ಸಿರಿ ವಾಣಿ ಗೌರಿ

ಸಿರಿ ವಾಣಿ ಗೌರಿ ಹೇ ಶಾರದಾಂಬೆ
ಸೂತ್ರಧಾರಿಣಿ ಜಗವೇ ಬೊಂಬೆ||
ಶ್ರೀರಾಮಕೃಷ್ಣರಿಂ ಪೂಜಿತೇ ಮಾತೇ
ಪರಾಶಕ್ತಿ ಪರಮೇಶ್ವರದಯಿತೇ||

ದಯಾಸಾಗರೇ ರಕ್ಷಿಸು ಎನ್ನನು
ಸ್ಮಯದಿಂ ಭಯದಿಂ ದೂಷಿತಶಿಶುವನು|
ಭವಸಾಗರದಿಂ ಕಾಪಿಡು ಜನರನು
ಅವನೀಕುವರಿ ನೀಡುತ ಕರವನು||

—-ಸ್ವಾಮಿ ಹರ್ಷಾನಂದ

Leave a Comment

Your email address will not be published. Required fields are marked *