ಬಲೋಗೋ ಠಾಕುರ! ಬಲೋನ ಆಮಾರೆ,

ಬಲೋಗೋ ಠಾಕುರ! ಬಲೋನ ಆಮಾರೆ, ಆನಿಲೇ ಏ ಕಾರೇ ಸಾಥೇ ತೋಮಾರ।ಬ್ರಹ್ಮತೇಜದೀಪ್ತ ಆನನ ಪುರುಷಸಿಂಹ ಕೆ ಏ ಕುಮಾರ॥ಬೀರೇಶ್ವರ ಅಮಿತಬೀರ್ಯ, ಸುರ-ಸೇನಾಪತಿ ಜಿನಿಯಾ ಶೌರ್ಯ।ಜ್ಞಾನೇ ಗರೀಯಾನ, ತಾಪಸ-ಪ್ರಧಾನ, ಪ್ರೇಮೇ ಭಾಸಮಾನ ನಯನ ತಾರ॥ತ್ಯಾಗೇ ಶುಕದೇವ, ಪ್ರೇಮೇತೇ ನಾರದ, ಬುದ್ಧೇರ್ ಮಾತೋ ಹೃದಯ ಜಾರ್।ಜ್ಞಾನೇ ಶಿವಗುರು-ಶಂಕರ-ಸಮ, ಸೇ ಕೇನ ಲೂಟಾಯ್ ಪದೇ ತೋಮಾರ?ಹುಂಕಾರೇ ಜಾರ್ ಕಾಪೇ ತ್ರಿಭುಬನ, ಸೇ ಕೇನ ಮಾಗಿಚೇ ತೋಮಾರ ಶರಣ?ತೋಮಾರಿ ಆಶಿಸ ಕರಿಯಾ ಧಾರಣ, ಸೇ ಕಿ ಗೋ ಹರಿಬೇ ಧರಾರ ಭಾರ॥ —ಸ್ವಾಮಿ […]

ಬಲೋಗೋ ಠಾಕುರ! ಬಲೋನ ಆಮಾರೆ, Read More »

ಬೀರದರ್ಪೇ ವಿಜಯ್ ಗಾವೋ ಹೇ

ಇಮನಕಲ್ಯಾಣ್—ತೇವೊಡಾ ಬೀರದರ್ಪೇ ವಿಜಯ್ ಗಾವೋ ಹೇ, ನಿಖಿಲ ಭಾರತ ಪದೇ ಲುಟಾವೋ ಹೇ।ದೀರ್ಘ ಸೂಪ್ತಿ ಸ್ವಾರ್ಥ ತೃಪ್ತಿ ದೂರೆ ಗುಚಾವೋ ಹೇ॥ಭಿಕ್ಷಾವೃತ್ತಿ ಕೌಪೀನ-ಬಾಸ, ವೇದ ಗೌರವ ಕರೀ ಪ್ರಕಾಶ,ಭ್ರಮಿಲಾ ಧರಣೀ ತ್ಯಜೀ ಆಬಾಸ,ಮಾಥೇ ತುಮಿ ತಾರೆ ಲವೋ ಹೇ॥ಯುಗ-ಯುಗಾಂತ ನಿದ್ರಾತುರ, ಶುನೋ ಹೇ ಭಾರತ ಭೈರವ ಸುರ,ಅಗೌರವ ಸೇ ಕರೇಚೇ ದೂರ್, ಶಿರ ತುಲಿ ದಾಂಡಾವೋ ಹೇ॥ಪೂಜಿಚೇ ಪಶ್ಚಿಮ, ಪೂಜಿಚೇ ಪೂರವ, ಜಯ್ ಜಯ್ ರವ್ ಉಠಿಚೇ,ನವ ನವ ಕೀರ್ತಿಗಾಥಾ ಗಾವೋ ಹೇ॥ —ಸ್ವಾಮಿ ಪ್ರೇಮೇಶಾನಂದ

ಬೀರದರ್ಪೇ ವಿಜಯ್ ಗಾವೋ ಹೇ Read More »

