ದೇವನೆ ಎನ್ನನು ಮರೆಯುವುದುಚಿತವೆ
ಸೇವೆಯ ಮಾಡುವ ಬಾಳನು ಸವೆಸಿಹೆ||
ಪೂರ್ವದ ಜನ್ಮದ ಸುಕೃತ್ಯದಿಂದಲೆ
ಗುರುವಿನನುಗ್ರಹ ಪಡೆದೆನು ಆಗಲೆ||
ಕೊರಗುತ ಹೃದಯದಿ ಪರಿಪರಿಯಂದಲಿ
ಶಿರವನು ಬಾಗಿಸಿ ಬೇಡುತಲಿರುವೆ||
ಮನದಲಿ ಮುಸುಕಿದ ತಮವನು ದೂಡೋ
ಮನುಕುಲಪಾವನ ದರುಶನ ನೀಡೋ||
—ಸ್ವಾಮಿ ಹರ್ಷಾನಂದ
ದೇವನೆ ಎನ್ನನು ಮರೆಯುವುದುಚಿತವೆ
ಸೇವೆಯ ಮಾಡುವ ಬಾಳನು ಸವೆಸಿಹೆ||
ಪೂರ್ವದ ಜನ್ಮದ ಸುಕೃತ್ಯದಿಂದಲೆ
ಗುರುವಿನನುಗ್ರಹ ಪಡೆದೆನು ಆಗಲೆ||
ಕೊರಗುತ ಹೃದಯದಿ ಪರಿಪರಿಯಂದಲಿ
ಶಿರವನು ಬಾಗಿಸಿ ಬೇಡುತಲಿರುವೆ||
ಮನದಲಿ ಮುಸುಕಿದ ತಮವನು ದೂಡೋ
ಮನುಕುಲಪಾವನ ದರುಶನ ನೀಡೋ||
—ಸ್ವಾಮಿ ಹರ್ಷಾನಂದ