ಭುವನ ಭ್ರಮಣ ಕರೋ ಯೋಗೀಬರ್

ಸಾಹನಾ-ಧಾಮಾರ ಭುವನ ಭ್ರಮಣ ಕರೋ ಯೋಗೀಬರ್ ಯಾಂರ್ ಧ್ಯಾನೇ।ತಾಹಾರಿ ಸಂತಾನಗಣ ಚೇಯೆ ಆಚೆ ಪಥಪಾನೇ॥ ಉಚ್ಚಬ್ರತೆ ಆತ್ಮಹಾರಾ, ಭ್ರಮಿ ಸಸಾಗರ ಧರಾ,ಮೋಹಿಲ್ಲೆ ಮಾನವ-ಚಿತ, ಪ್ರಭು್ರ ಗೌರವ-ಗಾನೇ।ನಾನಾದೇಶೇ ನಾನಾಭಾವೇ ಜಯಧ್ವನಿ ಏಕತಾನೇ॥ ರಾಮಕೃಷ್ಣ ಹೃದೇ ಧರೋ, ಹೃದಯ ಆಕೃಷ್ಠ ಕರೋ,ಇಷ್ಟಪೂಜಾ ಪೂರ್ಣ ತವ, ಪುಲಕ-ಆಲೋಕ್ ದಾನೇ।ಜನಮನ್ ಪುಲಕಿತ, ಮೋಹನಿಶಾ ಅವಸಾನೇ॥ ಗಿರೀಶ್ ಚಂದ್ರ ಘೋಷ್

ಭುವನ ಭ್ರಮಣ ಕರೋ ಯೋಗೀಬರ್ Read More »

ಭುವನ ಮಂಡಲೇ ನವಯುಗಮುದಯತು

ಭುವನ ಮಂಡಲೇ ನವಯುಗಮುದಯತು ಸದಾ ವಿವೇಕಾನಂದಮಯಮ್ |ಸುವಿವೇಕಮಯಮ್ ಸ್ವಾನಂದಮಯಂ                                                ||ಪ|| ತಮೋಮಯಂ ಜನ ಜೀವನಮಧುನಾ ನಿಷ್ಕ್ರಿಯತಾಽಲಸ್ಯ ಗ್ರಸ್ತಮ್ |ರಜೋಮಯಮಿದಂ ಕಿಂವಾ ಬಹುಧಾ ಕ್ರೋಧ ಲೋಭಮೋಹಾಭಿಹತಮ್ |ಭಕ್ತಿಜ್ಞಾನಕರ್ಮವಿಜ್ಞಾನೈಃ ಭವತು ಸಾತ್ತ್ವಿಕೋದ್ಯೋತಮಯಮ್                  ||೧|| ವಹ್ನಿವಾಯುಜಲ ಬಲ ವಿವರ್ಧಕಂ ಪಾಂಚಭೌತಿಕಂ ವಿಜ್ಞಾನಮ್ |ಸಲಿಲನಿಧಿತಲಂ ಗಗನಮಂಡಲಂ ಕರತಲಫಲಮಿವ ಕುರ್ವಾಣಮ್ |ದೀಕ್ಷುವಿಕೀರ್ಣಂ ಮನುಜಕುಲಮಿದಂ ಘಟಯತುಚೈಕ ಕುಟುಂಬಮಯಮ್      ||೨|| ಸಗುಣಾಕಾರಂ ಹ್ಯಗುಣಾಕಾರಂ ಏಕಾಕಾರಮನೇಕಾಕಾರಮ್ |ಭಜಂತಿ ಏತೇ ಭಜಂತು ದೇವಮ್ ಸ್ವಸ್ವನಿಷ್ಠಯಾ ವಿಮತ್ಸರಮ್ |ವಿಶ್ವಧರ್ಮಮಿಮಮುದಾರಭಾವಂ ಪ್ರವರ್ಧಯತು ಸೌಹಾರ್ದಮಯಮ್         ||೩|| ಜೀವೇ ಜೀವೇ ಶಿವಸ್ವರೂಪಂ ಸದಾ ಭಾವಯತು ಸೇವಾಯಾಮ್

ಭುವನ ಮಂಡಲೇ ನವಯುಗಮುದಯತು Read More »

ಭಾವುಕನ ಭಾವದೊಲು ಅವನವನ ಒಲವು

ಗಜಲ್ – ಝಪತಾಲ ಭಾವುಕನ ಭಾವದೊಲು ಅವನವನ ಒಲವು ಆ ಒಲವಿಗನುಸಾರ ಅವನು ಪಡೆಯುವ ಫಲವು|| ಶ್ರದ್ದೆ ಎಲ್ಲಕು ಮೂಲ ತಾಯ ಶ್ರೀಪಾದಮಧುಸರಸಿಯಲಿ ಮುಳುಗಿರುವ ನನಗೇಕೆ ಮತ್ತೆ ಜಪತಪ ಹೋಮ ಹವನಾದಿ ಕರ್ಮಗಳ ರಗಳೆ ? – ವಚನವೇದ

ಭಾವುಕನ ಭಾವದೊಲು ಅವನವನ ಒಲವು Read More »

