ಭಜನೆಗಳು

ಸಿರಿ ವಾಣಿ ಗೌರಿ

ಸಿರಿ ವಾಣಿ ಗೌರಿ ಹೇ ಶಾರದಾಂಬೆ ಸೂತ್ರಧಾರಿಣಿ ಜಗವೇ ಬೊಂಬೆ|| ಶ್ರೀರಾಮಕೃಷ್ಣರಿಂ ಪೂಜಿತೇ ಮಾತೇ ಪರಾಶಕ್ತಿ ಪರಮೇಶ್ವರದಯಿತೇ|| ದಯಾಸಾಗರೇ ರಕ್ಷಿಸು ಎನ್ನನು ಸ್ಮಯದಿಂ ಭಯದಿಂ ದೂಷಿತಶಿಶುವನು| ಭವಸಾಗರದಿಂ ಕಾಪಿಡು ಜನರನು ಅವನೀಕುವರಿ ನೀಡುತ ಕರವನು|| —-ಸ್ವಾಮಿ ಹರ್ಷಾನಂದ

ಸಿರಿ ವಾಣಿ ಗೌರಿ Read More »

ಸಿರಿ ರಾಮಕೃಷ್ಣ ಚರಣತಲದಿ

ಸಿರಿ ರಾಮಕೃಷ್ಣ ಚರಣತಲದಿ ಶರಣೆನು ಮನವೇ|| ಸಕಲ ತೀರ್ಥ ಸಕಲ ಶಾಸ್ತ್ರ ಸಾರ ನೀನಹೆ| ನಿಖಿಲ ಭಕುತ ಹೃದಯಕಮಲ ತರಣಿ ನೀನಹೆ|ಎನುತ|| ಪ್ರೇಮ ಭಕುತಿ ಕಲಿಯುಗದಲಿ ತಾರಕ ಶಕುತಿ| ಪ್ರೇಮರೂಪ ಪ್ರೇಮಾನಂದ ಮಂಗಲ ಮೂರುತಿ|ಎನುತ|| ದಕ್ಷಿಣೇಶ್ವರ ಲೀಲಾಕ್ಷೇತ್ರ ಪರಮಪವಿತ್ರ|ಮು- ಮುಕ್ಷ ಜನರ ಮುದದಿ ಕರೆದೆ ನೀನೆ ಸುಮಿತ್ರ|ಎನುತ||

ಸಿರಿ ರಾಮಕೃಷ್ಣ ಚರಣತಲದಿ Read More »

ಸಾರದ ರೂಪ ತಾಳಿ

ಸಾರದ ರೂಪತಾಳಿ ಬಂದಿಹಳು ತಾಯಿ ಕಾಳಿ ಅದನರಿತೆ ರಾಮಕೃಷ್ಣ ಪೂಜಿಸಿದರು ಭಾವ ತಾಳಿ|| ಆದ್ಯಾಶಕ್ತಿ ನೀ ಮಾತೆ ಸರ್ವಜೀವಮುಕ್ತಿದಾತೆ| ಮಹಾಲಕ್ಷ್ಮೀ ಸರಸ್ವತಿ ಗುಪ್ತರೂಪ ಜ್ಞಾನದಾತೆ|| ಸೀತಾ ರಾಧಾ ಅನ್ನಪೂರ್ಣಾ ಕಾಯ ಪಡೆದ ಭುವಿಯು ಧನ್ಯ| ಪ್ರೇಮದಿಂದ ತಾಯಿಯೆಂದು ಕರೆವ ಮನುಜ ಜಗದಿ ಮಾನ್ಯ|| ದೀನಜನರ ಉದ್ಧರಿಸೆ ದೀನರೂಪ ತಾಳಿ ಬಂದೆ| ಅಭಯೇ ನೀನು ಉಭಯಕರದಿ ಅಭಯವನ್ನು ನೀಡಲೆಂದೆ|| —-ಸ್ವಾಮಿ ಶಾಸ್ತ್ರಾನಂದ

ಸಾರದ ರೂಪ ತಾಳಿ Read More »

