ಭಜನೆಗಳು

ಕೊಟ್ಟವರು ಸರಿಯೆ

ಕೊಟ್ಟವರು ಸರಿಯೆ| ಕೊಡದೆ ಬಿಟ್ಟವರು ಸರಿಯೆ|| ಇಕ್ಕಿದವರಿಗುಂಟು| ಮದದಲಿ ಸೊಕ್ಕಿದರೇನುಂಟು| ರಕ್ಕಸಾಂತಕ ಲಕುಮಿಪತಿಯ ಮರೆ- ಪೊಕ್ಕವರಾದ ಶಿಷ್ಟಭಕುತರಿಗೆ|| ದೊರೆಯಾದರು ಸರಿಯೆ| ನಮಗೆ ತಿರುಕನಾದರು ಸರಿಯೆ| ಸರಸವಿರಸದಿಂ ನುಡಿದರೇನು ನರ- ಹರಿಪದಕಮಲವ ನಿರುತ ಭಜಿಪರಿಗೆ|| ಪುಟ್ಟಿಸಿದ ಪ್ರಭುವು| ನಮಗೆ ಹೊಟ್ಟೆಗೆ ಕೊಡದಿಹನೆ| ಬೆಟ್ಟದೊಡೆಯ ನಮ್ಮ ಪುರಂದರವಿಟ್ಠಲನ ಗಟ್ಟಿಯಾಗಿ ನಂಬಿದ ಭಕುತರಿಗೆ||                                           —-ಪುರಂದರದಾಸ

ಕೊಟ್ಟವರು ಸರಿಯೆ Read More »

ಕೆಳಗಿಳಿದು ಹರಿಯುವುದೆ

ಕೆಳಗಿಳಿದು ಹರಿಯುವುದೆ ಜಲದ ನಿಜಗುಣವಯ್ಯ ತಳೆಯುವುದು ಮಲಿನತೆಯ ಕೊಳೆನೆಲದಿ ಹರಿಯುತ್ತ| ಜಲನಿಧಿಯ ಸೇರಿ ತಾ ಬಲು ಕ್ಷಾರವಾಗುತಲಿ ಸಲಿಲಾರ್ಥಿ ಜನರಿಂಗೆ ಅನಲಸಮವಾಗುವುದು|| ಗಗನದಲ್ಲಿಹ ರವಿಯು ಜಗವನೆಲ್ಲವ ಬೆಳಗಿ ಸಗರಜಲವನು ಕೂಡ ನಗುತ ಕರದಿಂದೆತ್ತಿ| ವಿಗತದೋಷವ ಗೈದು ಮುಗಿಲರೂಪವ ಕೊಡುತ ಜಗಕೆಲ್ಲ ಸವಿತರುವ ಮಿಗೆ ಸೊಗದ ಮಳೆಕರೆವ|| ಜಲದವೊಲು ಎಮ್ಮ ಮನ ಕೆಳಮೊಗವು ಚಂಚಲವು ನಲಿನಲಿದು ಹರಿಯುವುದು ಮಲಿನಮಯ ವಿಷಯದೆಡೆ| ಜಲಜಾಕ್ಷ ಕೃಪೆಯಿಂದ ಒಲಿದೆಮ್ಮ ಬಾಳ್ಗಳನು ಜಲಮೂರ್ತಿ ಮೇಲೆತ್ತಿ ಸಲಹಯ್ಯ ಸ್ವಾಮಿ||                                                   —ಸ್ವಾಮಿ ಶಾಸ್ತ್ರಾನಂದ

ಕೆಳಗಿಳಿದು ಹರಿಯುವುದೆ Read More »

ಕೃಷ್ಣನ ನೆನೆದರೆ

ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ| ಕೃಷ್ಣ ಎನಬಾರದೆ|| ನರಜನ್ಮ ಬಂದಾಗ ನಾಲಿಗೆ ಇದ್ದಾಗ ಕೃಷ್ಣ ಎನಬಾರದೆ|| ಮಲಗೆದ್ದು ಮೈಮುರಿದು ಏಳುತಲೊಮ್ಮೆ| ಕೃಷ್ಣ ಎನಬಾರದೆ|| ಸುಳಿದಾಡುತ ಮನೆಯೊಳಗಾದರು ಒಮ್ಮೆ| ಕೃಷ್ಣ ಎನಬಾರದೆ|| ಮೇರೆ ತಪ್ಪಿ ಮಾತನಾಡುವಾಗಲೊಮ್ಮೆ| ಕೃಷ್ಣ ಎನಬಾರದೆ|| ದಾರಿಯ ನಡೆವಾಗ ಭಾರವ ಹೊರುವಾಗ| ಕೃಷ್ಣ ಎನಬಾರದೆ|| ನೀಗದಾಲೋಚನೆ ರೋಗೋಪದ್ರದಲೊಮ್ಮೆ| ಕೃಷ್ಣ ಎನಬಾರದೆ|| ಪರಿಪರಿ ಕೆಲಸದೊಳೊಂದು ಕೆಲಸವೆಂದು| ಕೃಷ್ಣ ಎನಬಾರದೆ|| ದುರಿತ ರಾಶಿಗಳನು ತರಿದು ಬಿಸಾಡಲು| ಕೃಷ್ಣ ಎನಬಾರದೆ|| ಗರುಡವಾಹನ ಸಿರಿ ಪುರಂದರವಿಟ್ಠಲನ್ನೆ| ಕೃಷ್ಣ ಎನಬಾರದೆ||

