admin

ಅಬಕೀ ಟೇಕ ಹಮಾರೀ

ಅಬಕೀ ಟೇಕ ಹಮಾರೀ ಲಾಜ ರಾಖೋ ಗಿರಿಧಾರೀ|| ಜೈಸೀ ಲಾಜ ರಾಖೀ ಅರ್ಜುನಕೀ ಭಾರತಯುದ್ಧ ಮಝಾರೀ ಸಾರಥಿ ಹೋಕೇ ರಥಕೋ ಹಾಂಕ್ಯೋ ಚಕ್ರಸುದರ್ಶನಧಾರೀ ಭಕ್ತನಕೀ ಟೀಕ್ ನ ಟಾರೀ|| ಜೈಸೀ ಲಾಜ ರಾಖೀ ದ್ರೌಪದೀಕೀ ಹೋನ ನ ದೀನಿ ಉಘಾರೀ ಖೈಂಚತ ಖೈಂಚತ ದೋ ಭುಜ ಥಕೇ ದುಶ್ಶಾಸನ ಪಚಿಹಾರೀ ಚೀರ ಬಢಾಯೋ ಮುರಾರೀ|| ಸೂರದಾಸಕೀ ಲಾಜ ರಾಖೋ ಅಬ್ ಕೋ ಹೈ ರಖವಾರೀ ರಾಧೇ ರಾಧೇ ಶ್ರೀವರ ಪ್ಯಾರೋ ಶ್ರೀವೃಷಭಾನದುಲಾರೀ ಶರಣ ತಕ್ ಆಯೋ ತುಮ್ಹಾರೀ|| […]

ಅಬಕೀ ಟೇಕ ಹಮಾರೀ Read More »

ಭೈಯಾರೇ ಕನ್ಹೈಯ್ಯಾರೇ

ಭೈಯಾರೇ ಕನ್ಹೈಯ್ಯಾರೇ ನೇಕ ದರಶ ದಿಖಾಯೇ ಜಾ ರೇ| ಶ್ಯಾಮಲಿಯಾ ಪ್ಯಾರೇ ಬನ್ಸೀವಾರೇ ಮೇರೇ ಛಾತಿಯಾಪೇ ಆಜಾ ರೇ|| ಮೇರೋ ಭೈಯಾ ವರಜ್ ಲಾಲಾ ವ್ರಜಬಾಲ ಸೈಯಾ ನಂದದುಲಾಲಾ| ಯಮುನಾಕಿನಾರೇ ಧೀರಸಮೀರೇ ನೇಕಬಾಸರೀ ಬಾಜಾಯೇ ಜಾ ರೇ || ಪ್ರಾಣಕೀ ಪ್ರಾಣ ಭೈಯಾ ಮೇರೋ ಭಿಕ್ಷಾ ಮಾಂಗಿ ದರಶನ ತೇರೋ| ನಯನಮೇ ಠಾರೋ ಪಿಯಾಸ ನಿವಾರೋ ಮೇರೇ ರಾಜನಕೀ ರಾಜಾ ರೇ|| —-ವ್ರಜೇಂದ್ರನಾಥ ಮುಖ್ಯೋಪಾಧ್ಯಾಯ

ಭೈಯಾರೇ ಕನ್ಹೈಯ್ಯಾರೇ Read More »

