ಪೊಗಳಬಲ್ಲನೆ ನಾ ನಿನ್ನ ಪೊಗಳಬಲ್ಲನೆ

ಪೊಗಳಬಲ್ಲನೆ ನಾ ನಿನ್ನ ಪೊಗಳಬಲ್ಲನೆ
ನಿನ್ನ ಬಗೆ ಬಗೆ ರೂಪಗಳ
ಸುಗುಣ ಸಂಪೂರ್ಣ ಉರಗ ಶಯ್ಯ ರಂಗಯ್ಯಾ

ದಿತಿಸುತ ಸೋಮಕ ಶ್ರುತಿತತಿ ಕದ್ದೊಯ್ಯೆ
ಶತಧೃತಿ ತಲೆವಾಗಿ ಚತುರತೆÉಯಿಂದಲಿ
ಮತಿಪತಿ ಮತ್ಪಿತಾ ಪ್ರತಿಪತಿ ಕಲ್ಪಕ್ಕೆ
ಗತಿಸ್ಥಿತಿ ನೀನೆಂದು ಅತಿ ತುತಿಸಲು ಸಂ
ತತ ಹಿತ ಹಿರಿದಾಗಿ ಪ್ರತಿಯಿಲ್ಲವೆನಿಸಿದ್ದು
ರಿತ ಪುಂಜದಾನವನ ತರಿದೊಟ್ಟಿ
ಮತ್ಸ್ಯಾಕೃತಿಯಾ ಜಯ ಜಯವೆನುತಿರೆ ತ್ರಿಭುವನಾ ||1||

ಕೃತು ಭುಕು ದೇವಾರಿತತಿ ಸಂಗತಿಯಿಂದ
ಮತಿ ಏಕರಾಗಿ ಸಂಮತದಿಂದ ನಡೆದು ಪ
ರ್ವತವ ಕಿತ್ತಿ ತಂದು ಉ
ನ್ನತವಾದ ಕ್ಷೀರೋದ ಪತಿಯೊಳಗಿಟ್ಟು
ಅತಿಬಲದಿಂದ ನಗುತ ಮಥಿಸಲು ಮಹಾ
ಕ್ಷಿತಿಧರ ಮುಣಗಿ ಪೋಗೆ ಹಾಹೋ ಎಂದು
ಗತಿಗೆಟ್ಟ ಯೆಲ್ಲ ಕೂಗೆ ಕೇಳುತ ಬಂದು
ಅತುಳ ಕಮಠನಾಗಿ ಪೊತ್ತೆ ಭಳಿರೆ ಮಿಗೆ||2||

ಗತಮಂದ ಮಾರೀಚ ಸುತ ಹೇಮನೇತುರಾ
ಕ್ಷಿತಿಯ ಕದ್ದೌಯಿದು ದುರ್ಮತಿಯಿಂದ ವಿಬುಧÀರ
ಖತಿಗೊಳಾಗೈಸಿ ಹಿಗ್ಗುತಲವ ತಿರುಗುತ್ತ
ಪ್ರತಿಕೂಲನಾಗಿ ಸುವ್ರತಗಳ ಕೆಡಿಸುತ್ತ ಮಿತಿ ಮೀರಿ
ಪಾತಾಳ ವಾಸವಾಗಿರಲು ಅದ್ಭುತ ಕಿಟಿ ರೂಪವಾಗಿ
ದೈತ್ಯನ ಕೊಂದು ಸತಿಯಾದಂತದಲಿ ತೂಗಿ ತ
ರುತಲಿರೆ ಸತತಮರರು ಪಾಡೆ ಏನೆಂಬೆ ಶಿರವಾಗಿ ||3||

ಚತುರ ಮೊಗನವರನುತಿಸಿ ಪಡೆದು ಪ್ರಾಗ
ರ್ವಿತನಾಗಿ ನೀಲಲೋಹಿತನ ಭಕುತಿಯಿಂದ
ತತುವೇಶಜನರ ಶಕುತಿ ಕುಂದಿಸಿ ತಾನೆ
ರತುನ ಗರ್ಭದೊಳು ದೇವತಿಯೆಂದು ಸಾರಿ ಬಾ
ಳುತ್ತ ತನ್ನಾತ್ಮಜ ಭಾಗವತನ ಭಾಧಿಸಿ ಶಿರಿ
ಪತಿಯ ತೋರೆಂದು ಕೊಲ್ಲೆ ಪ್ರಹ್ಲಾದ
ಗತಿಯೆಂದು ವಂದಿಸಲೆ ಕಂಭದಿ ಬಂದು
ಹತಗೈದೆ ಖಳನ ಸುರರು ಪೂಮಳೆ ಚೆಲ್ಲೆ ||4||

