ದೊರೆಯಿತು ಎನಗೆ

ದೊರೆಯಿತು ಎನಗೆ ಗುರುಚರಣಾಶ್ರಯ||

ಪ್ರಿಯವೊಂದಿಲ್ಲವು ಚರಣವನುಳಿದು|
ಮಾಯೆಯೆ ಅಲ್ಲವೆ ಕನಸಿನ ಜಗವದು||

ಭವಸಾಗರವದು ಬರಿದಾಗಿಹುದು|
ಅವನೊಡನಿರಲು ಭಯನೀಗಿಹುದು||
ನಟವರ ನಾಗರ ಮೀರೆಯ ಗಿರಿಧರ|
ನೋಟವ ತಿರುಗಿಸಿ ಮಾಡಿದ ಅಂತರ||

                                     —ಸ್ವಾಮಿ ಹರ್ಷಾನಂದ

Leave a Comment

Your email address will not be published. Required fields are marked *