ಅಗ್ನಿಮಂತ್ರೇ ದೀಕ್ಷಿತ ಕರ

ಅಗ್ನಿಮಂತ್ರೇ ದೀಕ್ಷಿತ ಕರ ಸಂತಾನೇ ತವ ಆಜ್| ಆಶೀರ್ವಾದೇರ ವರ್ಮ ಪರಾಓ ಘುಚಾಯೇ ದೈನ್ಯ ಸಾಜ್|| ತಪ್ತ ಕರ ಮಾ ಹೃದಯ-ರುಧಿರ ದೂರ ಕರೇ ದಾಓ ಭೀತಿ ಅಶ್ರುನೀರ| ದಾಡಾಇ ಆಮರಾ ಮಾ ತೋರೇ ಘಿರಿಯಾ ವಿಶ್ವ ಸಭಾರ ಮಾಝ್|| ಮಾನುಷ್ ಆಮರಾ ನಹಿ ತ ಮಾ ಹೀನ ತುಇ ಜಾರ ಮಾ ಸೇ ಕಿ ಕಭೂ ದೀನ| ತಬೇ ಕೇನ ಮಿಛೇ ಪಡೇ ಥಾಕಾ ಪಿಛೇ ಕೇನ ಏ ಅಲೀಕ ಲಾಜ್|| ಏಸೋ ಏಸೋ ಏಸೋ

ಅಗ್ನಿಮಂತ್ರೇ ದೀಕ್ಷಿತ ಕರ Read More »

ಹೇ ರಾಮ ಮತ್ತೆನಗೆ ದಿಕ್ಕಾರು

ಹೇ ರಾಮ ಮತ್ತೆನಗೆ ದಿಕ್ಕಾರು ಅಯ್ಯಾ ಬೇರಾರು ದಿಕ್ಕಿಲ್ಲ ನೀನಲ್ಲದಯ್ಯಾ|| ಅಡಿಗಡಿಗೆ ನಿನ್ನನ್ನೆ ನೆನೆಯುತಿಹೆನಯ್ಯಾ ತಡಮಾಡದೆನ್ನನ್ನು ಕಾಯಬೇಕಯ್ಯಾ|| ನಾನೆಷ್ಟು ಜಾರಿದರು ಈ ಧರಣಿಯೊಳಗೆ ನೀನಲ್ಲದಿನ್ನಾರು ಅವಲಂಬವೆನಗೆ|| ನಿನ್ನನ್ನೆ ನಂಬಿದೆನು ಮನದಾಳದಲ್ಲಿ ನಿನ್ನ ಷಡ್ಗುಣವನ್ನೆ ಪೊಗಳುತ್ತ ಇಲ್ಲಿ|| ದಯೆಯ ಸಾಗರ ನೀನು ದಯನೀಯ ನಾನು ನ್ಯಾಯವೇ ನನ್ನನ್ನು ಕಾಪಾಡದಿಹುದು|| —-ಸ್ವಾಮಿ ಹರ್ಷಾನಂದ

ಹೇ ರಾಮ ಮತ್ತೆನಗೆ ದಿಕ್ಕಾರು Read More »

ಹೇ ಆನಂದಮಯಿ

ಹೇ ಆನಂದಮಯಿ ನೀ ಎನ್ನ ನಿರಾನಂದ ಗೈಯದಿರು|| ನಿನ್ನ ಪಾದವನುಳಿದು ಅನ್ನದಾವುದನು ಎನ್ನಯ ಮನವು ಕಾಣದು ತಾಯಿ| ಮೃತ್ಯುವು ಬಂದಿಲ್ಲಿ ಸಿಡಿಗುಟ್ಟುತಿಹನು ತಪ್ಪೆನ್ನದೇನೋ ಅರಿಯೆನು ನಾನು|| ಭವಾನಿಯೆನ್ನುತ ಭವವ ದಾಟುವೆ ಎನ್ನುವ ಆಸೆಯು ಇದ್ದಿತು ಮನದಿ| ತುಂಬಿದ ಕಡಲೊಳು ಮುಳುಗಪೆ ಎಂಬುದ ಕಂಡವನಲ್ಲ ನಾ ಕನಸಿನಲೂ|| ಹಗಲಿರುಳು ಶ್ರೀದುರ್ಗಾನಾಮವ ನೆಚ್ಚಿ ತೇಲುತಲಿದ್ದರೂ ತಪ್ಪದೀ ದುಃಖವು| ಈ ಬಾರಿ ನಾನಿಲ್ಲಿ ಮುಳುಗಿದರಂತೂ ಜಪಿಸರು ಇನ್ನಾರೂ ನಿನ್ನಯ ನಾಮವ||