ಬಿಬೇಕಾನಂದ ಬಿಬೇಕ-ಭಾಸ್ಕರ ಉದಿಲ ಭಾರತೇ

ಆಶಾಬರೀ-ತೇವ್ರಾ ಬಿಬೇಕಾನಂದ ಬಿಬೇಕ-ಭಾಸ್ಕರ ಉದಿಲ ಭಾರತೇ ನಿಬಾರಿ’ ಆಂಧಾರ।ಐ ಹೆರ ನಬ ಅರುಣಕಿರಣೇ ಹರಷೇ ಧರಣೀ ಹಾಸೇ ಆಬಾರ॥ ಕಮಲಲೋಚನ ಮೂರತಿ ಮೋಹನ,ರತಿಪತಿ ಜಿನಿ’ ರೂಪ ಅನೂಪಮ,ಬಾರೇಕ ಹೆರಿಲೇ ಹರೇ ಚಿತ ಮನ,ನಯನ ಫಿರಿತೇ ಚಾಹೇ ನ ಆರ॥ ಸನ್ನ್ಯಾಸೀ ತುಮೀ ಬಿಷಯ-ಬಿರಾಗೀ,ತಬ ಚೋಕೇ ಜಲ ಬಲೋ ಕಾರ ಲಾಗಿ?ಆಪನಾ ಮುಕ್ತಿ-ಸಾಧನಾ ತೇಯಾಗೀ’ಜೀಬ-ದುಖೇ ಢಾಲೋ ನಯನಧಾರ॥ ಮಾಭೈಃ ಮಾಭೈಃ ಗರಜಿ’ ಸಘನೇಜಾಗಾಲೇ ಸುಪ್ತ ಶಂಕಿತ ಜನೇ,ನರೇರ್ ಮಜಾರೆ ಪೂಜೀ’ ನಾರಾಯಣೇಯುಗೇರ್ ಸಾಧನಾ ಕರಿಲೇ ಪ್ರಚಾರ॥ —ಸ್ವಾಮೀ ಚಂಡಿಕಾನಂದ

ಬಿಬೇಕಾನಂದ ಬಿಬೇಕ-ಭಾಸ್ಕರ ಉದಿಲ ಭಾರತೇ Read More »

ಬೇಗ ಬಾರೈ ದೇವದೇವ

ಪಹಾಡಿ – ತ್ರಿತಾಳ ಬೇಗ ಬಾರೈ ದೇವದೇವ ದೀನಬಂಧು ರಾಮಕೃಷ್ಣ ಎನ್ನ ಹೃದಯ ತಪಿಸುತಿಹುದು ಇನಿತು ಸುಧೆಯ ಕರುಣಿಸೈ  || ನಿನ್ನ ಮಹಿಮೆಯ ಕೇಳಿರುವೆನು ಆದರೂ ಮನವು ಅರಿಯದು.|| ನಿನ್ನ ನೀನೇ ತೋರು ಎನಗೆ ಅನ್ಯ ಉಪಾಯ ಕಾಣೆನು || – ಸ್ವಾಮಿ ಪುರುಷೋತ್ತಮಾನಂದ

ಬೇಗ ಬಾರೈ ದೇವದೇವ Read More »

ಬೀತಗಯೇ ದಿನ ಭಜನ

ಬೀತಗಯೇ ದಿನ ಭಜನ ಬಿನಾ ರೇ || ಬಾಲ ಅವಸ್ಥಾ ಖೇಲ ಗವಾಯೋ ಜಬ್ ಜೋಬನ ತಬ್ ಮಾನ ಧನಾ ರೇ || ಲಾಹೇ ಕಾರನ ಮೂಲ್ ಗವಾಯೋ ಅಜಹು ನ ಗಯೀ ಮನ ಕೀ ತೃಸನಾ ರೇ ಕಹತ ಕಬೀರ ಸುನೋ ಭಾಯೀ ಸಾಧೋ ಪಾರ್ ಉತರ ಗಯೇ ಸಂತ ಜನಾ ರೇ || -ಕಬೀರದಾಸ