ಭೋ ಶಂಭೋ ಶಿವ ಶಂಭೋ ಸ್ವಯಂಭೋ

ರೇವತಿ – ಆದಿತಾಳ ಭೋ ಶಂಭೋ ಶಿವ ಶಂಭೋ ಸ್ವಯಂಭೋll ಗಂಗಾಧರ ಶಂಕರ ಕರುಣಾಕರ ಮಾಮವ ಭವಸಾಗರತಾರಕ|| ನಿರ್ಗುಣ ಪರಬ್ರಹ್ಮ ಸ್ವರೂಪ ಘಮಘಮ ಭೂಷ ಪ್ರಪಂಚರಹಿತ ನಿಜಗುಣನಿಹಿತ ನಿತಾಂತಕ ನಂದ ಆನಂದ ಅತಿಶಯ ಅಕ್ಷಯಲಿಂಗ|| ಧಿಮಿ ಧಿಮಿತ ಧಿಮಿ ಧಿಮಿಕಿಟ ಕಿಟ ತೋಂ ತೋಂ ತೋಂ ತರಿಕಿಟ ತೋಂ ತರಿಕಿಟ ತೋಂ ಮತಂಗಮುನಿವರ ವಂದಿತ ಈಶ ಸರ್ವ ದಿಗಂಬರ ನಿರ್ಜರ ಕೇಶ ನಿತ್ಯ ನಿರಂಜನ ನಿರ್ಗುಣ ಈಶ ಈಶ ಸರ್ವೆಶ ಸರ್ವೆಶ||

ಭೋ ಶಂಭೋ ಶಿವ ಶಂಭೋ ಸ್ವಯಂಭೋ Read More »

ಬೆರಸುವಡೆ ಬೇಗ ತೋರಾ,

ಬೆರಸುವಡೆ ಬೇಗ ತೋರಾ, ಹೊರ ಹಾಯ್ಕದಿರಯ್ಯಾ. ನಿಮ್ಮಲ್ಲಿಗೆ ಸಲೆ ಸಂದ ತೊತ್ತಾನು ; ಎನ್ನ ಹೊರ ಹಾಯ್ಕದಿರಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ನಂಬಿ ಬೆಂಬಳಿಬಂದೆನು ಇಂಬುಗೊಳ್ಳಯ್ಯಾ ಬೇಗದಲಿ.

ಬೆರಸುವಡೆ ಬೇಗ ತೋರಾ, Read More »

ಭಾವಿಸಿ ನೋಡಿದಡೆ ಅಂಗವಾಯಿತ್ತು,

ಭಾವಿಸಿ ನೋಡಿದಡೆ ಅಂಗವಾಯಿತ್ತು, ಅಂಗಸಂಗವಾಗಿ ಸಂಯೋಗವ ಮರೆದು, ಲಿಂಗಸೈವೆರಗಾದೆ. ಲಿಂಗೈಕ್ಯ, ನಿಮ್ಮನಗಲದೆ ಅಂಗರುಚಿಗಳ ಮರೆದು, ಲಿಂಗರುಚಿಗಳಲ್ಲಿ ಸೈವೆರಗಾದೆ. ಲಿಂಗ ಸೈವೆರಗಾದ ಬಳಿಕ ಚೆನ್ನಮಲ್ಲಿಕಾರ್ಜುನನ ಕೊಂದು ಸಾವ ಭಾಷೆ.

ಭಾವಿಸಿ ನೋಡಿದಡೆ ಅಂಗವಾಯಿತ್ತು, Read More »

ಭಾವ ಬೀಸರವಾಯಿತ್ತು, ಮನ ಮೃತ್ಯುವನಪ್ಪಿತ್ತು ;

ಭಾವ ಬೀಸರವಾಯಿತ್ತು, ಮನ ಮೃತ್ಯುವನಪ್ಪಿತ್ತು ; ಆನೇವೆನಯ್ಯಾ ? ಆಳಿತನದ ಮನ ತಲೆಕೆಳಗಾಯಿತ್ತು ; ಆನೇವೆನಯ್ಯಾ ? ಬಿಚ್ಚಿ ಬೇರಾಗದ ಭಾವವಾಗೆ, ಬೆರೆದೊಪ್ಪಚ್ಚಿ ನಿನ್ನ ನಿತ್ಯಸುಖದೊಳಗೆಂದಿಪ್ಪೆನಯ್ಯಾ, ಚೆನ್ನಮಲ್ಲಿಕಾರ್ಜುನಾ ?