ಹೇ ಆನಂದಮಯಿ Read More »

ಹುವ್ವ ತರುವರ ಮನೆಗೆ

ಹುವ್ವ ತರುವರ ಮನೆಗೆ ಹುಲ್ಲ ತರುವ ಅವ್ವ ಲಕುಮೀರಮಣ ಇವಗಿಲ್ಲ ಗರುವ|| ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವ ಇಂದಿರಾರಮಣಗೆ ಅರ್ಪಿತವೆನುತ| ಒಂದೇ ಮನಸಿನಲಿ ಸಿಂಧುಶಯನ ಎನೆ ಎಂದೆಂದು ವಾಸಿಪನಾ ಮಂದಿರದೊಳಗೆ|| ಪಾಂಡವರ ಮನೆಯೊಳಗೆ ಕುದುರೆಗಳ ತಾ ತೊಳೆದು ಪುಂಡರೀಕಾಕ್ಷ ತಾ ಹುಲ್ಲನು ತಿನಿಸಿ| ಅಂಡಜವಾಹನ ನಮ್ಮ ಪುರಂದರವಿಟ್ಠಲನು ತೊಂಡರಿಗೆ ತೊಂಡನಾಗಿ ಸಂಚರಿಸುತಿಹನು|| —-ಪುರಂದರದಾಸ

ಹುವ್ವ ತರುವರ ಮನೆಗೆ Read More »

ಹಾಂಗೆ ಇರಬೇಕು

ಹಾಂಗೆ ಇರಬೇಕು ಸಂಸಾದಲ್ಲಿ ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ|| ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ ಆ ಕ್ಷಣದಲ್ಲಿ ಹಾರಿ ಹೋದಂತೆ|| ನಾನಾ ಪರಿಯಲಿ ಸಂತೆ ನೆರೆದಂತೆ ನಾನಾ ಪಂಥವ ಹಿಡಿದು ಹೋದಂತೆ|| ಮಕ್ಕಳು ಆಡಿ ಮನೆ ಕಟ್ಟಿದಂತೆ ಆಟ ಸಾಕೆಂದು ಅಳಿಸಿ ಪೋದಂತೆ|| ವಸತಿಕಾರನು ವಸತಿ ಕಂಡಂತೆ ಹೊತ್ತಾರೆದ್ದು ಹೊರಟು ಹೋದಂತೆ|| ಸಂಸಾರಪಾಶವ ನೀನೇ ಬಿಡಿಸಯ್ಯಾ ಕಂಸಾರಿ ಪುರಂದರವಿಟ್ಠಲರಾಯ|| —-ಪುರಂದರದಾಸ

ಹಾಂಗೆ ಇರಬೇಕು Read More »

