admin

ಯಾದವ ನೀ ಬಾ

ಯಾದವ ನೀ ಬಾ ಯದುಕುಲನಂದನ ಮಾಧವ ಮಧುಸೂದನ ಬಾರೋ|| ಸೋದರಮಾವನ ಮಥುರೆಲಿ ಮಡುಹಿದ ಯಶೋದಾಕಂದ ನೀ ಬಾರೋ|| ಕಣಕಾಲಂದುಗೆ ಘುಲುಘುಲುರೆನುತಲಿ ಝಣಝಣ ವೇಣುನಿನಾದದಲಿ| ಚಿಣ್ಣಿಕೋಲು ಚೆಂಡು ಬುಗುರಿಯನಾಡುತ ಸಣ್ಣವರೊಡಗೂಡಿ ನೀ ಬಾರೋ|| ಶಂಖ ಚಕ್ರವು ಕೈಯಲಿ ಹೊಳೆಯುತ ಬಿಂಕದ ಗೋವಳ ನೀ ಬಾರೋ| ಅಕಳಂಕ ಚರಿತನೆ ಆದಿನಾರಾಯಣ ಬೇಕೆಂಬ ಬಕ್ತರಿಗೊಲಿ ಬಾರೋ|| ಖಗವಾಹನನೆ ಬಗೆಬಗೆರೂಪನೆ ನಗೆಮೊಗದರಸನೆ ನೀ ಬಾರೋ| ಜಗದೊಳು ನಿನ್ನಯ ಮಹಿಮೆಯ ಪೊಗಳುವೆ ಪುರಂದರವಿಟ್ಠಲ ನೀ ಬಾರೋ|| —-ಪುರಂದರದಾಸ

ಯಾದವ ನೀ ಬಾ Read More »

ಮೂರ್ತಮಹೇಶ್ವರ

ಮೂರ್ತಮಹೇಶ್ವರಮುಜ್ಜ್ವಲಭಾಸ್ಕರ- ಮಿಷ್ಟಮಮರನರವಂದ್ಯಂ|| ವಂದೇ ವೇದತನುಮುಜ್ಜಿತ-ಗರ್ಹಿತ- ಕಾಮಕಾಂಚನಬಂಧಂ|| ಕೋಟಿಭಾನುಕರದೀಪ್ತ ಸಿಂಹಮಹೋ ಕಟಿತಟಕೌಪೀನವಂತಂ| ಅಭೀರಭೀಃ ಹುಂಕಾರನಾದಿತದಿಙ್ಮಖ- ಪ್ರಚಂಡತಾಂಡವನೃತ್ಯಂ|| ಭುಕ್ತಿಮುಕ್ತಿಕೃಪಾಕಟಾಕ್ಷಪ್ರೇಕ್ಷಣ- ಮಘದಲವಿದಲನದಕ್ಷಂ| ಬಾಲಚಂದ್ರಧರಮಿಂದುವಂದ್ಯಮಿಹ ನೌಮಿ ಗುರು ವಿವೇಕಾನಂದಂ|| —-ಶರತ್ ಚಂದ್ರ ಚಕ್ರವರ್ತಿ

ಮೂರ್ತಮಹೇಶ್ವರ Read More »

ಮೂರುತಿಯನೆ ನಿಲಿಸೋ

ಮೂರುತಿಯನೆ ನಿಲಿಸೋ ಮಾಧವ ನಿನ್ನ| ಎಳೆ ತುಳಸಿಯ ವನಮಾಲೆಯು ಕೊರಳೊಳು ಪೊಳೆವ ಪೀತಾಂಬರದಿಂದ ಒಪ್ಪುವ ನಿನ್ನ|| ಮುತ್ತಿನ ಸರ ನವರತ್ನದುಂಗುರವಿಟ್ಟು ಮತ್ತೆ ಶ್ರೀಲಕುಮಿಯು ಉರದಿ ಒಪ್ಪುವ ನಿನ್ನ|| ಭಕ್ತರ ಕಲ್ಪತರು ಭಾಗ್ಯದ ಸುರಧೇನು ಮುಕ್ತಿದಾಯಕ ನಮ್ಮ ಪುರಂದರ ವಿಟ್ಠಲ|| —-ಪುರಂದರದಾಸ