ಸಾಗುತಿಹುದು ಚಿತ್ತಭೃಂಗ

ಸಾಗುತಿಹುದು ಚಿತ್ತಭೃಂಗ ಕಾಳೀಪದ ನೀಲಕಮಲ ಮಧುಪಾನದ ಆಸೆಗೆ| ಸಕಲ ವಿಷಯ-ಕುಸುಮರಸವು ಎಷ್ಟಾದರು ತುಚ್ಚವೆಂದು ತಿಳಿಯಿತಿಂದು ಮನಸಿಗೆ|| ತಾಯ ಪಾದಕಮಲ ನೀಲ ಮಧು ಕುಡಿಯುವ ಭೃಂಗ ನೀಲ ನೀಲದಲ್ಲಿ ನೀಲ ಸೇರಿ ನೀಲವಾದ ಪರಿಯನು ಕಂಡು ಬೆರಗುವಡುವನು|| ಸುಖ ಬಂದರೆ ಹಿಗ್ಗದೆ ನೋವಿನಲ್ಲಿ ಕುಗ್ಗದೆ ಆನಂದಸಿಂಧುವಿನಲಿ ನಿರುತ ತೇಲುತಿರುವನು ಭಕ್ತ ಕಮಲಾಕಾಂತನು|| —-ವಚನವೇದ

ಸಾಗುತಿಹುದು ಚಿತ್ತಭೃಂಗ Read More »

ಸಪ್ತಋಷಿ ಭುವನದಿಂದ

ಸಪ್ತಋಷಿ ಭುವನದಿಂದ ಇಳೆಗಿಳಿದು ಬಂದ| ಶ್ರೀಗುರುದೇವನ ಕಂದ ವಿವೇಕಾನಂದ|| ತ್ಯಾಗವಿರಾಗದ ಕಡಲು ಭೋಗಗಳ ಸಿಡಿಲು| ಜಗಜನರಿಗೆ ತಾಯ್ಮಡಿಲು ಹರನ ನರನೊಡಲು|| ಆತ್ಮಜ್ಞಾನದ ಕಾಂತಿ ಮೋಹದುಪಶಾಂತಿ| ಬಳಲಿದರಿಗೆ ವಿಶ್ರಾಂತಿ ನೀಗಿರುವೆ ಭ್ರಾಂತಿ|| ಮಿರುಗುವ ವಿದ್ಯಾಸೂರ್ಯ ನಿಸ್ಸೀಮವೀರ್ಯ| ಮೇರೆಯ ಅರಿಯದ ಧೈರ್ಯ ಎಸಗೆ ಗುರುಕಾರ್ಯ|| —-ಸ್ವಾಮಿ ತದ್ರೂಪಾನಂದ

ಸಪ್ತಋಷಿ ಭುವನದಿಂದ Read More »

ಸದಾ ಎನ್ನ ಹೃದಯದಲ್ಲಿ

ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ| ನಾದಮೂರ್ತಿ ನಿನ್ನ ಚರಣ ಮೋದದಿಂದ ಭಜಿಸುವೆನೋ|| ಧ್ಯಾನವೆಂಬ ನವರತ್ನದ ಮಂಟಪದ ಮಧ್ಯದಲ್ಲಿ| ಗಾನಲೋಲನ ಕುಳ್ಳಿರಿಸಿ ಜ್ಞಾನದಿಂದ ಭಜಿಸುವೆನೋ|| ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿ| ಮುಕ್ತನಾಗಬೇಕು ಎಂದು ಮುತ್ತಿನ ಆರತಿಯೆತ್ತುವೆನೋ|| ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ| ಘನ್ನಮಹಿಮ ವಿಜಯವಿಟ್ಠಲ ನಿನ್ನ ಭಕ್ತನ ಕೇಳೋ ಸೊಲ್ಲ|| —-ವಿಜಯದಾಸ

ಸದಾ ಎನ್ನ ಹೃದಯದಲ್ಲಿ Read More »

ಸದಾ ಎನ್ನ ನಾಲಿಗೆಯಲಿ

ಸದಾ ಎನ್ನ ನಾಲಿಗೆಯಲಿ ಬರಲಿ ರಾಮನಾಮ|| ಬರಲಿ ರಾಮನಾಮ ಸದಾ ಬರಲಿ ಕೃಷ್ಣ ನಾಮ| ಸತತ ನಿನ್ನ ಚರಣ ಸೇವೆ ನೀಡು ಎನಗೆ ರಾಮ|| ನಿನ್ನ ನಾಮ ನೆನೆವುದಕೆ ಕರುಣಿಸೆನಗೆ ಸುಮನವ| ನಾ ನಿನ್ನ ನಂಬಿದೆ ಶ್ರೀರಾಮಚಂದ್ರ ದೇವ||

ಸದಾ ಎನ್ನ ನಾಲಿಗೆಯಲಿ Read More »

ಸತ್ಯ ಜ್ಞಾನ ತಪೋನಿಧಿಯೇ

ಸತ್ಯ ಜ್ಞಾನ ತಪೋನಿಧಿಯೇ ವೀರ್ಯ ಧೈರ್ಯ ತ್ಯಾಗಗಣಿಯೇ| ಭೃತ್ಯ ಜನರ ನಮನವಿದನು ಸ್ವೀಕರಿಸು ನರೇಂದ್ರಮುನಿಯೇ|| ಭವದ ಭ್ರಾಂತಿ ಬನಣೆ ನೀಗೆ ಹರನೆ ನರನ ವೇಷ ತಾಳ್ದೆ ಕವಿದ ಭ್ರಮೆಯ ಕತ್ತಲಳಿಸಿ ದಿವ್ಯ ಜ್ಞಾನ ಪ್ರಭೆಯ ತೋರ್ದೆ ಶಾಂತಿ ಕಾಂತಿ ನೀಡಿದೆ|| ಹೇಡಿ ಜನರ ಹೃದಯದಲ್ಲಿ ಆತ್ಮಶ್ರದ್ಧೆಶೂನ್ಯರಲ್ಲಿ ಸಿಡಿಲ ಸ್ನಿಗ್ಧ ಮೊಳಗಿನಿಂದ ಶಕ್ತಿ ಶ್ರದ್ಧ ಹೊಳೆ ಹರಿಸಿದೆ ಧೈರ್ಯ ಸ್ಥೈರ್ಯ ಬಿತ್ತಿದೆ|| ಕ್ಲೇಶ ಕಷ್ಟಗ್ರಸ್ತ ಜನಕೆ ಅಮೃತಸುಖದ ಧಾಮವಾದೆ ಈಶರೂಪಿ ರಾಮಕೃಷ್ಣ ಶಿಷ್ಯರತ್ನ ಶಿಖಾಮಣಿಯೇ ಜ್ಞಾನ ಸೌಖ್ಯದಾತನೆ|| —-ಸ್ವಾಮಿ

ಸತ್ಯ ಜ್ಞಾನ ತಪೋನಿಧಿಯೇ Read More »

ಸಕಲಭಯ ತಲ್ಲಣವ

ಸಕಲಭಯ ತಲ್ಲಣವ ಪರಿಹರಿಪ ಮಹಿಮನನು ಒಮ್ಮೆಯಾದರು ಏಕೆ ಕರೆಯದಿರುವೆ| ಭವಘೋರಭ್ರಮೆಯಲ್ಲಿ ನಿನ್ನ ನೀನೇ ಮರೆತೆ ಏನೀ ವಿಡಂಬನೆಯು ನಿನಗೆ ತರವೇ|| ಜನಧನದ ಸಂಗದಲಿ ಅವನ ಮರೆಯದ ತೆರದಿ ಎಚ್ಚರಿರು ಭ್ರಮೆಯನ್ನು ಅತ್ತ ದೂಡು| ನಿಜವನಾರಾಧಿಸಲು ಸರ್ವಪಾಪವಿಮುಕ್ತ ನನ್ನ ಮಾತಿನ ನಿಜವನಳೆದು ನೋಡು|| ಭವಜಲಧಿಯನು ದಾಟಿ ನಡೆವ ಮನವಿರೆ ನಿನಗೆ ಅಳಿಯಾಸೆಗಳ ತೊರೆದು ಹರಿಯ ನುತಿಸು ದೇಹ ಮನ ಪ್ರಾಣಗಳ ಅವನಿಗರ್ಪಿತ ಮಾಡಿ ಪ್ರೇಮದಾರಾಧನೆಗೆ ಮನವ ಸಲಿಸು|| —-ವಚನವೇದ

ಸಕಲಭಯ ತಲ್ಲಣವ Read More »

ಸಕಲಕೆಲ್ಲಕೆ ನೀನೇ

ಸಕಲಕೆಲ್ಲಕೆ ನೀನೇ ಅಕಲಂಕ ಗುರುವೆಂದು ನಿಖಿಲ ಶಾಸ್ತ್ರವು ಪೇಳುತಿರಲರಿದೆನು|| ಅವರವರ ದರುಶನಕೆ ಅವರವರ ದೇಶದಲಿ ಅವರವರಿಗೆಲ್ಲ ಗುರು ನೀನೊಬ್ಬನೇ| ಅವರವರ ಭಾವಕ್ಕೆ, ಅವರವರ ಅರ್ಚನೆಗೆ ಅವರವರಗೆ ದೇವ ನೀನೊಬ್ಬನೇ|| ಹೋರಾಟವಿಕ್ಕಿಸಲು ಬೇರಾದೆಯಲ್ಲದೆ ಬೇರುಂಟೆ ಜಗದೊಳಗೆ ಎಲೆ ದೇವನೇ| ಆರೂ ಅರಿಯರು ನೀನು ಬೇರಾದ ಪರಿಗಳನು ಮಾರಾರಿ ಶಿವ ಷಡಕ್ಷರಿಲಿಂಗವೆ|| —-ಮುಪ್ಪಿನ ಷಡಕ್ಷರಿ

ಸಕಲಕೆಲ್ಲಕೆ ನೀನೇ Read More »

ಶ್ರುತೀನಾಮಗಮ್ಯೇ

ಶ್ರುತೀನಾಮಗಮ್ಯೇ ಸುವೇದಾಗಮಜ್ಞಾ ಮಹಿಮ್ನೋ ನ ಜಾನಂತಿ ಪಾರಂ ತವಾಂಬ| ಸ್ತುತಿಂ ಕರ್ತುಮಿಚ್ಛಾಮಿ ತೇ ತ್ವಂ ಭವಾನೀ ಕ್ಷಮಸ್ವೇದಮತ್ರ ಪ್ರಮುಗ್ಧಃ ಕಿಲಾಹಮ್|| ಗುರುಸ್ತ್ವಂ ಶಿವಸ್ತ್ವಂ ಚ ಶಕ್ತಿಸ್ತ್ವಮೇವ ತ್ವಮೇವಾಸಿ ಮಾತಾ ಪಿತಾ ಚ ತ್ವಮೇವ| ತ್ವಮೇವಾಸಿ ವಿದ್ಯಾ ತ್ವಮೇವಾಸಿ ಬಂಧುಃ ಗತಿರ್ಮೇ ಮತಿರ್ದೇವಿ ಸರ್ವಂ ತ್ವಮೇವ|| ಶರಣ್ಯೇ ವರೇಣ್ಯೇ ಸುಕಾರುಣ್ಯಮೂರ್ತೇ ಹಿರಣ್ಯೋದರಾದ್ಯೈರಗಣ್ಯೇ ಸುಪುಣ್ಯೇ| ಭವಾರಣ್ಯಭೀತೇಶ್ಚ ಮಾಂ ಪಾಹಿ ಭದ್ರೇ ನಮಸ್ತೇ ನಮಸ್ತೇ ನಮಸ್ತೇ ಭವಾನಿ|| —-ಶಂಕರಾಚಾರ್ಯ

ಶ್ರುತೀನಾಮಗಮ್ಯೇ Read More »

ಶ್ರೀಹರಿ ಕಾಯೋ ಕರುಣಾನಿಧೇ

ಶ್ರೀಹರಿ ಕಾಯೋ ಕರುಣಾನಿಧೇ|| ಖಗವರಗಮನ ಕರುಣಾನಿಧೇ|| ಜ್ಞಾನ ಧ್ಯಾನದ ನಿಜ ಸಾಧನವರಿಯೆ| ನೀನೆ ಗತಿಯೆನುತ ಮಾಡುವೆ ನಮನ|| ಘೋರ ಸಂಸಾರದಿ ತಾಪದಿ ನೊಂದೆ| ವಾರಿಭವಭಯಹರ ಅಘಕುಲಶಮನ|| ಗುರು ಮಹೀಪತಿ ಪ್ರಭು ಅನಾಥಬಂಧು| ಚರಣಕಮಲಗಳಲಿರಿಸೆನ್ನ ಮನವ|| —-ಮಹೀಪತಿದಾಸ

ಶ್ರೀಹರಿ ಕಾಯೋ ಕರುಣಾನಿಧೇ Read More »