ಹಂಸ ನಿನ್ನಲಿ ನೀ ನೋಡೋ

ಹಂಸ ನಿನ್ನಲಿ ನೀ ನೋಡೋ| ಭವ- ಪಾಶಮುಕ್ತನಾಗಿ ಹರಿಯನ್ನು ಕೂಡೋ|| ಪಕ್ಕಗಳೆರಡುಂಟು ನಿನಗೆ| ನೀ ಹೊಕ್ಕು ಹೋಗುವೆ ಮೂರು ಪಂಜರದೊಳಗೆ| ಲೆಕ್ಕವಿಲ್ಲದ ದಾರಿ ನಿನಗೆ| ಈಗ ಸಿಕ್ಕಿದೆಯೋ ಮಾಯಾಪಾಶದೊಳಗೆ|| ಹಬ್ಬದ ಸವಿಗೆ ನೀ ಬಂದೆ| ಬಲು ಕೊಬ್ಬಿಲಿ ಕಾಣದೆ ವಿಷದೊಳು ಬಿದ್ದೆ| ದಿಬ್ಬಣದಲಿ ಮೈಯ ಮರೆತೆ| ನೀ ಒಬ್ಬನೆ ಹೋಗಿ ಕಾಲಕ್ಕೆ ಗುರಿಯಾದೆ|| ಯಾರಿಗೆ ಯಾರು ಮತ್ತಿಲ್ಲ| ನಡು- ದಾರಿಯೊಳಗೆ ಕೈಯ ಬಿಡುವರೆ ಎಲ್ಲ| ದೂರ ಹೋಯಿತು ಪ್ರಾಯವೆಲ್ಲ| ಸಿರಿ ಪುರಂದರವಿಟ್ಠಲನಲದೆ ಬೇರೆಯಿಲ್ಲ|| —-ಪುರಂದರದಾಸ

ಹಂಸ ನಿನ್ನಲಿ ನೀ ನೋಡೋ Read More »

ಹರಿಯ ನೆನೆಸಿದ ದಿವಸ

ಹರಿಯ ನೆನೆಸಿದ ದಿವಸ ಶುಭಮಂಗಳ ಹರಿಯ ನೆನೆಸಿದ ದಿವಸ ಅವಮಂಗಳ|| ಹರಿಯ ನೆನೆಸಿದ ನಿಮಿಷ ಆವಾಗಲೂ ಹರುಷ ಹರಿಯ ನೆನೆಸದ ನಿಮಿಷ ದುರ್ಮಾನಸ| ಹರಿಯ ನೆನೆಸಿದ ಘಳಿಗೆ ಮುಕ್ತಿಗೆ ಬೆಳವಳಿಗೆ ಹರಿಯ ನೆನೆಸದ ಘಳಿಗೆ ಯಮನ ಬಳಿಗೆ|| ಹರಿಯ ನೆನೆಸಿದ ನರನು ಅವನೇನೆ ಕೃತಕೃತ್ಯ ಹರಿಯ ನೆನೆಸದ ನರನ ಜನುಮ ವ್ಯರ್ಥ| ಪುರಂದರನ ಪ್ರೀತಿಯ ಶ್ರೀ ವಿಜಯವಿಟ್ಠಲನಂಘ್ರಿ ಮರೆಯದೆ ಅನುದಿನವು ನೆನೆದವನೆ ಮುಕ್ತ|| —-ವಿಜಯದಾಸ

ಹರಿಯ ನೆನೆಸಿದ ದಿವಸ Read More »

ಹರಿಭಜನೆ ಮಾಡೋ

ಹರಿಭಜನೆ ಮಾಡೋ ನಿರಂತರ| ಪರಗತಿಗಿದು ನಿರ್ಧಾರ ನೋಡೋ|| ಮೊದಲೆ ತೋರುತದೆ ಮಧುರ ವಿಷಯಸುಖ ಕಡೆಯಲಿ ದುಃಖ ಅನೇಕ|| ವೇದಶಾಸ್ತ್ರಗಳನೋದಿದರೇನು ಸಾಧನಕಿದು ನಿರ್ಧಾರ|| ಸಾರವೋ ಬಹು ಸಂಸಾರ ವಿಮೋಚಕ ಸೇರೋ ಶ್ರೀ ಹಯವದನನ್ನ|| —-ವಾದಿರಾಜಸ್ವಾಮಿ

ಹರಿಭಜನೆ ಮಾಡೋ Read More »