ಮೂರುತಿಯನೆ ನಿಲಿಸೋ Read More »

ಮಾನವ ಸಂತಾನದೆಡೆಗೆ

ಮಾನವ ಸಂತಾನದೆಡೆಗೆ ಎನಿತು ಕರುಣೆ ನಿನ್ನದು ಅದ ನೆನೆದರೆ ಕಂಬನಿಯೆ ಕೋಡಿಯೊಡೆದು ಹರಿವುದು || ಹುಟ್ಟಿದಂದಿನಿಂದ ನಾನು ನಿನ್ನಾಣೆಯ ಮೀರಿದೆ ಆದರೂ ನೀ ಅಕ್ಕರೆಯಲಿ ತಾಯ್ತನವನೆ ತೋರಿದೆ| ಮಧುರ ವಚನದಿಂದ ಮನವ ಸಂತೈಸುತ ನಲಿಸಿದೆ ಇದ ನೆನೆದರೆ ಕಂಬನಿಯೆ ಕೋಡಿಯೊಡೆದು ಹರಿದಿದೆ|| ನಿನ್ನೊಲವಿನ ಹೊರೆಯ ಹೊತ್ತು ನಾನು ಬಹಳ ಬಳಲಿದೆ ಇನ್ನು ಮುಂದೆ ಹೊರಲಾರದೆ ಎದೆಯು ನರಳಿ ಕೊರಗಿದೆ| ನಿನ್ನೊಲವಿನ ಕರಸ್ಪರ್ಶದಿ ಈ ನೋವನು ನೀಗಿಸು ನಿನ್ಮ ಪಾದಪದ್ಮದಲಿ ನನ್ನನಿರಿಸಿ ಪಾಲಿಸು|| —-ವಚನವೇದ

ಮಾನವ ಸಂತಾನದೆಡೆಗೆ Read More »

ಮಾಡಿ ಮಾಡಿ ಕೆಟ್ಟರು

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ|| ಮಾಡಿದೆನೆಂಬುದು ಮನದಲಿ ಹೊಳೆದರೆ ನೀಡಿದೆನೆಂಬುದು ನಿಜದಲಿ ತಿಳಿದರೆ ಏಡಿಸಿ ಕಾಡಿತ್ತು ಶಿವನ ಡಂಗುರ|| ಮಾಡಿದೆನೆನ್ನದಿರಾ ಲಿಂಗಕೆ ನೀಡಿದೆನೆನ್ನದಿರಾ ಜಂಗಮಕೆ ಮಾಡುವ ನೀಡುವ ನಿಜಗುಣವುಳ್ಳವರ ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಯ್ಯ|| —-ಬಸವಣ್ಣ

ಮಾಡಿ ಮಾಡಿ ಕೆಟ್ಟರು Read More »

ಮಾಡಬಾರದ ಮಾಡಿ

ಮಾಡಬಾರದ ಮಾಡಿ, ಆಗಬಾರದು ಆಗಿ ಬಾಳೆಲ್ಲ ಬರಿದಾಗಿ, ಗೋಳೊಂದೆ ಉಳಿದಾಗ ಅಂತರಾಳದಿ ಬೆಳಗಿ, ಸಂತಸವ ಕರುಣಿಸಿಹೆ “ಏಳು ಮಗು, ನಾನಿಹೆನು!” ಎನ್ನುತ್ತ ಕರೆದೆ|| ಅವರಿವರ ಉಪದೇಶ ಬರಿಯ ಬಾಯ್ಮಾತಾಗಿ ರವಿರಹಿತ ಕತ್ತಲೆಯೆ ಎತ್ತೆತ್ತ ಕವಿದಾಗ ಕರುಣಿಸಿಹೆ ಓ ತಾಯಿ, ತವ ಚರಣದಾಶ್ರಯವ “ಬಾ ಕಂದ, ಇಹೆ ನಾನು, ಕುಂದದಿರು” ಎಂದು|| ಜಗವೆಲ್ಲ ಕೈಬಿಟ್ಟು ಮತಿಗೆಟ್ಟು, ಗತಿಗೆಟ್ಟು, ಆವುದನು ಗೈಯಲೂ ತ್ರಾಣವಿಲ್ಲದ ಎನಗೆ “ನಾನೆ ಸಾಧನೆ ಸಿದ್ಧಿ ಗತಿ ಆಸರೆಯು ನಿನಗೆ” ಎನ್ನುತ್ತ ವರವಿತ್ತ ಗುರು-ದೈವ-ಜನನಿ|| —ಸ್ವಾಮಿ ಶಾಸ್ತ್ರಾನಂದ

