ಓ ಬಂದ ಶ್ರೀಗುರು ವಿವೇಕಾನಂದ

ಓ ಬಂದ ಶ್ರೀಗುರು ವಿವೇಕಾನಂದ ಆ ಧ್ರುವಮಂಡಲದಿಂದ !! ಮೊರೆಯುವ ಕಡಲಿಗೆ ಹಾರಿ ಧುಮುಕಿದ ತೆರೆಗಳ ಸೀಳಿದ, ಈಜಿದ, ನುಗ್ಗಿದ ಗಟ್ಟಿ ಬಂಡೆಯಲಿ ಬೇರೂರಿದ ಬಾನೆತ್ತರ ಬೆಳೆದ ಬೆಳಕಿನ ಗೋಪುರವಾದ!! ದಕ್ಷಿಣೇಶ್ವರದ ವಿದ್ಯುತ್ ಕೇಂದ್ರದ ಕೋಶಾಗಾರ ಪೂರ್ವಪಶ್ಚಿಮಕೆ ತಂತಿಯ ಹಾಯಿಸಿ ಕೊಟ್ಟನು ಬೆಳಕಿನ ಆಹಾರ ಕೋಲಂಬೋದಿಂದಾಲ್ಮೊರದ ತನಕವು ಇವನದೆ ಮಿಂಚಿನ ತೇರು ಇವನಡಿಗಳ ನುಡಿಗಳ ಸ್ಪರ್ಶಕೆ ಝಗ್ಗನೆ ಹತ್ತದೆ ಇದ್ದವರಾರು?!! ವಜ್ರದ ಮೈ, ಉಕ್ಕಿನ ನರ, ಕುಡಿಮಿಂಚಿನ ಕಣ್ಣು ಗುಡುಗಿನ ದನಿ, ಹೊನಲಿನ ನಡೆ ಎದೆ ಬೆಳದಿಂಗಳ […]

ಓ ಬಂದ ಶ್ರೀಗುರು ವಿವೇಕಾನಂದ Read More »

ಓದಿ ಓದಿ ವೇದ ವಾದಕ್ಕಿಕ್ಕಿತ್ತು.

ಓದಿ ಓದಿ ವೇದ ವಾದಕ್ಕಿಕ್ಕಿತ್ತು. ಕೇಳಿ ಕೇಳಿ ಶಾಸ್ತ್ರ ಸಂದೇಹಕ್ಕಿಕ್ಕಿತ್ತು. ಅರಿದೆಹೆ ಅರಿದೆಹೆನೆಂದು ಆಗಮ ಅರೆಯಾಗಿ ಹೋಯಿತ್ತು. ಪೂರೈಸಿಹೆ ಪೂರೈಸಿಹೆನೆಂದು ಪುರಾಣ ಪೂರ್ವದ ಬಟ್ಟೆಗೆ ಹೋಯಿತ್ತು. ನಾನೆತ್ತ ತಾನೆತ್ತ ? ಬೊಮ್ಮ ಬಟ್ಟಬಯಲು ಚೆನ್ನಮಲ್ಲಿಕಾರ್ಜುನಾ.

ಓದಿ ಓದಿ ವೇದ ವಾದಕ್ಕಿಕ್ಕಿತ್ತು. Read More »