ಭಾವ ಬೀಸರವಾಯಿತ್ತು, ಮನ ಮೃತ್ಯುವನಪ್ಪಿತ್ತು ; Read More »

ಭೃತ್ಯನಾದ ಬಳಿಕ ಕರ್ತೃವಿಂಗೆ ಉತ್ತಮ ವಸ್ತುವನೀಯಬೇಕು,

ಭೃತ್ಯನಾದ ಬಳಿಕ ಕರ್ತೃವಿಂಗೆ ಉತ್ತಮ ವಸ್ತುವನೀಯಬೇಕು, ಇದೇ ಕರ್ತೃಭೃತ್ಯರ ಭೇದ. ಲಿಂಗಭಕ್ತನಾದಡೆ ಜಂಗಮಪಾದತೀರ್ಥಪ್ರಸಾದವ ಲಿಂಗಕ್ಕೆ ಮಜ್ಜನ ಭೋಜನ ನೈವೇದ್ಯವ ಮಾಡಿ, ಪ್ರಸಾದವ ಕೊಳ್ಳಬೇಕು. ಇದೇ ವರ್ಮ, ಇದೇ ಧರ್ಮ ಕಾಣಾ ಚೆನ್ನಮಲ್ಲಿಕಾರ್ಜುನಾ.

ಭೃತ್ಯನಾದ ಬಳಿಕ ಕರ್ತೃವಿಂಗೆ ಉತ್ತಮ ವಸ್ತುವನೀಯಬೇಕು, Read More »

ಭವಿಸಂಗವಳಿದು ಭಕ್ತನಾದ ಬಳಿಕ,

ಭವಿಸಂಗವಳಿದು ಭಕ್ತನಾದ ಬಳಿಕ, ಭಕ್ತಂಗೆ ಭವಿಸಂಗವತಿಘೋರ ನರಕ. ಶರಣಸತಿ ಲಿಂಗಪತಿಯಾದ ಬಳಿಕ, ಶರಣಂಗೆ ಸತಿಸಂಗವು ಅಘೋರನರಕ. ಚೆನ್ನಮಲ್ಲಿಕಾರ್ಜುನಾ, ಪ್ರಾಣಗುಣವಳಿಯದವರ ಸಂಗವೇ ಭಂಗ.

ಭವಿಸಂಗವಳಿದು ಭಕ್ತನಾದ ಬಳಿಕ, Read More »

ಭವಿಯಾಚಾರವ ಬಿಡದೆ ಭಯಾಗರವ ಹೊಗದೆ,

ಭವಿಯಾಚಾರವ ಬಿಡದೆ ಭಯಾಗರವ ಹೊಗದೆ, ಶಿವಾಚಾರದಲ್ಲಿ ನಡೆವ ನಾಯಿಗಳು ಬರಿದೆ ನಾವು ಶಿವಾಚಾರಿಗಳೆಂದರೆ ನಮ್ಮ ಶಿವಾಚಾರಿ ಶರಣ ಬಸವಣ್ಣ ಮೆಚ್ಚ ನೋಡಯ್ಯ. ಶಿವಾಚಾರದ ಮಾರ್ಗವನು, ಶಿವಾಚಾರದ ಮರ್ಮವನು, ಶಿವಾಚಾರದ ವಿಸ್ತಾರವನು ನಮ್ಮ ಶರಣ ಬಸವಣ್ಣ ಬಲ್ಲನಲ್ಲದೆ ಉದರವ ಹೊರವ ವೇಷಧಾರಿಗಳೆತ್ತಬಲ್ಲರಯ್ಯ ? ಅಂತಪ್ಪ ಶಿವಾಚಾರದ ವಿಸ್ತಾರ ಸಕೀಲ ಹೇಳಿಹೆ ಕೇಳಿರಣ್ಣ. ಅದೆಂತೆಂದೊಡೆ ಲಿಂಗಾಚಾರವೆಂದು, ಸದಾಚಾರವೆಂದು, ಶಿವಾಚಾರವೆಂದು, ಭೃತ್ಯಾಚಾರವೆಂದು, ಗಣಾಚಾರವೆಂದು ಶಿವಾಚಾರವು ಐದುತೆರನಾಗಿಪ್ಪುದು ನೋಡಯ್ಯಾ. ಶ್ರೀ ಗುರು ಕರುಣಿಸಿಕೊಟ್ಟ ಲಿಂಗವನಲ್ಲದೆ ಅನ್ಯದೈವಂಗಳಿಗೆರಗದಿಹುದೇ ಲಿಂಗಾಚಾರ ನೋಡಯ್ಯ. ತಾ ಮಾಡುವ ಸತ್ಯ

ಭವಿಯಾಚಾರವ ಬಿಡದೆ ಭಯಾಗರವ ಹೊಗದೆ, Read More »

ಭವಭವದಲ್ಲಿ ತೊಳಲಿ ಬಳಲಿತ್ತೆನ್ನಮನ,

ಭವಭವದಲ್ಲಿ ತೊಳಲಿ ಬಳಲಿತ್ತೆನ್ನಮನ, ಆನೇವೆನಯ್ಯಾ ? ಹಸಿದುಂಡಡೆ ಉಂಡು ಹಸಿವಾಯಿತ್ತು. ಇಂದು ನೀನೊಲಿದೆಯಾಗಿ, ಎನಗೆ ಅಮೃತದ ಆಪ್ಯಾಯನವಾಯಿತ್ತು. ಇದು ಕಾರಣ, ನೀನಿಕ್ಕಿದ ಮಾಯೆಯನಿನ್ನು ಮುಟ್ಟಿದೆನಾದಡೆ ಆಣೆ, ನಿಮ್ಮಾಣೆ ಚೆನ್ನಮಲ್ಲಿಕಾರ್ಜುನಾ.