ಶ್ರೀಶಾರದದೇವಿ ಹೇ ಮಹಾಮಾತೆ

ಶ್ರೀಶಾರದದೇವಿ ಹೇ ಮಹಾಮಾತೆ ಶ್ರೀರಾಮಕೃಷ್ಣ ಗುರುದೇವ ಸಂಪ್ರೀತೆ| ಪರಮಪಾವನಹೃದಯೆ ಕಲಿಯುಗದ ಸೀತೆ ಭಕ್ತಿಯಿಂದಾರಾಧಿಪೆವು ನಿನ್ನನಮ್ಮ|| ಗಗನದಂತಿಹುದಮ್ಮ ನಿನ್ನ ಗಾಂಭೀರ್ಯ ನಿನ್ನ ತೇಜದ ಭಾಗವೀ ನಮ್ಮ ಸೂರ್ಯ| ನೀ ಕಾಳಿ ನೀ ಲಕ್ಷ್ಮಿ ನೀ ಬಿಜ್ಜೆಯಮ್ಮ ಮಕ್ಕಳಾಗಿಹ ನಮ್ಮ ಪೊರೆ ಶಕ್ತಿಯಮ್ಮ|| ಮಹಿಮೆ ಮಹಿಮೆಯನರಿವುದೆಂದೆಂಬರಮ್ಮ ಗುರುವರ್ಯನಂ ತಿಳಿದ ನೀ ಮಹಿಮಳಮ್ಮ| ಪತಿಭಕ್ತಿಯದೆ ಮುಕ್ತಿ ನಿನಗಾಯಿತಮ್ಮ ಪರಶಕ್ತಿ ನೀನಮ್ಮ ನಮ್ಮ ಸಲಹಮ್ಮ|| ನಿನ್ನ ನಾಮವೆ ಜನನಿ ಸುರನದಿಯ ತೀರ್ಥ ಎಲೆ ತಾಯೆ, ನೀನೇ ಪವಿತ್ರತಮ ತೀರ್ಥ| ನಿನ್ನ ಪೂಜೆಯೆ ಭಕ್ತಿ,

ಶ್ರೀಶಾರದದೇವಿ ಹೇ ಮಹಾಮಾತೆ Read More »

ಶ್ರೀರಾಮಚಂದರ ಕೃಪಾಲು

ಶ್ರೀರಾಮಚಂದ್ರ ಕೃಪಾಲು ಭಜ ಮನ ಹರಣಭವಭಯದಾರುಣಂ| ನವಕಂಜಲೋಚನ ಕಂಜಮುಖ ಕರ- ಕಂಜ ಪದಕಂಜಾರುಣಂ|| ಕಂದರ್ಪ ಅಗಣಿತ ಅಮಿತ ಛವಿ ನವನೀಲನೀರದ ಸುಂದರಂ| ಪಟ ಪೀತ ಮಾನಹು ತಡಿತ ರುಚಿ ಶುಚಿ ನೌಮಿ ಜನಕಸುತಾವರಂ|| ಭಜ ದೀನಬಂಧು ದಿನೇಶ ದಾನವ- ದೈತ್ಯವಂಶನಿಕಂದನಂ| ರಘುನಂದ ಆನಂದಕಂದ ಕೌಶಲ ಚಂದ ದಶರಥನಂದನಂ|| ಶಿರಮುಕುಟ ಕುಂಡಲ ತಿಲಕ ಚಾರು ಉದಾರು ಅಂಗವಿಭೂಷಣಂ| ಆಜಾನುಭುಜ ಶರಚಾಪಧರ ಸಂಗ್ರಾಮಜಿತಖರದೂಷಣಂ|| ಇತಿ ವದತ ತುಲಸೀದಾಸ ಶಂಕರ- ಶೇಷಮುನಿಮನರಂಜನಂ| ಮಮ ಹೃದಯಕಂಜ ನಿವಾಸ ಕುರು ಕಾಮಾದಿ ಖಲದಲಗಂಜನಂ|| —-ತುಲಸೀದಾಸ

ಶ್ರೀರಾಮಚಂದರ ಕೃಪಾಲು Read More »