ಹರಿದಾಸರ ಸಂಗ

ಹರಿದಾಸರ ಸಂಗ ದೊರಕಿತು ಎನಗೀಗ | ವರಗುರು ಉಪದೇಶ ನೆರವಾಯ್ತು|| ಮಾಯದ ಸಂಸಾರ ಮಮಕಾರ ತಗ್ಗಿತು| ತೋಯಜಾಕ್ಷನ ನಾಮ ಜಿಹ್ವೆಯೊಳ್ ನೆಲಸಿತು|| ಏನೆಂದು ಹೇಳಲಿ ಆನಂದ ಸಂಭ್ರಮ ಆ ನಂದಗೋಪನ ಕಂದನ ಮಹಿಮೆಯ| ಎನ್ನ ವಂಶಗಳೆಲ್ಲ ಪಾವನವಾದವು ಶ್ರೀಪುರಂದರವಿಟ್ಠಲಯ್ಯ ದೊರಕಿದ|| —-ಪುರಂದರದಾಸ

ಹರಿದಾಸರ ಸಂಗ Read More »

ಹರ ಶಿವ ಶಂಕರ

ಹರ ಶಿವ ಶಂಕರ ಶಶಾಂಕ ಶೇಖರ ಹರ ಬಂ ಹರ ಬಂ ಬಂ ಬಂ ಭೋಲಾ| ತೂ ಹಿ ವಿಶ್ವೇಶ್ವರ ಕರುಣಾ ಸಾಗರ ತ್ರಿಜಗ ಸಂಸಾರ ತೋಮಾರಿ ಖೇಲಾ|| ಡಮರು ಡಿಮಿ ಡಿಮಿ ಬಾಜಿಛೇ ಗಣ ಗಣ ಮೃದಂಗ ತಾಲೇ ತಾಲೇ ತಾಂಡವ ನರ್ತನ| ಭೈರವೀ ಭೈರವ ಆನಂದೇ ಕರೇ ರವ ಮಣಿಮಯ ಕುಂಡಲ ಗಲೇ ಹಾಡಮಾಲಾ|| ಭಾಲೇ ವಹ್ನಿ ಜಲಿಛೇ ಧಗ ಧಗ ಅಂಗೇ ಜ್ಯೋತಿ ಶೋಭಿಛೇ ಝಕಝಕ| ವೃಷಭವಾಹನೇ ಗೌರಿ ಲಯೇ ಬಾಮೇ ಜಟಾಮೂಲೇ

ಹರ ಶಿವ ಶಂಕರ Read More »

ಹನುಮನ ಮತವೇ

ಹನುಮನ ಮತವೇ ಹರಿಯ ಮತವೊ ಹರಿಯ ಮತವೇ ಹನುಮನ ಮತವೊ|| ಹನುಮನು ಒಲಿದರೆ ಹರಿ ತಾನೊಲಿವನು| ಹನುಮನು ಮುನಿದರೆ ಹರಿಯು ಮುನಿವನು|| ಹನುಮನು ಒಲಿಯೆ ಸುಗ್ರೀವನು ಗೆದ್ದ| ಹನುಮನು ಮುನಿಯೆ ವಾಲಿಯು ಬಿದ್ದ|| ಹನುಮನು ಒಲಿಯೆ ವಿಭೀಷಣ ಗೆದ್ದ| ಹನುಮನು ಮುನಿಯೆ ರಾವಣ ಬಿದ್ದ|| ಹನುಮನು ಪುರಂದರವಿಟ್ಠಲನ ದಾಸ| ಪುರಂದರವಿಟ್ಠಲನು ಹನುಮನೊಳ್ ವಾಸ|| —-ಪುರಂದರದಾಸ

ಹನುಮನ ಮತವೇ Read More »

ಸ್ಥಿರತಾ ನಹಿ ನಹಿ ರೇ

ಸ್ಥಿರತಾ ನಹಿ ನಹಿ ರೇ ಮಾನಸ ಸ್ಥಿರತಾ ನಹಿ ನಹಿ ರೇ|| ತಾಪತ್ರಯಸಾಗರಮಗ್ನಾನಾಂ ದರ್ಪಾಹಂಕಾರವಿಲಗ್ನಾನಾಮ್|| ವಿಷಯಪಾಶವೇಷ್ಟಿತಚಿತ್ತಾನಾಂ ವಿಪರೀತಜ್ಞಾನವಿಮತ್ತಾನಾಂ|| ಪರಮಹಂಸಯೋಗವಿರುದ್ಧಾನಾಂ ಬಹುಚಂಚಲತರಸುಖಸಿದ್ಧಾನಾಮ್|| —-ಸದಾಶಿವ ಬ್ರಹ್ಮೇಂದ್ರ