ಮಾಡಬಾರದ ಮಾಡಿ Read More »

ಮಂಗಲಮಯ ಪ್ರಭು

ಮಂಗಲಮಯ ಪ್ರಭು ನೀನೆಂದರಿತಿಹೆ ಕಂಗಳು ನಿನ್ನಯ ಪಾದದಿ ನೆಟ್ಟಿರೆ|| ಇರಿಸೈ ಸುಖದಲಿ ಇರಿಸು ದುಃಖದಲಿ ಅರಿತಿಹೆ ಭಯವಿನಿತಿಲ್ಲವು ಎನಗೆ|| ಏನನು ಗೈದರು ಕೈಬಿಡೆಯೆಂಬುವ ಎನಗೆ ನೀಡು ನೀ ಭರವಸೆಯ|| ಪ್ರಭುವೇ ದೇವನೆ ಬಾ ಮಮ ಹೃದಯಕೆ ಶುಭವನು ಕೋರುತ ಬೇಡುತಲಿರುವೆ|| —-ಸ್ವಾಮಿ ಹರ್ಷಾನಂದ

ಮಂಗಲಮಯ ಪ್ರಭು Read More »

ಮರೆಯಬೇಡ ಮನವೆ

ಮರೆಯಬೇಡ ಮನವೆ ನೀನು ಹರಿಯ ಸ್ಮರಣೆಯ|| ಯಾಗಯಜ್ಞ ಮಾಡಲೇಕೆ ಯೋಗಿಯತಿಯು ಆಗಲೇಕೆ| ನಾಗಶಯನ ನಾರದನುತನ ಕೂಗಿ ಭಜನೆ ಮಾಡೋ|| ಸತಿಯು ಸುತರು ಹಿತರು ಎಂದು ಮತಿಯುಗೆಟ್ಟು ಕೆಡಲಿಬೇಡ| ಗತಿಯು ತಪ್ಪಿ ಹೋಗುವಾಗ ಸತಿಯು ಸುತರು ಬರುವರೇ|| ಹರಿಯ ಸ್ಮರಣೆ ಮಾತ್ರದಿಂದ ಘೋರದುರಿತವೆಲ್ಲ ನಾಶ| ಪರಮಪುರುಷ ಶ್ರೀ ಪುರಂದರ ವಿಟ್ಠಲೋರಾಯ ಪದವಿ ಕೊಡುವ|| —-ಪುರಂದರದಾಸ

ಮರೆಯಬೇಡ ಮನವೆ Read More »

ಮನ ಶುದ್ಧಿಯಿಲ್ಲದವಗೆ

ಮನ ಶುದ್ಧಿಯಿಲ್ಲದವಗೆ ಮಂತ್ರದ ಫಲವೇನು| ತನು ಶುದ್ಧಿಯಿಲ್ಲದವಗೆ ತೀರ್ಥದ ಫಲವೇನು|| ಮಿಂದಲ್ಲಿ ಫಲವೇನು ಮೀನು ಮೊಸಳೆಯಂತೆ ನಿಂದಲ್ಲಿ ಫಲವೇನು ಶ್ರೀಶೈಲದ ಕಾಗೆಯಂತೆ| ಹೊರಗೆ ಮಿಂದು ಒಳಗೆ ಮೀಯದವರ ಕಂಡು ಬೆರಗಾಗಿ ನಗುತಿದ್ದ ಪುರಂದರವಿಟ್ಠಲ|| —ಪುರಂದರದಾಸ

ಮನ ಶುದ್ಧಿಯಿಲ್ಲದವಗೆ Read More »