ಕೃಷ್ಣನ ನೆನೆದರೆ Read More »

ಕಾಲಭಯವಾರಿಣೀ

(ಏ ಮಾ) ಕಾಲಭಯವಾರಿಣೀ ಕಪಾಲಿನೀ ಕಾಲರೂಪಿಣೀ| ಶಂಭುಭಾಮಿನೀ ನಿಶುಂಭಘಾತನೀ ಸಮರವಾಸಿನೀ ಸುರವಂದಿನೀ|| ಪುರಹರಮನೋಮೋಹಕಾರಿಣೀ ಸತ್ಯವಾದಿನೀ| ತತ್ತ್ವದಾಯಿನೀ ತ್ರಾಸನಾಶಿನೀ ತ್ರಾಣಕಾರಿಣೀ ತಿಮಿರವರಣೀ|| ತ್ರಿಗುಣಧಾರಿಣೀ ತ್ರಿದೇವಜನನೀ ತ್ರಿಲೋಕೇಶೀ ತೇಜರೂಪಿಣೀ ಅನ್ನದಾಯಿನೀ ಅಮರಪಾಲಿನೀ ಅಸುರದಲನೀ ಆದಿಕಾರಿಣೀ| ಆಶುತೋಷ ಹೃದಿವಿಲಾಸಿನೀ ಆತ್ಮರೂಪಿಣೀ||

ಕಾಲಭಯವಾರಿಣೀ Read More »

ಕಂದಾ ಬೇಡವೋ

ಕಂದಾ ಬೇಡವೊ ಮಣ್ಣು ತಿನ್ನಬೇಡ ತಿನ್ನಬೇಡವೊ|| ಕಂದಾ ಬೇಡವೊ ಮಣ್ಣು ತಿನ್ನಲಿಬೇಡ| ಸುಂದರಾಂಗನೆ ನಿನಗೆ ಹೊಟ್ಟೆ ನೋಯುವುದಯ್ಯ|| ಬೇಗನೆ ಏಳಯ್ಯ ಮಣ್ಣಾಟ ಬಿಡೊ ನೀನು| ಜೋಗಿ ಬರುತಾನಲ್ಲಿ ಅಂಜಿಸುವುದಕೀಗ|| ತಾಯ ಮಾತನು ಒತ್ತಿ ಕರದಲಿ ಮಣ್ಣೆತ್ತಿ| ಬಾಯಲಿ ಇಟ್ಟನು ಬಾಲಕೃಷ್ಣಯ್ಯನು|| ಪೆಟ್ಟು ಕೊಡುವೆ ನಿನಗೆ ಸಿಟ್ಟು ಬಹಳ ಇದೆ| ಮುಟ್ಟಬೇಡೊ ಮಣ್ಣು ಬೆಣ್ಣೆ ತರುವೆನಯ್ಯ|| ಅಮ್ಮಯ್ಯ ಕೇಳೆಲೆ ಬಾಯಲಿ ಮಣ್ಣೆಲ್ಲ| ಗುಮ್ಮನು ಬರಬೇಡ ಸುಮ್ಮನೆ ಇರುತೇನೆ|| ಮಗುವೆ ಬಾ ಬಾ ಎಂದು ಬಣ್ಣಿಸಿ ಕರೆದಳು| ಮಗುವಿನ ಬಾಯ

ಕಂದಾ ಬೇಡವೋ Read More »

ಕಂಡು ಕಂಡು ನೀ ಎನ್ನ

ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ ಪುಂಡರೀಕಾಕ್ಷ ಶ್ರೀಪುರುಷೋತ್ತಮ ದೇವ|| ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ ನಿಂದೆಯಲಿ ನೊಂದೆನಯ್ಯ ನೀರಜಾಕ್ಷ| ಬಂಧು ಬಳಗವು ನೀನೆ ತಂದೆತಾಯಿಯು ನೀನೆ ಎಂದೆಂದಿಗೂ ನಿನ್ನ ನಂಬಿದೆನೋ ಶ್ರೀಹರಿಯೆ|| ಕ್ಷಣವೊಂದು ಯುಗವಾಗಿ ತೃಣಕಿತ ಕಡೆಯಾಗಿ ಎಣಿಸಲಾರದ ಭವದಿ ನೊಂದೆ ನಾನು| ಸನಕಾದಿ ಮುನಿವಂದ್ಯ ವನಜಸಂಭವಜನಕ ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಹರಿಯೆ|| ಭಕ್ತವತ್ಸಲನೆಂಬೊ ಬಿರುದು ಪೊತ್ತಮೇಲೆ ಭಕ್ತರಾಧೀನನಾಗಿರಬೇಡವೆ| ಮುಕ್ತಿದಾಯಕ ನಮ್ಮ ಪುರಂದರವಿಟ್ಠಲನೆ ಶಕ್ತ ನೀನಹುದೆಂದು ನಂಬಿದೆನೋ ಶ್ರೀಹರಿಯೆ||                                                           —ಪುರಂದರದಾಸ