ಸ್ಥಿರತಾ ನಹಿ ನಹಿ ರೇ Read More »

ಸಿರಿ ವಾಣಿ ಗೌರಿ

ಸಿರಿ ವಾಣಿ ಗೌರಿ ಹೇ ಶಾರದಾಂಬೆ ಸೂತ್ರಧಾರಿಣಿ ಜಗವೇ ಬೊಂಬೆ|| ಶ್ರೀರಾಮಕೃಷ್ಣರಿಂ ಪೂಜಿತೇ ಮಾತೇ ಪರಾಶಕ್ತಿ ಪರಮೇಶ್ವರದಯಿತೇ|| ದಯಾಸಾಗರೇ ರಕ್ಷಿಸು ಎನ್ನನು ಸ್ಮಯದಿಂ ಭಯದಿಂ ದೂಷಿತಶಿಶುವನು| ಭವಸಾಗರದಿಂ ಕಾಪಿಡು ಜನರನು ಅವನೀಕುವರಿ ನೀಡುತ ಕರವನು|| —-ಸ್ವಾಮಿ ಹರ್ಷಾನಂದ

ಸಿರಿ ವಾಣಿ ಗೌರಿ Read More »

ಸಿರಿ ರಾಮಕೃಷ್ಣ ಚರಣತಲದಿ

ಸಿರಿ ರಾಮಕೃಷ್ಣ ಚರಣತಲದಿ ಶರಣೆನು ಮನವೇ|| ಸಕಲ ತೀರ್ಥ ಸಕಲ ಶಾಸ್ತ್ರ ಸಾರ ನೀನಹೆ| ನಿಖಿಲ ಭಕುತ ಹೃದಯಕಮಲ ತರಣಿ ನೀನಹೆ|ಎನುತ|| ಪ್ರೇಮ ಭಕುತಿ ಕಲಿಯುಗದಲಿ ತಾರಕ ಶಕುತಿ| ಪ್ರೇಮರೂಪ ಪ್ರೇಮಾನಂದ ಮಂಗಲ ಮೂರುತಿ|ಎನುತ|| ದಕ್ಷಿಣೇಶ್ವರ ಲೀಲಾಕ್ಷೇತ್ರ ಪರಮಪವಿತ್ರ|ಮು- ಮುಕ್ಷ ಜನರ ಮುದದಿ ಕರೆದೆ ನೀನೆ ಸುಮಿತ್ರ|ಎನುತ||

ಸಿರಿ ರಾಮಕೃಷ್ಣ ಚರಣತಲದಿ Read More »

ಸಾರದ ರೂಪ ತಾಳಿ

ಸಾರದ ರೂಪತಾಳಿ ಬಂದಿಹಳು ತಾಯಿ ಕಾಳಿ ಅದನರಿತೆ ರಾಮಕೃಷ್ಣ ಪೂಜಿಸಿದರು ಭಾವ ತಾಳಿ|| ಆದ್ಯಾಶಕ್ತಿ ನೀ ಮಾತೆ ಸರ್ವಜೀವಮುಕ್ತಿದಾತೆ| ಮಹಾಲಕ್ಷ್ಮೀ ಸರಸ್ವತಿ ಗುಪ್ತರೂಪ ಜ್ಞಾನದಾತೆ|| ಸೀತಾ ರಾಧಾ ಅನ್ನಪೂರ್ಣಾ ಕಾಯ ಪಡೆದ ಭುವಿಯು ಧನ್ಯ| ಪ್ರೇಮದಿಂದ ತಾಯಿಯೆಂದು ಕರೆವ ಮನುಜ ಜಗದಿ ಮಾನ್ಯ|| ದೀನಜನರ ಉದ್ಧರಿಸೆ ದೀನರೂಪ ತಾಳಿ ಬಂದೆ| ಅಭಯೇ ನೀನು ಉಭಯಕರದಿ ಅಭಯವನ್ನು ನೀಡಲೆಂದೆ|| —-ಸ್ವಾಮಿ ಶಾಸ್ತ್ರಾನಂದ

