ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ

ಈ ಪರಿಯ ಸೊಬಗಾವ ದೇವರಲಿ ನಾ ಕಾಣೆಗೋಪಿದೇವಿಯ ತನಯ ಗೋಪಾಲ ಬಾಲಗಲ್ಲದೆ

ದೊರೆಯ ತನದಲಿ ನೋಡೆ ಧರಣಿ ಜಾತೆಯ ರಮಣಸಿರಿಯ ತನದಲಿ ನೋಡೆ ಶ್ರೀಕಾಂತನುಹಿರಿಯ ತನದಲಿ ನೋಡೆ ಸರಸಿಜೋದ್ಭವನ ಪಿತನುಗುರುವು ತನದಲಿ ನೋಡೆ ಆದಿಗುರುವು ||1||

ಪಾವನತ್ವದಿ ನೋಡೆ ದೇವಿ ಗಂಗಾಜನಕದೇವತ್ವದಲಿ ನೋಡೆ ದಿವಿಜರೊಡೆಯಲಾವಣ್ಯದಲಿ ನೋಡೆ ಲೋಕ ಮೋಹನ ಪಿತನುಜವ ಧೈರ್ಯದಲಿ ನೋಡೆ ಅಸುರಾಂತಕ||2||

ಗಗನದಲಿ ಸಂಚರಿಪ ವೈನತೇಯ ವಾಹನಜಗವನು ಪೊತ್ತಿರ್ಪ ಶೇಷ ಶಯನಕಾಗಿನೆಲೆಯಾದಿಕೇಶವರಾಯಗಲ್ಲದೆಮಿಗಿಲು ದೈವಗಳಿಗೀ ಭಾಗ್ಯಮುಂಟೆ ||3||

4 thoughts on “ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ”

  1. ಜಿ.ಎನ್.ಶಾಮಸುಂದರ್

    ಈ ಕೃತಿ ಪುರಂದರದಾಸರದು.
    ಕನಕದಾಸರದಲ್ಲ ಅಲ್ಲವೇ

    1. ಸ್ವಲ್ಪ ಗೊಂದಲವಿದೆ. ಸಾಹಿತ್ಯದಲ್ಲಿ ಸಾಮ್ಯತೆಯ ಜೊತೆಗೆ ಸ್ವಲ್ಪ ವ್ಯತ್ಯಾಸವೂ ಇದೆ. ಕರ್ನಾಟಕ ಸರ್ಕಾರದ ಅಧಿಕೃತ ದಾಸ ಸಾಹಿತ್ಯದಿಂದ ಆಯ್ದದ್ದು.

    2. ಶ್ರೀಧರ ಹರಿಬಲ

      ಹೌದು, ಈ ಕೃತಿ ಪುರಂದರ ದಾಸರ ರಚನೆ.

      1. ಕುಮಾರಸ್ವಾಮಿ

        ಅಲ್ಲ ಕನಕದಾಸರದು , ಸಾಹಿತ್ಯ ಆಡು ಮಾತಿನಲ್ಲಿದ್ದರೆ ಪುರಂದರದಾಸರದು, ಗ್ರಾಂಥಿಕ ಭಾಷೆಯಿದ್ದರೆ ಕನಕದಾಸರದು ವ್ಯತ್ಯಾಸವನ್ನು ಈಗೆ ಕಂಡು ಹಿಡಿಯಬಹುದು

Leave a Comment

Your email address will not be published. Required fields are marked *