ಕಂಡು ಕಂಡು ನೀ ಎನ್ನ Read More »

ಕಂಗಳಿವ್ಯಾತಕೋ

ಕಂಗಳಿವ್ಯಾತಕೋ ಕಾವೇರಿರಂಗನ ನೋಡದ|| ಜಗಂಗಳೊಳಗೆ ಮಂಗಳಮೂರುತಿ ರಂಗನ ಶ್ರೀಪಾದಂಗಳ ನೋಡದ|| ಎಂದಿಗಾದರೊಮ್ಮೆ ಜನರು ಬಂದು ಭೂಮಿಯಲ್ಲಿ ನಿಂದು| ಚಂದ್ರ ಪುಷ್ಕರಣಿ ಸ್ನಾನವ ಮಾಡಿ ಆನಂದದಿಂದಲಿ ರಂಗನ ಕಾಣದ|| ಹರಿಪಾದೋದಕಸಮ ಕಾವೇರಿ ವಿರಜಾ ನದಿಲಿ ಸ್ನಾನವ ಮಾಡಿ| ಪರಮ ವೈಕುಂಠ ರಂಗ ಮಂದಿರ ಪರವಾಸುದೇವನ ನೋಡದ|| ಹಾರ ಹೀರ ವೈಜಯಂತಿ ತೋರ ಮುತ್ತಿನ ಹಾರ ಪದಕ| ತೇರನೇರಿ ಬೀದಿಲಿ ಬರುವ ರಂಗವಿಟ್ಠಲರಾಯನ ನೋಡದ||                                 —ಶ್ರೀಪಾದರಾಜಸ್ವಾಮಿ

ಕಂಗಳಿವ್ಯಾತಕೋ Read More »

ಕಳೆಯಬೇಕೆ ದಿನಗಳೆಲ್ಲ

ಕಳೆಯಬೇಕೆ ದಿನಗಳೆಲ್ಲ ವಿಫಲವಾಗಿ ಹೋಗಿಯೇ| ಹಗಲು ಇರುಳು ಆಶಾಪಥವ ಕಾಯುತಿಹೆನು ಸ್ವಾಮಿಯೇ|| ತ್ರಿಭುವನಗಳ ನಾಥ ನೀನು ಭಿಕಾರಿ ಅನಾಥ ನಾನು| ಕರೆಯಲೆಂತು ಮಮ ಹೃದಯದಿ ನೆಲೆಸು ಎಂದು ಹೀಗೆಯೇ|| ಹೃದಯ ಕುಟಿಯ ದ್ವಾರಗಳನು ಅನವರತವು ತೆರೆದಿರುವೆನು| ಕೃಪೆಯ ತೋರಿ ಬಂದು ನೀಡು ಶಾಂತಿಯನ್ನು ಸ್ವಾಮಿಯೇ||

ಕಳೆಯಬೇಕೆ ದಿನಗಳೆಲ್ಲ Read More »

ಕಲಿಯುಗದಲಿ ಹರಿನಾಮವ

ಕಲಿಯುಗದಲಿ ಹರಿನಾಮವ ನೆನೆದರೆ ಕುಲಕೋಟಿಗಳುದ್ಧರಿಸುವವೋ ರಂಗಾ|| ಸುಲಭದ ಮುಕ್ತಿಗೆ ಸುಲಭನೆಂದೆನಿಸುವ ಜಲರುಹನಾಭನ ನೆನೆ ಮನವೆ|| ಸ್ನಾನವನರಿಯೆನು ಮೌನವನರಿಯೆನು ಧ್ಯಾನವನರಿಯೆನೆಂದೆನಬೇಡ| ಜಾನಕಿವಲ್ಲಭ ದಶರಥನಂದನ ಗಾನವಿನೋದನ ನೆನೆ ಮನವೆ|| ಅರ್ಚಿಸಲರಿಯೆನು ಮೆಚ್ಚಿಸಲರಿಯೆನು ತುಚ್ಛನು ನಾನೆಂದೆನಬೇಡ| ಅಚ್ಯುತಾನಂತ ಗೋವಿಂದ ಮುಕುಂದನ ಇಚ್ಛೆಯಿಂದ ನೀ ನೆನೆ ಮನವೆ|| ಜಪವೊಂದರಿಯೆನು ತಪವೊಂದರಿಯೆನು ಉಪದೇಶವಿಲ್ಲೆಂದೆನಬೇಡ| ಅಪಾರ ಮಹಿಮ ಶ್ರೀ ಪುರಂದರವಿಟ್ಠಲನ ಉಪಾಯದಿಂದಲಿ ನೆನೆ ಮನವೆ||                                     —ಪುರಂದರದಾಸ