ಒಳಗ ಶೋದಿಸಿ ಹೊರಗ ಶುದ್ಧಯಿಸಿ

ಒಳಗ ಶೋದಿಸಿ ಹೊರಗ ಶುದ್ಧಯಿಸಿ ಒಳಹೊರಗೆಂಬ ಉಭಯ ಶಂಕೆಯ ಕಳೆದು, ಸ್ಫಟಿಕದ ಶಲಾಕೆಯಂತೆ ತಳವೆಳಗು ಮಾಡಿ ಸುಕ್ಷೇತ್ರವನರಿದು ಬೀಜವ ಬಿತ್ತುವಂತೆ ಶಿಷ್ಯನ ಸರ್ವ ಪ್ರಪಂಚ ನಿವೃತ್ತಿಯಂ ಮಾಡಿ ನಿಜೋಪದೇಶವನಿತ್ತು, ಆ ಶಿಷ್ಯನ ನಿಜದಾದಿಯನೈದಿಸುವನೀಗ ಜ್ಞಾನಗುರು. ಆ ಸಹಜ ಗುರುವೀಗ ಜಗದಾರಾಧ್ಯನು, ಅವನ ಶ್ರೀಪಾದಕ್ಕೆ ನಮೋ ನಮೋ ಎಂಬೆ ಕಾಣಾ ಚೆನ್ನಮಲ್ಲಿಕಾರ್ಜುನಾ.

ಒಳಗ ಶೋದಿಸಿ ಹೊರಗ ಶುದ್ಧಯಿಸಿ Read More »

ಒಲೆಯ ಹೊಕ್ಕು ಉರಿಯ ಮರೆದವಳ,

ಒಲೆಯ ಹೊಕ್ಕು ಉರಿಯ ಮರೆದವಳ, ಮಲೆಯ ಹೊಕ್ಕು ಉಲುಹ ಮರೆದವಳ ನೋಡು ನೋಡಾ. ಸಂಸಾರ ಸಂಬಂಧವ ನೋಡಾ. ಸಂಸಾರ ಸಂಬಂಧ ಭವಭವದಲ್ಲಿ ಬೆನ್ನಿಂದ ಬಿಡದು. ಸರವು ನಿಸ್ಸರವು ಒಂದಾದವಳನು, ಎನ್ನಲೇನ ನೋಡುವಿರಯ್ಯಾ, ಚೆನ್ನಮಲ್ಲಿಕಾರ್ಜುನಯ್ಯ

ಒಲೆಯ ಹೊಕ್ಕು ಉರಿಯ ಮರೆದವಳ, Read More »

ಒಮ್ಮೆ ಕಾಮನ ಕಾಲ ಹಿಡಿವೆ,

ಒಮ್ಮೆ ಕಾಮನ ಕಾಲ ಹಿಡಿವೆ, ಮತ್ತೊಮ್ಮೆ ಚಂದ್ರಮಂಗೆ ಸೆರಗೊಡ್ಡಿ ಬೇಡುವೆ. ಸುಡಲೀ ವಿರಹವ, ನಾನಾರಿಗೆ ಧೃತಿಗೆಡುವೆ ? ಚೆನ್ನಮಲ್ಲಿಕಾರ್ಜುನ ಕಾರಣ ಎಲ್ಲರಿಗೆ ಹಂಗುಗಿತ್ತಿಯಾದೆನವ್ವಾ.

ಒಮ್ಮೆ ಕಾಮನ ಕಾಲ ಹಿಡಿವೆ, Read More »

ಒಬ್ಬಂಗೆ ಇಹವುಂಟು ಒಬ್ಬಂಗೆ ಪರವುಂಟು,

ಒಬ್ಬಂಗೆ ಇಹವುಂಟು ಒಬ್ಬಂಗೆ ಪರವುಂಟು, ಒಬ್ಬಂಗೆ ಇಹವಿಲ್ಲ ಒಬ್ಬಂಗೆ ಪರವಿಲ್ಲ. ಒಬ್ಬಂಗೆ ಇಹಪರವೆರಡೂ ಇಲ್ಲ. ಚೆನ್ನಮಲ್ಲಿಕಾರ್ಜುನದೇವರ ಶರಣರಿಗೆ ಇಹಪರವೆರಡೂ ಉಂಟು.

