ದೇವದೇವನ ನಿಜವನರಿಯಲು
ಮನವು ತೊಳಲುತ ಬಳಲಿದೆ|
ಬೀಗಮುದ್ರೆಯನಿಟ್ಟ ಕೋಣೆಯೊ-
ಳಲೆವ ಮರುಳನ ತೆರನಿದೆ||
ದಿವ್ಯ ಪ್ರೇಮಕೆ ದೊರೆವನವನು
ಶ್ರದ್ಧೆಗಲ್ಲದೆ ಒಲಿಯನು|
ವೇದಶಾಸ್ತ್ರ ಪುರಾಣದರ್ಶನ-
ದಾಚೆಗೇ ನಿಂತಿರುವನು||
ಭಕ್ತಿಗೊಲಿಯುವ ಹೃದಯದಮೃತಾ-
ನಂದರೂಪನು ಎಂಬರು|
ಇದನರಿತೆ ಆ ಯೋಗಿವರ್ಯರು
ಯುಗಯುಗವು ತಪಗೈದರು||
ಭಕ್ತಿಯೆಚ್ಚರಗೊಳಲು ಎದೆಯಲಿ
ಅವನೆ ನಿನ್ನನು ಸೆಳೆವನು|
ಈ ರಹಸ್ಯವ ಜಗದ ಸಂತೆಯ
ಜನ ಸಮೂಹಕೆ ತಿಳಿಸೆನು||
ಶ್ರೀ ಪ್ರಸಾದನು ನುಡಿವನೀತೆರ
“ಮಾತೃಭಾವದಿ ನೆನೆವೆನು|
ನನ್ನ ಸೂಚನೆಯರಿತು ನೀವೇ
ತಿಳಿಯಿರಾತನ ನಿಜವನು”||
—-ವಚನವೇದ