ಕಲಿಯುಗದಲಿ ಹರಿನಾಮವ Read More »

ಕರುಣಿಸೋ ರಂಗಾ

ಕರುಣಿಸೋ ರಂಗಾ ಕರುಣಿಸೋ ಹಗಲು ಇರುಳೂ ನಿನ್ನ ಸ್ಮರಣೆ ಮರೆಯದಂತೆ|| ರುಕುಮಾಂಗದನಂತೆ ವ್ರತವ ನಾನರಿಯೆ ಶುಕಮುನಿಯಂತೆ ಸ್ತುತಿಸಲರಿಯೆ| ಬಕವೈರಿಯಂತೆ ಧ್ಯಾನ ಮಾಡಲರಿಯೆ ದೇವಕಿಯಂತೆ ಮುದ್ದಿಸಲರಿಯೆನೋ|| ಗರುಡನಂದದಿ ಪೊತ್ತು ತಿರುಗಲು ಅರಿಯೆ ಕರೆಯಲರಿಯೆನೋ ಕರಿರಾಜನಂತೆ| ವರಕಪಿಯಂತೆ ದಾಸ್ಯ ಮಾಡಲರಿಯೆ ಸಿರಿಯಂತೆ ಸುಖವಿತ್ತು ಸೇವಿಸಲರಿಯೆನೋ|| ಬಲಿಯಂತೆ ದಾನವ ಕೊಡಲಾರೆನೊ ಭಕ್ತಿ- ಛಲವನರಿಯೆನೋ ಪ್ರಹ್ಲಾದನಂತೆ| ಒಲಿಸಲರಿಯೆನೋ ಅರ್ಜುನನಂತೆ ಸಖನಾಗಿ ಸಲಹೋ ದೇವರ ದೇವ ಪುರಂದರವಿಟ್ಠಲ||                                                          —ಪುರಂದರದಾಸ

ಕರುಣಿಸೋ ರಂಗಾ Read More »

ಕರುಣಿಸೆನ್ನ ಹರಿಯ ರಮಣಿ

ಕರುಣಿಸೆನ್ನ ಹರಿಯ ರಮಣಿ ವರದ ಲಕುಮಿದೇವಿಯೆ ಕಮಲಭಾಣಜನನಿ ದಿವ್ಯ- ಕಮಲಪಾಣಿ ರಾಜಿತೇ|| ಸಕಲನಿಗಮವಿನುತಚರಣೇ ಸಕಲಭಾಗ್ಯದಾಯಿನಿ ಸಕನಮೌನಿನಿಕರವಂದ್ಯ ಸಕಲಲೋಕನಾಯಕಿ|| ಶರಧಿತನುಜೇ ಮಂಗಳಾಂಗಿ ಪರಮಸೌಖ್ಯದಾಯಿನಿ ವರದವೆಂಕಟಾದ್ರಿವರನ ಪುರನಿವಾಸೇ ಮೋಹಿನಿ||

ಕರುಣಿಸೆನ್ನ ಹರಿಯ ರಮಣಿ Read More »

ಕರುಣಾಕರ ಹರ ಶೂಲಧರನೇ

ಕರುಣಾಕರ ಹರ ಶೂಲಧರನೇ| ವರಗೌರೀಪತಿ ಸಾಂಬ ಸದಾಶಿವ|| ಪರಮದಯಾಕರ ಪರಮೇಶ್ವರನೇ| ವರಫಣಿಭೂಷಣನೇ ಪರಶಿವನೇ|| ಫಾಲವಿಲೋಚನ ಗಂಗಾಧರನೇ| ಪಾಲಿಸು ಎಮ್ಮನು ರಜತಗಿರೀಶನೇ|| ಕೈಲಾಸಾಧಿಪ ಕೈವಲ್ಯಪ್ರದ| ಬಾಲಚಂದ್ರಧರನೇ ಸ್ಮರಹರನೇ||

ಕರುಣಾಕರ ಹರ ಶೂಲಧರನೇ Read More »

