ಪ್ರಭುವೆನ್ನ ಅವಗುಣ ಮನದಿ

ಪ್ರಭುವೆನ್ನ ಅವಗುಣ ಮನದಿ ಧರಿಸದಿರು|
ವಿಭುವೇ ಸಮದರುಶನ ತವ ಸುಗುಣವು|
ಅಭಯವ ನೀಡುತ ಕೃಪೆಯಿಂ ಪಾಲಿಸು||

ಲೋಹದ ವಿಗ್ರಹ ಪೂಜೆಯಲಿರ್ಪುದು
ಲೋಹವದಲ್ತೆ ವ್ಯಾಧನ ಖಡ್ಗವು|
ಪರುಸಮಣಿಯದೋ ಭೇದವ ಕಾಣದು
ಎರಡನೂ ಸೋಂಕಲು ಕಾಂಚನವಾದುವು||

ನದಿಯೆಂದೆಂಬರು ನೀರೊಂದ
ಬದಿಯೆಂದೆಂಬಂರು ಮತ್ತೊಂದ|
ಗಂಗೆಯ ಸೇರಲು ಭರದಿಂದ
ಮಂಗಳವಾಗವೆ ಅದರಿಂದ||

ಬೇರೆಯೆ ಜೀವನು, ಬೇರೆಯೆ ಬ್ರಹ್ಮವು
ಸೂರದಾಸನದ ಒಪ್ಪುವುದಿಲ್ಲವು|
ಭೇದಕೆ ಮೂಲವು ಅಜ್ಞಾನವದು
ಭೇದವ ಕಾಣನು ಜ್ಞಾನಿಯು ಎಂದೂ||

                                    —–ಸ್ವಾಮಿ ಹರ್ಷಾನಂದ

Leave a Comment

Your email address will not be published. Required fields are marked *