admin

ವಿಪ್ರವನಿತೆಯಂಕದಲ್ಲಿ

ವಿಪ್ರವನಿತೆಯಂಕದಲ್ಲಿ ನಲಿವನಾರು ಬೆಳಕ ಚೆಲ್ಲಿ| ಧರಿಸಿ ದಿಶೆಯ ಚೆಲುವ ಕುವರ ಒಲಿದು ಬಂದೆ ಬಡಕುಟೀರ|| ಭೂತಲಕೆ ಇಳಿದು ಬಂದೆ ಯಾರು ನೀನು ಕಣ್ಮಣಿ| ಆರ್ತ ಜನರ ತಾಪ ಕಳೆಯೆ ಸುರಿಸಿ ಕರುಣೆ ಕಂಬನಿ|| ನೊಂದ ಜನಕೆ ನೆರವ ನೀಡೆ ಬಂದೆಯೇನು ಗೋಪ್ಯವಾಗಿ| ಕಂದ ಮೊಗದಿ ಕರುಣೆ ತಳೆದು ಅಳುವೆ ನಗುವೆ ಯಾರಿಗಾಗಿ|| ರೂಪರಾಶಿ ಕಂಡು ನಿನ್ನ ಸೆಳೆಯಲಾರೆ ನೆಟ್ಟ ಕಣ್ಣ| ತಾಪತಿಮಿರನಾಶಿ ನಿನ್ನ ತೋಳಲೆತ್ತಿಕೊಂಬೆ ಚಿನ್ನ||

ವಿಪ್ರವನಿತೆಯಂಕದಲ್ಲಿ Read More »

ವಿದುರನ ಭಾಗ್ಯವಿದು

ವಿದುರನ ಭಾಗ್ಯವಿದು|| ಇದ ಕಂಡು ಜಗವೆಲ್ಲ ತಲೆದೂಗುತಿಹುದು|| ಕುರುರಾಯನು ಖಳನನುಜನು ರವಿಜನು ಗುರುಗಾಂಗೇಯರು ನೋಡುತಿರೆ| ಹರಿಸಿ ರಥವನು ಬೀದಿಯಲಿ ಬರುತಲಿಹ ಹರಿಯನು ಕಂಡನು ಹರುಷದಲಿ|| ದಾರಿಲಿ ಬರುತಿಹ ಮುರವೈರಿಯನು ಕಂಡು ಹಾರುತ ಚೀರುತ ಕುಣಿಯುತಲಿ| ಹರುಷದ ಕಂಬನಿ ಧಾರೆಯ ಸುರಿಸುತ ಬಾರಿಬಾರಿಗು ಸಂತೋಷದಿ ಹಿಗ್ಗುವ|| ಆಟಕೆ ಲೋಕಗಳೆಲ್ಲವ ಸೃಜಿಸುವ ನಾಟಕಧರ ತನ್ನ ಲೀಲೆಯಲಿ| ನೀಟಾದವರ ಮನೆಗಳ ಜರಿದು ಕುಟೀರದಲಿ ಬಂದು ಕುಳಿತ ಹರಿ|| ಅಡಿಗಡಿಗೆ ತನ್ನ ತನುಮನ ಹರಹಿ ಅಡಿಗೆರಗುತ ಗದ್ಗದ ಸ್ವರದಿ| ನುಡಿಗಳು ತೊದಲಲು ರೋಮಾಂಚವಾಗಲು

ವಿದುರನ ಭಾಗ್ಯವಿದು Read More »

ವಂದೇ ಸಂತಂ

ವಂದೇ ಸಂತಂ ಶ್ರೀ ಹನುಮಂತಂ| ರಾಮದಾಸಮಮಲಂ ಬಲವಂತಂ|| ರಾಮಕಥಾಮೃತಮನುನಿವಸಂತಂ| ಪರಮಪ್ರೇಮಭರೇಣ ನಟಂತಂ|| ಪ್ರೇಮರುದ್ಧಗಲಮಶ್ರುವಹಂತಂ| ಪುಲಕಾಂಚಿತ ವಪುಷಾ ವಿಲಸಂತಂ|| ಕದಾಚಿದಾನಂದೇನ ಹಸಂತಂ| ಕ್ವಚಿತ್ ಕದಾಚಿದಪಿ ಪ್ರರುದಂತಂ|| ಸರ್ವಂ ರಾಮಮಯಂ ಪಶ್ಯಂತಂ| ರಾಮ ರಾಮ ಇತಿ ಸದಾ ಜಪಂತಂ|| ಸದ್ಭಕ್ತಿಪಥಂ ಸಮುಪದಿಶಂತಂ| ವಿಟ್ಠಲಪಂತಂ ಪ್ರತಿ ಸುಖಯಂತಂ|| —-ವಿಟ್ಠಲಪಂತ