ಕರುಣಾಕರ ನೀನೆಂಬುವುದೇತಕೋ

ಕರುಣಾಕರ ನೀನೆಂಬುವುದೇತಕೋ ಭರವಸೆಯಿಲ್ಲೆನಗೆ|| ಪರಿಪರಿಯಲಿ ಈ ನರಜನ್ಮವನಿತ್ತು ತಿರುಗಿ ತಿರುಗಿ ಮನಕರಗಿಸುವುದ ಕಂಡು|| ಕರಿ ಧ್ರುವ ಬಲಿ ಪಾಂಚಾಲಿ ಅಹಲ್ಯೆಯ ಪೊರೆದವ ನೀನಂತೆ| ಅರಿತು ವಿಚಾರಿಸಿ ನೋಡಲದೆಲ್ಲವು ಪರಿಪರಿ ಕಂತೆಗಳಂತಿವೆ ಕೃಷ್ಣಾ|| ಕರುಣಾಕರ ನೀನಾದರೆ ಈಗಲೆ ಕರಪಿಡಿದೆನ್ನನು ಹರಿ ಕಾಯೋ| ಸರಸಿಜಾಕ್ಷನೆ ಸರಸ ನೀನಾದರೆ ದುರಿತಗಳೆನ್ನನು ಬಾಧಿಪುದುಂಟೆ|| ಮರಣಕಾಲದಲಿ ಅಜಮಿಳಗೊಲಿದೆ ಗರುಡಧ್ವಜನೆಂಬ ಬಿರುದಿನಿಂದ| ವರಬಿರುದುಗಳು ಉಳಿಯಬೇಕಾದರೆ ತ್ವರಿತದಿ ಕಾಯೋ ಪುರಂದರವಿಟ್ಠಲ||                                        —-ಪುರಂದರದಾಸ

ಕರುಣಾಕರ ನೀನೆಂಬುವುದೇತಕೋ Read More »

ಕರುಣ ಶೀತಲ

ಕರುಣ ಶೀತಲ ಕಿರಣ ಶೋಭಿತ ತರಣಿ ನಿನ್ನಯ ಚರಣಕೆರಗುವೆ|| ಕಾಮ ಮೋಹದ ತಮವ ಕಳೆಯಲು ಪ್ರೇಮ ಚ್ಯೋತಿಯ ಕಾಂತಿ ಬೆಳಗಿಹೆ| ವಿಷಮ ಶೈತ್ಯದಿ ಭೀತ ಜಗಕೆ ಸೌಮ್ಯ ಸಮತೆಯ ಸ್ಥೈರ್ಯ ನೀಡಿಹೆ|| ಕರ್ಮಕಾಂಡದ ಕ್ರೌರ್ಯ ಜಡತೆಯಿಂ ಧರ್ಮಶಾಸ್ತ್ರದ ಶುಷ್ಕವಾದದಿಂ| ಧರ್ಮಬಾಳ್ವೆಯ ಸಲಹಲೆಂದು ಧರ್ಮಮೂರುತಿ ಇಳಿದು ಬಂದೆ|| ಸರ್ವಧರ್ಮದ ಸರ್ವಕರ್ಮದ ಸರ್ವಸಾರವ ತೆರೆದು ತೋರಿದೆ| ಸರ್ವಸೃಷ್ಟಿ ವಿಮುಕ್ತಿಸಾಧಕ ಸರ್ವತ್ಯಾಗಿ ಸಾರ್ವಭೌಮ||                              —–ಸ್ವಾಮಿ ಶಾಸ್ತ್ರಾನಂದ

ಕರುಣ ಶೀತಲ Read More »

ಕಮಲವದನ ಕಲುಷಹರಣ

ಕಮಲವದನ ಕಲುಷಹರಣ ನಿನಗೆ ನಮನ ರಾಮಕೃಷ್ಣ|| ಧರಮಸ್ಥಾಪನ ನಿನ್ನಾಗಮನ ಪರಮಪಾವನ ನಿನ್ನ ಭಜನ| ಕೊಡುವೆ ನಿನಗೆ ಹೃದಯದಾಸನ ಕಳೆಯೋ ಎನ್ನ ಜನುಮಮರಣ|| ಜಗದ ಜೀವನ ಪುಣ್ಯಕಥನ ವಿಜಿತಮದನ ಕರಮ ದಹನ| ರಚಿಸಿ ನೀನು ವಿಶ್ವಕವನ ನೀಡುತಿರುವೆ ತವ ದರುಶನ|| ವಿಶ್ವಮೋಚನ ತವಗುಣಗಾನ ಚಿತ್ತಶೋಧನ ನಿನ್ನನುಧ್ಯಾನ| ನನ್ನದೆನುವ ತನುಮನಧನ ನಿನಗೆ ಅರ್ಪಣ ಹೇ ಮಮ ಜೀವನ||                                —ಸ್ವಾಮಿ ತದ್ರೂಪಾನಂದ

ಕಮಲವದನ ಕಲುಷಹರಣ Read More »

