ಗಿರಿಯೊಳು ಮನದೊಳು ಗಿಡಗಿಡದತ್ತ
ದೇವ, ಎನ್ನದೇವ, ಬಾರಯ್ಯಾ,
ತೋರಯ್ಯಾ ನಿಮ್ಮ ಕರುಣವನೆಂದು,
ನಾನು ಅರಸುತ್ತ ಅಳಲುತ್ತ ಕಾಣದೆ
ಸುಯಿದು ಬಂದು ಕಂಡೆ.
ಶರಣರ ಸಂಗದಿಂದ ಅರಸಿ ಹಿಡಿದಿಹೆನಿಂದು
ನೀನಡಗುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನಾ.
ಗಿರಿಯೊಳು ಮನದೊಳು ಗಿಡಗಿಡದತ್ತ
ದೇವ, ಎನ್ನದೇವ, ಬಾರಯ್ಯಾ,
ತೋರಯ್ಯಾ ನಿಮ್ಮ ಕರುಣವನೆಂದು,
ನಾನು ಅರಸುತ್ತ ಅಳಲುತ್ತ ಕಾಣದೆ
ಸುಯಿದು ಬಂದು ಕಂಡೆ.
ಶರಣರ ಸಂಗದಿಂದ ಅರಸಿ ಹಿಡಿದಿಹೆನಿಂದು
ನೀನಡಗುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನಾ.