ಸಾಗುತಿಹುದು ಚಿತ್ತಭೃಂಗ

ಸಾಗುತಿಹುದು ಚಿತ್ತಭೃಂಗ
ಕಾಳೀಪದ ನೀಲಕಮಲ ಮಧುಪಾನದ ಆಸೆಗೆ|
ಸಕಲ ವಿಷಯ-ಕುಸುಮರಸವು
ಎಷ್ಟಾದರು ತುಚ್ಚವೆಂದು
ತಿಳಿಯಿತಿಂದು ಮನಸಿಗೆ||

ತಾಯ ಪಾದಕಮಲ ನೀಲ
ಮಧು ಕುಡಿಯುವ ಭೃಂಗ ನೀಲ
ನೀಲದಲ್ಲಿ ನೀಲ ಸೇರಿ
ನೀಲವಾದ ಪರಿಯನು
ಕಂಡು ಬೆರಗುವಡುವನು||

ಸುಖ ಬಂದರೆ ಹಿಗ್ಗದೆ
ನೋವಿನಲ್ಲಿ ಕುಗ್ಗದೆ
ಆನಂದಸಿಂಧುವಿನಲಿ
ನಿರುತ ತೇಲುತಿರುವನು
ಭಕ್ತ ಕಮಲಾಕಾಂತನು||

—-ವಚನವೇದ

Leave a Comment

Your email address will not be published. Required fields are marked *