ವಂದೇ ಸಂತಂ Read More »

ವನಸುಮದೊಲೆನ್ನ

ವನಸುಮದೊಲೆನ್ನ ಜೀ- ವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ ಹೇ ದೇವ|| ಜನಕೆ ಸಂತಸವೀವ ಘನನು ನಾನೆಂದೆಂಬ ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ|| ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜ ಸೌರಭವ ಸೂಸಿ ನಲವಿಂ| ತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿ- ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ|| ಉಪಕಾರಿ ನಾನು ಎ- ನ್ನುಪಕೃತಿಯು ಜಗಕೆಂಬ ವಿಪರೀತಮತಿಯನುಳಿದು| ವಿಪುಲಾಶ್ರಯವನೀವ ಸುಫಲ ಸುಮಭರಿತ ಪಾ- ದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು|| —-ಡಿ.ವಿ.ಜಿ.

ವನಸುಮದೊಲೆನ್ನ Read More »

ವಚನದಲ್ಲಿ ನಾಮಾಮೃತ

ವಚನದಲ್ಲಿ ನಾಮಾಮೃತ ತುಂಬಿ ನಯನದಲ್ಲಿ ನಿಮ್ಮ ಮೂರುತಿ ತುಂಬಿ|| ಮನದಲಿ ನಿಮ್ಮ ನೆನಹು ತುಂಬಿ ಕಿವಿಯಲಿ ನಿಮ್ಮ ಕೀರುತಿ ತುಂಬಿ|| ಕೂಡಲಸಂಗಮದೇವ ದೇವ ನಿಮ್ಮ ಚರಣಕಮಲದೊಳಗಾನು ತುಂಬಿ|| —-ಬಸವಣ್ಣ

ವಚನದಲ್ಲಿ ನಾಮಾಮೃತ Read More »

ರಾಮ ಘನಶ್ಯಾಮಂ

ರಾಮಂ ಘನಶ್ಯಾಮಂ ಗುಣಧಾಮಂ ರಮ್ಯನಾಮಂ| ಕ್ಷೇಮಂ ಮುಖಸೋಮಂ ರಿಪುಭೀಮಂ ಚಿತ್ತಕಾಮಂ ಭಜೇ|| ವೀರಂ ಮೇರುಧೀರಂ ಸುಕುಮಾರಂ ಆತ್ಮಸಾರಂ| ಶೂರಂ ಸರ್ವಾಧಾರಂ ಸದ್ವಿಚಾರಂ ಶುಭಾಕಾರಂ ಭಚೇ|| ಧ್ಯಾನಂ ಚಿತ್ತಲೀನಂ ಸ್ಮೃತಿಮಾನಂ ದಯಾಸ್ಥಾನಂ| ಜ್ಞಾನಂ ಸ್ವಯಂಭಾನಂ ಕಾಮಧೇನುಂ ಶ್ರುತಿಮಾನಂ ಭಜೇ|| ವೇದಂ ವೇದಗೀತಂ ನಿಜಬೋಧಂ ವಿಶ್ವಾತೀತಂ| ಮೋದಂ ದಶನಾದಂ ಕವಿನೋದಂ ಮೃದುಪಾದಂ ಭಜೇ|| ಶ್ರೀಶಂ ಶ್ರೀನಿವಾಸಂ ಮಂದಹಾಸಂ ಚಿದ್ವಿಲಾಸಂ| ಭಾಸಂ ಚಿತ್ತಹಾಸಂ ಅಚ್ಯುತೇಶಂ ಭವನಾಶಂ ಭಜೇ||

ರಾಮ ಘನಶ್ಯಾಮಂ Read More »