ಬೀತಗಯೇ ದಿನ ಭಜನ Read More »

ಬಿಡು ಬಿಡು ಸಂಗವ, ಸುಡುಸುಡು ವಿಷಯವ,

ಬಿಡು ಬಿಡು ಸಂಗವ, ಸುಡುಸುಡು ವಿಷಯವ, ಎನ್ನೊಡೆಯರು ಬಾಗಿಲಿಗೆ ಬಂದರು, ತಡೆಯದಿರಾ ಮರುಳೆ. ಹಡಿಕೆಯ ಸಂಸಾರದ ಸುಖವ ಕಡೆಯಲ್ಲಿ ಹೇಸಿ, ಇದಕ್ಕೆ ಹಿಡಿಯದಿರು ಸೆರಗನು. ಚೆನ್ನಮಲ್ಲಿಕಾರ್ಜುನದೇವರು ಮನೆಗೆ ಬಂದಲ್ಲಿ ಇದಿರೇಳದಿರ್ದಡೆ ನಾಯಕ ನರಕ.

ಬಿಡು ಬಿಡು ಸಂಗವ, ಸುಡುಸುಡು ವಿಷಯವ, Read More »

ಬಿಟ್ಟೆನೆಂದಡೆ ಬಿಡದೀ ಮಾಯೆ,

ಬಿಟ್ಟೆನೆಂದಡೆ ಬಿಡದೀ ಮಾಯೆ, ಬಿಡದಿದ್ದಡೆ ಬೆಂಬತ್ತಿತ್ತು ಮಾಯೆ. ಯೋಗಿಗೆ ಯೋಗಿಣಿಯಾಯಿತ್ತು ಮಾಯೆ, ಸವಣಂಗೆ ಸವಣಿಯಾಯಿತ್ತು ಮಾಯೆ. ಯತಿಗೆ ಪರಾಕಿಯಾಯಿತ್ತು ಮಾಯೆ. ನಿನ್ನ ಮಾಯೆಗೆ ನಾನಂಜುವಳಲ್ಲ, ಚೆನ್ನಮಲ್ಲಿಕಾರ್ಜುನದೇವಾ, ನಿಮ್ಮಾಣೆ.

ಬಿಟ್ಟೆನೆಂದಡೆ ಬಿಡದೀ ಮಾಯೆ, Read More »

ಬೋಳೆಯನೆಂದು ನಂಬಬೇಡ,

ಬೋಳೆಯನೆಂದು ನಂಬಬೇಡ, ಢಾಳಕನವನು ಜಗದ ಬಿನ್ನಾಣಿ. ಬಾಣ ಮಯೂರ ಕಾಳಿದಾಸ ಓಹಿಲ ಉದ್ಭಟ ಮಲುಹಣರವರಿಗಿತ್ತ ಪರಿ ಬೇರೆ. ಮುಕ್ತಿಯ ತೋರಿ, ಭಕ್ತಿಯ ಮರೆಸಿಕೊಂಬ ಚೆನ್ನಮಲ್ಲಿಕಾರ್ಜುನನು.

ಬೋಳೆಯನೆಂದು ನಂಬಬೇಡ, Read More »

ಬೆಟ್ಟದ ಮೇಲೊಂದು ಮನೆಯ ಮಾಡಿ,

ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯಾ ? ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದಡೆಂತಯ್ಯಾ ? ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದಡೆಂತಯ್ಯಾ ? ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ, ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.

ಬೆಟ್ಟದ ಮೇಲೊಂದು ಮನೆಯ ಮಾಡಿ, Read More »

ಬೆಟ್ಟಕ್ಕೆ ಸಾರವಿಲ್ಲೆಂಬರು

ಬೆಟ್ಟಕ್ಕೆ ಸಾರವಿಲ್ಲೆಂಬರು ತರುಗಳು ಹುಟ್ಟುವಪರಿ ಇನ್ನೆಂತಯ್ಯಾ ? ಇದ್ದಲಿಗೆ ರಸವಿಲ್ಲೆಂಬರು ; ಕಬ್ಬುನ ಕರಗುವಪರಿ ಇನ್ನೆಂತಯ್ಯಾ ? ಎನಗೆ ಕಾಯವಿಲ್ಲೆಂಬರು ; ಚೆನ್ನಮಲ್ಲಿಕಾರ್ಜುನನೊಲಿವಪರಿ ಇನ್ನೆಂತಯ್ಯಾ ?

