ಏನು ಪವಮಾನಿ ಏನು ಪವಮಾನಿ

ಏನು ಪವಮಾನಿ | ಏನು ಪವಮಾನಿ |
ಈ ನಿಧಿಯಲಿ ಬಂದು ನಿಂದ ಕಾರಣ |
ಮಾಣದೆ ಪೇಳು ನಿ | ದಾನದಿಂದಲಿ |
ಮಾನಸದಲಿ | ದಾನವಾರಿಯ |
ಧ್ಯಾನ ಮಾಡುವ ಜಾಣ ಜಗದ ಪ್ರಾಣ ಸುಂದರಾ |
ನಾನಾ ಮಹಿಮಾ ಗುರುವೆ

ಕೇಸರಿನಂದನ ಪಾಶವಿನಾಶ ನಿರ್ದೋಷ |
ದಾಸರನ ಪಾಲಿಸುವ ವಾನರೇಶನೆ ಭಾರತೀಶ ಈಶಾ |
ಶೇಷಾದ್ಯರಿಗುಪದೇಶದ ಕರ್ತಾ |
ಲೇಸು ಸದ್ಗುಣಗಣ ಕೋಶ
ಸರಸಿಜಾಸನ ಪದವಿಗೆ ಸೇರುವಾತಾ ||
ದೇಶದೊಳು ಬಲುಭೂಷಣ ಪಾಕಶಾಸನ ಶರದ ಶರೀರ |
ದಾಶರಥಿ ಪಾದಾಸರವಿಡಿ |
ದೇಸು ಬಗೆಯಲಿ |
ಮೋಸ ಪೋಗದಾಯಾಸಬಡದಲೆ |
ಮೀಸಲ ಮನ ಸೂಸು ವನರಾಸಿ ಲಂಘಿಸಿ ||1||

ವಾಸವವಿನುತಾ ನೀನಾ | ಕಾಶಕ್ಕೆ ಅಡರಿ
ಪರಿಸರ ಪೋಗಲಾಸಮಯದಲ್ಲಿ |
ದ್ವೇಷವನು ತಾಳಿ ರಕ್ಕಸಿ ಬರಲವಳ ಸೀಳಿ |
ಮೈನಾಕೆಂಬ ಶೈಲ ಮನ್ನಿಸಿ
ಭಾಸುರ ಲಂಕೆ | ಯ ಶೋಧಿಸಿದನಾ ಗೋ |
ಸಾಸಿರವಿತ್ತು ಕೂಸಿನಂದದಲಿ ||
ಭಾಷಿಯನಾಡಿ ಪದ್ಮಾಸನಿಗೆ ಸಂ |
ತೋಷವ ಪೇಳದ
ಪ್ರಕಾಶಿತ ದುಂಗುರ ಭೂಸುತೆಗೆ ಯಿತ್ತು
ರೋಷದಲ್ಲಿ ವನಸಮುದಾಯವ
ಸವರಿ ಫಲ ಸವಿದು ಖಳನ ನಗುತ |
ನಾಶಗೊಳಿಸಿದ ಸಮರ್ಥನೆ ||2||

ಹಿಂದೆ ಪ್ರಳಯದಲ್ಲಿಂದಿರೇಶನು ಸುರ್ವೃಂದ ಉದರದೊಳು |
ಪೊಂದಿಟ್ಟುಕೊಂಡು ಆಗ |
ಅಂದು ನೀನೊಬ್ಬನೇ ಮಂದನಾಗದೆ ನಯದಿಂದಲಿ ಎಚ್ಚತ್ತು |
ಪೊಂದಿಕೊಂಡು ಇದ್ದೆ |
ಇಂದು ಕದನದೊಳು ಇಂದ್ರಜಿತನು ಕರದಿಂದ ಸೆಳೆದÀ ಶರ |
ದಿಂದಲಿ ಸಿಗಿಬಿದ್ದು |
ಬಂಧಿಸಿಕೊಂಡಂಜಿನಿಂದಂತೆ ಮೈದೆಂದಿಗಿಲ್ಲದಂತೆ ನಂದವ ತೋರಿದೆ
ಇಂದು ಮೌಳಿಯ ಪೊಂದಿದದಶ |
ಕಂಧರನ ಮೊಗ ಮುಂದೆ ಭಂಗಿಸಿ |
ಬಂದು ಗುದ್ದಿಲಿನೊದ್ದನು ಅವನಿರೆ |
ಮಂದಹಾಸದಲಿಂದ ನಗುತ ||3||

ಪುರವನುರುಹಿ ಅಸುರರ ಸದೆದು ತೀ |
ವರದಿಂದ ಶರಧಿಯ ಮರುಳೆ ಹಾರಿ ಬಂ |
ದುರವಣಿಯಿಂದ ಶ್ರೀ |
ಹರಿ ಚರಣಕ್ಕೆರಗಿ ಪೊಡಮಟ್ಟು |
ಕರವನೆ ಮುಗಿದು |
ಗುರುತು ಚೂಡಾಮಣಿ ಇಡೆ ಮುಂದೆ ವಿವರಿಸಿದೆ | ರಿಪುಗಳಾ |
ಗರದ ವಿಸ್ತಾರ |
ಸುರರು ಭಾಪುರೆ ಎಂದಂಬರದಲಿವಾದ್ಯ |
ಬೆರೆದಲ್ಲಿ ಮೊರೆಯಾಗಿ ಅರಮರೆಯಿಲ್ಲದೆ |
ಕರಡಿ ವಾನರ ನೆರೆಸಿ ಗಿರಿಗಳ
ತರಿಸಿ ಮಾರ್ಗವಸರದಲಿ ವಿಸ್ತರಿಸಿ |
ಧುರದೊಳಗರಿಗಳಿಂದಲಿ ಮರಣವಾದವರನ ಎಬ್ಬಿಸಿ ||4||

ಪಾತಾಳದೊಳು ಹತ್ತು ತಲೆಯವನಿರಲು ಕಾತುರದಿಂದ ಹೋ
ಮಾತುರಕಾರ್ಚಿಸೆ |
ಮಾತು ಮುಂಚದ ಮುನ್ನ ಭೀತಿ ಇಲ್ಲದೆ ಪೋಗಿ |
ಪಾತಕನವಧಾನ |
ಧಾತುಗೆಡಿಸಿದೆ |
ದಾತಗೆ ದಿವ್ಯವರೂಥವೆಂದೆನಿಸಿ ವಿ|
ಧೂತ ರಾವಣನ ವಿ |
ಪಾತನ ಗೈಸಿದೆ |
ಪ್ರೀತಿ ಬಡಿಸಿ ನಿಜಾರಾತಿ ವಿಭೀಷಣಗೆ ತಪ್ಪದೆ ಲಂಕಾ |
ನಾಥನ ಮಾಡಿ ನೀ |
ನೀತೆರದಲಿ ಸೇತುಪತಿ ಸಾಕೇತಪುರಿ
ರಘುನಾಥನ ಯಡೆ ನೀ ತೆಗೆದುಂಡೆ |
ಶ್ರೀ ತರುಣೇಶ ವಿಜಯವಿಠ್ಠಲನ ದೂತಾ ಹನುಮಾ ||5||

Leave a Comment

Your email address will not be published. Required fields are marked *