ರಾಮ ಮಂತ್ರವ ಜಪಿಸೋ

ರಾಮಮಂತ್ರವ ಜಪಿಸೋ ಹೇ ಮನುಜಾ|| ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ ಸೋಮಶೇಖರ ತನ್ನ ಭಾಮಿನಿಗೊರೆದಿಹ|| ಕುಲಹೀನನಾದರೂ ಕೂಗಿ ಜಪಿಸುವ ಮಂತ್ರ ಸರಿವ ಭೀತಿಯೊಳು ಉಚ್ಚರಿಪ ಮಂತ್ರ| ಹಲವು ಪಾಪಂಗಳ ಹದಗೆಡಿಸುವ ಮಂತ್ರ ಸುಲಭದಿಂದಲಿ ಸ್ವರ್ಗ ಸೂರೆಗೊಳ್ಳುವ ಮಂತ್ರ|| ಸಕಲ ವೇದಗಳಿಗೆ ಸಾರವೆನಿಪ ಮಂತ್ರ ಮುಕುತಿ ಮಾರ್ಗಕೆ ಇದೇ ಮೂಲಮಂತ್ರ| ಭಕುತಿರಸಕೆ ಭವ್ಯ ಮಾರ್ಗ ತೋರುವ ಮಂತ್ರ ಸುಖನಿಧಿ ಪುರಂದರವಿಟ್ಠಲನ ಮಹಾಮಂತ್ರ|| —-ಪುರಂದರದಾಸ

ರಾಮ ಮಂತ್ರವ ಜಪಿಸೋ Read More »

ರಾಮ ಪಾಲಯ

ರಾಮ ಪಾಲಯ| ದಶರಥ| ರಾಮ ಪಾಲಯ|| ರಾಮರೂಪಜಿತಕಾಮ ನಿರಂತರ| ತರುಣಾರುಣಮೃದುಚರಣಾಂಬುಜಯುಗ|| ಅಮಲಕಮಲನಿಜನಾಭಿವಿರಾಜಿತ| ಹರಸುರಸರಸಿಜಭವಗರುಡಾರ್ಚಿತ|| ವಸುಧೇಶ್ವರದಶಶಿರಮದಖಂಡನ ಇಂದುವದನದಶಸ್ಯಂದನನಂದನ|| ಕರುಣಾಕರತರಣಿಜವರದಾಯಕ| ವರನರಸಿಂಹದಾಸಾರ್ಚಿತಪಾದುಕ|| —-ನರಸಿಂಹದಾಸ

ರಾಮ ಪಾಲಯ Read More »

ರಾಮನಾಮ ಜಪನಾ ರೇ

ರಾಮನಾಮ ಜಪನಾ ರೇ ಪ್ರಬಲ ಹೇ ಜಗಬಲ ನಟನಾ ರೇ|| ಮಾತಾಪಿತಾ ಜನ ಬಾಂಧವ ಹಾರೀ| ಝೂಟೇ ಜಗತ ಕಲ್ಪನಾ ರೇ|| ದುನಿಯಾ ಮೇ ತೂ ಅಕೇಲಾ ಹೈ ಚಾರ್ ದಿನೋಕಾ ಮೇಲಾ ಹೈ ದುನಿಯಾ ಹೈ ಏಕ ಆನೀ ಜಾನೀ|| ಅಬತೋ ಧ್ಯಾನ ಲಗಾಲೇನಾ ನೈಯ್ಯಾ ಪಾರ ಲಗಾಲೆನಾ ಛಂದಕೇ ಬಿನತಿ ಪ್ರಭುನೇ ಮಾನಿ|| —-ಮುನ್ ಶೀದೀ

ರಾಮನಾಮ ಜಪನಾ ರೇ Read More »

ರಾಮದೂತ ಹನುಮಾನ್

ರಾಮದೂತ ಹನುಮಾನ್ ವಿಜಯತೇ ರಾಮದೂತ ಹನುಮಾನ್|| ಯೋ ರಘುಪತಿನಾ ಸಹ ಸುಗ್ರೀವಂ ಮೈತ್ರ್ಯಾ ಯೋಜಿತವಾನ್|| ತೀರ್ತ್ವಾ ದುಸ್ತರಸಿಂಧುಂ ಸೀತಾ- ಶುದ್ಧಿಂ ಯಃ ಕೃತವಾನ್|| ಭಿತ್ವಾರಣ್ಯಂ ಹತ್ವಾ ಅಕ್ಷಂ ಲಂಕಾಂ ಜ್ವಾಲಿತವಾನ್|| ಪುನರೇತ್ಯ ಶ್ರೀ ರಾಮಂ ವಿಟ್ಠಲ- ಮಪಿ ಯೋ ಹರ್ಷಿತವಾನ್|| —-ವಿಟ್ಠಲಪಂತ

ರಾಮದೂತ ಹನುಮಾನ್ Read More »

ರಾಮಕೃಷ್ಣ ಭಗವಾನ್

ರಾಮಕೃಷ್ಣ-ಭಗವಾನ್ ವಿಜಯತೇ ರಾಮಕೃಷ್ಣ-ಭಗವಾನ್|| ಯೋ ಲೋಕಾನುಗ್ರಹಕರಣಾರ್ಥಂ ಜನ್ಮ ಸ್ವೀಕೃತವಾನ್| ವಿಜಯತೇ|| ಯಸ್ಸರ್ವೇಷಾಂ ಯೋಗಪಥಾನಾಮ್ ಐಕ್ಯಂ ದರ್ಶಿತವಾನ್| ವಿಜಯತೇ|| ಯಃ ಸ್ವಕಲತ್ರೇ ಮಾತರಿ ಚ ಶ್ರೀ- ಕಾಲೀಮೀಕ್ಷಿತವಾನ್| ವಿಜಯತೇ|| ಯೋ ವೇದಾರ್ಥಂ ಸರಲೈರ್ವಚನೈಃ ಪಾಮರಸುಗಮಿತವಾನ್| ವಿಜಯತೇ|| ಯಶ್ಚ ವಿವೇಕಾನಂದಮುಖೇನ ಜ್ಞಾನಂ ಕಾರಿತವಾನ್| ವಿಜಯತೇ|| ಯೋಂತರ್ಯಾಮೀ ಸಕಲಜನಾನಾಂ ಹೃದಯೇ ಸಂಸ್ಥಿತವಾನ್| ವಿಜಯತೇ|| —-ಸ್ವಾಮಿ ಹರ್ಷಾನಂದ

ರಾಮಕೃಷ್ಣ ಭಗವಾನ್ Read More »

ರಾಮಕೃಷ್ಣ ಪದಾಂಬುಜದಿ

ರಾಮಕೃಷ್ಣ ಪದಾಂಬುಜದಿ ನಲಿಯೋ ಎನ್ನ ಮನದ ಭ್ರಮರ| ಮುಳ್ಳಿನಿಂ ಮುಸುಕಿದೆ ವಿಷಯಕೇದಗೆ ನಿಲ್ಲದಿರಲ್ಲಿ ನೀ ಮೈಯನು ಮರೆತು|| ಜನುಮ ಮರಣ ವಿಷಮ ವ್ಯಾಧಿಯ ಎನಿತು ಕಾಲ ಸಹಿಪೆ ಇನ್ನು| ಪ್ರೇಮಸುಧೆಯ ಸವಿ ಶ್ರೀಪದದಿ ಭವದ ಯಾತನೆ ಉಳಿಯದಿನ್ನು|| ಧರ್ಮಾಧರ್ಮ-ಸುಖ-ದುಃಖ-ಶಾಂತಿ-ತಾಪ ದ್ವಂದ್ವದಲ್ಲಿರಲು ಮುಕ್ತಿಯದೆಲ್ಲಿ| ಜ್ಞಾನಖಡ್ಗದಿ ಪರಮ ಯತ್ನದಿ ಕತ್ತರಿಸು ನೀ ಕರ್ಮದ ಪಾಶವ|| ರಾಮಕೃಷ್ಣನಾಮ ನಾಲಿಗೆ ನುಡಿಯಲಿ ಮೋಹದ ಕತ್ತಲು ಕಳೆವುದಾಗ| ದುಃಸ್ವಪ್ನ ಜ್ವಾಲೆ ಆರುವುದಾಗ ಮತ್ತಿನ ನಿದ್ರೆಯು ಉಳಿಯದಿನ್ನು||

ರಾಮಕೃಷ್ಣ ಪದಾಂಬುಜದಿ Read More »