ಒಬ್ಬಂಗೆ ಇಹವುಂಟು ಒಬ್ಬಂಗೆ ಪರವುಂಟು, Read More »

ಒಪ್ಪುವ ವಿಭೂತಿಯ ನೊಸಲಲ್ಲಿ ಧರಿಸಿ,

ಒಪ್ಪುವ ವಿಭೂತಿಯ ನೊಸಲಲ್ಲಿ ಧರಿಸಿ, ದೃಷ್ಟಿವಾ[ರಿ] ನಿಮ್ಮನೋಡಲೊಡನೆ ಬೆಟ್ಟದಷ್ಟು ತಪ್ಪುಳ್ಳಡೆಯೂ ಮುಟ್ಟಲಮ್ಮವು ನೋಡಾ. ದುರಿತ ಅನ್ಯಾಯವ ಪರಿಹರಿಸಬಲ್ಲಡೆ ‘ಓಂ ನಮಃ ಶಿವಾಯ’ ಶರಣೆಂಬುದೆ ಮಂತ್ರ. ಅದೆಂತೆಂದಡೆ ‘ನಮಃ ಶಿವಾಯೇತಿ ಮಂತ್ರಂ ಯಃ ಕರೋತಿ ತ್ರಿಪುಂಡ್ರಕಂ ಸಪ್ತಜನ್ಮಕೃತಂ ಪಾಪಂ ತತ್‍ಕ್ಷಣಾದೇವ ನಶ್ಯತ್ಬಿ’ ಇಂತೆಂದುದಾಗಿ, ಸಿಂಹದ ಮರಿಯ ಸೀಳ್ನಾಯಿ ತಿಂಬಡೆ ಭಂಗವಿನ್ನಾರದೊ ಚೆನ್ನಮಲ್ಲಿಕಾರ್ಜುನಾ ?

ಒಪ್ಪುವ ವಿಭೂತಿಯ ನೊಸಲಲ್ಲಿ ಧರಿಸಿ, Read More »

ಒಡಲಿಲ್ಲದ ನುಡಿಯಿಲ್ಲದ ಕಡೆಯಿಲ್ಲದ

ಒಡಲಿಲ್ಲದ ನುಡಿಯಿಲ್ಲದ ಕಡೆಯಿಲ್ಲದ ನಲ್ಲನ ಒಡಗೂಡಿ ಸುಖಿಯಾದೆ ಕೇಳಿರಯ್ಯಾ. ಭಾಷೆ ಪೈಸರವಿಲ್ಲ, ಓಸರಿಸೆನನ್ಯಕ್ಕೆ, ಆಸೆ ಮಾಡೆನು ಮತ್ತೆ ಭಿನ್ನ ಸುಖಕ್ಕೆ. ಅರಳಿದು ಮೂರಾಗಿ, ಮೂರಳಿದು ಎರಡಾಗಿ, ಎರಡಳಿದು ಒಂದಾಗಿ ನಿಂದೆನಯ್ಯಾ. ಬಸವಣ್ಣ ಮೊದಲಾದ ಶರಣರಿಗೆ ಶರಣಾರ್ಥಿ ಆ ಪ್ರಭುವಿನಿಂದ ಕೃತಕೃತ್ಯಳಾದೆನು ನಾನು. ಮರೆಯಲಾಗದು, ನಿಮ್ಮ ಶಿಶುವೆಂದು ಎನ್ನನು, ಚೆನ್ನಮಲ್ಲಿಕಾರ್ಜುನನ ಬೆರೆಸೆಂದು ಹರಸುತ್ತಿಹುದು.

ಒಡಲಿಲ್ಲದ ನುಡಿಯಿಲ್ಲದ ಕಡೆಯಿಲ್ಲದ Read More »

ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ

ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ ಎಂಬತ್ತುನಾಲ್ಕುಲಕ್ಷಯೋನಿಯೊಳಗೆ ಬಾರದ ಭವಂಗಳಲ್ಲಿ ಬಂದೆ ಬಂದೆ. ಉಂಡೆ ಉಂಡೆ ಸುಖಾಸುಖಂಗಳ. ಹಿಂದಣ ಜನ್ಮ ತಾನೇನಾದಡೆಯೂ ಆಗಲಿ ಮುಂದೆ ನೀ ಕರುಣಿಸಾ, ಚೆನ್ನಮಲ್ಲಿಕಾರ್ಜುನಾ.

ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ Read More »

ಒಂದರಳ ಶಿವಂಗೆಂದ ಫಲದಿಂದ

ಒಂದರಳ ಶಿವಂಗೆಂದ ಫಲದಿಂದ ಶಿವಪದಂಗಳಾದುದ ಕೇಳಿಯರಿಯಾ ? ಒಂದರಳನೇರಿಸುವಲ್ಲಿ ಅಡ್ಡವಿಸಿದರೆ ಗೊಂದಣದ ಕುಲಕೋಟಿಗೆ ನರಕ ಕಾಣಾ. ಇಂದು ಚೆನ್ನಮಲ್ಲಿಕಾರ್ಜುನನ ವೇಳೆ ತಡೆದಡೆ ಮುಂದೆ ಬಹ ನರಕಕ್ಕೆ ಕಡೆಯಿಲ್ಲ ಮರುಳೆ.

ಒಂದರಳ ಶಿವಂಗೆಂದ ಫಲದಿಂದ Read More »

ಒಳ್ಳೇದೋ ಒಳ್ಳೇದೋ ಎಲ್ಲ

ಒಳ್ಳೇದೋ ಒಳ್ಳೇದೋ ಎಲ್ಲ ಸ್ಥಳವ ಬಿಟ್ಟು | ಇಲ್ಲಿ ಅಡಗಿದ ಬಲ್ಲಿದ ತನವೇ ಬಿಡೆ ಬಿಡೆನೊ ಎನ್ನ ಒಡಿಯ ತಿರುಮಲ ನಿನ್ನ | ಉಡಿಯ ಪೀತಾಂಬರ ಪಿಡಿದು ನಿಲಿಸಿಕೊಂಬೆ ||1|| ಎರವು ಎರವು ಮಾಡಿ ತಿರುಗಿಸಿದಿ ನೀ ಎನ್ನ ಕೊರಳಿಗೆ ನಿನ್ನ ಚರಣ ಕಟ್ಟಿಕೊಂಬೆ ||2|| ಅತ್ತ ಇತ್ತಲಿ ನೋಡಿನೆತ್ತ ಪೋಗಲಿ ಎನ್ನ | ಚಿತ್ತದಲಿ ನಿನ್ನ ಹತ್ತೆಗಟ್ಟಿಕೊಂಬೆ ||3|| ಅತ್ತಿಯ ಮಕ್ಕಳಿಗೆ ತೆತ್ತಿಗ ನೀನಾಗಿ | ವಿತ್ತವಿತ್ತದರಾದ ರಾಸಿ ಸಿರಿಯಲ್ಲಿ ||4|| ಇರಳು ಹಗಲು ಬಿಡದೆ

ಒಳ್ಳೇದೋ ಒಳ್ಳೇದೋ ಎಲ್ಲ Read More »

ಒಲಿದವಳ ಬಿಡುವುದು ಧರ್ಮವಲ್ಲ

ಒಲಿದವಳ ಬಿಡುವುದು ಧರ್ಮವಲ್ಲ | ಚಲುವ ನಿನಗಾಗಿ ನಾ ಯೇಸು ಕಾಲಕೆ ತಪವಿದ್ದೆ ತಂದೆತಾಯಿಗಳಲ್ಲಿ ಪುಟ್ಟಿದಾಕ್ಷಣದಲ್ಲಿ | ಅಂದೆ ನೇಮಿಸಿದರು ಪೆಸರನಿಟ್ಟು | ಸಂದೇಹಗೊಳದಿರು ಮೈಲಿಗೆಯವಳೆಂದು | ಬಂದ ಪ್ರಾಣವÀ ನೋಡು ಬರಿದೆ ಪೇಳುವಳಲ್ಲ ||1|| ಕನ್ಯಾವಸ್ಥಿಯಲಿಂದ ನಿನ ನಿನ್ನ ಧ್ಯಾನವಲ್ಲವೇ | ಅನ್ಯಪುರುಷರಾಪೇಕ್ಷೆ ಮಾಡಲಿಲ್ಲ | ಅನ್ಯಾಯವೇನು ಆಗಲಿ ಪೋಗುವರೇನೊ | ಅನ್ಯಥಾ ಈ ನುಡಿಗೆ ನಿಜಕೆ ನಿಲ್ಲುವೆ ನಾನು ||2|| ಮಲದಲ್ಲಿ ಮೂರುದಿನ ಪೋಗಾಗಿ ಹೋಗಿದ್ದೆ | ಬಲು ಶುಚಿಯಾದೆನೊ ಶುದ್ಧ ಜಲದಿ |