ಮನವೆಂಬ ಮರ್ಕಟನು

ಮನವೆಂಬ ಮರ್ಕಟನು ತನುವೆಂಬ ವೃಕ್ಷವನೇರಿ ಇಂದ್ರಿಯಂಗಳೆಂಬ ಶಾಖೆಶಾಖೆಗೆ ಹಾರಿ ವಿಷಯಂಗಳೆಂಬ ಫಲಂಗಳ ಗ್ರಹಿಸಿ ಭವದತ್ತ ಮುಖವಾಗಿ ಹೋಗುತಿದೆ ನೋಡಾ|| (ಈ) ಮನವೆಂಬ ಮರ್ಕಟನ (ನಿಮ್ಮ) ನೆನಹೆಂಬ ಪಾಶದಿ ಕಟ್ಟೆ ಎನ್ನನುಳಿಸಿಕೊಳ್ಳಯ್ಯ ಅಖಂಡೇಶ್ವರಾ|| —ಷಣ್ಮುಖಸ್ವಾಮಿ

ಮನವೆಂಬ ಮರ್ಕಟನು Read More »

ಮಣಿವೆ ನಿನ್ನ ಕಮಲದಡಿಗೆ

ಮಣಿವೆ ನಿನ್ನ ಕಮಲದಡಿಗೆ ದಯದಿ ಬಾರೊ ಎದೆಯ ಗುಡಿಗೆ|| ಭಕ್ತಹೃದಯಜಲಜ ಬಂಧು ನೀನಪಾರ ಕರುಣೆ ಸಿಂಧು| ಪ್ರೇಮಭಕ್ತಿಯೊಡನೆ ಕೂಡಿ ಬಾರೈ ತಂದೆ ಕರೆವೆ ಬೇಡಿ|| ತ್ಯಾಗಮೂರ್ತಿ ತಪೋಮೂರ್ತಿ ಜ್ಞಾನಮೂರ್ತಿ ಸೊಗದ ಮೂರ್ತಿ| ಹರಿದಿದೆಲ್ಲೆಡೆ ನಿನ್ನ ಕೀರ್ತಿ ತ್ಯಾಗಪಥದ ನಿತ್ಯಸ್ಪೂರ್ತಿ|| ವಿಶ್ವದೊಡೆಯ ಶುದ್ಧಹೃದಯ ಕೋಟಿಸೂರ್ಯ ಜ್ಯೋತಿರೂಪ| ನಿನ್ನೀ ಕಂದನ ಕರೆಯನಾಲಿಸಿ ಬಾರೋ ಬೇಗ ಶಕ್ತಿವೆರಸಿ|| —ಸ್ವಾಮಿ ತದ್ರೂಪಾನಂದ

ಮಣಿವೆ ನಿನ್ನ ಕಮಲದಡಿಗೆ Read More »

ಮಣಿಯಲೆನ್ನ ಶಿರವು

ಮಣಿಯಲೆನ್ನ ಶಿರವು ನಿನ್ನ ಚರಣಧೂಳಿ ತಲದಲಿ| ನನ್ನ ಅಹಂಕಾರವೆಲ್ಲ ಮುಳುಗಲಶ್ರುಜಲದಲಿ|| ನನಗೆ ನಾನೆ ಪೂಜೆಗೈಯೆ ಸೊಡರನೆತ್ತಲು ಬೆಳಕು ಬರುವ ಬದಲು ಅಯ್ಯೋ ಬರಿಯ ಕತ್ತಲು ಅಹಂಕಾರದಂಧಕಾರ ಮುತ್ತುತಿದೆ ಸುತ್ತಲು|| ನನ್ನ ನಾನೆ ಮೆರೆಯದಂತೆ ನಾನು ಗೈವ ಕರ್ಮದಿ ನಿನ್ನ ಇಚ್ಛೆ ಪೂರ್ಣವಾಗ- ಲೆನ್ನ ಜೀವಧರ್ಮದಿ| ತಳೆಯಲೆನ್ನ ಜ್ಞಾನ ನಿನ್ನ ಚರಮ ಶಾಂತಿಯ ಬೆಳಗಲೆನ್ನ ಪ್ರಾಣ ನಿನ್ನ ಪರಮ ಕಾಂತಿಯ ನನ್ನನಳಿಸು ನೀನೆ ನೆಲಸು ಹೃದಯಪದ್ಮದಲದಲಿ|| —-ಕುವೆಂಪು