ರಾಮಕೃಷ್ಣಾನಂದ ಸ್ವಾಮಿಯೆ

ರಾಮಕೃಷ್ಣಾನಂದ ಸ್ವಾಮಿಯೆ ನಮ್ಮ ನಮನವು ನಿನಗೆ ಯತಿಯೆ|| ವೇದಶಾಸ್ತ್ರದ ಜ್ಞಾನನಿಧಿಯೆ ಭೇದದರ್ಶನ ರಹಿತ ಸಂತನೆ ವಾದದೂರನೆ ಶಾಂತಿಪ್ರಿಯನೆ ನಮ್ಮ ನಮನವು ನಿನಗೆ ಯತಿಯೆ|| ಹರಿಯ ಪಾದದಿ ಪರಮಭಕುತಿಯು ಗುರುವಿನಡಿಯಲಿ ಅದುಕು ಮಿಗಿಲು ಹರಸುತೆಮ್ಮನು ಶಮನಗೊಳಿಸು ನಮ್ಮ ನಮನವು ನಿನಗೆ ಯತಿಯೆ|| ತ್ಯಾಗಯೋಗದ ಯುಗಳಮೂರ್ತಿಯೆ ಭಾಗ್ಯವೆಮ್ಮದು ನಿನ್ನ ಕರುಣೆಯೆ ಹೋಗಲಾಡಿಸು ಭವದ ಬವಣೆ ನಮ್ಮ ನಮನವು ನಿನಗೆ ಯತಿಯೆ|| —-ಸ್ವಾಮಿ ಹರ್ಷಾನಂದ

ರಾಮಕೃಷ್ಣಾನಂದ ಸ್ವಾಮಿಯೆ Read More »

ರಾಮಕೃಷ್ಣ ತಪೋಸೂರ್ಯ

ರಾಮಕೃಷ್ಣ ತಪೋಸೂರ್ಯ ಕಿರಣಬಿಂಬ ಚಂದ್ರಿಕೆ ಓ ತಾಯಿ ಅಂಬಿಕೆ|| ಗಿರಿಯ ದರಿಯ ನೆಲವ ಜಲವ ತಬ್ಬಿ ನಿಂತ ಕರುಣೆಯೆ ವಾತ್ಸಲ್ಯವರಣೆಯೆ|| ರಾಮಕೃಷ್ಣ ತಪೋವನದ ಪರ್ಣಕುಟಿಯ ದೀಪವೆ| ಬಳಿಗೆ ಬಂದ ಹಣತೆಗಳಿಗೆ ಬೆಳಕನಿತ್ತ ಕಿರಣವೆ ಮೌನಪ್ರಭಾವಲಯವೆ|| ಸಂಕಟಗಳ ವನವಸನವ- ನುಟ್ಟು ನಿಂತ ಶಿಖರವೆ| ನದನದಿಗಳ ವಾತ್ಸಲ್ಯದ ಹಾಲೂಡಿದ ತೀರ್ಥವೆ ದಿವ್ಯ ಕೃಪಾರೂಪವೆ|| —-ಜಿ.ಎಸ್. ಶಿವರುದ್ರಪ್ಪ

ರಾಮಕೃಷ್ಣ ತಪೋಸೂರ್ಯ Read More »

ರಾಮಕೃಷ್ಣ ಗುರುವೇ

ರಾಮಕೃಷ್ಣಗುರುವೇ ಪರಮಹಂಸ ಗುರುವೇ| ಕಾಮಿತದಾಯಕ ಪ್ರೇಮದಿ ನಮಿಪೆವು || ಸಕಲ ಮತವ ನೀನೇಕವೆಂದೆಣಿಸಿದೆ ಅಕಲಂಕಮಹಿಮ ಮಮ ದೇವ| ಲೋಕಸೇವೆಯಿಂ ಖ್ಯಾತಿಯ ಹೊಂದಿದೆ ಮುಕ್ಕಣ್ಣನ ಪ್ರಿಯ ನಮಿಪೆವು ದೇವ|| ಸ್ವಾಮಿ ವಿವೇಕಾನಂದನ ಗುರುವೇ ಪ್ರೇಮದಿ ಸಲಹೈ ಸಕಲ ಲೋಕವ| ತಾಮಸ ಮಾಡದೆ ಕಾವುದು ಎಮ್ಮನು ಚಾಮುಂಡಾಂಬೆಯ ವರಭಕ್ತನೆ|| —-ಮೈಸೂರು ದೇವೇಂದ್ರಪ್ಪ

ರಾಮಕೃಷ್ಣ ಗುರುವೇ Read More »