ಭವಭವದಲ್ಲಿ ತೊಳಲಿ ಬಳಲಿತ್ತೆನ್ನಮನ, Read More »

ಭವದ ಬಟ್ಟೆಯ ದೂರವನೇನ ಹೇಳುವೆನಯ್ಯಾ ?

ಭವದ ಬಟ್ಟೆಯ ದೂರವನೇನ ಹೇಳುವೆನಯ್ಯಾ ? ಎಂಬತ್ತುನಾಲ್ಕು ಲಕ್ಷ ಊರಲ್ಲಿ ಎಡೆಗೆಯ್ಯಬೇಕು. ಒಂದೂರಭಾಷೆಯೊಂದೂರಲಿಲ್ಲ. ಒಂದೂರಲ್ಲಿ ಕೊಂಡಂಥ ಆಹಾರ ಮತ್ತೊಂದೂರಲಿಲ್ಲ. ಇಂತೀ ಊರ ಹೊಕ್ಕ ತಪ್ಪಿಂಗೆ ಕಾಯವ ಭೂಮಿಗೆ ಸುಂಕವ ತೆತ್ತು ಜೀವವನುಳುಹಿಕೊಂಡು ಬರಬೇಕಾಯಿತ್ತು. ಇಂತೀ ಮಹಾಘನದ ಬೆಳಕಿನೊಳಗೆ ಕಳೆದುಳಿದು ಸುಳಿದಾಡಿ ನಿಮ್ಮ ಪಾದವ ಕಂಡು ಸುಯಿಧಾನಿಯಾದೆ ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ

ಭವದ ಬಟ್ಟೆಯ ದೂರವನೇನ ಹೇಳುವೆನಯ್ಯಾ ? Read More »

ಭಕ್ತೆಯಾನಪ್ಪೆನಯ್ಯಾ

ಭಕ್ತೆಯಾನಪ್ಪೆನಯ್ಯಾ ; ಕರ್ತೃಭೃತ್ಯವ ನಾನರಿಯೆ. ಮಾಹೇಶ್ವರಿಯಾನಪ್ಪೆನಯ್ಯಾ ; ವ್ರತ ನೇಮ ಲವ ನಾನರಿಯೆ. ಪ್ರಸಾದಿಯಾನಪ್ಪೆನಯ್ಯಾ ; ಅರ್ಪಿತನರ್ಪಿತವೆಂಬ ಭೇದವ ನಾನರಿಯೆ. ಪ್ರಾಣಲಿಂಗಿಯಾನಪ್ಪೆನಯ್ಯಾ ; ಅನುಭಾವದ ಗಮನವ ನಾನರಿಯೆ. ಶರಣೆಯಾನಪ್ಪೆನಯ್ಯಾ? ಶರಣಸತಿ ಲಿಂಗಪತಿ ಎಂಬ ಭಾವವ ನಾನರಿಯೆ. ಐಕ್ಯಳಾನಪ್ಪೆನಯ್ಯಾ? ಬೆರಸಿ ಭೇದವ ನಾನರಿಯೆ. ಚೆನ್ನಮಲ್ಲಿಕಾರ್ಜುನಯ್ಯಾ, ಷಟ್‍ಸ್ಥಲದಲ್ಲಿ ನಿಃಸ್ಥಲವಾಗಿಪ್ಪೆನು.

ಭಕ್ತೆಯಾನಪ್ಪೆನಯ್ಯಾ Read More »

ಭಕ್ತನೆ ಕುಲಜನೆಂದ ಮಾತಿನಂತೆ ಹೋಗದು.

ಭಕ್ತನೆ ಕುಲಜನೆಂದ ಮಾತಿನಂತೆ ಹೋಗದು. ಭಕ್ತನೆ ಕುಲಜನೆಂಬ ನುಡಿಯೆಲ್ಲಿಯು ಸಲ್ಲದು. ಭಕ್ತನೆ ಕುಲಜನೆಂಬುದು ಪಾತಕವಯ್ಯ. ಅವಯವವೆ ಮೂರ್ತಿಯಾಗಿ ಸರ್ವಾಂಗಲಿಂಗಕ್ಕೆ ಅನುಭಾವವಿಲ್ಲಾಗಿ ಎನ್ನ ದೇವ ಚೆನ್ನಮಲ್ಲಿಕಾರ್ಜುನನಲಿ ಯಥಾ ತಥಾ ಎಂಬಚನವನರಿಯಿರೆ.

