರ್ಜನರು ಜಾಲಿಯ ಮರದಂತೆ|| ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ|| ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ ಹಸಿದು ಬಂದವರಿಗೆ ಹಣ್ಣು ಇಲ್ಲ| ಕುಸುಮ ವಾಸನೆ ಇಲ್ಲ ಕೂಡಲು ಸ್ಥಳವಿಲ್ಲ ರಸದಲ್ಲಿ ಸ್ವಾದವು ವಿಷದಂತೆ ಇರುತಿಹ|| ತನ್ನಿಂದ ಉಪಕಾರ ತೊಟಕಾದರೂ ಇಲ್ಲ ಬಿನ್ನಾಣ ಮಾತಿಗೆ ಕೊನೆಯಿಲ್ಲವು | ಅನ್ನಕ್ಕೆ ಸೇರಿದ ಹೀನ ಮಾನವರಂತೆ ಇನ್ನಿವರ ಕಾರ್ಯವು ಪುರಂದರವಿಟ್ಠಲ||                                              —ಪುರಂದರದಾಸ

ಜಾಲಿಯ ಮರದಂತೆ Read More »

ಗೋವಿಂದ ಮಾಧವ

ಗೋವಿಂದ ಮಾಧವ ಗೋಪಾಲ ಕೇಶವ| ನರಸಿಂಹಾಚ್ಯುತ ನಾರಾಯಣ|| ದಶರಥನಂದನ ಸೀತಾಮನೋಹರ| ದಾನವಮರ್ದನ ದಯಾನಿಧೇ|| ರಾಮ ರಾಘವ ರಾಜೀವಲೋಚನ| ಕಾಮಿತ ಫಲದ ಕರಿವರದ || ಕೃಷ್ಣ ಕೇಶವ ಅಂಬುಜಲೋಚನ| ಕಾಮಿತ ಫಲದ ಕರಿವರದ|| ರಾಮ ರಾಮ ಗೋವಿಂದ ರಾಮ| ಕಲ್ಯಾಣ ರಾಮ ಪಾಹಿ|| (ಶ್ರೀ)ರಾಮ ರಾಮ ಪಟ್ಟಾಭಿರಾಮ| ಕೋದಂಡರಾಮ ಪಾಹಿ || ರಾಮ ರಾಮ ನಯನಾಭಿರಾಮ| ಲೋಕಾಭಿರಾಮ ಪಾಹಿ|| ಜಲಧಿಶಯನ ರವಿಚಂದ್ರವಿಲೋಚನ| ಜಲಜಭವಸ್ತುತ ಶ್ರೀರಾಮ|| ಕೌಸಲ್ಯಾತ್ಮಜ ಕಾಮಿತ ಫಲದ| ಮಾರುತಿಸೇವಿತ ಪಾಹಿ|| ರಾಮ ರಾಮ ಪಾಹಿ ಹರೇ| ರಾಮ

ಗೋವಿಂದ ಮಾಧವ Read More »

ಗೋವಿಂದ ಜೈ ಜೈ

ಗೋವಿಂದ ಜೈ ಜೈ ಗೋಪಾಲ ಜೈ ಜೈ ರಾಧಾ ಮಾಧವ ಹರಿ ಗೋವಿಂದ ಜೈ ಜೈ|| ಮುಕುಂದ ಜೈ ಜೈ ಮುರಾರಿ ಜೈ ಜೈ ಮಧುಸೂದನ ಮುರಲೀ ಮೋಹನ ಜೈ ಜೈ|| ಕೇಶವ ಜೈ ಜೈ ಯಾದವ ಜೈ ಜೈ ನಾರಾಯಣ ಹರಿ ಶ್ರೀಕೃಷ್ಣ ಜೈ ಜೈ||

ಗೋವಿಂದ ಜೈ ಜೈ Read More »

ಗೋವಿಂದ ಗೋವಿಂದ

ಗೋವಿಂದ ಗೋವಿಂದ ಅತಿ ಆನಂದ ಸಕಲ ಸಾಧನ ನಿನ್ನಾನಂದ|| ಅಣು ರೇಣು ತೃಣ ಕಾಷ್ಠ ಪರಿಪೂರ್ಣ ಗೋವಿಂದ| ನಿರ್ಮಲಾತ್ಮಕನಾಗಿ ಇರುವುದೇ ಆನಂದ|| ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ| ಈ ಪರಿ ಮಹಿಮೆಯ ತಿಳಿಯೋದೆ ಆನಂದ|| ಮಂಗಲ ಮಹಿಮ ಶ್ರೀ ಪುರಂದರವಿಟ್ಠಲ| ಹಿಂಗದೆ ದಾಸರ ಸಲಹೋದೆ ಆನಂದ||                                              —ಪುರಂದರದಾಸ

ಗೋವಿಂದ ಗೋವಿಂದ Read More »