ಒಲಿದವಳ ಬಿಡುವುದು ಧರ್ಮವಲ್ಲ Read More »

ಒಡಿಯಾ ನಿನ್ನಡಿಗಳಿಗೆ ಬಿಡದೆ ನಾ ನಮೋ ಎಂಬೆ

ಒಡಿಯಾ ನಿನ್ನಡಿಗಳಿಗೆ ಬಿಡದೆ ನಾ ನಮೋ ಎಂಬೆ ಕೊಡು ಎನಗೆ ದೃಢ ಪದವಿ ಕಡಲಶಯನಾ ಪಿತನ ತೊಡಿಯ ಮೇಲೆ ಕುಳಿತಿರಲು ಮಲತಾಯಿ ಅತಿ ರೋಷದಿಂದವನ ಹೊಯಿದೆಬ್ಬಿಸೆ ಖತಿಯಿಂದ ವನಕೆ ಪೋಗಿ ನಿನ್ನ ಪೂಜಿಸಲು ಮತಿವಂತನ ಮಾಡಿ ಧ್ರುವಪದವಿ ಕೊಡಲಿಲ್ಲವೆ ||1|| ತಂದೆ ಬಾಧಿಸೆ ಧೃತಿಗೆಡದೆ ನರಹರಿ ಗೋ ವಿಂದ ನಾರಾಯಣ ಕೃಷ್ಣ ವಿಷ್ಣು ಇಂದಿರಾರಮಣ ಇನಕುಲತಿಲಕ ಎಂದೆನಲು ಕಂದನಿಗೆ ಕೈವಲ್ಯಪದವಿ ಕೊಡಲಿಲ್ಲವೇ||2|| ಜಾತಿಧರ್ಮವ ಬಿಟ್ಟು ಅಜಮಿಳನು ಚಂಡಾಲ ಜಾತಿ ವಧುವಿಗೆ ಸೋತು ಕೆಟ್ಟು ಯಮನ ದೂತರನ ನೋಡಿ

ಒಡಿಯಾ ನಿನ್ನಡಿಗಳಿಗೆ ಬಿಡದೆ ನಾ ನಮೋ ಎಂಬೆ Read More »

ಒಂದೇ ನಾಮದಲಡಗಿದವೊ ಅಡಗಿದವೋ

ಒಂದೇ ನಾಮದಲಡಗಿದವೊ ಅಡಗಿದವೋ ನಂದದಿಂದುಸುರುವ ಅಖಿಳ ವೇದಗಳು ಒಂದೇ ನಾಮವೆ ಪ್ರಹಲ್ಲಾದನ್ನ ರಕ್ಷಿಸಿತು ಒಂದೇ ನಾಮವೆ ಅಜಾಮಿಳಗೆ ವೊಲಿದಿತು ತಂದೆ ತಾಯ ಬಿಟ್ಟ ಕಂದ ಧ್ರುವರಾಯಗೆ ಆ ನಂದ ಪದವಿಯಿತ್ತ ಅದ್ಭುತ ಮಹಿಮೆಯು ||1|| ಮಚ್ಛಾದ್ಯನಂತಾವತಾರಾ ಸ್ವಚ್ಛ ಅಷ್ಟಾದಶ ಪುರಾಣ ಅಮೃತದ ಸಾರಾ ಕಚ್ಛಪ ತ್ರಿಜಗಕೆ ಆಧಾರ ತನ್ನ ಸ್ವೇಚ್ಛೆಯಿಂದಲಿ ತಾ ಮಾಡೋ ವ್ಯಾಪಾರಾ ||2|| ಒಬ್ಬರಿಂದಲಿ ತನಗಿಲ್ಲ ತಾ ನೊಬ್ಬನೆ ಜೀವರ ರಕ್ಷಿಪನೆಲ್ಲಾ ಕಬ್ಬುಬಿಲ್ಲಿನ ಪಿತ ವಿಜಯವಿಠ್ಠಲರೇಯ- ವೈ ದರ್ಭೆಯ ರಮಣನ ಸುಗುಣಗಳೆಲ್ಲಾ ||3||