ರಾಮ ಎಂಬುವ ಎರಡು

ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರಯ್ಯ|| ‘ರಾ’ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ಆಯಸ್ಥಿಗತವಾದ ಅತಿ ಪಾಪವನ್ನು| ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ ದಾಯವನು ವಾಲ್ಮೀಕಿ ಮುನಿರಾಯ ಬಲ್ಲ|| ಮತ್ತೆ ‘ಮ’ ಎಂದೆನಲು ಹೊರಬಿದ್ದ ಪಾಪಗಳು ಒತ್ತಿ ಒಳಪೊಗದಂತೆ ಕವಾಟವಾಗಿ| ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ ಭಕ್ತವರ ಹನುಮಂತನೊಬ್ಬ ತಾ ಬಲ್ಲ|| ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೆಂದು ಪರಮ ವೇದಗಳೆಲ್ಲ ಪೊಗಳುತಿಹವು| ಸಿರಿಯರಸ ಪುರಂದರ ವಿಟ್ಠಲನ ನಾಮವನು ಸಿರಿಕಾಶಿಯೊಳಗಿಪ್ಪ ಶಿವನು

ರಾಮ ಎಂಬುವ ಎರಡು Read More »

ರಾಘವಂ ಕರುಣಾಕರಂ

ರಾಘವಂ ಕರುಣಾಕರಂ ಭವನಾಶನಂ ದುರಿತಾಪಹಂ| ಮಾಧವಂ ಖಗಗಾಮಿನಂ ಜಲರೂಪಿಣಂ ಪರಮೇಶ್ವರಂ|| ಪಾಲಕಂ ಜನತಾರಕಂ ಭವಹಾರಕಂ ರಿಪುಮಾರಕಂ| ತ್ವಾಂ ಭಜೇ ಜಗದೀಶ್ವರಂ ನರರೂಪಿಣಂ ರಘುನಂದನಂ|| ಚಿದ್ಘನಂ ಚಿರಜೀವಿನಂ ಮಣಿಮಾಲಿನಂ ವರದೋನ್ಮುಖಂ| ಶ್ರೀಧರಂ ಧೃತಿದಾಯಕಂ ಬಲವರ್ಧನಂ ಗತಿದಾಯಕಂ| ಶಾಂತಿದಂ ಜನತಾರಕಂ ಶರಧಾರಿಣಂ ಗಜಗಾಮಿನಂ ತ್ವಾಂ ಭಜೇ ಜಗದೀಶ್ವರಂ ನರರೂಪಿಣಂ ರಘುನಂದನಂ|| —-ಆನಂದರಾಮಾಯಣಮ್

ರಾಘವಂ ಕರುಣಾಕರಂ Read More »

ರಾಘವ ನೀ ಬಾ

ರಾಘವ ನೀ ಬಾ ರಘುಕುಲನಂದನ ಅಘಮರ್ಷಣನೇ ನೀ ಬಾರೋ| ದಶಮುಖರಾವಣನ ಲಂಕೆಲಿ ಮಡುಹಿದ ಕೌಸಲ್ಯಾತನಯನೇ ನೀ ಬಾರೋ|| ಧನುರ್ಬಾಣವ ಕರದಲಿ ಧರಿಸಿದ ದನುಜಕುಲಾಂತಕ ನೀ ಬಾರೋ| ಇನವಂಶವನು ಪಾವನಗೈದ ಮನುಜಶ್ರೇಷ್ಠನೇ ನೀ ಬಾರೋ|| ಅಹಲ್ಯೋದ್ಧಾರಕ ತಾಟಕಿಘಾತಕ ಅಹರಹ ಭಜಿಸುವೆ ನೀ ಬಾರೋ| ಇಹದಲಿ ಪರದಲಿ ಗತಿ ನೀನೆನ್ನುತ ತಹತಹ ಪಡುತಿಹೆ ನೀ ಬಾರೋ|| ಪಿತೃಭಕ್ತನೇ ಸತ್ಯಶೀಲನೇ ಸತತವು ನಿನ್ನನೇ ಸ್ತುತಿಸುವೆ ಬಾರೋ| ನತಜನರನು ಪರಿಪಾಲಿಸುವವನೇ ಸೀತಾರಮಣಾ ನೀ ಬಾರೋ|| —-ಸ್ವಾಮಿ ಹರ್ಷಾನಂದ

ರಾಘವ ನೀ ಬಾ Read More »

