ಶ್ರೀಶ ವೇದವ್ಯಾಸನಾದನು
ಶ್ರೀಶ ವೇದವ್ಯಾಸನಾಗಲು
ಸಾಸಿರ ನಯನ ಸಾಸಿರ ವದನ
ಸಾಸಿರ ಕರ ಮಿಕ್ಕ ಸುರರೆಲ್ಲ ತು-
ತಿಸಿ ಹಿಗ್ಗುತ ಹಾರೈಸಲಂದು
ದರ್ಪಕ ಜನಕ ಸರ್ಪತಲ್ಪನಾಗಿ
ತಪ್ಪದನುಗಾಲ ಇಪ್ಪ ವಾರಿಧೀಲಿ
ವಪ್ಪದಲಿ ಕಂದರ್ಪ ಹರನೈಯ
ಸುಪರ್ಣರಥನಾಗಿ ಒಪ್ಪಿಕೊಂಡು
ಇಪ್ಪತ್ತು ಲಕ್ಷಗಲಿಪ್ಪ ಯೋಜನದ
ಅಪ್ಪನ ಅರಮನೆ ದರ್ಪಣದಂತೆ ತಾ
ರಪ್ಪಥ ಮೀರಿದಂತಿಪ್ಪದು ನೋಡಿ ಸಾ-
ಮೀಪಕ್ಕೆ ವಾಣೀಶ ಬಪ್ಪ ಬೇಗಾ ||1||
ಬಂದು ಬೆನ್ನೈಸಿದ ಮಂದಮತಿ ಕಲಿ-
ಯಿಂದ ಪುಣ್ಯಮೆಲ್ಲ ಹಿಂದಾಯಿತೆನೆ ಮು
ಕುಂದ ಭಕ್ತನಿಗೆ ಒಂದೆ ಮಾತಿನಲಾ-
ನಂದ ಬಡಿಸಿ ಪೋಗೆಂದು ಪೇಳೆ
ಅಂದು ಸುಯೋಜನಗಂಧಿ ಗರ್ಭದಲ್ಲಿ
ನಿಂದವತರಿಸುತ ಪೊಂದಿದ ಅe್ಞÁನ
ಅಂಧಕಾರವೆಲ್ಲ ಹಿಂದು ಮಾಡಿ ಸುರ-
ಸಂದಣಿ ಪಾಲಿಸಿ ನಿಂದ ದೇವ ||2||
ಕೆಂಜೆಡೆವೊಪ್ಪ ಕೃಷ್ಣಾಜಿನ ಹಾಸಿಕೆ
ಕಂಜಾಪ್ತನಂದನದಿ ರಂಜಿಸುವ ಕಾಯ
ಮಂಜುಳ ಸುe್ಞÁನ ಪುಂಜನು ವಜ್ಜರ-
ಪಂಜರನೋ ನಿತ್ಯ ಅಂಜಿದಗೆ
ಸಂಜೆಯ ತೋರಿ ಧನಂಜಯ ಶಿಷ್ಯ ನೀ-
ಗಂಜದಂತೆ ಕರಕಂಜವ ತಿರುಹಿ
ಮಂಜುಳ ಭಾಷ ನಿರಂಜನ ಪೇಳಿದ
ಕುಂಜರ ವೈರಿಯ ಭಂಜನನು ||3||
ಗಂಗಾತೀರದಲಿ ಶೃಂಗಾರ ಉಪವ-
ನಂಗಳದರೊಳು ಶಿಂಗಗೋಮಾಯು ಭು
ಜಂಗ ಮೂಷಕ ಮಾತಂಗ ಸಾರಮೇಯ
ಕೊಂಗಹಂಗ ಸರ್ವಾಂಗ ರೋಮ
ತುಂಬ ಶರಭ ವಿಹಂಗ ಶಾರ್ದೂಲ ಸಾ-
ರಂಗ ಕುರಂಗ ಕುಳಿಂಗ ಪಾಳಿಂಗ ಪ್ಲ
ವಂಗ ತುರಂಗ ಪತಂಗ ಭೃಂಗಾದಿ ತು-
ರಂಗವು ತುಂಬಿರೆ ಮಂಗಳಾಂಗ ||4||