ಏಳು ತಾಯಿ, ಏಳು ತಾಯಿ

ಏಳು ತಾಯಿ, ಏಳು ತಾಯಿ, ಎಷ್ಟು ಕಾಲ ನಿದ್ದೆಗೈವೆ ಮೂಲಾಧಾರ ಪದ್ಮದಿ|| ಏಳು ತಾಯಿ ಶಿವನಿರುವಾ ಸಾವಿರದಳ ಕಮಲವರಳಲೆನ್ನ ಶಿರೋಮಧ್ಯದಿ ಷಟ್ ಚಕ್ರವ ಭೇದಿಸಮ್ಮ ಮನದ ವ್ಯಥೆಯ ನೀಗಿಸಮ್ಮ ಓ ಚೇತನ ರೂಪಿಣಿ||                        —-ವಚನವೇದ

ಏಳು ತಾಯಿ, ಏಳು ತಾಯಿ Read More »

ಏಹಿ ಮುದಂ

ಏಹಿ ಮುದಂ ದೇಹಿ ಶ್ರೀಕೃಷ್ಣ ಕೃಷ್ಣ-ಮಾಂ ಪಾಹಿ ಗೋಪಾಲ ಬಾಲ ಕೃಷ್ಣ ಕೃಷ್ಣ|| ಧಾವ ಧಾವ ಮಾಧವ ಶ್ರೀಕೃಷ್ಣ ಕೃಷ್ಣ-ನವ್ಯ ನವನೀತಮಾಹರ ಶ್ರೀ ಕೃಷ್ಣ ಕೃಷ್ಣ|| ಭವ್ಯನಟನಂ ಕುರು ಶ್ರೀಕೃಷ್ಣ ಕೃಷ್ಣ-ಬಲ ಭದ್ರಸಹಿತ ಶ್ರೀಕೃಷ್ಣ ಕೃಷ್ಣ|| ಸಾಧು ಸಾಧು ಕೃತಮಿಹ ಕೃಷ್ಣ ಕೃಷ್ಣ-ಲೋಕ ಸಾಧಕಹಿತಾಯ ಶ್ರೀಕೃಷ್ಣ ಕೃಷ್ಣ|| ನಾರದಾದಿ ಮುನಿಗೇಯ ಕೃಷ್ಣ ಕೃಷ್ಣ-ಶ್ರೀಮನ್ ನಾರಾಯಣತೀರ್ಥವರದ ಕೃಷ್ಣ ಕೃಷ್ಣ||                                                  ——ನಾರಾಯಣತೀರ್ಥ

ಏಹಿ ಮುದಂ Read More »

ಏನು ಮಾಡಿದರೇನು

ಏನು ಮಾಡಿದರೇನು ಭವ ಹಿಂಗದು ಸ್ವಾಮಿ ದಾನವಾಂತಕ ನಿನ್ನ ದಯವಾಗದನಕ|| ಅರುಣೋದಯದೊಳೆದ್ದು ಅತಿಸ್ನಾನಗಳ ಮಾಡಿ ಬೆರಳೆಣಿಸಿದೆ ಅದರ ನಿಜವರಿಯದೆ| ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೋ ಹರಿ ನಿನ್ನ ಕರುಣಾಕಟಾಕ್ಷವಾಗದನಕ|| ಶ್ರುತಿ ಶಾಸ್ತ್ರ ಪುರಾಣಗಳನೋದಿ ಬೆಂಡಾದೆ ಅತಿ ಶೀಲಗಳನೆಲ್ಲ ಮಾಡಿ ದಣಿದೆ| ಗತಿಯ ಪಡೆಯುವೆನೆಂದು ಕಾಯ ದಂಡಿಸಿದೆನೋ ರತಿಪತಿಪಿತ ನಿನ್ನ ದಯವಾಗದನಕ|| ಧ್ಯಾನವನು ಮಾಡಿದೆನು ಮೌನವನು ತಾಳಿದೆ ಮ- ಹಾನು ಪುರುಷಾರ್ಥಕ್ಕೆ ಮನವನಿಕ್ಕಿ| ಅನಾಥಬಂಧು ಶ್ರೀ ಪುರಂದರವಿಟ್ಠಲನ ಧ್ಯಾನಿಸುವರೊಡಗೂಡಿ ನೆಲೆಗಾಣದನಕ||                                                    —-ಪುರಂದರದಾಸ

ಏನು ಮಾಡಿದರೇನು Read More »

ಏನು ನಿರುಪಮ ಸೊಬಗು

ಏನು ನಿರುಪಮ ಸೊಬಗು, ಓಹೋ ಎಂಥ ಚೆಲುವಿನ ಮೋಹನ! ನನ್ನ ಹೃದಯದ ಮೂರ್ತಿ ಬಂದನು ಎದೆಯ ಗುಡಿಸಲಿಗೀದಿನ! ಎದೆಯೊಳೊಲವಿನ ಚಿಲುಮೆ ಚಿಮ್ಮಿವೆ ಹತ್ತು ಕಡೆಗೂ ಸುಮ್ಮನೆ! ಯಾವ ಸಂಪದವನ್ನು ಸುರಿಯಲಿ ಹೇಳು ನಿನ್ನೀ ಪದದೆಡೆ? ನನ್ನ ಹರಣವೆ ಶರಣು ನಿನಗೆ, ನನ್ನ ಆತ್ಮವೆ ನಿನ್ನದು  ; ಮತ್ತೆ ಏನನು ನೀಡಲಯ್ಯಾ?- ನನ್ನದೆಲ್ಲವು ನಿನ್ನದು!                          —-ವಚನವೇದ