ಬೆಟ್ಟಕ್ಕೆ ಸಾರವಿಲ್ಲೆಂಬರು Read More »

ಬಾರದ ಭವಂಗಳಲ್ಲಿ ಬಂದೆನಯ್ಯಾ.

ಬಾರದ ಭವಂಗಳಲ್ಲಿ ಬಂದೆನಯ್ಯಾ. ಕಡೆಯಿಲ್ಲದ ತಾಪಂಗಳಲ್ಲಿ ನೊಂದು ನಿಮ್ಮ ಕರುಣೆಗೆ ಬಳಿಸಂದೆನಯ್ಯಾ. ಇದು ಕಾರಣ ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗೆ ತನುವನುವಾಗಿ ಮನಮಾರುವೋಗೆ ಮತ್ತಿಲ್ಲದ ತವಕದ ಸ್ನೇಹಕ್ಕೆ ತೆರಹಿನ್ನೆಂತು ಹೇಳಾ ತಂದೆ ?||

ಬಾರದ ಭವಂಗಳಲ್ಲಿ ಬಂದೆನಯ್ಯಾ. Read More »

ಬಸವನ ಭಕ್ತಿ ಕೊಟ್ಟಣದಮನೆ.

ಬಸವನ ಭಕ್ತಿ ಕೊಟ್ಟಣದಮನೆ. ಸಿರಿಯಾಳನ ಭಕ್ತಿ ಕಸಬುಗೇರಿ. ಸಿಂಧುಬಲ್ಲಾಳನ ಭಕ್ತಿ ಪರದಾರದ್ರೋಹ. ಉಳಿದಾದ ಅಟಮಟ ಉದಾಸೀನ ದಾಸೋಹವ ಮಾಡುವವರ ದೈನ್ಯವೆಂಬ ಭೂತ ಸೋಂಕಿತು. ಮಣ್ಣಿನ ಮನೆಯ ಕಟ್ಟಿ ಮಾಯಾ ಮೋಹಿನಿಯೆಂಬ ಮಹೇಂದ್ರಜಾಲದೊಳಗಾಗಿ ಮಾಡುವ ಮಾಟ. ಭಕ್ತನಲ್ಲಿ ಉಂಡು ಉದ್ದಂಡವೃತ್ತಿಯಲ್ಲಿ ನಡೆವವರು ಶಿವನಲ್ಲ. ಇವರು ದೇವಲೋಕ ಮತ್ರ್ಯಲೋಕಕ್ಕೆ ಹೊರಗು. ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ, ನನ್ನ ಭಕ್ತಿ ನಿನ್ನೊಳಗೈಕ್ಯವಾಯಿತ್ತಾಗಿ ನಿರ್ವಯಲಾದೆ ಕಾಣಾ

ಬಸವನ ಭಕ್ತಿ ಕೊಟ್ಟಣದಮನೆ. Read More »

ಬಸವಣ್ಣಾ, ನಿಮ್ಮಂಗದಾಚಾರವ ಕಂಡು

ಬಸವಣ್ಣಾ, ನಿಮ್ಮಂಗದಾಚಾರವ ಕಂಡು ಎನಗೆ ಲಿಂಗಸಂಗವಾಯಿತ್ತಯ್ಯಾ. ಬಸವಣ್ಣಾ, ನಿಮ್ಮ ಮನದ ಸುe್ಞನವ ಕಂಡು ಎನಗೆ ಜಂಗಮಸಂಬಂಧವಾಯಿತ್ತಯ್ಯಾ. ಬಸವಣ್ಣಾ, ನಿಮ್ಮ ಸದ್ಭಕ್ತಿಯ ತಿಳಿದು ಎನಗೆ ನಿಜವು ಸಾಧ್ಯವಾಯಿತ್ತಯ್ಯಾ. ಚೆನ್ನಮಲ್ಲಿಕಾರ್ಜುನಯ್ಯನ ಹೆಸರಿಟ್ಟ ಗುರು ನೀವಾದ ಕಾರಣ ನಿಮ್ಮ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು ಕಾಣಾ ಸಂಗನಬಸವಣ್ಣಾ.