ಒಂದೇ ನಾಮದಲಡಗಿದವೊ ಅಡಗಿದವೋ Read More »

ಒಂದಾನೊಂದು ದಿವಸದಲ್ಲಿ

ಒಂದಾನೊಂದು ದಿವಸದಲ್ಲಿ ಗುರುವ್ಯಾಸರಾಯರು | ಚಂದದಿಂ ದ್ವಾದಶಿ ಸಾಧನೆ ಬರಲು ಅಂದದಿಂದ ಪುರಂದರದಾಸರಿ | ಗಿಂದು ಭೋಜನಕ್ಕೆ ಬನ್ನಿರೆಂದು ಕರೆದರೂ ಪೇಳಿತೆಂದು ದಾಸರು ಪೋಗಿ ತಾವು ನಿರ್ಮಲ ಸ್ನಾನ ಜಪಮಂತ್ರ ಹರಿಪೂಜೆಯನೆ ಮಾಡಿ || ಧಳಥಳಿಸುವ ವಿಠಲನ ದಿವ್ಯ ಪಾದ ಗಳ ಧ್ಯಾನಿಸಿ ಕುಳಿತರು ಜನಗಳೆಲ್ಲ ಕೇಳಿ ||1|| ವಿಠಲನ ದಿವ್ಯ ಮೂರ್ತಿಯ ಪಾಡಿ ದೃಷ್ಟಿಯಿಂದಲಿ ನೋಡಿ | ಮುಟ್ಟಿ ಮುಂದೊಲಿದು ಕುಣಿಕುಣಿದಾಡಿ || ಥಟ್ಟನೆ ವೇದಕ್ಕೆ ಸಮನಾದ ಪದಗಳು | ನಿಷ್ಠೆಯಿಂದ್ಹೇಳಿ ಅಭೀಷ್ಟವ ಪಡೆದರು||2|| ಎಡೆಯೊಳು

ಒಂದಾನೊಂದು ದಿವಸದಲ್ಲಿ Read More »

ಓಹೊ ಎನ ಜೀವ ಮೈಯೆಲ್ಲ ನವಗಾಯ 

ಓಹೊ ಎನ ಜೀವ ಮೈಯೆಲ್ಲ ನವಗಾಯ ಗಾಯ ಕಟ್ಟುವರಿಲ್ಲ ಗಾಳಿ ಹಾಕುವರಿಲ್ಲ ಮಾಡಿಲ್ಲ ಮಳೆಯಿಲ್ಲ ಮರದ ಮ್ಯಾಲೆ ನೀರ ಕಂಡೆಕಾಡು ಸುಡುವುದ ಕಂಡೆ ಬೂದಿಯ ಕಾಣಲಿಲ್ಲ ||1|| ಬಿತ್ತಲಿಲ್ಲ ಬೆಳೆಯಲಿಲ್ಲ ನೆಟ್ಟು ನೀರ ತೋರಲಿಲ್ಲಹೊತ್ತುಕೊಂಡು ತಿರುಗಿದೆ ರೊಕ್ಕದಾ ಪ್ರಾಣಿಯನ್ನು ||2|| ಅಡಿಕೆಯಷ್ಟು ಆಕಳಣ್ಣ ಹಿಡಿಕೆಯಷ್ಟು ಕೆಚ್ಚಲಣ್ಣಒಡನೆ ಕರೆದಾರ ಕರಿತೈತಿ ರಂಜಣಿಗಿ ಹಾಲಣ್ಣ ||3|| ಮೂರು ಮೊಳದಾ ಬಳ್ಳಿಗೆ ಆರು ಮೊಳದ ಕಾಯಣ್ಣಆರು ಹತ್ತರ ಮೊಳದ, ಕಾಯಿ ಕೊಯ್ಯುವ ಕುಡುಗೋಲಣ್ಣ||4|| ಊರ ಮುಂದೆ ಹಿರಣ್ಯಕನ ಕೊರಳ ಕೊಯ್ವುದ ಕಂಡೆಕೊರಳ

