ನೀನೆ ದೀನಜನ ಬಂಧೂ ದಯಾರಸ ಸಿಂಧೂ

ನೀನೆ ದೀನಜನ ಬಂಧೂ ದಯಾರಸ ಸಿಂಧೂ

ದಿವಿಜರ ಸಮುದಾಯವಿದ್ದರೇನು
ಅವನ ವ್ಯಾಳೆಗೆ ಒದಗಲಿಲ್ಲಾ
ಅವನಿವಲ್ಲಭ ಅವ್ಯಯವೆಂದರೆ
ಅವಸರಕ್ಕೊದಗಿ ಕಾಯದೇ ಕೃಷ್ಣಾ ||1||

ಭೂತ ಪರಿವಾರವಿದ್ದರೇನು
ಆತನ ಅಭಂಗಕ್ಕೆ ಒದಗಲಿಲ್ಲಾ
ಪೂತಾತ್ಮ ಪುರುಷೋತ್ತಮನೆಂದರೆ
ಚಾತುರ್ಯದಿಂದ ಸಲಹಿದೆ ಕೃಷ್ಣಾ ||2||

ಚತುರಾಸ್ಯಾದಿಗಳು ಇದ್ದರೇನು
ಶ್ರುತಿಯಹಾನಿರೆ ಒದಗಲಿಲ್ಲಾ
ಚತುರಾತ್ಮ ಸಿರಿಪತಿ ಉರಗಾದ್ರಿ
ಪತಿ ವಿಜಯವಿಠ್ಠಲನೇ ಕಾಯ್ದ ಕೃಷ್ಣಾ||3||

Leave a Comment

Your email address will not be published. Required fields are marked *