ಮಣಿಯಲೆನ್ನ ಶಿರವು Read More »

ಮಡಕೆಯ ಮಾಡುವರೆ

ಮಡಕೆಯ ಮಾಡುವರೆ ಮಣ್ಣೇ ಮೊದಲು ತೊಡಿಗೆಯ ಮಾಡುವರೆ ಹೊನ್ನೇ ಮೊದಲು ಶಿವಪಥವರಿವಡೆ ಗುರುಪಥ ಮೊದಲು ಕೂಡಲಸಂಗಮದೇವರನರಿವಡೆ ಶರಣರ ಸಂಗವೇ ಮೊದಲು|| —-ಬಸವಣ್ಣ

ಮಡಕೆಯ ಮಾಡುವರೆ Read More »

ಭಾಗ್ಯದ ಲಕ್ಷ್ಮಿ ಬಾರಮ್ಮ

ಭಾಗ್ಯದ ಲಕ್ಷ್ಮಿ ಬಾರಮ್ಮ| ನಮ್ಮಮ್ಮ ನೀ ಸೌ- ಭಾಗ್ಯದ ಲಕ್ಷ್ಮಿ ಬಾರಮ್ಮ|| ಗೆಜ್ಜೆ ಕಾಲ್ಗಳ ಧ್ವನಿಯನು ತೋರುತ ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಸಜ್ಜನ ಸಾಧು ಪೂಜೆಯ ಮೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ|| ಕನಕವೃಷ್ಟಿಯ ಕರೆಯುತ ಬಾರೆ ಮನಕೆ ಮಾನವ ಸಿದ್ಧಿಯ ತೋರೆ ದಿನಕರಕೋಟಿ ತೇಜದಿ ಹೊಳೆಯುವ ಜನಕರಾಯನ ಕುಮಾರಿ ಬೇಗ|| ಅತ್ತಿತ್ತಗಲದೆ ಭಕ್ತರ ಮನೆಯಲಿ ನಿತ್ಯಮಹೋತ್ಸವ ನಿತ್ಯ ಸುಮಂಗಳ ಸತ್ಯವ ತೋರುವ ಸಾಧುಸಜ್ಜನರ ಚಿತ್ತದಿ ಹೊಳೆವ ಪುತ್ಥಳಿ ಬೊಂಬೆ|| ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು ಕಂಕಣ ಕೈಯನು ತಿರುವುತ ಬಾರೆ

ಭಾಗ್ಯದ ಲಕ್ಷ್ಮಿ ಬಾರಮ್ಮ Read More »

ಭವಾನೀ ಭಕ್ತಸುಖದಾಯಿನೀ

ಭವಾನೀ ಭಕ್ತಸುಖದಾಯಿನೀ|| ಭಕ್ತಿಗಮ್ಯಾ ಭಕ್ತಿವಶ್ಯಾ ಭಾವಕಪ್ರಚೋದಿನೀ ಭವಾನೀ ಭಕ್ತಸುಖದಾಯಿನೀ|| ಮಹಾಮಾಯಾ ಮಹಾನಿಲಯಾ ಮಾನವಕುಲಜನನೀ ಮಾಲಿನೀ ಮದನಬಲನಾಶಿನೀ|| ಪ್ರಭಾರೂಪಾ ಪ್ರೇಮರೂಪಾ ಪಾತಕನಿವಾರಿಣೀ ಪಾವನೀ ಪರಮಪದದಾಯಿನೀ||

ಭವಾನೀ ಭಕ್ತಸುಖದಾಯಿನೀ Read More »

