ಸಾರದ ರೂಪತಾಳಿ ಬಂದಿಹಳು ತಾಯಿ ಕಾಳಿ
ಅದನರಿತೆ ರಾಮಕೃಷ್ಣ ಪೂಜಿಸಿದರು ಭಾವ ತಾಳಿ||
ಆದ್ಯಾಶಕ್ತಿ ನೀ ಮಾತೆ ಸರ್ವಜೀವಮುಕ್ತಿದಾತೆ|
ಮಹಾಲಕ್ಷ್ಮೀ ಸರಸ್ವತಿ ಗುಪ್ತರೂಪ ಜ್ಞಾನದಾತೆ||
ಸೀತಾ ರಾಧಾ ಅನ್ನಪೂರ್ಣಾ
ಕಾಯ ಪಡೆದ ಭುವಿಯು ಧನ್ಯ|
ಪ್ರೇಮದಿಂದ ತಾಯಿಯೆಂದು
ಕರೆವ ಮನುಜ ಜಗದಿ ಮಾನ್ಯ||
ದೀನಜನರ ಉದ್ಧರಿಸೆ
ದೀನರೂಪ ತಾಳಿ ಬಂದೆ|
ಅಭಯೇ ನೀನು ಉಭಯಕರದಿ
ಅಭಯವನ್ನು ನೀಡಲೆಂದೆ||
—-ಸ್ವಾಮಿ ಶಾಸ್ತ್ರಾನಂದ