ಹುಟ್ಟು ಹೊರೆಯ ಕಟ್ಟಳೆಯ ಕಳೆದನವ್ವಾ.

ಹುಟ್ಟು ಹೊರೆಯ ಕಟ್ಟಳೆಯ ಕಳೆದನವ್ವಾ.
ಹೊನ್ನು ಮಣ್ಣಿನ ಮಾಯೆಯ ಮಾಣಿಸಿದನವ್ವಾ.
ಎನ್ನ ತನುವಿನ ಲಜ್ಜೆಯನಿಳುಹಿ, ಎನ್ನ ಮನದ ಕತ್ತಲೆಯ ಕಳೆದ
ಚೆನ್ನಮಲ್ಲಿಕಾರ್ಜುನಯ್ಯನೊಳಗಾದವಳ ಏನೆಂದು ನುಡಿಸುವಿರವ್ವಾ ?

Leave a Comment

Your email address will not be published. Required fields are marked *