ಭಕ್ತನೆ ಕುಲಜನೆಂದ ಮಾತಿನಂತೆ ಹೋಗದು. Read More »

ಭೇದ ಪೇಳುವೆನೆ ತಮೊ

ಭೇದ ಪೇಳುವೆನೆ ತಮೊ ಯೋಗ್ಯ ಪೂರ್ಣ ಬೊಧರ ಮತ ಬಿಡುವನೆ ಮುಕ್ತಿಯೋಗ್ಯ ಸತ್ಯ ನುಡಿವನೆ ಅಪಕಾರಿ ಪರರ ವಿತ್ತಪಹರಿಸುವನೆ ಬಲು ಉದಾರಿ ಹತ್ಯ ಮಾಡುವನೆ ಉಪಕಾರಿ ನಿತ್ಯ ಚಿತ್ತ ಚಂಚಲಿಸುವನೆ ಧರ್ಮದಾದಿ ||1|| ಪರನಾರಿ ಸಹೋದರ ಹೀನ ಕಂಡಾ ಉ ತ್ತರಗಳನಾಡುವನೆ ಆವಾಗ ಮೌನ ತರತಮ್ಮ ಪೇಳುವನೆ ಕೋಣ ತನ್ನ ಹರಣವೊಪ್ಪಿಸಿಕೊಂಬುವನೆ ಪ್ರವೀಣಾ ||2|| ಭ್ರಷ್ಟನೆನೆಸುವನೆ ಧನ್ಯ ಪರರ ಇಷ್ಟಾರ್ಥ ಕೆಡಿಸುವನೆ ಬಲು ಮಾನ್ಯ ಕಷ್ಟ ಬೇಡುವನೆ ರಾಜನ್ಯ ವಿಜಯ ವಿಠ್ಠಲನ್ನ ಪೂಜೆ ಮಾಡುವನೆ ಗುಣಶೂನ್ಯ ||3||

ಭೇದ ಪೇಳುವೆನೆ ತಮೊ Read More »

ಭೂರಮಣನೆ ಕಾಯೋ ನಿತ್ಯ

ಭೂರಮಣನೆ ಕಾಯೋ ನಿತ್ಯ ಸಂಸಾರವೆ ಸುಖವೆಂದು ಹಾರಯಿಸಿ ಬಾಳುವಾ | ನರನ ಉದ್ಧಾರ ಮಾಡುವುದು ಕಂಗಳಿಂದಲಿ ಪರರ ಮನೆಯ ಅಂಗನೆಯರ ನೋಡಿ ಅಂಗಸಂಗವ ಬಯಸಿ ಪಾಪಕ್ಕೆ ಹಿಂಗದೆ ಗುರಿಯಾದೆ ||1|| ಜಿಹ್ವೆಯನು ಪಿಡಿದು ನಿಲಿಸದೆ ವಿಹ್ವಲನಾಗಿ ಬಹುರಸ ಸಂಹ್ವತಿಯ ಮೆದ್ದು ಪುಣ್ಯದಾ ಗಹ್ವರವು ಮರಿಯದೆ ||2|| ನಾಸಿಕಕೊನೆಯಿಂದ ಅನರ್ಪಿತÀ ವಾಸನೆ ಕೈಕೊಂಡು ಲೇಸಾಗಿ ಮನವುಬ್ಬಿ ನಲಿವುತ ದೇಶದೊಳಗೆ ಮೆರೆದೆ ||3|| ಮುಪ್ಪಾಗುವತನಕ ಸುಖದಲ್ಲಿ ಅಪ್ಪಿದೆ ನಾರಿಯರ ಒಪ್ಪಿದ ಧರ್ಮಗಳ ಖಳರಿಗೆ ಒಪ್ಪಿಸಿದೆನೊ ಹರಿಯೇ ||4|| ದುಷ್ಟರಾಡುವ ವಾಕ್ಯ

ಭೂರಮಣನೆ ಕಾಯೋ ನಿತ್ಯ Read More »

ಭೀಮ ಶಾಮ ಕಾಮಿನಿಯಾದನು

ಭೀಮ ಶಾಮ ಕಾಮಿನಿಯಾದನು ಭೀಮ ಶಾಮ ಕಾಮಿನಿಯಾಗಲು ಕಾಮನ ಪತಿ ಪುಲೋಮ ಜಿತುವಿನ ಕಾಮಿನಿ ಸಕಲ ವಾಮ ಲೋಚನೆಯ- ರಾಮೌಳಿ ಕೂಗುತಲೊಮ್ಮನದಿ ಪಾಡೆ ದಾಯವಾಡಿ ಸೋತು ರಾಯ ಪಾಂಡವರು ನ್ಯಾಯದಿಂದ ಸ್ವಾಮಿಯ ಸೇವೆಯೆಂದು ಕಾಯದೊಳಗೆ ಅಸೂಯೆಪಡದಲೆ ಮಾಯದಲ್ಲಿ ವನವಾಯಿತೆಂದು ರಾಯ ಮತ್ಸ್ಯನಾಲಯದೊಳು ತಮ್ಮ ಕಾಜು ವಡಗಿಸಿ ಅಯೋನಿಜೆ ದ್ರೌಪ- ದೀಯ ವಡಗೂಡಿ ಆಯಾಸವಿಲ್ಲದೆ ಅಯ್ವರು ಬಿಡದೆ ತಾವಿರಲು ||1|| ಬಾಚಿ ಹಿಕ್ಕುವ ಪರಿಚಾರತನದಲಾ ಪಾಂಚಾಲಿಗೆ ಮತ್ಸ್ಯನಾ ಚದುರೆಯಲ್ಲಿ ಆಚರಣೆಯಿಂದ ಯಾಚಕರಂದದಿ ವಾಚವಾಡಿ ಕಾಲೋಚಿತಕೆ ನೀಚರಲ್ಲಿಗೆ ಕೀಚಕನಲ್ಲಿಗೆ ಸೂಚಿಸಲು