ಶ್ರೀ ರಾಮಕೃಷ್ಣಪ್ರಭೋ ದೇವ

ಶ್ರೀ ರಾಮಕೃಷ್ಣಪ್ರಭೋ ದೇವ||ಪ|| ಆರತಿಯೆತ್ತುವೆ ಹರಿಹರಬ್ರಹ್ಮನೆ||ಅ. ಪ|| ಭವಬಂಧನವನು ಖಂಡಿಸುವವನೆ ನವನವ ರೂಪಧರ|| ಭಕುತರ ಪ್ರೇಮಕೆ ಮಣಿದರು ನಲಿದರು ನಿಷ್ಕಲ ನಿರುಪಮನೆ|| ಸಂಪದ ರಾಜಪದ ಇಂದ್ರಪದ ಈಯದೆ ಶ್ರೀಪದ ಕೊಡು ಹರಿಯೇ|| ಹೃದಯಕಮಲದಲಿ ಸತತವು ನೆಲಸುತ ಮೋದವ ಸುರಿಸು ಗುರೋ|| —-ಸ್ವಾಮಿ ಹರ್ಷಾನಂದ

ಶ್ರೀ ರಾಮಕೃಷ್ಣಪ್ರಭೋ ದೇವ Read More »

ಶ್ರೀ ಮಹಾಗಣಪತಿ

ಶ್ರೀ ಮಹಾಗಣಪತಿರವತುಮಾಂ ಸಿದ್ಧಿವಿನಾಯಕೋ ಮಾತಂಗಮುಖ|| ಕಾಮಜನಕ ವಿಧೀಂದ್ರಸನ್ನುತ ಕಮಲಾಲಯತಟನಿವಾಸೋ ಕೋಮಲತರ ಪಲ್ಲವ ಪದಕರ ಗುರುಗುಹಾಗ್ರಜ ಶಿವಾತ್ಮಜ|| ಸುವರ್ಣಾಲಂಕೃತವಿಘ್ನರಾಜೋ ಪದಾಂಬುಜೋ ಗೌರವರ್ಣವಸನಧರೋ ಫಾಲಚಂದ್ರೋ ನರಾಧಿವಿನುತ ಲಂಬೋದರೋ|| ಕುವಲಯಾಸ್ತ್ರವಿಷಾಣ-ಪಾಶಾಂಕುಶ-ಮೋದಕ ಪ್ರಮೋದಕರೋ, ಭವಜಲಧಿನಾವೋ ಮೂಲಪ್ರಕೃತಿಸ್ವಭಾವಸುಖಚಾರೋ|| ರವಿಸಹಸ್ರಸನ್ನಿಭದೇಹೋ ಕವಿಜನನುತಮೂಷಿಕವಾಹೋ ಅವನತದೇವತಾಸಮೂಹೋ ಅವಿನಾಶಕೈವಲ್ಯಗೇಹೋ|| —-ಮುತ್ತುಸ್ವಾಮಿ ದೀಕ್ಷಿತ

ಶ್ರೀ ಮಹಾಗಣಪತಿ Read More »

ಶ್ರೀ ಪತಿಯು ನಮಗೆ

ಶ್ರೀಪತಿಯು ನಮಗೆ ಸಂಪದವೀಯಲಿ ವಾಣೀಪತಿಯು ನಮಗೆ ದೀರ್ಘಾಯು ಕೊಡಲಿ|| ವರವಿಬುಧರನು ಪೊರೆಯೆ ವಿಷವ ಕಂಠದಲಿಟ್ಟ ಹರ ನಿತ್ಯ ನಮಗೆ ರಕ್ಷಣೆ ನೀಡಲಿ| ನರರೊಳುನ್ನತವಾದ ನಿತ್ಯ ಭೋಗಂಗಳನು ಪುರಹೂತ ದಯದಿಂದ ಪೂರ್ಣಮಾಡಿಸಲಿ|| ವಿನುತಸಿದ್ಧಿಪ್ರದನು ವಿಘ್ನೇಶ ದಯದಿಂದ ನೆನೆದ ಕಾರ್ಯಗಳ ನೆರೆವೇರಿಸಲಿ ಹರಸಿ| ದಿನದಿನವು ಧನ್ವಂತ್ರಿಯಾಪತ್ತುಗಳ ಕಳೆದು ಮನಹರುಷವಿತ್ತು ಮನ್ನಿಸಲಿ ಬಿಡದೆ|| ನಿರುತ ಸುಜ್ಞಾನವನು ಬೆಳಗಿ ಕೃಪೆಗೈಯುವ ಗುರುಗಳಾಶೀರ್ವಾದ ನಮಗಾಗಲಿ| ಪುರಂದರವಿಟ್ಠಲನ ಕರುಣದಿಂದಲಿ ಸಕಲ ಸುರರೊಲುಮೆ ನಮಗೆ ಸುಸ್ಥಿರವಾಗಲಿ|| —-ಪುರಂದರದಾಸ

