ಇಂದು ಪಾವನವಾಗಿರೊ

ಇಂದು ಪಾವನವಾಗಿರೊ |
ಇಂದಿರಾ ರಮಣನ್ನ ದಿನ ವ್ರತವ ಮಾಡಿ

ಜನನಿ ಜನಕ ಭ್ರಾತಾ ಅನುಜ ನಿಜಾಂಗನೆ |
ತನಯರು ನೆರೆಹೊರೆ ಮನ ಜನಕೆ |
ಬಿನಗು ವ್ರತವ ಬಿಟ್ಟು ವನಜನಾಭಾನ ಸಿರಿ |
ದಿನ ತ್ರಯವನು ಅನುಸರಿಸಿರೆಂದು ||1||

ಏಕಾದಶಿದನ ವಿಕೇತನದಲಿ ಪಾಕ ಮಾಡಿದರದು |
ಕಾಕಮಾಂಸ ಲೋಕದೊಳಗೆ ಸರಿ | ಲೋಕದೊಳಗೆ ಎಂದು |
ತಾ ಕೂಗಿ ಸುಖದಲ್ಲೀ |
ವಾದ ಪೇಳುತಲಿದ್ದು ಏಕ ಭಕುತಿಯಲ್ಲೀ||2||

ಹರಿದಿನದಲ್ಲಿ ನೀರು ಬೆರಳಲಿ ಸುರಿದಾ |
ಭೂಸುರನು ಚಾಂಡಾಲನು ನಿರುತದಲೀ |
ವರಗೋಮಾಂಸ ನರಕಾ | ನರಿ ನಾಯಿರಾಸ |
ಸೂಕರ ಭಕ್ಷಣಿಗಿಂತ | ಪರಮ ಉತ್ತಮನೆಂದು ||3||

ಪ್ರಾಣತ್ಯಾಗವಾಗಿ ಹಾನಿ ಪ್ರಾಪುತದಿಂದ |
ಏನೇನು ಸಂಕಟ ತಾನೊದಗೆ |
ಆನಂದ ಮತಿ ಈವಾ ಶ್ರೀನಾಥನ ದಿವಸ |
ಧಾನ್ಯದಲಿಟ್ಟು ನಿದಾನಕೆ ಗತಿ ಎಂದು||4||

ಇತರ ದಿವಸದಲ್ಲಿ ಅತಿಶಯದಿಂದಲೀ |
ಕೃತ ಕರ್ಮಗಳು ವಿಹಿತವಹುದೂ |
ರತಿಪತಿಪಿತನ ಅಪ್ರತಿವಾಸರದಲ್ಲೀ |
ಅತಿ ಅವಶ್ಯಕವಾ ವರ್ಜಿತ ಮಾಡಿ ಸಜ್ಜನರು ||5||

ಎಲೆ ಹಾಕದೆ ಜಾಗರವ ಬೇಸರದಲೆ |
ಲವಲವಿಕೆಯಿಂದ ಕವಿಗಳೊಡನೆ |
ತವಕದಿಂದಲಿ ಪಾಡುತ ಗಾಯನ ಶುದ್ಧಾ |
ಶ್ರವಣ ಮಾಡುತ್ತ ಸದಾ | ಪವನ ಮತದೊಳಿದ್ದು||6||

ದಶಮಿ ವಂದು ಏಕಾದಶಿ ಎಂಟು ತಿಳಿದು |
ದ್ವಾದಶಿ ಐದು ಹ | ದಿನಾಲ್ಕು ಎಸವ ಝವಾ |
ಪುಶಿಯಲ್ಲ ಇದು ಸಿದ್ಧಾ ಅಸುಯವ ಬಡದಲೇ |
ಕುಶಲದಿಂದಲಿ ವ್ರತ ಚರಿಸುತ್ತಲಿ ಚನ್ನಾಗಿ ||7||

ಏಳೊಂದು ವತ್ಸರದ ಮೇಲೆ |
ಎಂಟು ಹತ್ತು ಮೇಲು ವತ್ಸರ ಬಿಟ್ಟು ವಾಲಾಯ ಉಳಿದವರು |
ನೀಲವರ್ಣನ ವ್ರತವಾ ಲೀಲೆಯಿಂದಲಿ ಚರಿಸಿ ||8||

ಆವಾದಾದರ ಬಿಡದಿರೀ |
ಕೇವಲ ಸಾಧನವೂ |
ಈ ವಾರವು ದೇವೇಶ ವಿಜಯವಿಠ್ಠಲಗೆ ಸಮರ್ಪಿಸೆ |
ಸೇವಿಯ ಪಾಲಿಸಿ ಕೈವಲ್ಲ್ಯದಲಿ ಇಡುವಾ ||9||

Leave a Comment

Your email address will not be published. Required fields are marked *