ದೋಷವರ್ಜಿತ ಬಾರೈ ವೆಂಕಟೇಶಾ
ಶ್ರೀನಿವಾಸ ವಾಸವಿಸೂನು
ಚರಣರಹಿತ ಪತಿ ತ್ಯಜನೆ ತಥ
ಚರಣಪಾಣಿ ಪರಮಾನಂದಾ
ಚರಣಾಯುಧನಾದವಗೆ ಸೋಕಿದಳ
ಚರಣದಿ ಪಾವನಗೈಸಿದೆ ದೇವಾ||1||
ಪತಿ ಗುರು ಪಿತೃ ಪಿತಾಮಹಾ ದೈ
ವತ ಗುರೋರ್ಗುರು ಸ್ವಶುರ ಜಾರಾ
ಅತಿಶಯ ಭೂತಿರಭೂತಿ ಎಂದು ಸಂ
ತತ ಉಪಾಸ್ಯತನಾಗಿ ಮೆರೆವನೆ ||2||
ಪಂಚಾದಿಗ್ಬರಸ್ಮಿಗಳಲ್ಲಿ ಪೂಜೆ
ಪಂಚ ರೂಪದಿ ಕೊಂಬನಾಡಿಸ್ಥ
ಪಂಚಜನ ಪಂಚಮೊಗವೇಶ ತಾಳಿದ
ಪಂಚ ಕುಸುಮಸಾರ ಮಧು ವಿದ್ಯಮೂರ್ತಿ ||3||
ಹೃದಯಾಖ್ಯಪುರ ಪಂಚದ್ವಾರದಲಿ ನೀ
ವಿಧಿ ಭವರಿಂದಾರ್ಚನೆ ಗೊಂಬೆ
ಪದುಮಾಷ್ಟ ದಳದಲಿ ಪ್ರಹರೇಯ ತಿರುಗುವ
ಸುದರುಶನಾಬ್ಜಾದಿ ಅಷ್ಟಬಾಹು ಚನ್ನಾ ||4||
ಆನಂದೋತ್ಕøಷ್ಟ e್ಞÁನ ಪೂರ್ಣ
ಗುಣಪೂರ್ಣ ಐಶ್ವರ್ಯಾನಂತ ಮೋದಾ
ಗಾನೆ ತ್ರಾಣ ಕರ್ತೃ ಪ್ರಣವ ತ್ರಿಚರಣಸ್ತಾ
ಎಣಿಸುವೆ ಷÀಟುಚತು ತ್ರಿಭಿರೂಪಾತ್ಮಾ||5||
ಪದ್ದುಮ ಶಾಂತಸಿಂಹ ಅನಿರುದ್ಧ
ಪ್ರದ್ಯುಮ್ನ ಸಂಕರುಷಣ ವಾ
ಸುದೇವ ನಾರಾಯಣ ರೂಪಗಳಿಂದ
ಹೃದ್ಗತನಾಗಿ ಒಪ್ಪುವ ಮಹಾಮಹಿಮಾ ||6||
ಗೋಕುಲನಾಥ ಗೋವಿಂದ ತಿರುಮಲ
ಕಾಕೋದರಾದ್ರಿನಿಲಯ ಸ್ವಾಮಿ
ಲೋಕಪಾಲಕ ಸಿರಿ ವಿಜಯವಿಠ್ಠಲ ಪ
ರಾಕು ಈ ರಥದೊಳು ಕುಳ್ಳಿ ವೇಗಸಾಗಿ||7||