ಬಿಡು ಬಿಡು ಸಂಗವ, ಸುಡುಸುಡು ವಿಷಯವ,

ಬಿಡು ಬಿಡು ಸಂಗವ, ಸುಡುಸುಡು ವಿಷಯವ,
ಎನ್ನೊಡೆಯರು ಬಾಗಿಲಿಗೆ ಬಂದರು,
ತಡೆಯದಿರಾ ಮರುಳೆ.
ಹಡಿಕೆಯ ಸಂಸಾರದ ಸುಖವ ಕಡೆಯಲ್ಲಿ ಹೇಸಿ,
ಇದಕ್ಕೆ ಹಿಡಿಯದಿರು ಸೆರಗನು.
ಚೆನ್ನಮಲ್ಲಿಕಾರ್ಜುನದೇವರು ಮನೆಗೆ ಬಂದಲ್ಲಿ ಇದಿರೇಳದಿರ್ದಡೆ ನಾಯಕ ನರಕ.

Leave a Comment

Your email address will not be published. Required fields are marked *