ಭೀಮ ಶಾಮ ಕಾಮಿನಿಯಾದನು Read More »

ಭೀಮ ಪರಿಪೂರ್ಣ ಕಾಮ ಸೋಮಕುಲಾಬ್ಧಿ

ಭೀಮ ಪರಿಪೂರ್ಣ ಕಾಮ ಸೋಮಕುಲಾಬ್ಧಿ ಸೋಮ ರಣರಂಗ ಭೀಮಾ ಆ ಮಹಾದುರಿತ ರಾಮರಾಸಿಗೆ ದೇವಾ ಮೊಗನೆನಿಸುವ ಭೂಮಿ ಭಾರ ಹರ ಧರ್ಮನಂದನನೊಡನೆ ಜನಿಸಿ ಬಂದು ದುರ್ಮತಿಗಳಾ ಕೂಡ ನಿರ್ಮತ್ಸರಾದಲ್ಲಿರದೆ ನಿರುತ ಛಾತ್ರಾ ಕರ್ಮದಲ್ಲಿ ಮರೆದೆ ಧರ್ಮಕ ಹಿತರೊಂದು ನಿರ್ಮಿತದರಗಿನ ಅರ್ಮನೆ ಮಾಡಿರೆ ಮರ್ಮ ತಿಳಿದು ದಾಟಿ ಮಾರ್ಮಲೆತ ಅಸುರನ ನಿರ್ನಾಮಗೈಸಿದ ನಿರ್ಮಳಾ ಮನೋಹರಾ ಪೇರ್ಮಿವುಳ್ಳವನೆ||1|| ಬಕನ ಸರ್ರನೆ ಸೀಳಿ ಬಿಸಾಟಿ ಪಾಂಚಾಲಕನ ಸಭಾದ ಮೌಳಿ ಅಕಟ ತೊಲಗಿಸಿ ಗೆಲಿದು ನೆರೆದ ಕಾ ಮುಕರ ಬಿಂಕವ ಹಳಿದು ಬಕ

ಭೀಮ ಪರಿಪೂರ್ಣ ಕಾಮ ಸೋಮಕುಲಾಬ್ಧಿ Read More »

ಭಾರತೀಶ ಮದ್ಭಾರ ನಿನ್ನದಯ್ಯ

ಭಾರತೀಶ ಮದ್ಭಾರ ನಿನ್ನದಯ್ಯ ಕರುಣದಿ ಪಿಡಿ ಕೈಯ್ಯಾ ಪೂರೈಸೆನ್ನ ಮನೋಭಿಲಾಷೆ ಗುರುವೆ ಭಜಕರ ಸುರತರುವೆದ್ಭ ಹರಿಭಕ್ತಾಗ್ರೇಸರನೆ ಹನುಮಂತಾ ಹರನುತ ಬಲವಂತಾ ತರಣಿಕುಲಜ ಶ್ರೀರಾಮನ ಕೈಯಿಂದ ಬಲುಸಂಭ್ರಮದಿಂದಾ ಶರಧಿಯನು ದಾಂಟಿ ಸೀತಾಕೃತಿಯನ್ನ ನೋಡಿ ರಣದೊಳಗೋಲ್ಯಾಡಿ ದುರುಳ ರಕ್ಕಸರ ದುಷ್ಟ ದನುಜರ ತರಿದೆ ಲೋಕೈಕ ಸಮರ್ಥಾ ||1|| ಕುಂತಿ ಜಠರಾಂಭೋನಿಧಿ ಚಂದ್ರಮನೆ ರಾಜಾಗ್ರೇಸರನೆ ಕಂತು ಜನತನಿಚ್ಛಾನುಸಾರವಾಗಿ ರಣದೊಳಗೆ ಚೆನ್ನಾಗಿ ನಿಂತು ದುಷ್ಟ ದುರ್ಯೋಧನಾದಿಗಳನು ಸಂಹರಿಸಿದಿ ನೀನು ಭ್ರಾಂತಿ ಮನ ಜರಿವರೇನು ಬಲ್ಲರಯ್ಯ ಕರುಣದಿ ಪಿಡಿಯೊ ಕೈಯಾ ||2|| ನಡುಮನೆಯೆಂಬೊ ವಿಪ್ರನ

ಭಾರತೀಶ ಮದ್ಭಾರ ನಿನ್ನದಯ್ಯ Read More »

