ಇಂದಿರಾದೇವಿಯ ರಮಣ ಬಾ

ಇಂದಿರಾದೇವಿಯ ರಮಣ ಬಾ
ವೃಂದಾರಕ ಮುನಿವಂದ್ಯ ಬಾ
ಸಿಂಧುಶಯನ ಗೋವಿಂದ ಸದಮಲಾ
ನಂದ ಬಾ ಮಾವನ ಕೊಂದ ಬಾ ಗೋಪಿಯ
ಕಂದ ಬಾ ಹಸೆಯ ಜಗುಲಿಗೆ ಶೋಭಾನೆ ||1||

ಕೃಷ್ಣವೇಣಿಯ ಪಡೆದವನೆ ಬಾ
ಕೃಷ್ಣನ ರಥ ಹೊಡೆದವನೆ ಬಾ
ಕೃಷ್ಣೆಯ ಕಷ್ಟವÀ ನಷ್ಟವ ಮಾಡಿದ
ಕೃಷ್ಣ ಬಾ ಯದುಕುಲ ಶ್ರೇಷ್ಠ ಬಾ ಸತತ ಸಂ
ತುಷ್ಟ ಬಾ ಉಡುಪಿಯ ಕೃಷ್ಣ ಬಾ
ಹಸೆಯ ಜಗುಲಿಗೆ ಶೋಭಾನೆ ||2||

ಎಲ್ಲರೊಳು ವ್ಯಾಪಕನಾಗಿಪ್ಪನೆ
ಬಲ್ಲಿದ ಧೊರೆಯೇಜ್ಞಾನಿಗಳರಸನೆ
ಎಲ್ಲಿ ನೋಡಲು ಸರಿಗಾಣೆ ವಿಜಯವಿ-
ಠ್ಠಲ ಬಾ, ಅಪ್ರತಿಮಲ್ಲ ಬಾ ನೀ-
ನಲ್ಲದಿಲ್ಲ ಬಾ, ಭಕುತವತ್ಸಲ ಬಾ,
ಹಸೆಯ ಜಗುಲಿಗೆ ಶೋಭಾನೆ ||3||

Leave a Comment

Your email address will not be published. Required fields are marked *