ರಾಗಿ ತಂದೀರ್ಯಾ

ರಾಗಿ ತಂದೀರ್ಯಾ ಭಿಕ್ಷಕೆ ರಾಗಿ ತಂದೀರ್ಯಾ| ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು|| ಅನ್ನದಾನವ ಮಾಡುವರಾಗಿ ಅನ್ನಛತ್ರವನಿಟ್ಟವರಾಗಿ| ಅನ್ಯವಾರ್ತೆಯ ಬಿಟ್ಟವರಾಗಿ ಅನುದಿನ ಭಜನೆಯ ಮಾಡುವರಾಗಿ|| ಮಾತಾಪಿತರನು ಸೇವಿಪರಾಗಿ ಪಾಪಕಾರ್ಯವ ಬಿಟ್ಟವರಾಗಿ| ರೀತಿಯ ಬಾಳನು ಬಾಳುವರಾಗಿ ನೀತಿಮಾರ್ಗದಲಿ ಖ್ಯಾತರಾಗಿ|| ಗುರುಕಾರುಣ್ಯವ ಪಡೆದವರಾಗಿ ಗುರುವಾಕ್ಯವನು ಪಾಲಿಪರಾಗಿ| ಗುರುವಿನ ಪಾದವ ಸ್ಮರಿಸುವರಾಗಿ ಪರಮಪುಣ್ಯವ ಮಾಡುವರಾಗಿ|| ಕಾಮಕ್ರೋಧವ ಅಳಿದವರಾಗಿ ನೇಮನಿಷ್ಠೆಗಳ ಮಾಡುವರಾಗಿ| ರಾಮನಾಮವ ಜಪಿಸುವರಾಗಿ ಪ್ರೇಮದಿ ಕುಣಿಕುಣಿದಾಡುವರಾಗಿ|| ಹರಿಯನು ಅನುದಿನ ನೆನೆಯುವರಾಗಿ ಗುರುತಿಗೆ ಬಾಹೋರಂಥವರಾಗಿ| ಕರೆಕರೆ ಭವವನು ನೀಗುವರಾಗಿ ಪುರಂದರವಿಟ್ಠಲನ ಸೇವಿಪರಾಗಿ|| —-ಪುರಂದರದಾಸ

ರಾಗಿ ತಂದೀರ್ಯಾ Read More »

ಯಾವ ಫಲ ಬೇಕು ಎನಗೆ

ಯಾವ ಫಲ ಬೇಕು ಎನಗೆ ಜನ್ಮ ಸಫಲವ ಗೈವ ಫಲವಿರಲು ಸುಮ್ಮಗೆ|| ಮೋಕ್ಷಫಲಗಳ ಬಿಡುವ ಶ್ರೀರಾಮತರುವಿಹುದು ನನ್ನ ಎದೆಯೊಳಗೆ|| ಶ್ರೀರಾಮಕಲ್ಪತರು- ಮೂಲದಲಿ ನಾ ಕುಳಿತು ಬೇಕಾದ ಪಲಗಳನು ಪಡೆಯುತಿರುವೆ|| ಪ್ರತಿಫಲವ ನಾ ಬಯಸೆ ಜಗದ ಕಹಿ ಫಲಗಳನು ನಿಮ್ಮೊಂದಿಗೇ ಬಿಟ್ಟು ಮುನ್ನಡೆಯುವೆ|| —-ವಚನವೇದ

ಯಾವ ಫಲ ಬೇಕು ಎನಗೆ Read More »

ಯಾರ ಮಹಿಮಾ ಜ್ಯೋತಿ

ಯಾರ ಮಹಿಮಾ ಜ್ಯೋತಿ ಜಗವನು ಅಮೃತದಂದದಿ ಎಲ್ಲರೆದೆಯನು ತುಂಬಿ ರೋಮಾಂಚನವ ಗೈವುದೋ ಅಂಥ ಪ್ರೇಮದ ಜಲಧಿಯ ಜೀವ ನಿನ್ನೊಳಗಿರುವವರೆಗೂ ಸಾರು ಆತನ ಮಹಿಮೆಯ|| ಯಾರ ಶ್ರೀಶುಭನಾಮ ಹೃದಯದ ಕೊರಗನೆಲ್ಲ ಕಳೆವುದೋ ಯಾರು ನೆಲ ಜಲ ಗಗನ ದೇಶವ- ನೆಲ್ಲ ವ್ಯಾಪಿಸಿ ನಿಲುವರೋ|| ಯಾರ ಅನ್ವೇಷಣೆಯಲೀ ಜಗ ಬರಿದೆ ತೊಳಲುತಲಿರುವುದೋ ಅಂಥ ದೇವನ ತಿಳಿದು ಬಣ್ಣಿಪ ಶಕ್ತಿ ಯಾರಿಗೆ ಲಭಿಸಿದೆ ಅವನ ಮಹಿಮೆಗೆ ಪಾರವೆಲ್ಲಿದೆ ಆದಿ ಅಂತ್ಯಗಳೆಲ್ಲಿವೆ|| ನಿಜದ ತಿಳಿವಿನ ತವರು ಅವನು ನಿತ್ಯ ಜೀವನ ಚೇತನ ನಿತ್ಯ