ಸಾರದ ರೂಪ ತಾಳಿ Read More »

ಸಾಗುತಿಹುದು ಚಿತ್ತಭೃಂಗ

ಸಾಗುತಿಹುದು ಚಿತ್ತಭೃಂಗ ಕಾಳೀಪದ ನೀಲಕಮಲ ಮಧುಪಾನದ ಆಸೆಗೆ| ಸಕಲ ವಿಷಯ-ಕುಸುಮರಸವು ಎಷ್ಟಾದರು ತುಚ್ಚವೆಂದು ತಿಳಿಯಿತಿಂದು ಮನಸಿಗೆ|| ತಾಯ ಪಾದಕಮಲ ನೀಲ ಮಧು ಕುಡಿಯುವ ಭೃಂಗ ನೀಲ ನೀಲದಲ್ಲಿ ನೀಲ ಸೇರಿ ನೀಲವಾದ ಪರಿಯನು ಕಂಡು ಬೆರಗುವಡುವನು|| ಸುಖ ಬಂದರೆ ಹಿಗ್ಗದೆ ನೋವಿನಲ್ಲಿ ಕುಗ್ಗದೆ ಆನಂದಸಿಂಧುವಿನಲಿ ನಿರುತ ತೇಲುತಿರುವನು ಭಕ್ತ ಕಮಲಾಕಾಂತನು|| —-ವಚನವೇದ

ಸಾಗುತಿಹುದು ಚಿತ್ತಭೃಂಗ Read More »

ಸಪ್ತಋಷಿ ಭುವನದಿಂದ

ಸಪ್ತಋಷಿ ಭುವನದಿಂದ ಇಳೆಗಿಳಿದು ಬಂದ| ಶ್ರೀಗುರುದೇವನ ಕಂದ ವಿವೇಕಾನಂದ|| ತ್ಯಾಗವಿರಾಗದ ಕಡಲು ಭೋಗಗಳ ಸಿಡಿಲು| ಜಗಜನರಿಗೆ ತಾಯ್ಮಡಿಲು ಹರನ ನರನೊಡಲು|| ಆತ್ಮಜ್ಞಾನದ ಕಾಂತಿ ಮೋಹದುಪಶಾಂತಿ| ಬಳಲಿದರಿಗೆ ವಿಶ್ರಾಂತಿ ನೀಗಿರುವೆ ಭ್ರಾಂತಿ|| ಮಿರುಗುವ ವಿದ್ಯಾಸೂರ್ಯ ನಿಸ್ಸೀಮವೀರ್ಯ| ಮೇರೆಯ ಅರಿಯದ ಧೈರ್ಯ ಎಸಗೆ ಗುರುಕಾರ್ಯ|| —-ಸ್ವಾಮಿ ತದ್ರೂಪಾನಂದ

ಸಪ್ತಋಷಿ ಭುವನದಿಂದ Read More »