ಓಹೊ ಎನ ಜೀವ ಮೈಯೆಲ್ಲ ನವಗಾಯ  Read More »

ಓಂಕಾರವೇದ್ಯಃ ಪುರುಷಃ ಪುರಾಣೋ

ಓಂಕಾರವೇದ್ಯಃ ಪುರುಷಃ ಪುರಾಣೋ ಬುದ್ಧೇಶ್ಚ ಸಾಕ್ಷೀ ನಿಖಿಲಸ್ಯ ಜಂತೋಃ | ಯೋ ವೇತ್ತಿ ಸರ್ವಂ ನ ಚ ಯಸ್ಯ ವೇತ್ತಾ ಪರಾತ್ಮರೂಪೋ ಭುವಿ ರಾಮಕೃಷ್ಣಃ || ಮೋಕ್ಷಸ್ವರೂಪಂ ತವ ಧಾಮ ನಿತ್ಯಂ ಯಥಾ ತದಾಪ್ನೋತಿ ವಿಶುದ್ಧಚಿತ್ತಃ | ತಥೋಪದೇಷ್ಟಾಖಿಲತತ್ತ್ವವೆತ್ತಾ ತ್ವಂ ವಿಶ್ವಧಾತಾ ಭುವಿ ರಾಮಕೃಷ್ಣಃ || ತೇಜೋಮಯಂ ದರ್ಶಯಸಿ ಸ್ವರೂಪಂ ಕೋಶಾಂತರಸ್ಥಂ ಪರಮಾರ್ಥತತ್ತ್ವಮ್ | ಸಂಸ್ಪರ್ಶಮಾತ್ರೇಣ ನೃಣಾಂ ಸಮಾಧಿಂ ವಿಧಾಯ ಸದ್ಯೋ ಭುವಿ ರಾಮಕೃಷ್ಣಃ || ರಾಗಾದಿಶೂನ್ಯಂ ತವ ಸೌಮ್ಯಮೂರ್ತಿಂ ದೃಷ್ಟ್ವಾ ಪುನಶ್ಚಾತ್ರ ನ ಜನ್ಮಭಾಜಃ |

ಓಂಕಾರವೇದ್ಯಃ ಪುರುಷಃ ಪುರಾಣೋ Read More »

ಶ್ರೀರಾಮಕೃಷ್ಣಸ್ತೋತ್ರಮ್

ಓಂ ಹ್ರೀಂ ಋತಂ ತ್ವಮಚಲೋ ಗುಣಜಿದ್ ಗುಣೇಡ್ಯಃ ನಕ್ತಂದಿವಂ ಸಕರುಣಂ ತವ ಪಾದಪದ್ಮಮ್ | ಮೋಹಕ್ಕಶಂ ಬಹು ಕೃತಂ ನ ಭಜೇ ಯತೋಹಂ ತಸ್ಮಾತ್ ತ್ವಮೇವ ಶರಣಂ ಮಮ ದೀನಬಂಧೋ || ಭಕ್ತಿಭರ್ಗಶ್ಚ ಭಜನಂ ಭವಭೇದಕಾರಿ ಗಚ್ಛಂತ್ಯಲಂ ಸುವಿಪುಲಂ ಗಮನಾಯ ತತ್ತ್ವಮ್ | ವಕ್ತ್ರೋದ್ಧೃತೋಪಿ ಹೃದಯೇ ನ ಮೇ ಭಾತಿ ಕಿಂಚಿತ್ ತಸ್ಮಾತ್ ತ್ವಮೇವ ಶರಣಂ ಮಮ ದೀನಬಂಧೋ || ತೇಜಸ್ತರಂತಿ ತರಸಾ ತ್ವಯಿ ತೃಪ್ತತೃಷ್ಣಾಃ ರಾಗೇ ಕೃತೇ ಋತಪಥೇ ತ್ವಯಿ ರಾಮಕೃಷ್ಣೇ | ಮರ್ತ್ಯಾಮೃತಮ್ ತವ