ಗೋವರ್ಧನ ಗಿರಿಧರ ಗೋವಿಂದ

ಗೋವರ್ಧನ ಗಿರಿಧರ ಗೋವಿಂದ ಗೋಕುಲಪಾಲಕ ಪರಮಾನಂದ| ಶ್ರೀವತ್ಸಾಂಕಿತ ಶ್ರೀಕೌಸ್ತುಭಧರ ಭಾವಕ ಭಯಹರ ಪಾಹಿ ಮುಕುಂದ|| ಆನಂದಾಮೃತವಾರಿಧಿ ಖೇಲ ಅಲಘು ಪರಾಕ್ರಮ ಅನುಪಮಶೀಲ| ಶ್ರೀನಂದಾತ್ಮಜ ಶ್ರಿತಜನಪಾಲ ಶ್ರೀಕರಕಿಸಲಯ ಲಾಲನಲೋಲ|| ಪಾಟಿತ ಸುರರಿಪು ಪಾದಪವೃಂದ ಪಾವನಚರಿತಪರಾಮೃತಕಂದ| ನಾಟ್ಯರಸೋತ್ಕಟ ನಾನಾಭರಣ ನಾರಾಯಣತೀರ್ಥ ವಂದಿತಚರಣ||                                         –ನಾರಾಯಣತೀರ್ಥ

ಗೋವರ್ಧನ ಗಿರಿಧರ ಗೋವಿಂದ Read More »

ಗಾಯತಿ ವನಮಾಲೀ

ಗಾಯತಿ ವನಮಾಲೀ ಮಧುರಂ|| ಪುಷ್ಪಸುಗಂಧಿ ಸುಮಲಯ ಸಮೀರೇ| ಮುನಿಜನದರ್ಶಿತ ಯುಮುನಾತೀರೇ|| ಕೂಜಿತಶುಕಪಿಕ ಮುಖ ಖಗಕುಂಜೇ| ಕುಟಿಲಾಳಕ ಬಹು ನೀರದ ಪುಂಜೇ|| ತುಲಸೀದಾಮ ವಿಭೂಷಣ ಹಾರೀ| ಜಲಜಭವಸ್ತುತಸದ್ಗುಣ ಶೌರೀ|| ಪರಮಹಂಸಹೃದಯೋತ್ಸವಕಾರೀ| ಪರಿಪೂರಿತ ಮುರಳೀರವಕಾರೀ||                                  —–ಸದಾಶಿವ ಬ್ರಹ್ಮೇಂದ್ರ

ಗಾಯತಿ ವನಮಾಲೀ Read More »

ಕೊಟ್ಟವರು ಸರಿಯೆ

ಕೊಟ್ಟವರು ಸರಿಯೆ| ಕೊಡದೆ ಬಿಟ್ಟವರು ಸರಿಯೆ|| ಇಕ್ಕಿದವರಿಗುಂಟು| ಮದದಲಿ ಸೊಕ್ಕಿದರೇನುಂಟು| ರಕ್ಕಸಾಂತಕ ಲಕುಮಿಪತಿಯ ಮರೆ- ಪೊಕ್ಕವರಾದ ಶಿಷ್ಟಭಕುತರಿಗೆ|| ದೊರೆಯಾದರು ಸರಿಯೆ| ನಮಗೆ ತಿರುಕನಾದರು ಸರಿಯೆ| ಸರಸವಿರಸದಿಂ ನುಡಿದರೇನು ನರ- ಹರಿಪದಕಮಲವ ನಿರುತ ಭಜಿಪರಿಗೆ|| ಪುಟ್ಟಿಸಿದ ಪ್ರಭುವು| ನಮಗೆ ಹೊಟ್ಟೆಗೆ ಕೊಡದಿಹನೆ| ಬೆಟ್ಟದೊಡೆಯ ನಮ್ಮ ಪುರಂದರವಿಟ್ಠಲನ ಗಟ್ಟಿಯಾಗಿ ನಂಬಿದ ಭಕುತರಿಗೆ||                                           —-ಪುರಂದರದಾಸ

ಕೊಟ್ಟವರು ಸರಿಯೆ Read More »

ಕೃಷ್ಣನ ನೆನೆದರೆ

ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ| ಕೃಷ್ಣ ಎನಬಾರದೆ|| ನರಜನ್ಮ ಬಂದಾಗ ನಾಲಿಗೆ ಇದ್ದಾಗ ಕೃಷ್ಣ ಎನಬಾರದೆ|| ಮಲಗೆದ್ದು ಮೈಮುರಿದು ಏಳುತಲೊಮ್ಮೆ| ಕೃಷ್ಣ ಎನಬಾರದೆ|| ಸುಳಿದಾಡುತ ಮನೆಯೊಳಗಾದರು ಒಮ್ಮೆ| ಕೃಷ್ಣ ಎನಬಾರದೆ|| ಮೇರೆ ತಪ್ಪಿ ಮಾತನಾಡುವಾಗಲೊಮ್ಮೆ| ಕೃಷ್ಣ ಎನಬಾರದೆ|| ದಾರಿಯ ನಡೆವಾಗ ಭಾರವ ಹೊರುವಾಗ| ಕೃಷ್ಣ ಎನಬಾರದೆ|| ನೀಗದಾಲೋಚನೆ ರೋಗೋಪದ್ರದಲೊಮ್ಮೆ| ಕೃಷ್ಣ ಎನಬಾರದೆ|| ಪರಿಪರಿ ಕೆಲಸದೊಳೊಂದು ಕೆಲಸವೆಂದು| ಕೃಷ್ಣ ಎನಬಾರದೆ|| ದುರಿತ ರಾಶಿಗಳನು ತರಿದು ಬಿಸಾಡಲು| ಕೃಷ್ಣ ಎನಬಾರದೆ|| ಗರುಡವಾಹನ ಸಿರಿ ಪುರಂದರವಿಟ್ಠಲನ್ನೆ| ಕೃಷ್ಣ ಎನಬಾರದೆ||

ಕೃಷ್ಣನ ನೆನೆದರೆ Read More »