ಏನು ನಿರುಪಮ ಸೊಬಗು Read More »

ಎಂದಿಗಾಹುದೋ ನಿನ್ನ ದರುಶನ

ಎಂದಿಗಾಹುದೋ ನಿನ್ನ ದರುಶನ ಇಂದಿರೇಶ ಶ್ರೀ ಗೋವಿಂದ ಮುಕುಂದ|| ತಂದೆ ತಾಯಿ ನೀನೇ ಬಂಧು ಬಳಗ ನೀನೇ ಎಂದು ಭಜಿಸುವಾ ಆನಂದ ಗೋವಿಂದ| ಸರಸಿಜೋದ್ಭವಾ ಶ್ರೀಹರೀಶನಾದ ನಿನ್ನ ನ್ಮರಿಸುವಾ ಸುಖ ಎಂದಿಗಾಹುದೋ|| ಅಜಭವಾದಿಗಳು ಆನಂದದಿಂದಲಿ ಭಜಿಸಿ ಪಾಡುವಾ ನಿನ್ನ ಸುಖವು| ದೀನವತ್ಸಲ ಶ್ರೀನಿಕೇತನಾ ಮಾನದಿಂದ ನಿನ್ನ ಧ್ಯಾನವೇ ಸುಖವು|| ಭಯನಿವಾರಣ ಭಕ್ತವತ್ಸಲ ವಿಜಯಸಾರಥಿ ವಿಜಯವಿಟ್ಠಲನೆ||                                       —-ವಿಜಯದಾಸ

ಎಂದಿಗಾಹುದೋ ನಿನ್ನ ದರುಶನ Read More »

ಎಲ್ಲಿ ಅರಸುವೆ ನೀನು

ಎಲ್ಲಿ ಅರಸುವೆ ನೀನು ಓ ನನ್ನ ಕಿಂಕರನೆ ನಿನ್ನ ಬಳಿಯೇ ನಾನು ವಾಸಿಸಿರುವೆ| ನಾನು ನಿನ್ನೊಂದಿಗೇ ಇದ್ದರೂ ನನಗಾಗಿ ಎಲ್ಲೊ ದೂರದಿ ಹುಡುಕಿ ಬಳಲುತಿರುವೆ|| ನಾನು ಚರ್ಮದೊಳಿಲ್ಲ ರೋಮದೊಳಗೂ ಇಲ್ಲ ಅಸ್ಥಿಯಲೊ ಮಾಂಸದಲೊ ಹುದುಗಿಕೊಂಡಿಲ್ಲ| ಗುಡಿಮಸೀದಿಯೊಳಿಲ್ಲ ಕಾಶಿಕೈಲಾಸದಲೊ ದ್ವಾರಕೆ ಅಯೋಧ್ಯೆಯೊಳೊ ದೊರೆವನಲ್ಲ|| ಸಂನ್ಯಾಸದೊಳಗಿಲ್ಲ ವೈರಾಗ್ಯದೊಳಗಿಲ್ಲ ಯೋಗಾದಿ ಸಿದ್ಧಿಗೂ ದೂರ ನಾನು| ಶ್ರದ್ಧೆ ಎಲ್ಲಿರುವುದೊ ಅಲ್ಲಿ ದೊರೆಯುವೆ ನಾನು ನನಗಾಗಿ ಹುಡುಕಿದರೆ ದೊರೆವೆ ನಾನು||                                                  —ವಚನವೇದ

ಎಲ್ಲಿ ಅರಸುವೆ ನೀನು Read More »