ಬಸವಣ್ಣಾ, ನಿಮ್ಮಂಗದಾಚಾರವ ಕಂಡು Read More »

ಬಸವಣ್ಣನೆ ಗುರು, ಪ್ರಭುದೇವರೆ ಲಿಂಗ,

ಬಸವಣ್ಣನೆ ಗುರು, ಪ್ರಭುದೇವರೆ ಲಿಂಗ, ಸಿದ್ಧರಾಮಯ್ಯನೆ ಜಂಗಮ, ಮಡಿವಾಳಯ್ಯನೆ ಜಂಗಮ, ಚೆನ್ನಬಸವಣ್ಣನೆನ್ನ ಪರಮಾರಾಧ್ಯರು. ಇನ್ನು ಸುಖಿಯಾದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ.

ಬಸವಣ್ಣನೆ ಗುರು, ಪ್ರಭುದೇವರೆ ಲಿಂಗ, Read More »

ಬಸವಣ್ಣನ ಮನೆಯ ಮಗಳಾದ ಕಾರಣ

ಬಸವಣ್ಣನ ಮನೆಯ ಮಗಳಾದ ಕಾರಣ ಭಕ್ತಿಪ್ರಸಾದವ ಕೊಟ್ಟನು. ಚೆನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ ಒಕ್ಕಪ್ರಸಾದವ ಕೊಟ್ಟನು. ಪ್ರಭುದೇವರ ತೊತ್ತಿನ ತೊತ್ತಿನ ಮರಿದೊತ್ತಿನ ಮಗಳಾದ ಕಾರಣ e್ಞನಪ್ರಸಾದವ ಕೊಟ್ಟನು. ಸಿದ್ಧರಾಮಯ್ಯನ ಶಿಶುಮಗಳಾದ ಕಾರಣ ಪ್ರಾಣಪ್ರಸಾದವ ಸಿದ್ಧಿಸಿಕೊಟ್ಟನು. ಮಡಿವಾಳಯ್ಯನ ಮನೆಯ ಮಗಳಾದ ಕಾರಣ ನಿರ್ಮಲಪ್ರಸಾದವ ನಿಶ್ಚೈಸಿಕೊಟ್ಟನು. ಇಂತೀ ಅಸಂಖ್ಯಾತ ಗಣಂಗಳೆಲ್ಲರು ತಮ್ಮ ಕರುಣದ ಕಂದನೆಂದು ತಲೆದಡಹಿದ ಕಾರಣ ಚೆನ್ನಮಲ್ಲಿಕಾರ್ಜುನಯ್ಯನ ಶ್ರೀಪಾದಕ್ಕೆ ಯೋಗ್ಯಳಾದೆನು.

ಬಸವಣ್ಣನ ಮನೆಯ ಮಗಳಾದ ಕಾರಣ Read More »

ಬಸವಣ್ಣನ ಪಾದವ ಕಂಡೆನಾಗಿ

ಬಸವಣ್ಣನ ಪಾದವ ಕಂಡೆನಾಗಿ ಎನ್ನಂಗ ನಾಸ್ತಿಯಾಯಿತ್ತು. ಚೆನ್ನಬಸವಣ್ಣನ ಪಾದವ ಕಂಡೆನಾಗಿ ಎನ್ನ ಪ್ರಾಣಬಯಲಾಯಿತ್ತು. ಪ್ರಭುವೆ, ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ ಎನ್ನ ಅರಿವು ಸ್ವಯವಾಯಿತ್ತು. ಚೆನ್ನಮಲ್ಲಿಕಾರ್ಜುನದೇವಯ್ಯಾ ನಿಮ್ಮ ಶರಣರ ಕರುಣವ ಪಡೆದೆನಾಗಿ ನಿನಗೆ ಮತ್ತಾವುದಿಲ್ಲವಯ್ಯ ಪ್ರಭುವೆ.