ಭರತಖಂಡದ ನೀಲಗಗನವ

ಭರತಖಂಡದ ನೀಲಗಗನವ ತಿಮಿರ ಮುಸುಗಿರಲು, ಭಾರತೀಯರು ತಮ್ಮ ಧ್ಯೇಯವ ಮರೆತು ಮಲಗಿರಲು, ಪರಮಹಂಸನೆ, ಉದಯಸೂರ್ಯನ ತೆರದಿ ರಂಜಿಸಿದೆ. ಹೃದಯ ನಭದ ಜ್ಞಾನತಿಮಿರವನಿರದೆ ಭಂಜಿಸಿದೆ. ಸರ್ವಮಾರ್ಗಗಳೊಂದೆ ನಿಲಯಕೆ ಪೋಪುವೆಂಬುದನು ಯೋಗವಿದ್ಯೆಯೊಳರಿತು ಮಾನವಕುಲಕೆ ಬೋಧಿಸಿದೆ; ಕ್ರೈಸ್ತ ಹಿಂದೂ ಮಹಮದೀಯರೆ ಬೌದ್ಧಮೊದಲಾದ ಮತಗಳಾತ್ಮವದೊಂದೆ ಎಂಬುದ ತಿಳುಹಿ ಪಾಲುಸಿದೆ. ಕ್ರಿಸ್ತ ಮಹಮದ ರಾಮ ಕೃಷ್ಣ ಜೊರಾಸ್ತ ಗೌತಮರು ದಿವ್ಯ ವೇದ ಕೊರಾನು ಬೈಬಲು ತಲ್ಮಡಾದಿಗಳು ಗುಡಿಯು ಚರ್ಚು ಮಸೀದಿ ಆಶ್ರಮ ಅಗ್ನಿಪೂಜೆಗಳು ಕಾಶಿ ಮಕ್ಕಗಳೆಲ್ಲ ನಿನ್ನೊಳಗೈಕ್ಯ ‘ವಾಗಿಹವು’! ದಕ್ಷೀಣೇಶ್ವರ ದೇವನಿಲಯದ ಪರಮಯೋಗೀಂದ್ರ ಶ್ರೀ

ಭರತಖಂಡದ ನೀಲಗಗನವ Read More »

ಭಜ ರೇ ಹನುಮಂತಂ

ಭಜ ರೇ ಹನುಮಂತಂ ಮಾನಸ ಭಜರೇ ಹನುಮಂತಂ|| ಕೋಮಲಕಾಯಂ ನಾಮಸುದೇವಂ ಭಜ ಸಖ ಸಿಂಹಂ ಭೂಸುರಶ್ರೇಷ್ಠಂ|| ಮೂರ್ಖನಿಶಾಚರವನಸಂಹಾರಂ ಸೀತಾದುಃಖವಿನಾಶನಕಾರಂ|| ಪರಮಾನಂದಗುಣೋದಯಚರಿತಂ ಕರುಣಾರಸಸಂಪೂರ್ಣಸುಭರಿತಂ|| ರಣರಂಗಧೀರಂ ಗುಣಗಂಭೀರಂ ದಾನವದೈತ್ಯಾರಣ್ಯಕುಠಾರಂ|| ಗುರುಚಿನ್ನಕೇಶವಕದಳೀರಂಗಂ ಸ್ಥಿರಸದ್ಭಕ್ತಂ ಮುಖ್ಯಪ್ರಾಣಂ|| —ಕನಕದಾಸ

ಭಜ ರೇ ಹನುಮಂತಂ Read More »

ಭಜ ರೇ ಸ್ವಾಮಿ ವಿವೇಕಾನಂದಮ್

ಭಜ ರೇ ಸ್ವಾಮಿ ವಿವೇಕಾನಂದಮ್ ಭಜ ಯತಿರಾಜಂ ಮಾನಸ ಸತತಮ್| ತ್ಯಕ್ತಸಪ್ತಮುನಿವಿಶಾಲಲೋಕಮ್ ನಾಶಿತಭೂಜನಗುರುತರಶೋಕಮ್|| ರಾಮಕೃಷ್ಣಗುರುಪದಾಬ್ಜಭೃಂಗಮ್ ಪ್ರಸಾದಮಧುಬಲವಿಜಿತಾನಂಗಮ್|| ಆತ್ಮಶ್ರದ್ಧಾಸ್ಥಾಪಿತಧರ್ಮಮ್ ಮಜ್ಜದ್ ಭಾರತಮಂದರಕೂರ್ಮಮ್|| ಹಂಸಶಕ್ತಿಯುತಮಹದುರುನಾವಮ್ ಪರಹಂಸಸುಧಾಪೂರಿತಭಾವಮ್|| —-ಸ್ವಾಮಿ ಹರ್ಷಾನಂದ