ಭಾರತೀ ಭವಹಾರಿಯೆ ಭಕ್ತರಪ್ರಿಯೆ

ಭಾರತೀ ಭವಹಾರಿಯೆ | ಭಕ್ತರಪ್ರಿಯೆ | ಭಾರತೀ ಭವಹಾರಿಯೇ ಈರೈದು ಇಂದ್ರಿಯಗಳುಗಾರು | ಮಾಡದಂತೆ ಸಾಕಾರವಾಗಿ ಪಾಲಿಸು ಮತಿವಂತನ ಮಾಳ್ಪುದು | ಇದಕೆ ನಿನ್ನ | ಪತಿಯ ಈಗಲೆ ಕೇಳ್ವುದು | ಕ್ಷಿತಿಯೊಳು ಹೀನರ ಸ್ತುತಿಸಲರಿಯೆ | ಮು- ಕುತಿ ಮಾರ್ಗವ ತೋರಿ ಭಕುತಿ ಬೇಗ ಒದಗಿಸು ||1|| ಮಹತ್ತತ್ವದಭಿಮಾನಿ ನೀ | ಕಲಿರಹಿತೆ | ಅಹಿಪತಿ ಅಪ್ಪ ಖಗಪ ಜನನೀ || ಮಹಾಪ್ರಮಾಣು ವ್ಯಾಪುತೆ ಸರ್ವಜೀವರ | ದೇಹದಲಿ ನಿಂದು ಶ್ರೀಹರಿ ಆರಾಧನೆಯ ರಹಸ್ಯವ ||2||

ಭಾರತೀ ಭವಹಾರಿಯೆ ಭಕ್ತರಪ್ರಿಯೆ Read More »

ಭಾರತೀ ಜನನಿ ಪಾಲಿಸು ನಿತ್ಯ ಮಾರುತನ ರಾಣಿ

ಭಾರತೀ ಜನನಿ ಪಾಲಿಸು ನಿತ್ಯ ಮಾರುತನ ರಾಣಿ | ಭಾರಿ ಭಾರಿಗೆ ಎನ್ನ ಭಾರ ನಿನ್ನದೇ ವಾಣೀ ಭಕುತಿ ಇಲ್ಲದೇ ಅನುದಿನ | ಅಕಟನಿಲ್ಲದೆ | ಸಕಲ ಠಾವಿನಲ್ಲಿ ಅರ್ಭಕನಾಗಿ ತಿರುಗಿ ಪಾ | ಪಕೆ ಎರಗಿದೆ ಯಾತಕೆ ಬಾರದವನಾದೆ ||1|| ಆರನ್ನ ಕಾಣದೆ ನಿನ್ನನು ನಾ | ಸಾರಿದೆ ಮಾಣದೆ | ವಾರ ವಾರಕೆನ್ನ ಉದ್ಧಾರವ ಮಾಳ್ಪುದು | ಕಾರುಣ್ಯದಿಂದಲಿ ಶೃಂಗಾರವಾರಿಧಿ ವೇಗ ||2|| ನುತಿಸಿ ವಂದನೆ ಮಾಡುವೆ ನಿತ್ಯ | ಕೃತಿಯನಂದನೆ | ಸತತ

ಭಾರತೀ ಜನನಿ ಪಾಲಿಸು ನಿತ್ಯ ಮಾರುತನ ರಾಣಿ Read More »

ಭಳಿರೆ ಭಳಿರೆ ನರಸಿಂಹ ಮಹಾಸಿಂಹ |

ಭಳಿರೆ ಭಳಿರೆ ನರಸಿಂಹ ಮಹಾಸಿಂಹ | ಮಲಮಲಾ ಮಲತವರ ವೈರಿ ಉರಿಮಾರಿ ನಗನಗಾ ನಗನಗಗಳಲ್ಲಾಡೆ ಚತುರ್ದಶ | ಜಗಜಗ ಜಗವೆಲ್ಲ ಕಂಪಿಸಿ ಕಂಬನಾಗೆ || ಹಗೆ ಹಗೆ ಹಗೆ ಹಗೆ ಬಲವ ದೆಶೆಗೆಡಿಸಿ ರೋಷಗಿಡಿ | ಉಗು ಉಗು ಉಗುಳುತ್ತ ಬಂದ ನರಸಿಂಹ ||1|| ಬಿಗಿ ಬಿಗಿ ಬಿಗಿದು ಹುಬ್ಬುಗಂಟನೆ ಹಾಕಿ | ಹೊಗೆ ಹೊಗೆ ಹೊಗೆ ಸುತ್ತಿ ಸರ್ವರಂಜೆ || ನೆಗ ನೆಗ ನೆಗ ನೆಗದು ಕುಪ್ಪಳಿಸಿ ಅಸುರನ್ನ | ಮಗು ಮಗು ಮಗು ಮಗು

ಭಳಿರೆ ಭಳಿರೆ ನರಸಿಂಹ ಮಹಾಸಿಂಹ | Read More »

