ಇಂದು ನೋಡಿದೆ ಇಂದಿರೇಶ
ಮುಕುಂದನ ಮುದ್ದು ರೂಪವ ಕಳೆದೆ ಸಂತಾಪವ
ಪಂಚ ವರ್ಣದ ಪಕ್ಕಿ ಪೆಗಲಲ್ಲಿ
ಮಿಂಚಿನಂದದಿ ತೋರುತಾ ವರಗಳ
ಬೀರುತಾ ವೊಡನಿಪ್ಪ ಮಾರುತಾ ||1||
ಝಗಝಗಿಪ ಪದಯುಗಳ ಬಿಗಿದಪ್ಪಿ
ತೆಗೆಯದಲೆ ಮನಪಾಡಿದೆ ಕುಣಿ ಕುಣಿ
ದಾಡಿದೆ ಸಂತರ ಸಂಗ ಬೇಡಿದೆ ||2||
ಧನ್ಯನಾದೆನೊ ದಾನವಾರಿಯ ಘನ್ನ ವೈಭೋಗ ಕಂಡೆ ನಾ
ಪುಣ್ಯವನು ಕೈಕೊಂಡೆ ನಾ ನಾಮಾಮೃತ ಉಂಡೆ ನಾ ||3||
ಏನು ಪೇಳಲಿ ಗುರುಗಳ ಕೃಪೆ
ಸ್ವಾನೆ ನಿರುತ ಕರಗರವದು ಅಹಂಮತಿ
ಮರೆವದು ಸುರಗಣ ಪೊರೆವುದು ||4||
ಕÀಮಲಹರ ಶಿರ ವಿಜಯವಿಠ್ಠಲ
ಕಮಲಲೋಚನಾಭಾಸನ ಪನ್ನಗನಗ
ವಾಸನಾಗುಣ ಮಂದಹಾಸನಾ||5||