ತವ ಕೃಪೆ ಬೆಳಗಲಿ ಭವಭ್ರಮೆ ಕಳೆಯಲಿ
ಶಿವೆ ಶ್ರೀಶಾರದೆ ತವಕದಿ ಮೊರೆಯುವೆ||
ಇಂದು ಸುವಿಮಲೆ ವಂದಿತ ಪದತಲೆ |
ಕುಂದದ ಪ್ರೇಮದ ಮಂದಾಕಿನಿಯೆ||
ತ್ಯಾಗವಿಭೂಷಿತೆ ತ್ಯಾಗಿಕುಲಾಂಬಿಕೆ|
ಯೋಗೀಂದ್ರಾರ್ಚಿತೆ ಯೋಗಪ್ರದಾತೆ||
ನಿನ್ನಡಿದಾವರೆ ಎನ್ನಯ ಆಸರೆ|
ಮನ್ನಿಸು ದಾಸನ ಬಿನ್ನಹ ಮಾತೆ||
—-ಸ್ವಾಮಿ ಶಾಸ್ತ್ರಾನಂದ