ಈ ವೈಷ್ಣವ ಜನುಮ ಸಫಲವಿಂದು |
ಈ ಉಡುಪಿ ಯಾತ್ರಿಗಭಿಮುಖವಾದುದು
ಮನೋವಾಕ್ಕಾಯ ಕರ್ಮಗಳು ಬಲುಪರಿ ಇರಲು |
ಮನುಜ ಪೋಗುವೆನೆಂದು ಒಮ್ಮೆ |
ನೆನೆಸಿದ ಕ್ಷಣದಲ್ಲಿ ನಾಕವಾಗೋವು ಸು
ತ್ತನು ಸುತ್ತಿಸುವ ಭವ ವನಧಿಗೆ ಇದೇ ಮೂಲ ||1||
ದೇಶದೊಳಗುಳ್ಳ ನಾನಾ ಯಾತ್ರೆ ತೀರಥಾ |
ಏಸುಬಾರಿ ಪೋಗಿ ಬರಲಿ ಉಂಟೆ |
ಈ ಸುಲಭ ಯಾತ್ರೆ ಕಂಡವರಿಗೆ ದೊರಿಯದು |
ಲೇಸಾಗಿ ಕೇಳುವದು ಕುತ್ಸಿತ ಭಾವನೆ ಬಿಟ್ಟು ||2||
ಕೃಷ್ಣರಾಯನ ದರುಶನಕೆ ಮನಮಾಡಿದ |
ಶಿಷ್ಟಾಚಾರಗೆ ಲಿಂಗಕಾಯ ಭಂಗಾ |
ದಿಟ್ಟ ಮೂರುತಿ ವಿಜಯವಿಠ್ಠಲ ಕರುಣಿ ಜ್ಞಾನ |
ಕೊಟ್ಟುಪಾಲಿಸುವ ಬಲು ಮೂರ್ಖರಾದರೂ ಸಿದ್ಧ||3||