ಸುತಳ ಲೋಕಕ್ಕೀಶ್ವರ ಶತಕೃತ ಕವಿಯ ರಚಿಸಿ
ಸಿತನಾಗಿ ರಥ ನನ್ನ ಚ್ಯುತ ಪದಸ್ಥನ ಮಾಡಿ
ಸತುವ ಮಾರ್ಗದಲಿ ಪೂರಿತ ಭಾಗ್ಯತನದಲ್ಲಿ
ಕೃತಕಾರ್ಯನಾಗಿರೆ ರಿತಮದದಲಿ ತಾ
ನುತಿಸಲಾದಿತಿಯ ಗರ್ಭದಲ್ಲಿ ಜ
ನಿತಳಾಗಿ ಕಿತವ ರೂಪದಲಿ ಬಂದು ಆ ದ್ವಾರದಲಿ
ವಿತರಣೆ ನೆವದಿ ನಿಂದು ಭೂಮಿಯ ಕೊಂಡಜ
ತತಿ ವಿಕ್ರಮತೀರಿತವಾದ ದಯಾಸಿಂಧು ||5||

ಕೃತವೀರ್ಯ ಸೂನು ಪೂಜಿತನಾಗಿ ಮುನಿಯಿಂದ
ಕತಕತ ಕುದಿದು ಅಮೃತದಾಯಿ ಯಾವೈಯ್ಯ
ಪಿತನಗೋಸುಗ ಉಗ
ಳುತ ರೋಷ ಕಿಡಿಗಳಾದ ಈರೈದು ಬಾಹೋ
ನ್ನತ ಕಡಿದು ವಿಂಶತಿ ಏಕಸಾರಿಗೆ
ದ್ವಿತೀಯ ಜಾತಿಯವನ ಹುತವ ಮಾಡಿದ ಗಂಭೀರಾ ನಿ
ರುತ ಸತ್ಯವತಿ ನಂದನಕುವರ ಪರುಶ ಪಾಣಿ
ಮೃತ ಜೀವಿಗಳ ಬದುಕಿಸಿದ ಮಹಾಧೀರಾ ||6||

ಚತುರಾತ್ಮ ಹರಿದೈವ ವೈವಸ್ವತ ಮನುಕುಲೋಧ್ಭವನಾ
ಶತಿವಾರು ಧನದಲಿ ಉತ್ಪತ್ತಿಯಾಗಿ ಅನುಜ
ಸಹಿತ ಪೋಗಿ ಮುನಿಯ ವಾ
ರುತಿಯ ಮನ್ನಿಸಿ ಶಿಲಿ ಸತಿಯಳ ಮಾಡಿ ಭೂ
ಪುರವಸಾರಿ ಪಿತನಾಜ್ಞ ತಿಳಿದು ಮಾ
ರುತಿಯಿಂದ ಕಪಿಯ ವಿಗತಸಂತಾಪನ ಮಾಡಿ
ಸೇತುವೆ ಕಟ್ಟಿ ಪತಿತರ ಶಿರ ಚೆಂಡಾಡಿ ಲಂಕಾನಗರ
ಹಿತದಿಂದ ಭಕ್ತಗೆ ಪಟ್ಟಗಟ್ಟಿದ ನೋಡಿ ||7||

