ಬಂದು ನಿಲ್ಲೋ ದಯಾನಿಧೇ ಬಂದು ನಿಲ್ಲೋ

ಬಂದು ನಿಲ್ಲೋ ದಯಾನಿಧೇ ಬಂದು ನಿಲ್ಲೋ
ಬಂದು ನಿಲ್ಲೋ ನಿನಗೊಂದಿಸುವೆನು ಗೋ
ವಿಂದ ಗೋವಳರಾಯ ಸಂದೇಹಗೊಳಿಸದೆ

ಸದೋಷಕ ನಾನು ಸದಾ ನಿರ್ಮಲ ನೀನು
ಪದೆಪದೆಗೆ ಪೇಳುವುದುಚಿತವಲ್ಲ ||1||

ಮನದೊಳು ಪೊಳದು ಚಿಂತನೆಗೆ ನೆಲೆಯಾಗಿ
ಘನಮಹಿಮನೆ ಮಧ್ವಮುನಿ ಮನ ಮಂದಿರ ||2||

ಕಡೆಗೋಲು ನೇಣಪಿಡಿದ ಪರಮಾನಂದ
ಉಡುಪಿಯ ಶ್ರೀ ಕೃಷ್ಣ ವಿಜಯವಿಠ್ಠಲರೇಯ||3||

Leave a Comment

Your email address will not be published. Required fields are marked *