ಶ್ರೀ ಪತಿಯು ನಮಗೆ Read More »

ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ

ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ ಕೃಪಾಕರಿ ಶಂಕರಿ| ಶ್ರಿತಜನಪಾಲಿನಿ ಮಹಾಬಲಾದ್ರಿವಾಸಿನಿ ಮಹಿಷಾಸುರಮರ್ದಿನಿ|| ವಾಚಾಮಗೋಚರ-ಮಹಿಮವಿರಾಜಿತೇ ವರಗುಣಭರಿತೇ| ವಾಕ್ಪತಿಮುಖಸುರವಂದಿತೇ ವಾಸುದೇವ-ಸಹಜಾತೇ|| ರಾಕಾ-ನಿಶಾಕರ-ಸನ್ನಿಭವದನೇ ರಾಜೀವಲೋಚನೇ| ರಮಣೀಯ- ಕುಂದರದನೇ | ರಕ್ಷಿತಭುವನೇ ಮಣಿರಸನೇ|| ಮೂಕವಾಕ್ಪ್ರದಾನವಿಖ್ಯಾತೇ ಮುನಿಜನನುತ-ಸುಪ್ರೀತೇ| ಶ್ರೀಕರ-ತಾರಕ-ಮಂತ್ರಪೋಷಿತ -ಚಿತ್ತೇ ಸದಾ ನಮಸ್ತೇ|| —-ಮೈ.ವಾಸುದೇವಾಚಾರ್ಯ

ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ Read More »

ಶ್ರದ್ಧೆಯ ಸರೋವರದಿ

ಶ್ರದ್ಧೆಯ ಸರೋವರದಿ ತಾಯ ನಾಮದ ನೌಕೆ ತೇಲುತಿದೆ ನೋಡು| ಗುರುಕರುಣೆಯಲಿ ಕಲಿತ ಸಾಧನಾದಿಗಳಿಂದ ಭವಜಲಧಿ ಪಾರವನು ಸೇರಬಹುದು ನಾವು|| ಮೃತ್ಯುಂಜಯನೆ ತಾನು ಹುಟ್ಟುಹಾಕುತಲಿರಲು ಬಿರುಗಾಳಿಯಲಿ ನೌಕೆ ಮುಳುಗಿ ಹೋಗುವುದೆಂಬ ಭಯವೇಕೆ ನಿನಗೆ| ತಾಯ ಶ್ರೀಪಾದವನೆ ನಂಬಿದವಗೆ|| —-ವಚನವೇದ

ಶ್ರದ್ಧೆಯ ಸರೋವರದಿ Read More »

ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ

ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ ಆಯೇ ಧಾಮಾನಿ ದಿವ್ಯಾನಿ ತಸ್ಥುಃ ವೇದಾಹಮೇತಂ ಪುರುಷಂ ಮಹಾಂತಂ ಆದಿತ್ಯವರ್ಣಂ ತಮಸಃ ಪರಸ್ತಾತ್ ತಮೇವ ವಿದಿತ್ವಾ ಅತಿಮೃತ್ಯುಮೇತಿ ನಾನ್ಯಃ ಪಂಥಾ ವಿದ್ಯತೇಯನಾಯ||

ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ Read More »

ಶುಭಕರ ಸುಂದರ ನಿನ್ನ ದರುಶನ

ಶುಭಕರ ಸುಂದರ ನಿನ್ನ ದರುಶನ ಶೋಭಿಸುತಿದೆ ಕರುಣಾರುಣ ವದನ|| ನಾನಾ ಭಾವ ಸುಧಾರ್ಣವ ನೀನು ನಾನಾ ಯೋಗ ಸಮಾಗಮ ನೀನು|| ಕಮಲಾನನ ಕಮಲದಳನಯನ ಕಲಿಮಲಹರಣ ಸಿರಿ ರಾಮಕೃಷ್ಣ ರಸಮಯ ನಿನ್ನ ಸುಮಧುರ ವಚನ ಮನ ತಣಿಸುವ ಮಲಯಾಚಲ ಪವನ ರಾಮಕೃಷ್ಣ ಜಯ ಜಯ ಧ್ವನಿ ತಾನ ಪ್ರೇಮಾನಂದ ಮನೋಹರ ಗಾನ||