ಶ್ರೀರಾಮಕೃಷ್ಣಸ್ತೋತ್ರಮ್ Read More »

ಶಾಂತಿ ಮಂತ್ರಗಳು

ಓಂ ಸಹ ನಾ’ವವತು | ಸಹ ನೌ’ ಭುನಕ್ತು | ಸಹ ವೀರ್ಯಂ’ ಕರವಾವಹೈ | ತೇಜಸ್ವಿನಾವಧೀ’ತಮಸ್ತು ಮಾ ವಿ’ದ್ವಿಷಾವಹೈ” || ಓಂ ಶಾಂತಿಃ ಶಾಂತಿಃ ಶಾಂತಿಃ’ || ಓಂ ಶಂ ನೋ’ ಮಿತ್ರಃ ಶಂ ವರು’ಣಃ | ಶಂ ನೋ’ ಭವತ್ವರ್ಯಮಾ | ಶಂ ನ ಇಂದ್ರೋ ಬೃಹಸ್ಪತಿಃ’ | ಶಂ ನೋ ವಿಷ್ಣು’ರುರುಕ್ರಮಃ | ನಮೋ ಬ್ರಹ್ಮ’ಣೇ | ನಮ’ಸ್ತೇ ವಾಯೋ | ತ್ವಮೇವ ಪ್ರತ್ಯಕ್ಷಂ ಬ್ರಹ್ಮಾ’ಸಿ | ತ್ವಾಮೇವ ಪ್ರತ್ಯಕ್ಷಂ ಬ್ರಹ್ಮ’ ವದಿಷ್ಯಾಮಿ

ಶಾಂತಿ ಮಂತ್ರಗಳು Read More »

ಓ ನನ್ನ ಚೇತನ

ಓ ನನ್ನ ಚೇತನ, ಆಗು ನೀ ಅನಿಕೇತನ! ರೂಪರೂಪಗಳನು ದಾಟಿ, ನಾಮಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವದೀಟಿ, ಓ ನನ್ನ ಚೇತನ, ಆಗು ನೀ ಅನಿಕೇತನ! ನೂರು ಮತದ ಹೊಟ್ಟ ತೂರಿ, ಎಲ್ಲ ತತ್ತ್ವದೆಲ್ಲೆ ಮೀರಿ, ನಿರ್ದಿಗಂತವಾಗಿ ಏರಿ, ಓ ನನ್ನ ಚೇತನ, ಆಗು ನೀ ಅನಿಕೇತನ! ಎಲ್ಲಿಯೂ ನಿಲ್ಲದಿರು; ಮನೆಯನೆ೦ದೂ ಕಟ್ಟದಿರು; ಕೊನೆಯನೆ೦ದೂ ಮುಟ್ಟದಿರು; ಓ ಅನ೦ತವಾಗಿರು! ಓ ನನ್ನ ಚೇತನ, ಆಗು ನೀ ಅನಿಕೇತನ! ಅನ೦ತ ತಾನ್ ಅನ೦ತವಾಗಿ ಆಗುತಿಹನೆ ನಿತ್ಯಯೋಗಿ; ಅನ೦ತ ನೀ ಅನ೦ತವಾಗು;

ಓ ನನ್ನ ಚೇತನ Read More »