ಅರಿಯದವರೊಡನೆ ಸಂಗವ ಮಾಡಿದಡೆ

ಅರಿಯದವರೊಡನೆ ಸಂಗವ ಮಾಡಿದಡೆ
ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ.

ಬಲ್ಲವರೊಡನೆ ಸಂಗವ ಮಾಡಿದಡೆ
ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ.

ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ಸಂಗವ
ಮಾಡಿದಡೆಕರ್ಪುರದ ಗಿರಿಯನುಎಕೊಂಬಂತೆ.

Leave a Comment

Your email address will not be published. Required fields are marked *