ರಂಗನ ನೋಡಿರೈ ಕರುಣಾಪಾಂಗನ ಪಾಡಿರೈ
ಮಂಗಳ ಮೂರುತಿ ಮನುಕುಲೋತ್ತುಂಗ
ಜಗದಂತರಂಗ ಹೋ ಹೋಅಪ
ಶೀಕರೆ ಪುಟ್ಟಿದೆ ಮೇದಿನಿಪಾಲಗೆ ಮೆಚ್ಚಿ-ಬಂದನೊ ಹೆಚ್ಚಿ
ಆತುಮ ಮೂರುತಿ ದಶರಥನಿಗೆ ಮಗನಾದ-
ಲೀಲಾ ವಿನೋದ
ಜ್ಯೋತಿ ಪ್ರಕಾಶನು ಸಾಕೇತಪುರದಲಿ ನಲಿದ-
ಸುತ್ತಿ ಪರಿಗೊಲಿದ
ಭೂತಳದೊಳು ಜಾನಕಿಗೆ ನಾಥನಾಗಿ ಮೆರೆದ-
ಕಾಮಿತಗರೆದ ಹೋ ಹೋ ||1||
ಜಲಜಸಂಭವಭವ ಮಿಕ್ಕಾದವರನು ಗರ್ಭ-ದೊಳಿಟ್ಟ ಸರ್ಬ
ಜಲಜಾಯತದಳ ಪೊಕ್ಕಳಿಂದಲಿ
ಅಂದು ಪಡೆದ-ಮಗನಿಗೆ ನುಡಿದ
ಪ್ರಳಯಕಾಲದಿ ವಟ ಪತ್ರದ ಮೇಲ್ ಮಲ-ಗಿದ್ದ ಸುಪ್ರಸಿದ್ಧ
ಪೊಳೆದ ಪ್ರಣವ ವಿಮಾನದೊಳಗಿಂದ
ಬಂದ ಪರಮಾ-ನಂದ ಹೋ ಹೋ ||2||
ಬರುತ ವಿಭೀಷಣ ಕಾವೇರಿ ತೀರಕೆ ಬಂದ, ಉತ್ಸಾಹದಿಂದ
ಪರಮ ಪುರುಷ ಲಂಕೆಗೆ ಪೋಗದೆ ನಿಂತ-ಬಲು ಜಯವಂತ
ಧರಣಿಪತಿ ಧರ್ಮವರ್ಮನ ಮಾತಿಗೆ ನಕ್ಕ-ಕೇಳಾವಾಕ್ಯ
ನಿರುತದಿ ದಾಲ್ಬ್ಯ ಮುನೀಶನಿಂದ
ಪೂಜೆಗೊಂಬ ಸರ್ವರ-ಬಿಂಬ ಹೋ ಹೋ ||3||
ಲೋಕ ಕಂಟಕ ದಶಕಂಠನ ವಂಶವ ಕೊಂದ -ಈತ ಮುಕುಂದ
ಏಕ ತನ್ನೊಳು ತಾನೆ ಪೂಜೆಯ
ಮಾಡಿಸಿಕೊಂಡ -ಬಲು ಪ್ರಚಂಡ
ನಾಕದ ಜನರೆಲ್ಲ ಜಯ
ಜಯವೆನುತಿರಲಯೋಧ್ಯಾ-ಆಳ್ದ ಅನಾದ್ಯ
ಕೈಕಸೆಸುತ ಭಜಿಸಲು ವಲಿದು ಬಂದನಂದು,
ಕರುಣಾ-ಸಿಂಧು ಹೋ ಹೋ ||4||
ದಕ್ಷಿಣ ಮುಖನಾಗಿ ಉರಗನ ಮೇಲ್ ಮಲಗಿಪ್ಪ –
ಮೂಜಗದ್ದಪ್ಪ
ನಕ್ಷತ್ರೇಶ ಸರೋವರತಟ ಪುನ್ನಾಗ-ವೃಕ್ಷದಲ್ಲಿಹ ದಕ್ಷ
ಅಕ್ಷಯ ಮೂರುತಿ ಅಪ್ರಾಕೃತ ಶರೀರ-ಧೃತ ಮಂದಾರ
ಪಕ್ಷಿ ವಾಹನ ನಮ್ಮ ವಿಜಯವಿಠ್ಠಲ ರಾಜ –
ರಾಜಾಧಿರಾಜ ಹೋ ಹೋ ||5||