ಶತ್ರಪತ್ರಾರುಣ ದಳಾಯುತ ನಯನಾದೇವ|
ತತಿ ವಂದ್ಯ ಗೋಕುಲ ಸ್ಥಿತಿ ಉದ್ಧಾರಕ |
ಶತಕೃತ ಭಂಗ ಬಲಾ | ಚರಿತಪೂರ್ಣ ಕಂಸಾರಿ
ಯುತ ಷೋಡಶಾಖ್ಯ ಯುವತಿಯರ ತಂದ ಅ|
ಪ್ರತಿಮಲ್ಲ | ರತಿಪತಿ ಪಿತ ಫಲ್ಗುಣಗೆ ಭಾ |
ರತದಿ ಸಾರಥಿ ಎನಿಸಿ ಕಾಳಗದೊಳು |
ಧೃತರಾಷ್ಟ್ರಜರ ಕೊಲ್ಲಿಸೆ ಸಭಯಲ್ಲಿ ಪರೀ |
ಕ್ಷಿತಿನ ಉಳಿಹಿ ಕೀರುತಿ ಪೊತ್ತ ಗುಣರಾಶಿ ||8||

ವ್ರತದಿಂದ ಖಳರು ಧರಿತ ಸತ್ಕರ್ಮವ ಮಾಡೆ |
ಗತಿಗೆಟ್ಟು ಸುರರ ಉಕುತಿಯಿಂದ ಕೈಮುಗಿದು |
ತುತಿಸಲಾಕ್ಷಣ ಅಪ್ರಾಕೃತ ಕಾಯ ಶಿಶುವಾಗಿ ||
ಶ್ರುತಿ ಸರ್ವದಲಿ ಅನೃತವೆಂದು ತಿಳುಪಿ ಉ |
ಚಿತ ಮಾರ್ಗದ ಬಿಡಿಸಿ ನಿ |
ರ್ಜೀತ ಕಾರು ಪಾರ್ವತಿ ಪತಿಗೆ ಮಾರ್ಗಣವೆನಿಸಿ
ತ್ರಿಪುರಾರಿಗೆ ಹುತಗೈಸಿ ಶಿವನ ಗೆಲಿಸಿ
ವಿವಶಳನೆ ಪತಿವ್ರತೆಯರ ಲಜ್ಜೆಗೊಳಿಸಿದೆ ವಂಚಿಸೀ ||9||

ಚತುರ ವರ್ಣಾಶ್ರಮ ಮತಿಶೂನ್ಯರಾಗಿ
ವಿಹಿತ ಧರ್ಮ ಮರೆದು |
ಮಮತೆ ಜಾತಿ ಸಂಕರ |
ವ್ರತದಲ್ಲಿ ನಾನಾ ದುಷ್ಕøತ ತುಂಬಿರಲು ದೇವತೆಗಳು ಮರುಗಿ ಅ |
ರತರಾಗಿ ತುತಿಸಿ ತ್ವರಿತ ಸ್ವಭಾವದಲ್ಲಿ ನಿ |
ಸಿತ ಖಡ್ಗಧರಿಸಿ ರಾ
ವುತನಾಗಿ ತುರಗವೇರಿ ಉದ್ಭಟ ದುರುಳತೆಯರ ಕಡಿದ ಶೌರಿ |
ಕಲಿಕೆಯೆ ಸುಕೃತ ನೆನೆವವರಿಗೆ ಭವಸಾಗರ ತಾರಿ||10||

ಶ್ರುತಿ ಶೀರ್ಷ ಶ್ರುತಿ ಉಪ |
ಕೃತಿನಯ ಪಂಚಮ ಶ್ರುತಿ ಪಂಚರಾತ್ರಾ ಸಂ |
ಹಿತ ರಾಮಾಯಣ ಭಾಗ
ವತ ಮೂಲ ರಹಸ್ಯ | ತತುವಾದಿನಾಮನು |
ಶ್ರುತಿಕಲ್ಪ ಕಥೆ ಸರ್ವ ಪ್ರತಿಪ್ರತಿ ವರ್ಣ ಸಂತತಿಯಲ್ಲಿ ನೀನೆ ವ್ಯಾ |
ಪುತಮೂರ್ತಿ ಸಪ್ತ ಸಪುತ ಭುವನೇಶನೆಂದು ಅಚೌಧ್ಯರೊ
ಪ್ಪುತ ಕೊಂಡಾಡುವರು ನಿಂದು | ಭಕುತಪೂ
ಜಿತ ಕಾಯಾ ವಿಜಯವಿಠ್ಠಲನೆ ಪಾಲಿಸೊ ಇಂದು||11||

Leave a Comment

Your email address will not be published. Required fields are marked *