ಬಸವಣ್ಣನ ಪಾದವ ಕಂಡೆನಾಗಿ Read More »

ಬಲ್ಲಿದ ಹಗೆಯವ ತೆಗೆವನ್ನಬರ,

ಬಲ್ಲಿದ ಹಗೆಯವ ತೆಗೆವನ್ನಬರ, ಬಡವರ ಹರಣ ಹಾರಿಹೋದ ತೆರನಂತಾಯಿತ್ತು. ನೀ ಕಾಡಿ ಕಾಡಿ ನೋಡುವನ್ನಬರ, ಎನಗಿದು ವಿಧಿಯೇ ಹೇಳಾ ತಂದೆ ? ಮುರುವಾರುವನ್ನಬರ, ಎಮ್ಮೆ ಗಾಳಿಗೆ ಹಾರಿಹೋದ ತೆರನಂತಾಯಿತ್ತು. ಎನಗೆ ನೀನಾವ ಪರಿಯಲ್ಲಿ ಕರುಣಿಸುವೆಯಯ್ಯಾ ಚೆನ್ನಮಲ್ಲಿಕಾರ್ಜುನಾ ?

ಬಲ್ಲಿದ ಹಗೆಯವ ತೆಗೆವನ್ನಬರ, Read More »

ಬಟ್ಟಿಹ ಮೊಲೆಯ ಭರದ ಜವ್ವನದ ಚಲುವ ಕಂಡು ಬಂದಿರಣ್ಣಾ.

ಬಟ್ಟಿಹ ಮೊಲೆಯ ಭರದ ಜವ್ವನದ ಚಲುವ ಕಂಡು ಬಂದಿರಣ್ಣಾ. ಅಣ್ಣಾ, ನಾನು ಹೆಂಗೂಸಲ್ಲ ; ಅಣ್ಣಾ, ನಾನು ಸೂಳೆಯಲ್ಲ. ಅಣ್ಣಾ, ಮತ್ತೆ ನನ್ನ ಕಂಡು ಕಂಡು ಆರೆಂದು ಬಂದಿರಣ್ಣಾ ? ಚೆನ್ನಮಲ್ಲಿಕಾರ್ಜುನನಲ್ಲದ ಮಿಕ್ಕಿನ ಪರಪುರುಷನು ನಮಗಾಗದ ಮೋರೆ ನೋಡಣ್ಣಾ ?

ಬಟ್ಟಿಹ ಮೊಲೆಯ ಭರದ ಜವ್ವನದ ಚಲುವ ಕಂಡು ಬಂದಿರಣ್ಣಾ. Read More »

ಬಂದಹನೆಂದು ಬಟ್ಟೆಯ ನೋಡಿ,

ಬಂದಹನೆಂದು ಬಟ್ಟೆಯ ನೋಡಿ, ಬಾರದಿದ್ದಡೆ ಕರಗಿ ಕೊರಗಿದೆನವ್ವಾ. ತಡವಾದಡೆ ಬಡವಾದೆ ತಾಯೆ. ಚೆನ್ನಮಲ್ಲಿಕಾರ್ಜುನನ ಒಂದಿರುಳಗಲಿದಡೆ ತಕ್ಕೆಸಡಲಿದ ಜಕ್ಕವಕ್ಕಿಯಂತಾದೆನವ್ವಾ

ಬಂದಹನೆಂದು ಬಟ್ಟೆಯ ನೋಡಿ, Read More »

ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ

ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ ಐವರು ಮಕ್ಕಳು ಜನಿಸಿದರು. ಒಬ್ಬ ಭಾವರೂಪ, ಒಬ್ಬ ಪ್ರಾಣರೂಪ ; ಒಬ್ಬ ಐಮುಖವಾಗಿ ಕಾಯರೂಪಾದ ; ಇಬ್ಬರು ಉತ್ಪತ್ತಿ ಸ್ಥಿತಿಗೆ ಕಾರಣವಾದರು. ಐಮುಖನರಮನೆ ಸುಖವಿಲ್ಲೆಂದು ಕೈಲಾಸವ ಹೊಗೆನು, ಮತ್ರ್ಯಕ್ಕೆ ಅಡಿ ಇಡೆನು ; ಚೆನ್ನಮಲ್ಲಿಕಾರ್ಜುನದೇವಾ, ನೀನೇ ಸಾಕ್ಷಿ.

ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ Read More »

ಬಯಲು ಲಿಂಗವೆಂಬೆನೆ ? ಬಗಿದು ನಡೆವಲ್ಲಿ ಹೋಯಿತ್ತು.

ಬಯಲು ಲಿಂಗವೆಂಬೆನೆ ? ಬಗಿದು ನಡೆವಲ್ಲಿ ಹೋಯಿತ್ತು. ಬೆಟ್ಟ ಲಿಂಗವೆಂಬೆನೆ ? ಮೆಟ್ಟಿ ನಿಂದಲ್ಲಿ ಹೋಯಿತ್ತು. ತರುಮರಾದಿಗಳು ಲಿಂಗವೆಂಬೆನೆ ?ತರಿದಲ್ಲಿ ಹೋಯಿತ್ತು. ಲಿಂಗ ಜಂಗಮದ ಪಾದವೇ ಗತಿಯೆಂದು ನಂಬಿದ ಚೆನ್ನಮಲ್ಲಿಕಾರ್ಜುನಾ, ಸಂಗನಬಸವಣ್ಣನ ಮಾತು ಕೇಳದೆ ಕೆಟ್ಟೆನಯ್ಯಾ.

ಬಯಲು ಲಿಂಗವೆಂಬೆನೆ ? ಬಗಿದು ನಡೆವಲ್ಲಿ ಹೋಯಿತ್ತು. Read More »

ಬಂಜೆ ಬೇನೆಯನರಿವಳೆ ?

ಬಂಜೆ ಬೇನೆಯನರಿವಳೆ ? ಬಲದಾಯಿ ಮದ್ದ ಬಲ್ಲಳೆ ? ನೊಂದವರ ನೋವ ನೋಯದವರೆತ್ತ ಬಲ್ಲರೊ ? ಚೆನ್ನಮಲ್ಲಿಕಾರ್ಜುನಯ್ಯನಿರಿದಲಗು ಒಡಲಲ್ಲಿ ಮುರಿದು ಹೊರಳುವೆನ್ನಳಲನು ನೀವೆತ್ತ ಬಲ್ಲಿರೆ, ಎಲೆ ತಾಯಿಗಳಿರಾ ?

ಬಂಜೆ ಬೇನೆಯನರಿವಳೆ ? Read More »

ಬೇಸರದೆ ಭಜಿಸಿರೋ ಪುರಂದರ

ಬೇಸರದೆ ಭಜಿಸಿರೋ ಪುರಂದರ ದಾಸರಾಯರ ಶ್ರೀಶ ನಿಮ್ಮನು ಉದಾಶೀನ ಮಾಡದೆ ಪೋಷಿಸುವ ಸಂತೋಷದಿಂದಲಿ ಪುರಂದರಗಡಾದ ಒಳಗೆ ಹಿರಿಯ ಸಾವುಕಾರನೆನಸಿ ಪರಿಪರಿಯ ಸೌಖ್ಯಗಳ ಸುರಿಸುತ್ತ ಇರುತಿರಲು ನರಹರಿ ತ್ವರಿತದಿಂ ಬ್ರಾಹ್ಮಣನಾಗುತ್ತ ಕರುಣದಲಿ ಅವರುದ್ಧ್ದರಿಸಲೋಸುಗ ಮನೆಗೆ ಪೋಗುತ್ತ ಯಜಮಾನ ಕಂಡು ಜರಿದು ಬ್ರಾಹ್ಮಣನ್ಹೊರಗೆ ಹಾಕಲು ಮರುದಿವಸ ಮತ್ಹೋಗಿ ನಿಂತ ||1|| ಭಾರಿಭಾರಿಗೆ ಸಾವುಕಾರನ ಮೋರೆಗ್ಹೊತ್ತಿ ಮೇರೆಯಿಲ್ಲದೆ ಆರು ತಿಂಗಳು ಬೆನ್ನು ಬೀಳುತ್ತ ನಾಯಕರು ಈತನ ಆರು ಅಟ್ಯಾರೆಂದು ಬೈಯುತ್ತ ಬೇಸತ್ತು ಎರಡು ಹೇರು ರೊಕ್ಕಾ ಮುಂದೆ ಸುರಿಯುತ್ತ ಅದರೊಳಗೊಂದು ಡ್ಡಾರಿಸಿಕೋ

