ತಾಯಿ ನೀನೆನ್ನ ಶಿಕ್ಷಿಸಲು
ರಕ್ಷಿಪರಾರು ತ್ರಿಭುವನದೊಳು ಹೇ||
ನಿನ್ನನೆ ನಂಬಿಯೆ ಅನ್ಯರ ತ್ಯಜಿಸಿದೆ
ನೀಯೆನ್ನ ತ್ಯಜಿಸಲು ಗತಿ ಯಾರಿನ್ನು||
ಮಾನುಷ ಜನ್ಮವ ಮುಕ್ತಿಯ ಆಸೆಯ
ಶ್ರೀಗುರುಪಾದವ ಕರುಣಿಸಿದೆ ತಾಯಿ|
ಎನ್ನಯ ದೋಣಿಯ ನಿನ್ನಯ ದಡದಲಿ
ಮುಳುಗಿಸಿದರೇ ನೀನೇ ಕಾಯುವರಾರು
ಕಾಯುವರಾರು ಜಗಜ್ಜನನಿ||
—ಸ್ವಾಮಿ ಹರ್ಷಾನಂದ