ಅಪಾರ ಘನಗಂಭೀರದ ಅಂಬುದಿಯಲ್ಲಿ
ತಾರಾಪಥವಂ ನೋಡಿ ನಡೆಯೆ,
ಭೈತ್ರದಿಂದ ದ್ವೀಪ ದ್ವೀಪಾಂತರಕ್ಕೆ
ಸಕಲ ಪದಾರ್ಥವನೆಯ್ದಿಸುವುದು,
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನ
ಸಮೀಪ ತೂರ್ಯಸಂಭಾಷಣೆಯನರಿದಡೆಮುನ್ನಿನಲ್ಲಿಗೆಯ್ದಿಸುವುದು.
ಅಪಾರ ಘನಗಂಭೀರದ ಅಂಬುದಿಯಲ್ಲಿ
ತಾರಾಪಥವಂ ನೋಡಿ ನಡೆಯೆ,
ಭೈತ್ರದಿಂದ ದ್ವೀಪ ದ್ವೀಪಾಂತರಕ್ಕೆ
ಸಕಲ ಪದಾರ್ಥವನೆಯ್ದಿಸುವುದು,
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನ
ಸಮೀಪ ತೂರ್ಯಸಂಭಾಷಣೆಯನರಿದಡೆಮುನ್ನಿನಲ್ಲಿಗೆಯ್ದಿಸುವುದು.