ಬೇಸರದೆ ಭಜಿಸಿರೋ ಪುರಂದರ Read More »

ಬೇಡುವೆ ಇದನಾ ಜೀಯ್ಯಾ ವೆಂಕಟಾರಾಯ

ಬೇಡುವೆ ಇದನಾ ಜೀಯ್ಯಾ ವೆಂಕಟಾರಾಯ ಮಾಡು ಕರುಣವ ಫಲದಾಯ ಯತಿರತುನತಿ ದಶಮತಿ ಮತದಲಿ ಸ ನ್ನತಿ ಹಿತ ಭಕುತಿಲಿ ಪ್ರತಿದಿನ ಸ ದ್ಗತಿ ಪಥ ಚತುರತೆ ತತುವೇಷ ತತಿಸಮ್ಮತ ಹಿತವಾಗಿಪ್ಪ ಸುಖಮತಿಯನೀಯೋ ||1|| ಬಲಬಲ ಬಲರಿಪು ವೊಲಿದೊಲಿದು ಗಿರಿಯಲಿ ಬಲುವೊಲಿಮೆಲಿ ವೊಲಿಸಬಾರದೇ ಕಳವಳಿಸಲು ಬಲಗುಂದಿ ನಲವು ನಿ ಶ್ಚಲವಾಗಿ ಬಲವಾಗಿ ಗಿರಿಯೆಳದೆಲೊ ಸಲಹಿದಿ ||2|| ತ್ರಿಜಗವೀರ ಧ್ವಜ ಸುಜನರ ನಿಜಪದ ರಜರಜವಾದರು ಭಜಿಸುವ ಸರ್ವದ ವ್ರಜಗಳ ಸಂಗ ದ್ವಿಜನರವಿ ಈ ಮತದಿ ಸೃಜಿಸುವದು ಸಿರಿ ವಿಜಯವಿಠ್ಠಲರೇಯಾ ||3||

ಬೇಡುವೆ ಇದನಾ ಜೀಯ್ಯಾ ವೆಂಕಟಾರಾಯ Read More »

ಬೇಡುವರೊ ಸುಖ ಬೇಡರೊ ದುಃಖವ

ಬೇಡುವರೊ ಸುಖ ಬೇಡರೊ ದುಃಖವ ಮಾಡಾರೋ ಅವರ ಉಪಾಯವ ಜನ ಬೇಡುವರೋ ಇಟ್ಟಿಕಲ್ಲನು ತಂದು ಕಿಟ್ಟಿ ಬೀಸುವರೊ ಕುಟ್ಯಾರೋ ರಂಗವಲ್ಲಿಯಾ ಜನ ||1|| ಸಾಲು ಸಾಲೆಮ್ಮೆಯ ಸೋಲದೆ ತೊಳೆವರು ಸಾಲಿಗ್ರಾಮಕ್ಕ ಹಾಲೆರೆಯರೊ ಜನ ||2|| ತ್ರಿಜಗವಂದಿತ ನಮ್ಮ ವಿಜಯವಿಠ್ಠಲನ ಭಜನೆಯಾ ಮಾಡದೆ ಸೋಲ್ವರೋ ಜನ||3||

ಬೇಡುವರೊ ಸುಖ ಬೇಡರೊ ದುಃಖವ Read More »