ಯಾರ ಮಹಿಮಾ ಜ್ಯೋತಿ Read More »

ಯಾರ ಪ್ರೇಮದ ಪರಮಪೂರವು

ಯಾರ ಪ್ರೇಮದ ಪರಮಪೂರವು ನೀಚರೆದೆಗೂ ಹರಿಯಿತೋ, ಯಾವ ಲೋಕಾತೀತಮಹಿಮನ ಕರಣೆ ಲೋಕಕೆ ದುಡಿಯಿತೋ, ಯಾವನಪ್ರತಿ-ಮಹಿಮನೋ ಮೇಣ್ ಮಾತೆ ಸೀತೆಯ ನಾಥನೋ, ಯಾರು ಸೀತೆಯ ಭಕುತಿಯಿಂದಲಿ ಜ್ಞಾನದೇಹದಿ ವ್ಯಾಪ್ತನೋ ಯಾರು ಮಧುತರ ಶಾಂತಗೀತೆಯ ಯುದ್ಧರಂಗದಿ ಮೊಳಗುತ ಪ್ರಳಯಶಬ್ದವ ಸ್ತಬ್ಧಗೊಳಿಸುತ ಸಿಂಹನಾದವ ಸಿಡಿಸುತ ಮೋಹತಿಮಿರವನಿಲ್ಲಗೈಯುತ ಕೃಷ್ಣರೂಪದಿ ನಿಂದನೋ ಅವನೆ ಇಂದಿಗೆ ರಾಮಕೃಷ್ಣನ ಹೆಸರೊಳೆಸೆಯುತಲಿರುವನು! —-ಮುರಳೀಧರ

ಯಾರ ಪ್ರೇಮದ ಪರಮಪೂರವು Read More »

ಯಾರನು ಬಯಸಿ

ಯಾರನು ಬಯಸಿ ಶ್ರೀಭುವನೇಶ್ವರಿ ಹರಕೆಯ ಹೊತ್ತಳೊ ವೀರೇಶ್ವರನಲಿ ವೀರೇಶ್ವರ ಶಿವ ಯಾವನ ರೂಪದಿ ಧರೆಯನು ಪಾವನಗೈದನೊ ಅಂತಹ ವೀರ ವಿವೇಕಾನಂದ ನಮೋ|| ಯಾವನ ಲೀಲೆಯ ಸಹಿಸದೆ ಮಾತೆಯು ‘ಶಿವನೇ ನೀ ಬಾರೆನ್ನುತ ಮೊರೆಯಿಡೆ ಇವನನು ಏತಕೆ ಕಳುಹಿದೆ?’ ಎನ್ನುತ ಯಾವನ ಹಂಗಿಸುತಿದ್ದಳೊ ಅಂತಹ ವೀರ ವಿವೇಕಾನಂದ ನಮೋ|| ‘ಇರುವನೊ ದೇವರು? ಇಲ್ಲವೊ?’ ಎನ್ನುತ ಗುರುವನು ಭರದಿಂ ಪ್ರಶ್ನಿಸಿ ಕೂಡಲೆ ‘ಇರುವನು ತೋರುವೆ ನಿನಗೂ!’ ಎನ್ನುವ ಮರುದನಿಯಿಂದ ಚಕಿತನಾದಂತಹ ವೀರ ವಿವೇಕಾನಂದ ನಮೋ|| ರಾಮಕೃಷ್ಣರಲಿ ಸೇವಾವೃತ್ತಿಯ ಪ್ರೇಮದಿ ಮಾಡುತ

ಯಾರನು ಬಯಸಿ Read More »