ಎಂತಾದರೂ ಚಿಂತೆ ಬಿಡದು

ಎಂತಾದರೂ ಚಿಂತೆ ಬಿಡದು| ನಿಶ್ಚಿಂತರಾದವರ ನಾನೊಬ್ಬರನು ಕಾಣೆ|| ಬ್ರಹ್ಮನಿಗೆ ಶಿರವೊಂದು ಭಿನ್ನವಾದ ಚಿಂತೆ ರಕ್ಕಸರ ಗುರುವಿಗೆ ಕಣ್ಣಿಲ್ಲದ ಚಿಂತೆ| ಮನ್ಮಥಗೆ ತನುಸುಟ್ಟು ಭಸ್ಮವಾದ ಚಿಂತೆ ಮುಕ್ಕಣ್ಣ ಶಿವನಿಗೆ ತಿರಿದುಂಬೊ ಚಿಂತೆ|| ಧರ್ಮನಿಷ್ಠರಿಗೆ ಸುಖದೊಳಿರುವ ಚಿಂತೆ ದುಷ್ಕರ್ಮಿಗಳಿಗೆ ಪರರ ಕೆಡಿಸುವ ಚಿಂತೆ| ತಮ್ಮ ಅರ್ಜುನಗೆ ವೈರಿಯ ಕೊಲ್ಲುವ ಚಿಂತೆ ಅಣ್ಣ ಭೀಮನಿಗೆ ಅನ್ನ ಸಾಲದ ಚಿಂತೆ|| ಭಕ್ತರಿಗೆ ಗುರುವಿನಲಿ ಮುಕ್ತಿ ಪಡೆಯುವ ಚಿಂತೆ ಮುಕ್ತರಿಗೆ ಅನುಕ್ಷಣವು ಹರಿದರ್ಶನದ ಚಿಂತೆ| ಯುಕ್ತಿ ಬಲ್ಲವರಿಗೆ ತತ್ತ್ವ ಹೇಳುವ ಚಿಂತೆ ಶಕ್ತ ಪುರಂದರವಿಟ್ಠಲಗೆಮ್ಮ

ಎಂತಾದರೂ ಚಿಂತೆ ಬಿಡದು Read More »

ಎಲ್ಲವೂ ನಿನ್ನಚ್ಛೆಯಂತೆ ನಡೆದಿರಲು

ಎಲ್ಲವೂ ನಿನ್ನಚ್ಛೆಯಂತೆ ನಡೆದಿರಲು ನೀನೆ ಭವಸಾಗರವ ದಾಟಿಸುವ ಹಡಗು| ನಿನ್ನ ಇಚ್ಛೆಯ ನೀನು ಪೂರೈಸುತಿರಲು ತಮ್ಮ ಗೈಮೆಯಿದೆಂದು ತಿಳಿವರೀ ಜನರು || ಕೆಸರಿನಲಿ ಸಲಗವನು ಹಿಡಿಯುವಳು ನೀನು ಹೆಳವನನು ಗಿರಿಯ ತುದಿಗೊಯ್ಯುವಳು ನೀನು| ಹಲವರಿಗೆ ಬ್ರಹ್ಮಪದವಿತ್ತು ಹಲವರನು ಭವಜಲಧಿ ಸುಳಿಯೊಳಗೆ ಎಸೆಯುವಳು ನೀನು|| ನೀನು ಚಾಲಕಶಕ್ತಿ ನಾನೊಂದು ಯಂತ್ರ ನಾನೊಂದು ಬರಿಯ ಮನೆ ನೀನದರ ಮಂತ್ರ| ನಾನೊಂದು ರಥವಾಗೆ ನೀನದರ ರಥಿಕ ನೀ ನಡೆಸೆ ನಾ ನಡೆವೆ ನಿನ್ನದೀ ಲೋಕ||                                               ——ವಚನವೇದ

ಎಲ್ಲವೂ ನಿನ್ನಚ್ಛೆಯಂತೆ ನಡೆದಿರಲು Read More »

ಎನಗೂ ಆಣೆ

ಎನಗೂ ಆಣೆ ರಂಗ ನಿನಗೂ ಆಣೆ| ಎನಗೂ ನಿನಗೂ ಇಬ್ಬರಿಗೂ ನಿನ್ನ ಭಕ್ತರಿಗೂ ನಿನ್ನ ಭಕ್ತರಾಣೆ|| ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ| ರಂಗ ಎನ್ನ ನೀ ಕೈಬಿಟ್ಟು ಪೋದರೆ ನಿನಗೆ ಆಣೆ|| ತನುಮನಧನದಲಿ ವಂಚಕನಾದರೆ ಎನಗೆ ಆಣೆ |ರಂಗ ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ || ಕಾಕು ಮನುಜರ ಸಂಗ ಮಾಡಿದರೆನಗೆ ಆಣೆ| ರಂಗ ಲೌಕಿಕವ ಬಿದಿಸದಿದ್ದರೆ ನಿನಗೆ ಆಣೆ|| ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ| ರಂಗ ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ

ಎನಗೂ ಆಣೆ Read More »

ಎನಗಿಂತ ಕಿರಿಯರಿಲ್ಲಯ್ಯಾ

ಎನಗಿಂತ ಕಿರಿಯರಿಲ್ಲಯ್ಯಾ ಶಿವಭಕ್ತರಿಗಿಂತ ಹಿರಿಯರಿಲ್ಲಯ್ಯಾ ನಿಮ್ಮ ಪಾದಸಾಕ್ಷಿ ಎನಗೆ ಎನ್ನ ಮನದ ಸಾಕ್ಷಿಯಯ್ಯಾ ಕೂಡಲಸಂಗಮದೇವಾ ಎನಗಿದೇ ದಿವ್ಯ||                                                             —-ಬಸವಣ್ಣ

ಎನಗಿಂತ ಕಿರಿಯರಿಲ್ಲಯ್ಯಾ Read More »