ಭಳಿರೆ ತಿರುಪತಿ ತಿಮ್ಮಾ

ಭಳಿರೆ ತಿರುಪತಿ ತಿಮ್ಮಾ | ಛಲ ಮಾಡುವ ಲೀಲೆಗಳರಿನ್ನಾರನು ಕಾಣಿನೊ | ಇಳಿಯೊಳಗೆ ಬಿರಿದು ಸಲ್ಲುವದು ನಿಜ ಭಕ್ತವ | ತ್ಸಲನೆಂಬೊ ನಾಮವನು ಧ್ವಜವೆತ್ತಿ ಮೆರವುವದೊ ಅತಿಶ್ರೇಷ್ಠನಾಗಿ ಕೀರ್ತಿ ಪಡೆÀದು ಪಸರಿಸಿ | ಪ್ರತಿಯಿಲ್ಲ ಎನಿಸಿಕೊಂಬೆ ನಾ | ಸತತವನು ಪರರಾಶೆ ಮಾಡದಲೆ | ಚತುರತನ ಚತುರೋಪಾಯದಿ ಬಾಳುವೆ | ಕ್ಷಿತಿಯೊಳಗೆ ಅಭಿಮಾನ ಕ್ಷಿತಿಯಾಗದಂತೆ ಸು | ಮತಿಗಳಿಂದಲಿ ಬದುಕುವೆ | ಸುತ ಸಹೋದರ ನಡುವೆ | ಲತೆವೊಲು ಬೆಳದು ಬಲು | ಅತುಳ ಬಲವಂತನೆನೆಸುವೆನೆಂದು ಇದ್ದೆನಲ್ಲನೆ

ಭಳಿರೆ ತಿರುಪತಿ ತಿಮ್ಮಾ Read More »

ಭಜಿಸಿರೊ ಬಿಡದೆ ವಿರಾಜಮಾನರಾಗಿ

ಭಜಿಸಿರೊ ಬಿಡದೆ ವಿರಾಜಮಾನರಾಗಿ ನಿತ್ಯ ಕುಜನರೊಳಾಡದಲೆ ನಿಜ ಭಕುತಿಯಿಂದ ಭುಜಬಲವುಳ್ಳ ಪರಜರಟ್ಟುವ ದಿ ಗ್ವಿಜಯ ಸತ್ಯಪೂರ್ಣರ ಸುಜನರೊಂದಾಗಿಪ ಭರದಿಂದ ಬಂದು ನಿಂದು ನಿರೀಕ್ಷಿಸಿ ನಿರ್ಮಳ ಕರಯುಗಳ ಮುಗಿದು ಶಿರವಾನಿಲ್ಲದೆ ಧರಣಿಯಾ ಮ್ಯಾಲೊಂದು ತೀವರ ಸಾಷ್ಟಾಂಗ ನಮ ಸ್ಕರಿಸಿ ಕೊಂಡಾಡಿ ನಿಂದಿರಲಾನರರಿಗೆಲ್ಲ ಪರಿಹರವೊ ಬಂದರಘಳಿಗೆಯಲಿ ಪರಿಪರಿ ಜನ್ಮದ ತರತÀರದಘಗಳು ಸರಿಯೆನ್ನಬಹುದಿವರ ದರ್ಶನ ಲಾಭ ದುರುಳರಿಗಾಯ್ತು ಮರಿಯದೆ ಚೆನ್ನಾಗಿ||1|| ನೆರೆನಂಬಿ ನಿಮ್ಮಯ ಗೋತುರ ಸಹಿತಕ್ಕೆ ನಾಂ ಕುರವಾಗುವುದು ಇದು ಉರುಕಾಲ ಸಿದ್ಧವೆನ್ನಿ ತರತಮ್ಯ ತತ್ವ ತಾತ್ಪರಿಯ ವಿಧ ತಿಳಿದು ತಿರಗುವರನುದಿನ

ಭಜಿಸಿರೊ ಬಿಡದೆ ವಿರಾಜಮಾನರಾಗಿ Read More »

ಭಜಿಸಿದ್ಯಾ ವೆಂಕಟನಾ ನೀ

ಭಜಿಸಿದ್ಯಾ | ವೆಂಕಟನಾ ನೀ | ಭಜಿಸಿದ್ಯಾ ಭಜಿಸಿದ್ಯ ಈ ಭಾಗ್ಯನಿಧಿಯ | ನೋಡು | ತ್ರಿಜಗವಂದಿತ ಗುಣಾಂಬುಧಿಯಾ ||ಆಹ|| ಸುಜನರ ಹೃದಯ ಪಂಕಜ ಕರ್ಣಿಕೆ ವಾಸ | ಅಜ ಸುರಾರ್ಚಿತ ಪಾದರಜ ತಮದೂರನ್ನ ಮಣಿಮಯ ಖಚಿತ ಕಿರೀಟ ಚಂದ್ರ ಮನ ಸೋಲಿಸುವ ಸುಲಲಾಟ | ಚನ್ನ | ಫಣಿಗೆ ಕಸ್ತೂರಿನಾಮ ಮಾಟ | ನ ಮ್ಮನು ಪಾಲಿಸುವ ವಾರೆನೋಟ |ಆಹ| ಕನಕ ಮೋಹನ ಕುಂಡಲಾ ಕರ್ಣ ಮಿನುಗುವ ಕದವು ಆವಿನ ಸೋಲಿಪ ನಿತ್ಯಾ||1|| ಭೃಂಗಕುಂತಳ ನೀಲಕೇಶ

ಭಜಿಸಿದ್ಯಾ ವೆಂಕಟನಾ ನೀ Read More »