ಪರಮ ಸತ್ಯನೆ ಪುರುಷ ಗುಣಮಣಿ
ಕಲಿಯ ಕಳೆಯುವ ಚರಣ ನಿನ್ನಯ
ನಿರುತ ಭಜಿಸದ ಕೃಪಣ ಎನಗೂ
ದೀನಬಂಧುವೆ ನೀನೆ ಶರಣು||
ಭಕುತಿ ಭಜನೆ ತಪಗಳಿಂದಲೆ
ಮುಕುತಿ ಗಳಿಸುವೆ ಎಂದು ಅರಿತಿಹೆ|
ಯುಕುತಿ ನುಡಿದರು ನಂಬಿ ನಡೆಯದ
ಶಕುತಿಹೀನಗೆ ನೀನೆ ಶರಣು||
ರಾಮಕೃಷ್ಣ! ನಿನ್ನ ಚರಣ
ರಾಗತೃಷ್ಣಾ-ಶಮನಕರಣ|
ಸತ್ಯಪಥನೇ ಮೃತ್ಯುಹರನೇ
ದೀನಬಂಧುವೆ ನೀನೆ ಶರಣು||
ನಿನ್ನ ಪಾವನನಾಮ ಶುಭಕರ
ದುರಿತವಾದಕ ಸುಕೃತಿಕಾರಕ|
ಸ್ಥಾನವಿಲ್ಲದ ದೀನ ಎನಗೆ
ಮಾನವಾಶ್ರಯ ನೀನೆ ಶರಣು||
(ಶ್ರೀರಾಮಕೃಷ್ಣ ಸ್ತೋತ್ರದ ಭಾವಾನುವಾದ)
—ಸ್ವಾಮಿ ಶಾಸ್ತ್ರಾನಂದ