ಶುಭಕರ ಸುಂದರ ನಿನ್ನ ದರುಶನ Read More »

ಶಿವ ಶಿವ ಭವ ಭವ ಶರಣಂ

ಶಿವ ಶಿವ ಭವ ಭವ ಶರಣಂ- ಮಮ ಭವತು ಸದಾ ತವ ಸ್ಮರಣಂ|| ಗಂಗಾಧರ ಚಂದ್ರಚೂಡ—ಜಗ- ನ್ಮಂಗಲ ವಿಶ್ವನೀಡ|| ಕೈಲಾಸಾಚಲವಾಸ—ಶಿವ- ಕರ ಪುರಹರ ದರಹಾಸ|| ಭಸ್ಮೋದ್ಧೂಲಿತ ದೇಹ — ಶಂಭೋ ಪರಮಪುರುಷ ವೃಷವಾಹ|| ಪಂಚಾನನ ಫಣಿಭೂಷ – ಶಿವ ಪರಮಪುರುಷ ಮುನಿವೇಷ|| ಆನಂದನಟನವಿಲೋಲ—ಸಚ್ಚಿ- ದಾನಂದ ವಿಗಲಿತ ಖೇಲ|| ನವವ್ಯಾಕರಣ ಸ್ವಭಾವ — ಶಿವ ನಾರಾಯಣತೀರ್ಥ ದೇವ|| —-ನಾರಾಯಣತೀರ್ಥ

ಶಿವ ಶಿವ ಭವ ಭವ ಶರಣಂ Read More »

ಶಿವ ನಿನ್ನ ಪಾದವ ನಂಬಿದೆ

ಶಿವ ನಿನ್ನ ಪಾದವ ನಂಬಿದೆ| ಎನ್ನ ಕಾಯುವ ಭಾರವು ನಿನ್ನದು ಎಂದೆ|| ನಾನೆಂಬ ಮಮಕಾರದಿಂದೆ| ನಾನಾ ಜನ್ಮವ ತಿರುಗಿ ನಾ ಬಂದೆ| ಗತಿ ಯಾವುದೆನಗಿನ್ನು ತೋರದು ಮುಂದೆ ದೀನರಕ್ಷಕನಯ್ಯೋ ಬಾರಯ್ಯ ತಂದೆ|| ಭಕುತರ ಬಂಟ ನೀನಂತೆ| ಮುನ್ನ ಬಾಣನ ಬಾಗಿಲ ಕಾಯ್ದವನಂತೆ| ಫಾಲಲೋಚನ ನಿನ್ನ ಭಜಿಸಿದ ಉಪಮನ್ಯು ಕ್ಷೀರವಾರಿಧಿಯಿತ್ತು ಸಲಹಿದೆ ತಂದೆ||

ಶಿವ ನಿನ್ನ ಪಾದವ ನಂಬಿದೆ Read More »

ಶಿವನ ಭಜಿಸಿರೋ

ಶಿವನ ಭಜಿಸಿರೋ (ಪರ) ಶಿವನ… (ಉಮಾ) ಧವನ ಭಜಿಸಿರೋ|| ಶಿವನ ಭವನ ಉಮಾಧವನ ಧವಳಾಂಗನ ದಯಾಘನನ| ಭವದೂರನ ಭಕ್ತಪ್ರಿಯನ ಕವಿಗೇಯನ ಕಾಮಹರನ|| ಶಿವನ… ವ್ಯೋಮಕೇಶ ಕಾಮೇಶ್ವರ ಭೂಮಭದ್ರಗಿರಿನಿವಾಸ| ರಾಮನಾಮ ನೇಮದಿಂದ ಭಾಮೆಗೊರೆದ ವಾಮದೇವನ|| ಕಾಲರೂಪ ನೀಲಕಂಠ ಮೂಲನಾರಾಯಣನ ಭಕುತ| ವ್ಯಾಲಭೂಷ ಆಶುತೋಷ ಫಾಲನೇತ್ರನ ಭಕುತಿಯಿಂದ|| —-ಅಚ್ಯುತದಾಸರು

ಶಿವನ ಭಜಿಸಿರೋ Read More »