ಎನ್ನ ಮನ ಪ್ರಾಣ ಭಾವ ನಿಮ್ಮಲ್ಲಿ ನಿಂದಬಳಿಕ

ಎನ್ನ ಮನ ಪ್ರಾಣ ಭಾವ ನಿಮ್ಮಲ್ಲಿ ನಿಂದಬಳಿಕ
ಕಾಯದ ಸುಖವ ನಾನೇನೆಂದರಿಯೆನು.
ಆರು ಸೋಂಕಿದರೆಂದರಿಯೆನು.
ಚೆನ್ನಮಲ್ಲಿಕಾರ್ಜುನನ ಮನದೊಳಗೆ ಒಚ್ಚತವಾದ ಬಳಿಕ ಹೊರಗೇನಾಯಿತ್ತೆಂದರಿಯೆನು.

Leave a Comment

Your email address will not be published. Required fields are marked *