ಬದರಿ ಬೇಲವು ಕಾದರಿ ಕಾಮರಿ
ಮಧುಮದಾವಳಿ ಅದುಭುತ ತೆಂಗು
ಕದಳಿ ತಪಸಿ ಮದಕದಂಬ ಚೂ-
ತದಾರು ದ್ರಾಕ್ಷಿಯು
ಮೃದು ಜಂಬೀರವು ಬಿದಿರು ಖರ್ಜೂರ
ಮೋದದಿ ದಾಳಿಂಬ ತುದಿ ಮೊದಲು ಫ
ಲದ ನಾನಾವೃಕ್ಷ ಪದಲತೆಯ ಪೊದೆಯು ಫಲ್ಲಸೈ
ಇದೆ ಆರು ಋತು ಸದಾನಂದ ||5||
ವನದ ನಡುವೆ ಮುನಿಗಳೊಡೆಯ
ಮಿನುಗುತ್ತಿರಲಾ ಕಾನನ ಸುತ್ತಲು ಆ-
ನನ ತೂಗುತ್ತ ಧ್ವನಿಯೆತ್ತಿ ಬಲು-
ಗಾನ ಪಾಡಿದವು ಗುಣದಲ್ಲಿ
ಕುಣಿದು ಖಗಾದಿ ಗಣಾನಂದದಿಂದಿರೆ
ವನನಿಕರ ಮೆಲ್ಲನೆ ಮಣಿದು ನೆ-
ಲನ ಮುಟ್ಟುತಿರೆ ಅನಿಮಿಷರು ನೋ
ಡನಿತಚ್ಚರಿಯನು ಪೇಳೆ ||6||
ಮೌನಿ ನಾರದನು ವೀಣೆ ಕೆಳಗಿಟ್ಟು
ಮೌನವಾದನು ಬ್ರಹ್ಮಾಣಿ ತಲೆದೂಗಿ
ತಾ ನಿಂದಳಾಗ ಗೀರ್ವಾಣ ಗಂಧರ್ವರು
ಗಾನ ಮರೆದು ಇದೇನೆನುತ
ಮೇನಕೆ ಊರ್ವಸಿ ಜಾಣೀರು ತಮ್ಮಯ
ವಾಣಿ ತಗ್ಗಿಸಿ ನರ್ತನೆಯ ನಿಲ್ಲಿಸಿ
ದೀನರಾದರು ನಿಧಾನಿಸಿ ಈಕ್ಷಿಸಿ
ಎಣಿಸುತ್ತಿದ್ದರು ಶ್ರೀನಾಥನ ||7||
ನಮೋ ನಮೋಯೆಂದು ಹಸ್ತ-
ಕಮಲ ಮುಗಿದು ನಮಗೆ ನಿಮ್ಮಯ
ಅಮಲಗುಣ ನಿಗಮದಿಂದೆಣಿಸೆ
ಕ್ರಮಗಾಣೆವು ಉತ್ತಮ ದೇವ
ಕೂರ್ಮ ಖಗಮೃಗ ಸಮವೆನಿಸಿ ಅ-
ಚಮತ್ಕಾರದಲ್ಲಿ ನಾಮಸುಧೆಯಿತ್ತ
ರಮೆಯರಸ ಆಗಮನತ||8||
ಇದನು ಪಠಿಸೆ ಸದಾ ಭಾಗ್ಯವಕ್ಕು
ಮದವಳಿ ದಘವುದದಿ ಬತ್ತೋದು
ಸಾಧನದಲ್ಲಿಯೆ ಮದುವೆ ಮುಂಜಿ
ಬಿಡದಲ್ಲಾಗೋದು ಶುಭದಲ್ಲಿ
ಪದೆಪದೆಗೆ ಸಂಪದವಿಗೆ e್ಞÁನ-
ನಿಧಿ ಪೆಚ್ಚುವುದು ಹೃದಯ ನಿರ್ಮಲ
ಬದರಿನಿವಾಸ ವಿಜಯವಿಠ್ಠಲ
ಬದಿಯಲ್ಲೆ ಬಂದೊದಗುವ ||9||