ಬೆಲ್ಲದ ಕಟ್ಟೆಯ ಕಟ್ಟಿ

ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ
ಜೇನು ಮಳೆಗರೆದರೆ ವಿಷ ಹೋಗುವುದೇನಯ್ಯಾ||

ಏನು ನೋಡಿದರೇನು
ಏನು ಕೇಳಿದರೇನು|
ಮನದೊಳಗಿನ ತಾಮಸ ಮಾಣದನ್ನಕ||

ಕೊಳಲು ದನಿಗೆ ಸರ್ಪ
ತಲೆದೂಗುವಂದದಿ
ಇದಕೇನು ಮದ್ದು ಶ್ರೀ
ಪುರಂದರ ವಿಟ್ಠಲಾ||

                  —–ಪುರಂದರದಾಸ

Leave a Comment

Your email address will not be published. Required fields are marked *