ತೋರೊ ನಿನ್ನಯ ಮೂರ್ತಿಯ

ತೋರೊ ನಿನ್ನಯ ಮೂರ್ತಿಯ
ತೋರೊ ನಿನ್ನ ಮೂರ್ತಿ ಬೀರೊ ಹೃದಯವೆಂಬೊ
ನೀರಜಹಾದೊಳಗೆ ಸಾರೋ ಸಾರಿ ಸಾರಿಗೆ ಸೇರೊ
ಬಾರೊ ಬಾರೊ ಪರಿವಾರದೊಡನೆ ಮನಸೂರೆಗೊಡುವೆ ಕಂ
ಸಾರಿ ಮುರಾರಿ

ತುಂಬೆ ವಿಶ್ವಮಾಯಾದ ಬೊಂಬೆ ನಾಮ ಪೀಯೂಷ
ಉಂಬೆ ಸೇವೆಯ ಕೈಕೊಂಬೆ ಅನ್ಯರ ನಂಬೆ
ಕಾಂಬೆ ನಮಿಸಿ ಪಾಲಿಸೆಂಬೆ ಕಾಲಿಗೆ ಮನ
ದುಂಬೆ ದಂತೆ ಎರಗಿ ಅಂಬೆ ಪಿಡಿವಾಕೊಂಬೆ
ನಂಬಿದೆ ನಂಬಿದೆ ಅಂಬುಜಾಕ್ಷ ನೀ
ನೆಂಬದು ಸುರನಿಕರಂಬ ಹಂಬಲಿಸಲು
ದಿಂಬಾಗಿ ಕರ್ಣಾವಲಂಬನವಾಯಿತು
ಇಂಬಿಡು ಪ್ರಾಙ್ಞನೆಂದೆಂಬ ಮೂರುತಿಯಾ||1||

ಸ್ನಾನ ಪ್ರಣಮ ವಾಚಾ ಮಾನದಿಂದಲಿ ಬಲು
ಮೌನವಾಗಿದ್ದು ಮಾಳ್ಪ ಧ್ಯಾನವು ಇತ್ತು ಮಾe್ಞÁನಾ
ನಾನಾ ಪ್ರಕಾರದಿಂದ ದಾನಧರ್ಮಂಗಳ ನಿ
ದಾನ ಕೊಂಡಡಲಾಮೇಲೆ ನೆನೆವೆನನುದಿನ
ಮಾನವನ ಹೀನವ ನಾಡದೆ ನೀನೆನಿಸದೆ
ಸುಮ್ಮನದಿಂದಲಿ ನೋಡೊ
ದಾನವನ ವಡಲನು ಬಗದು ಕರುಳನು
ವನಮಾಲೆ ಹಾಕಿದ ಶ್ರೀನಿಕೇತನ ||2||

ಒಂದನಾಂದರೆಯಿಂತು ಇಂದು ಮಾಡುವದೇನು
ಚಂದ ಭಕ್ತರಿಗತಿ ಬಂಧವನೆ ಯಾಕೆಂದಾ
ಅಂದ ರಕ್ಕಸನಾಗಿ ಕೊಂದಾವರದ ಮುಕ್ಕುಂದಾ
ವಂದಿತ ಮರ ವೃಂದಾ ಕರುಣದಿಂದಾ
ಎಂದಿಗೆಂದಿಗೆ ಎನ್ನಿಂದಗಲದೆ ಗೋ
ವಿಂದ ಇಂದಿರಾಪತಿ ಸುಂದರ ವಿಗ್ರಹ
ಮಂದಿರದೊಳು ಸುಮದಾಸನದಲ್ಲಿ
ಬಂದು ವಿಜಯವಿಠ್ಠಲೆಂದು ನೀನಿಂದು||3||

Leave a Comment

Your email address will not be published. Required fields are marked *