ಭಜ ರೇ ಸ್ವಾಮಿ ವಿವೇಕಾನಂದಮ್ Read More »

ಭಜ ರೇ ರಘುವೀರಂ

ಭಜ ರೇ ರಘುವೀರಂ ಮಾನಸ, ಭಜ ರೇ ಬಹುಧೀರಮ್|| ಅಂಬುದಡಿಂಭವಿಡಂಬನಗಾತ್ರಮ್ ಅಂಬುದವಾಹನ ನಂದನದಾತ್ರಮ್|| ಕುಶಕಸುತಾರ್ಪಿತಕಾರ್ಮುಕವೇದಮ್ ವಶಿಹೃದಯಾಂಬುಜಭಾಸ್ಕರಪಾದಮ್|| ಕುಂಡಲಮಂಡನಮಂಡಿತಕರ್ಣಮ್ ಕುಂಡಲಿಮಂಚಕಮದ್ಭುತವರ್ಣಮ್|| ದಂಡಿತಸುಂದಸುತಾದಿಕವೀರಮ್ ಮಂಡಿತಮನುಕುಲಮಾಶ್ರಯ ಶೌರಿಮ್|| ಪರಮಹಂಸಮಖಿಲಾಗಮವೇದ್ಯಮ್ ಪರಮವೇದಮಕುಟೀಪ್ರತಿಪಾದ್ಯಮ್|| —-ಸದಾಶಿವ ಬ್ರಹ್ಮೇಂದ್ರ

ಭಜ ರೇ ರಘುವೀರಂ Read More »

ಭಜ ರೇ ಗೋಪಾಲಂ

ಭಜ ರೇ ಗೋಪಾಲಂ ಮಾನಸ ಭಜ ರೇ ಗೋಪಾಲಂ|| ಭಜ ಗೋಪಾಲಂ ಭಜಿತಕುಚೇಲಂ| ತ್ರಿಜಗನ್ಮೂಲಂ ದಿತಿಸುತಕಾಲಂ|| ಆಗಮಸಾರಂ ಯೋಗವಿಚಾರಂ| ಭೋಗಶರೀರಂ ಭುವನಾಧಾರಂ|| ಕದನಕಠೋರಂ ಕಲುಷವಿದೂರಂ| ಮದನಕುಮಾರಂ ಮಧುಸಂಹಾರಂ|| ನತಮಂದಾರಂ ನಂದಕಿಶೋರಂ| ಹತಚಾಣೂರಂ ಹಂಸವಿಹಾರಂ|| —-ಸದಾಶಿವ ಬ್ರಹ್ಮೇಂದ್ರ

ಭಜ ರೇ ಗೋಪಾಲಂ Read More »

ಬ್ರೂಹಿ ಮುಕುಂದೇತಿ

ಬ್ರೂಹಿ ಮುಕುಂದೇತಿ ರಸನೇ|| ಕೇಶವ ಮಾಧವ ಗೋವಿಂದೇತಿ ಕೃಷ್ಣಾನಂದ ಸದಾನಂದೇತಿ|| ರಾಧರಮಣ ಹರೇ ರಾಮೇತಿ ರಾಜೀವಾಕ್ಷ ಘನಶ್ಯಾಮೇತಿ|| ಅಕ್ರೂರಪ್ರಿಯ ಚಕ್ರಧರೇತಿ ಹಂಸ ನಿರಂಜನ ಕಂಸಹರೇತಿ||                               —-ಸದಾಶಿವ ಬ್ರಹ್ಮೇಂದ್ರ

ಬ್ರೂಹಿ ಮುಕುಂದೇತಿ Read More »

