ತನುವಿನ ಸತ್ವವ ನಿಲಿಸಿತ್ತು,
ಮನದ ವಿರಕ್ತಿಯ ಕೆಡಿಸಿತ್ತು.
ಘನವ ಕಾಣಲೀಯದು ದುಃಖ.
ಅರುಹಿರಿಯರ ತರಕಟ ಕಾಡಿತ್ತು.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಮರೆಗೊಂಡ ಸಂಸಾರದ ತೆರೆ ಎನ್ನ ಬರಲೀಯದಯ್ಯಾ.
ತನುವಿನ ಸತ್ವವ ನಿಲಿಸಿತ್ತು,
ಮನದ ವಿರಕ್ತಿಯ ಕೆಡಿಸಿತ್ತು.
ಘನವ ಕಾಣಲೀಯದು ದುಃಖ.
ಅರುಹಿರಿಯರ ತರಕಟ ಕಾಡಿತ್ತು.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಮರೆಗೊಂಡ ಸಂಸಾರದ ತೆರೆ ಎನ್ನ ಬರಲೀಯದಯ್ಯಾ.