ಬೆಳಗಿನ ಝಾವದಿ ಬಾರೊ ಹರಿಯೆ

ಬೆಳಗಿನ ಝಾವದಿ ಬಾರೊ ಹರಿಯೆ, ನಿನ್ನ
ಚರಣ ತೊಳೆದು ಜಲಪಾನ ಮಾಡುವೆನೊ

ನೀರೊಳು ನಿನ್ನನು ಕಾಂಬೆ ಗಿರಿ
ಭಾರಪೊತ್ತರೆ ನಗುವಳೊ ನಿನ್ನ ರಂಭೆ
ಮೋರೆ ತಗ್ಗಿಸಿದರೇನೆಂಬೆ ಅಲ್ಲಿ
ನಾರಸಿಂಹನಾಗಿ ಪೂಜೆಯ ಗೊಂಬೆ ||1||

ಬಲಿಯದಾನವ ಬೇಡಿದ್ದೆಲ್ಲ ನೀ
ಛಲದಿ ಕ್ಷತ್ರಿಯರ ಸಂಹಾರ ಮಾಡೆದ್ಯಲ್ಲ
ಛಲವಂತ ನಿನಗೆದುರಿಲ್ಲ ನೀ
ನೊಲಿದ್ಹನುಮನಿಗೆ ಅಜಪದವನಿತ್ಯೆಲ್ಲ ||2||

ರುಕ್ಮಿಣೀಶಗೆ ಸಮರಿಲ್ಲ ಕೃಷ್ಣ
ಬಿಮ್ಮನೆ ತ್ರಿಪುರ ಸತಿಯರಪ್ಪಿದ್ಯೆಲ್ಲ
ಬ್ರಹ್ಮಾದಿಗಳು ಸಮರಲ್ಲ ಬಲು
ಹಮ್ಮಿಲಿ ಹಯವೇರಿ ವಿಜಯವಿಠ್ಠಲ|| 3||

Leave a Comment

Your email address will not be published. Required fields are marked *