ಬೋಧಿವೃಕ್ಷದಡಿ ಧ್ಯಾನದಿ

ಬೋಧಿವೃಕ್ಷದಡಿ ಧ್ಯಾನದಿ ಮುಳುಗಿಹ ಯೋಗಿವರ್ಯನೆ ನೀನಾರು | ತಪದ ತಾಪದಿಂ ದೇಹವು ಸೊರಗಿದೆ ಜ್ಯೋತಿಯು ಹಣೆಯಲಿ ಬೆಳಗುತಿದೆ|| ಹೊರಗಡೆ ಕಾಂಬುದು ಜೋಗಿಯ ವೇಷ ಮುಖದಲಿ ರಾಜಕುಮಾರನ ತೇಜ| ಯಾರ ಭವನವನು ಅಂಧಕಾರದಲಿ ಮುಳುಗಿಸಿ ಬಂದಿಹೆ ಪೇಳೆಲೆ ಜವದಿ|| ಜ್ಞಾನಲಾಭವೋ ದೇಹಪಾತವೋ ಆಗಲಿ ಒಂದು ಎರಡರಲಿಂದು| ಪಣವ ತೊಟ್ಟು ನೀ ಬಸವಳಿದಿರಲು ಕಲ್ಲೂ ಕರಗುತ ನೀರಾಗುವುದು|| ತಾಪತ್ರಯದಲಿ ಬೆಂದಿಹ ಜನರನು ಉದ್ಧರಿಸಲು ನೀ ಬಂದಿಹೆಯೇನು| ವಿಶ್ವಪ್ರೇಮವ ಪ್ರಚಾರಗೈಯಲು ನಿಜಸುಖವನು ನೀ ತ್ಯಜಿಸಿಹೆಯೇನು||                                         —-ಸ್ವಾಮಿ ಹರ್ಷಾನಂದ

ಬೋಧಿವೃಕ್ಷದಡಿ ಧ್ಯಾನದಿ Read More »

ಬೇವು ಬೆಲ್ಲದೊಳಿಡಲೇನು ಫಲ

ಬೇವು ಬೆಲ್ಲದೊಳಿಡಲೇನು ಫಲ ಹಾವಿಗೆ ಹಾಲೆರೆದೇನು ಫಲ|| ಕುಟಿಲವ ಬಿಡದಿಹ ಮನುಜರು ಮಂತ್ರವ ಪಠನೆಯ ಮಾಡಿದರೇನು ಫಲ| ಸಟೆಯನ್ನಾಡುವ ಮನುಜರು ಸಂತತ ನಟನೆಯ ಮಾಡಿದರೇನು ಫಲ|| ಕಪಟತನದಲಿ ಕಾಡುತ ಜನರನು ಜಪವನು ಮಾಡಿದರೇನು ಫಲ| ಕುಪಿತತನವನು ಬಿಡದೆ ನಿರಂತರ ಉಪವಾಸ ಮಾಡಿದರೇನು ಫಲ|| ಮಾತಾಪಿತರನು ಬಳಲಿಸಿದಾತನು ಯಾತ್ರೆಯ ಮಾಡಿದರೇನು ಫಲ| ಘಾತಕತನವನು ಬಿಡದೆ ನಿರಂತರ ಗೀತೆಯನೋದಿದರೇನು ಫಲ|| ಹೀನಗುಣಂಗಳ ಹಿಂಗದೆ ಗಂಗೆಯ ಸ್ನಾನವ ಮಾಡಿದರೇನು ಫಲ| ಶ್ರೀನಿಧಿ ಪುರಂದರವಿಟ್ಠಲನ ನೆನೆಯದೆ ಮೌನವ ಮಾಡಿದರೇನು ಫಲ||                                 —-ಪುರಂದರದಾಸ

ಬೇವು ಬೆಲ್ಲದೊಳಿಡಲೇನು ಫಲ Read More »

ಬೆಲ್ಲದ ಕಟ್ಟೆಯ ಕಟ್ಟಿ

ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ ಜೇನು ಮಳೆಗರೆದರೆ ವಿಷ ಹೋಗುವುದೇನಯ್ಯಾ|| ಏನು ನೋಡಿದರೇನು ಏನು ಕೇಳಿದರೇನು| ಮನದೊಳಗಿನ ತಾಮಸ ಮಾಣದನ್ನಕ|| ಕೊಳಲು ದನಿಗೆ ಸರ್ಪ ತಲೆದೂಗುವಂದದಿ ಇದಕೇನು ಮದ್ದು ಶ್ರೀ ಪುರಂದರ ವಿಟ್ಠಲಾ||                   —–ಪುರಂದರದಾಸ

ಬೆಲ್ಲದ ಕಟ್ಟೆಯ ಕಟ್ಟಿ Read More »