ಸದಾ ಎನ್ನ ಹೃದಯದಲ್ಲಿ

ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀಹರಿ| ನಾದಮೂರ್ತಿ ನಿನ್ನ ಚರಣ ಮೋದದಿಂದ ಭಜಿಸುವೆನೋ|| ಧ್ಯಾನವೆಂಬ ನವರತ್ನದ ಮಂಟಪದ ಮಧ್ಯದಲ್ಲಿ| ಗಾನಲೋಲನ ಕುಳ್ಳಿರಿಸಿ ಜ್ಞಾನದಿಂದ ಭಜಿಸುವೆನೋ|| ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿ| ಮುಕ್ತನಾಗಬೇಕು ಎಂದು ಮುತ್ತಿನ ಆರತಿಯೆತ್ತುವೆನೋ|| ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ| ಘನ್ನಮಹಿಮ ವಿಜಯವಿಟ್ಠಲ ನಿನ್ನ ಭಕ್ತನ ಕೇಳೋ ಸೊಲ್ಲ|| —-ವಿಜಯದಾಸ

ಸದಾ ಎನ್ನ ಹೃದಯದಲ್ಲಿ Read More »

ಸದಾ ಎನ್ನ ನಾಲಿಗೆಯಲಿ

ಸದಾ ಎನ್ನ ನಾಲಿಗೆಯಲಿ ಬರಲಿ ರಾಮನಾಮ|| ಬರಲಿ ರಾಮನಾಮ ಸದಾ ಬರಲಿ ಕೃಷ್ಣ ನಾಮ| ಸತತ ನಿನ್ನ ಚರಣ ಸೇವೆ ನೀಡು ಎನಗೆ ರಾಮ|| ನಿನ್ನ ನಾಮ ನೆನೆವುದಕೆ ಕರುಣಿಸೆನಗೆ ಸುಮನವ| ನಾ ನಿನ್ನ ನಂಬಿದೆ ಶ್ರೀರಾಮಚಂದ್ರ ದೇವ||

ಸದಾ ಎನ್ನ ನಾಲಿಗೆಯಲಿ Read More »

ಸತ್ಯ ಜ್ಞಾನ ತಪೋನಿಧಿಯೇ

ಸತ್ಯ ಜ್ಞಾನ ತಪೋನಿಧಿಯೇ ವೀರ್ಯ ಧೈರ್ಯ ತ್ಯಾಗಗಣಿಯೇ| ಭೃತ್ಯ ಜನರ ನಮನವಿದನು ಸ್ವೀಕರಿಸು ನರೇಂದ್ರಮುನಿಯೇ|| ಭವದ ಭ್ರಾಂತಿ ಬನಣೆ ನೀಗೆ ಹರನೆ ನರನ ವೇಷ ತಾಳ್ದೆ ಕವಿದ ಭ್ರಮೆಯ ಕತ್ತಲಳಿಸಿ ದಿವ್ಯ ಜ್ಞಾನ ಪ್ರಭೆಯ ತೋರ್ದೆ ಶಾಂತಿ ಕಾಂತಿ ನೀಡಿದೆ|| ಹೇಡಿ ಜನರ ಹೃದಯದಲ್ಲಿ ಆತ್ಮಶ್ರದ್ಧೆಶೂನ್ಯರಲ್ಲಿ ಸಿಡಿಲ ಸ್ನಿಗ್ಧ ಮೊಳಗಿನಿಂದ ಶಕ್ತಿ ಶ್ರದ್ಧ ಹೊಳೆ ಹರಿಸಿದೆ ಧೈರ್ಯ ಸ್ಥೈರ್ಯ ಬಿತ್ತಿದೆ|| ಕ್ಲೇಶ ಕಷ್ಟಗ್ರಸ್ತ ಜನಕೆ ಅಮೃತಸುಖದ ಧಾಮವಾದೆ ಈಶರೂಪಿ ರಾಮಕೃಷ್ಣ ಶಿಷ್ಯರತ್ನ ಶಿಖಾಮಣಿಯೇ ಜ್ಞಾನ ಸೌಖ್ಯದಾತನೆ|| —-ಸ್ವಾಮಿ

ಸತ್ಯ ಜ್ಞಾನ ತಪೋನಿಧಿಯೇ Read More »